Tuesday, July 14, 2015

July 2015

July 2
https://www.facebook.com/groups/1499395003680065/permalink/1635431756743055/

ಮೊಟ್ಟೆಯ ಆಮ್ಲೆಟ್ ಕಟ್ಟಿಸಿಕೊಂಡು ಬರುವ ಭಕ್ತರಿಗೆ ಕಟ್ಟ ಕಡೆಯವರೆಗೂ ಆಶೀರ್ವಾದ
"ನೀವು ಐದಾರು ದಿನಗಳಿಂದ ತುಮರಿಯ ಮೂಲಕ ನಮ್ಮ ಮಾತನ್ನು ಕೇಳಲಿಲ್ಲ. ತುಮರಿ ರಜಾ ಬರಹಕ್ಕೆ ಹೊಡೆದಿದ್ದನಲ್ಲ? ಇಂದು ಮತ್ತೆ ಬೊಗಳಲು ಆರಂಭಿಸಿದ್ದಾನೆ, ಕೇಳಿ.
ಬೊಗಳಲು ಎನ್ನುವುದಕ್ಕೆ ಕಾರಣವಿದೆ. ನಮ್ಮ ವಿರೋಧಿಗಳು ನಿನ್ನೆ, ಇಂದು ಎಲ್ಲ ದಕ್ಷಿಣ ಕನ್ನಡದ ಕಡೆಗೆ ತನಿಖೆ ನಡೆಸುವುದಕ್ಕೆ ಮಾಹಿತಿ ನೀಡುತ್ತಿದ್ದಾರಲ್ಲ. ಅವರು ಇಂದು ದಡಕ್ಕಲ್ ಕಡೆಗೆ ಹೋಗಿದ್ದರು. ಅಲ್ಲಿನ ನಮ್ಮ ಶಿಷ್ಯ ಇದ್ದಾನಲ್ಲ. ಅವ ಅವರನ್ನು ಆರಕ್ಷಕರೆದುರೇ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. "ಸಾಕಿಕೊಂಡ ನಾಯಿಗಳೂ ಕಚ್ಚುತ್ತವೆ" ಎಂದು ಹೇಳಿದ್ದಾನಂತೆ. ಪರವಾಗಿಲ್ಲ, ನಮ್ಮ ತರಬೇತಿ ಅಷ್ಟರಮಟ್ಟಿಗಿನ ’ಸಂಸ್ಕಾರ’ವನ್ನು ಕೊಟ್ಟಿದೆ ಅಂತಾಯ್ತು.
ಇನ್ನೊಂದೇನೆಂದರೆ ಆ ನಮ್ಮ ಶಿಷ್ಯನಿಗೂ ತಲೆಯೊಳಗೆ ಇರೋದು ಕೊಳೆತ ಆಲೂಗಡ್ಡೆ ಅಂತ ನಮಗೆ ಗೊತ್ತಿಲ್ಲವೆ? ನಾವು ನಮ್ಮ ಹಳದೀ ತಾಲಿಬಾನ್ ಬಳಗದಲ್ಲಿ ಯಾವ ಶಿಷ್ಯ ಹೇಗೆ ಎಂದು ನೋಡಿಕೊಂಡೇ ವ್ಯವಹರಿಸುತ್ತೇವೆ. ಟ್ಯಾಂಕಿನಲ್ಲಿ ಪೆಟ್ರೋಲ್ ಎಷ್ಟಿದೆಯೆಂದು ಕಡ್ಡಿ ಹಾಕಿ ನೋಡಿಯೇ ಮುಂದೆ ಗಾಡಿ ಓಡಿಸುವುದು ನಾವು. ಹಾಗಾಗಿಯೇ ಅಲ್ಲವೇ ಇಲ್ಲಿಯವರೆಗೆ ನಮ್ಮನ್ನು ಏನೂ ಮಾಡದೆ ಬಿಟ್ಟಿದ್ದು? ನಮ್ಮ ಜಾಗದಲ್ಲಿ ಯಾರೋ ಬಡಪಾಯಿ ಇದ್ದಿದ್ದದ್ರೆ ಇಷ್ಟೊತ್ತಿಗೆ ಚಡ್ಡಿ ಅಲ್ಲಲ್ಲ ಬುಲ್-ಪೀನ ಹರಿದು ಶ್ಮಶಾನಕ್ಕೆ ತೋರಣ ಕಟ್ಟುತ್ತಿದ್ದರು. ನಮಗೇನೋ ಕೈಯಿದೆ, ಕೈಯಲ್ಲೂ ಮೊದಲು ಕಾಣಿಕೆ ದೇಣಿಗೆ ಅಂತ ಹೊಡ್ಕಂಡಿರುದು ಸಾಕಷ್ಟಿದೆ, ತಳ್ತೇವೆ ನಡೆಯುತ್ತದೆ.
ಆ ನಮ್ಮ ಶಿಷ್ಯ ಎಲ್ಲಾದರೂ ಚೂರುಪಾರು ತಲೆ ಉಪಯೋಗಿಸಿ, "ಹೌದಾ? ನಮ್ಮ ಮನೆಯಲ್ಲಿ ಎಷ್ಟು ಹೊತ್ತಿಗೆ ಎಲ್ಲಿ ಏನು ನಡೆಯಿತು? ಆಗ ನಾವೆಲ್ಲ ಎಲ್ಲಿ ಇದ್ದೆವು? ಎನ್ನುವಂತಹ ಪ್ರಶ್ನೆಗಳನ್ನು ಅವರಲ್ಲೇ ಕೇಳಿ ತನ್ನ ಸಂಶಯವನ್ನು ಪರಿಹರಿಸಿಕೊಳ್ಳುತ್ತಾನೇನೋ ಎಂಬ ಅನುಮಾನ ನಮ್ಮನ್ನು ಕಾಡುತ್ತಿತ್ತು ಮಾರಾಯರೆ. ಸದ್ಯಕ್ಕೆ ಅವ ಅಷ್ಟು ತಲೆ ಓಡಿಸಲಿಲ್ಲ. ನಮ್ಮಲ್ಲಿ ಮೆದುಳನ್ನು ಅಡವು ಇಟ್ಟವರ ಕತೆಗಳೆಲ್ಲ ಇಷ್ಟೇ. ಅಲ್ಲಿ ನಮಗೆ ಬೇಕಾದಂತೆ ಕೆಲಸ ನಡೆಯುತ್ತದೆ.
ಜನಸಾಗರದಲ್ಲಿ ನಮ್ಮ ಪ್ರಬಲ ವಿರೋಧಿಗಳಲ್ಲಿ ಗೋಳಿ ವೀರಪ್ಪ ಅಂತ ಒಬ್ಬ ಇರೋದು ಗೊತ್ತಾಗಿದೆ. ಎಲ್ಲೋ ಹೆಸರು ಕೇಳಿದ ಹಾಗಿದೆಯಲ್ಲಾ ಎಂದುಕೊಂಡೆವು...ಆಗ ನೆನಪಾಯ್ತು. 1993-94ರಲ್ಲಿ ಈ ಸೀಟಿಗೆ ಬರುವಾಗ ಅವರ ಕಾಲಿಗೆ ಬಿದ್ದಿದ್ದು. ನಮ್ಮ ಆಯ್ಕೆಯ ಸಮಿತಿಯ ಅಧ್ಯಕ್ಷನಾಗಿ ಆತ ಕಾರ್ಯನಿರ್ವಹಿಸಿದ್ದು ನೆನಪಾಗುತ್ತಿದೆ. "ಊರಮನೆ ಮನುಷ್ಯ, ಒಳ್ಳೆ ಹುಡುಗ, ಇವನನ್ನೇ ಆಯ್ಕೆ ಮಾಡೋಣ" ಎಂದು ಸಿಕ್ಕಾಪಟ್ಟೆ ಒತ್ತಡ ಹಾಕಿದ ಅದೇ ಮನುಷ್ಯ ಇಂದು ನಮ್ಮ ವಿರೋಧಿ ಅಂದರೆ ಎಂತಹ ವಿಪರ್ಯಾಸವಲ್ಲವೇ?
ಮೊನ್ನೆ ನಮ್ಮ ವಿರೋಧಿಗಳು ಅಲ್ಲಿ ಸಭೆ ಸೇರಿಸಿದ್ದರಲ್ಲ, ಅಲ್ಲಿಗೆ ಅವನೂ ಹೋಗಿದ್ದನಂತೆ. ನಾವು ತಡಮಾಡಲಿಲ್ಲ, ನಮ್ಮ ಹಳದೀ ತಾಲಿಬಾನಿನ ಸ್ಥಳೀಯ ಘಟಕಕ್ಕೆ ತಿಳಿಸಿ, 15-20 ಜನರನ್ನು ಒಟ್ಟುಮಾಡಿಕೊಂಡು ಧಮಕಿ ಹಾಕಲು ಹೇಳಿದೆವು; ಯಥಾಪ್ರಕಾರ ನಾವಿ ನಿರ್ದೇಶಿಸಿದಂತೆ ನಮ್ಮ ಅಡ್ಡಗೇಟನ್ನು ಸರಿಸಿಟ್ಟುಕೊಂಡು ಅಷ್ಟೇ ಜನರ ಗುಂಪು, ವೀರಪ್ಪ ಮೀಟಿಂಗಿಗೆ ಹೋದ ಸಮಯದಲ್ಲೇ ವೀರಪ್ಪನ ಮನೆಗೆ ನುಗ್ಗಿತು.
ಅವರ ಮನೆಯಲ್ಲಿದ್ದ ಹೆಂಗಸರನ್ನೆಲ್ಲ ಬೆದರಿಸಿ, "ಯಾಕೆ ಮೀಟಿಂಗಿಗೆ ಹೋಗಬೇಕಾಗಿತ್ತು? ನಮ್ಮ ಗುರುಗಳನ್ನು ವಿರೋಧಿಸಬಾರದು ಎಂದು ತಿಳಿಯುವುದಿಲ್ಲವೇ? ಇವತ್ತೇನೋ ಬಿಟ್ಟಿದ್ದೇವೆ, ಇನ್ನು ಮುಂದೆ ಹೀಗೇ ಮಾಡಿದರೆ ಪರಿಸ್ಥಿತಿ ನೆಟ್ಟಗಿರಲಿಕ್ಕಿಲ್ಲ" ಎಂದು ಜೋರಾಗಿ ಧಮಕಿ ಹಾಕಿದ್ದಾರೆ.
ನಮ್ಮ ವಿರುದ್ಧ ಯಾರೇ, ಎಲ್ಲೇ ಒಂದು ಮಾತನಾಡಿದರೂ ನಮಗೆ ಸುದ್ದಿ ಗೊತ್ತಾಗುತ್ತದೆ. ಅದಕ್ಕೆ ತಕ್ಷಣ ನಮ್ಮ ನಿರ್ದೇಶನ ಹೋಗುತ್ತದೆ. ನಾವು ಕಾವಿ ಧರಿಸಿದ್ದೇವೆ ಅಂದರೆ ಕೈಗೆ ಬಳೆ ಹಾಕಿಕೊಂಡಿದ್ದೇವೆ ಅಂತ ಅರ್ಥವೇ? ಕೈಗೆ ಬಳೆತೊಟ್ಟವರೇ ಈ ಕಾಲದಲ್ಲಿ ಎಷ್ಟೆಲ್ಲ ಸಾಧನೆ ಮಾಡ್ತಾರೆ. ಹಾಗಾಗಿಯೇ ಕೈಗ ಬಳೆ ಹಾಕಿದವರಲ್ಲಿ ಬಹಳ ಜನರನ್ನು ನಾವು ಜಾಸ್ತಿ ಮೆಚ್ಚುತ್ತೇವೆ. ಮೆಚ್ಚುಗೆಯನ್ನು ತೋರಿಸಲು ಏಕಾಂತ ದರ್ಶನ ನೀಡುತ್ತೇವೆ.
ಎಲಾ ವೀರಪ್ಪ, ಪೊಗರು ನೋಡಿ, ಬಳೆಹಾಕಿದವರ ’ಸಬಲೀಕರಣ’ಕ್ಕೆ ಮುಂದಾದ ನಮ್ಮ ಕೈಗೇ ಬಳೆತೊಡಿಸಿ ಕರೆದೊಯ್ಯುವದಕ್ಕೆ ವ್ಯವಸ್ಥೆ ಮಾಡುತ್ತಿರುವವರನ್ನು ಬೆಂಬಲಿಸುವುದೆಂದರೇನು? ಯಾಕೆ ಹಾಗೆ ತಲೆ ಓಡಿಸಬೇಕು? ಅಧಿಕಾರ ಕೊಟ್ಟವ ಕೋಡಂಗಿ, ಇಸಗಂಡವ ವೀರ್ಯಭದ್ರ ಅಂತ ಗೊತ್ತಿಲ್ಲವೇ? ಸೀಟಿಗೆ ಬರೋದಕ್ಕಾಗಿ ನಾವು ಅವನ ಕಾಲಿಗೆ ಬಿದ್ದ ಹತ್ತು ಪಟ್ಟು ಸೀಟಿಗೆ ಬಂದ ಮೇಲೆ ಅವನೇ ನಮ್ಮ ಕಾಲಿಗೆ ಬಿದ್ದಿದ್ದಾನೆ ಬಿಡಿ; ಯಾಕೆಂದರೆ ನಾವೆಂದರೆ ಯಾರು? ಶ್ರೀಸಂಸ್ಥಾನ-ಜಗದ್ಗುರು ಶೋಭರಾಜಾಚಾರ್ಯ ಹಾವಾಡಿಗೇಶ್ವರ ಸುರತರತಿ ಮಹಾಸ್ವಾಮಿಗಳು.
ನಮ್ಮಲ್ಲಿ ಯಮ, ನಿಯಮ, ಅಸನ ಎಲ್ಲಾ ಮಾಡ್ತಾ ಕೂತ್ಕಳೋದಿಲ್ಲ, ಏನಿದ್ರೂ ಸ್ಕೂಲಿನ ಆಯಮ್ಮ, ನಿಮ್ಮಮ್ಮ, ನಿಮ್ಮಮ್ಮನ ಅಮ್ಮ ಯಾರಿದ್ದರೂ ಪರವಾಗಿಲ್ಲ, ನಡೀಲಿಕ್ಕೆ ಬರ್ತದೆ ಅಂತಾದ್ರೆ ಕರ್ಕೊಂಡು ಬನ್ನಿ, ಏಕಾಂತ ಗ್ಯಾರಂಟಿ! ಯಾಕೆಂದ್ರೆ....ಯಾಕೆಂದ್ರೆ.....ಯಾಕೆಂದ್ರೆ ನಮಗೀಗ ಹೊಸಬರು ಯಾರೂ ಸಿಗ್ತಾ ಇಲ್ಲ. ಇರುವವರ ಜೊತೆ ಮಾಡಿದ್ದೇ ಮಾಡಿ ಬೇಜಾರು.....ಅದೇ ಸೂರ್ಯ-ಅದೇ ಚಂದ್ರ. ಕೆಲಸ ನಡೀತಾ ಇರ್ಬೇಕು. ಮಂಚ ಕಾಲೀ ಬೀಳಬಾರ್ದು.
ನಮ್ಮ ಬಾವಯ್ಯಂಗೆ ಕೋಳಿಮೊಟ್ಟೆ ಆಮ್ಲೇಟ್ ಅಂದರೆ ತುಂಬ ತುಂಬ ಇಷ್ಟ. ಮಂಜ ಭಟ್ಟನ ಎದುರಿಗೆ ಒಂದ್ಸಲ ಎರಡುಮೂರು ಎಗ್ ಆಮ್ಲೆಟ್ ತಿಂದುಬಿಟ್ಟಿಡ್ನಂತೆ. ಆಮೇಲೆ ನಾವು ಹೇಳಿದೆವು,"ಯಾಕೋ ಬಾವ ಹಾಗ್ಮಾಡ್ದೆ? ನಾಳೆ ಊರಲ್ಲೆಲ್ಲ ಪ್ರಚಾರ ಮಾಡೋದಿಲ್ವೆ ಅವನು? ಇನ್ಮೇಲೆ ತಿನ್ನೋದಾದ್ರೆ ಪಾರ್ಸೆಲ್ ತರ್ಸಿಬಿಡು. ಯಾರೋ ಹೇಳ್ತಾರೆ ಅಂತ ಬಿಡಲಿಕ್ಕಾಗ್ತದ್ಯೇ? ನಮಗೆ ಬೇಕಾದದ್ದನೆಲ್ಲ ಪಡೆದುಕೊಳ್ಳಲೇಬೇಕು, ನಮಗೆ ಬೇಕಾದ ಹಾಗೆ ಬದುಕಬೇಕು. ನಾವು ಆಳಲಿಕ್ಕೆ ಇರೋರು, ಆಳಿಸಿಕೊಳ್ಳಲಿಕ್ಕೆ ಇರೋರಲ್ಲ, ಅರ್ಥವಾಯ್ತಲ್ಲ?"
ಅಲ್ಲಿಂದೀಚೆಗೆ ನಮ್ಮ ಬಾವಯ್ಯ ನಂದಿನಿ ಡೀಲಕ್ಸ್ ಗೆ ಫೋನ್ ಮಾಡಿ ಪಾರ್ಸೆಲ್ ತರಿಸೋದಕ್ಕೆ ಆರಂಭ ಮಾಡಿಕೊಂಡ. ನಮಗೂ ಎಗ್ ಆಮ್ಲೆಟ್ ಬಹಳ ಇಷ್ಟ. ಜೊತೆಗೆ ಇನ್ನೂ ಕೆಲವು ರೀತಿಯ ಮಾಂಸವೂ ಸಹ. ಚಾತುರ್ಮಾಸದಲ್ಲಿ ಮಾತ್ರ ಯತಿಗಳು ಮಾಂಸ ತಿನ್ಬಾರ್ದು ಎಂದು ಹೊರಡಿಸಿದ್ದೇವೆ ನಾವು. ಅದರರ್ಥ ಉಳಿದ ಕಾಲದಲ್ಲಿ ಸನ್ಯಾಸಿಯಾದವನೂ ಮಾಂಸ ತಿನ್ನಬಹುದು ಅಂತ. ಮಾಂಸ ತಿನ್ಬಾರ್ದು, ಮದ್ಯ ಸೇವಿಸಬಾರದು, ಮಾನಿನಿಯರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು ಎಂಬ ನಿಯಮಗಳು ನಮಗಂತೂ ಚಾತುರ್ಮಾಸದಲ್ಲೂ ಸಹ ಅಪ್ಲೈ ಆಗುವುದಿಲ್ಲ.
ಹಿಂದೆ ದೇವತೆಗಳೇ ಸುರಾಪಾನ ಮಾಡಿದ್ರಂತೆ. ಇಂದು ಈ ಹುಲುಮಾನವ ಲೋಕದಲ್ಲಿ ಸುರಾಪಾನ ಮಾಡದ ಜನರಿಗೆ ಬೆಲೆಯೇ ಇಲ್ಲ. ಲೈಫ್ ಈಸ್ ಶಾರ್ಟ್-ಎಂಜಾಯ್ ಟು ದಿ ಬೆಸ್ಟ್ ಅನ್ನೋಹಾಗೆ ಜೀವನ ಚಿಕ್ಕದು; ಅದನ್ನು ಅತ್ಯಂತ ರಸಿಕರಾಗಿ ಅನುಭವಿಸಬೇಕು ಎಂಬುದೇ ನಮ್ಮ ಧ್ಯೇಯ. ಯಾರೋ ಹೇಳಿದ್ದಾರೆ ಅಂತ ಮೂಗು ಮುಚ್ಚಿಕೊಂಡು ತಪಸ್ಸು ಮಾಡೋದಕ್ಕೆ ನಮಗೆಂತ ತಲೆ ಕೆಟ್ಟಿದ್ಯೇ? ಎಲ್ಲರಂತೆ ಉಪ್ಪು-ಖಾರ ತಿನ್ನೋ ದೇಹ, ಸಪ್ಪಗಿರು ಅಂದುಬಿಟ್ರೆ ಹೇಗೆ?
ನಿಮಗೇನ್ ಬೇಕು? ಮಂತ್ರಾಕ್ಷತೆ ಬೇಕು. ಕೆಲವರಿಗೆ ಫೈನಾನ್ಸ್ ಬೇಕು, ಇನ್ನು ಕೆಲವರಿಗೆ ಹೆಣ್ಣು ಬೇಕು, ಇನ್ನೂ ಕೆಲವರಿಗೆ ರಾಜಕೀಯದ ಕೆಲಸ ಆಗಬೇಕು, ಚಿಲ್ಲರೆ ಜನರಿಗೆ ಸರಕಾರಿ ನೌಕರಿ ವರ್ಗಾವರ್ಗಿ, ವ್ಯಾಜ್ಯ ನಿವಾರಣೆ ಇಂತದ್ದೆಲ್ಲ. ಅದನ್ನೆಲ್ಲ ನಾವು ಮಾಡ್ತೇವೆ. ಹಳದೀ ತಾಲಿಬಾನಿನ ಬೇಟೆ ನಾಯಿಗಳನ್ನು ಸಾಕಿಕೊಂಡಿಲ್ಲವೇ? ಅವು ಹೆಸರಿಗೆ ನಾಯಿಗಳಷ್ಟೆ, ಶರೀರದಲ್ಲಿ ಆನೆಗಳು. ಅವುಗಳನ್ನು ನೋಡಿಕೊಳ್ಳುವುದಕ್ಕೆ "ನಾಯಿ ಮಾವುತ"ರಿದ್ದಾರೆ. ನಾಯಿ ಮಾವುತರಿಗೆ ಹೆಚ್ಚಿನ ಸಂಬಳ, ಕಾರು ಇತ್ಯಾದಿಯೆಲ್ಲ ಕೊಟ್ಟಿದ್ದೇವೆ.
ನಾವು ಎಲ್ಲದಕ್ಕೂ ಸಿದ್ಧ; ಬೆಂಗಳೂರಿನ ಆಟೋ ಬೆನ್ನಮೇಲೆ ಬರೆದಿರ್ತದಲ್ಲ-’ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ’ ಅಂತ, ನಾವು ಹಾಗೇ. ನಮ್ಮಿಂದ ಏನಾದರೂ ಬೇಕಾದರೆ ಬನ್ನಿ, ನಾಲ್ಕು ಗೋಡೆ ಮಧ್ಯೆ ಕುಳಿತು ಮಾತಾಡೋಣ., ಅದು ಬಿಟ್ಟು ನಿಮಗೆ ಬೇಕಾದಲ್ಲೆಲ್ಲ ಮೀಟಿಂಗು ಪಾಟಿಂಗು ಅಂದ್ರೆ ಅಷ್ಟೆ, ನಮ್ಮ ಹಳದೀ ತಾಲಿಬಾನ್ ಕಳಿಸಿ ನಿಮ್ಮನ್ನೆಲ್ಲ ಉಡಾಯಿಸಿಬಿಡ್ತೇವೆ ನಾವು. ಯಾಕೆಂದ್ರೆ...ಯಾಕೆಂದ್ರೆ....ಯಾಕೆಂದ್ರೆ ನಮ್ಮದು ವೀರ್ಯಸನ್ಯಾಸ.
ಸಮಾಜದಲ್ಲಿ ಎಂಬತ್ತು ಪರ್ಸೆಂಟ್ ಜನರಿಗೆ ಈಗ ನಮ್ಮ ಅಸಲೀಯತ್ತು ಗೊತ್ತಾಗಿಬಿಟ್ಟಿದೆ. ಅವರೆಲ್ಲ ಗುಪ್ತ ಮತದಾನದ ಮೂಲಕ ನಾವು ಸೀಟಿನಲ್ಲಿ ಇರಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲು ಪ್ರಯತ್ನ ಮಾಡುತ್ತಿದ್ದಾರೆಂಬ ವದಂತಿ ಇದೆ. ರಕ್ತಬೀಜಾಸುರರು, ಎಲ್ಲೆಲ್ಲಿ ಹುಟ್ಟುತ್ತಾರೋ ಅವರಿಗೇ ಗೊತ್ತಾಗೋದಿಲ್ಲ.
ಈಗ ನಾವು ಕೊಡು-ತೆಕ್ಕೊಳ್ಳುವ ವ್ಯವಹಾರ ಮಾತಾಡೋಣ. ನಮ್ಮ ಪ್ರೀತ್ಯರ್ಥವಾಗಿ ನೀವು ಪಾದಪೂಜೆ, ಭಿಕ್ಷಾಸೇವೆ ಮಾಡೋದು ಮಾಡಿ; ಆದರೆ ಅದೆಲ್ಲದಕ್ಕಿಂತ ಹೆಚ್ಚಾಗಿ ನಮಗೆ ಹೊಸ ’ಪೀಸು’, ಹೊಸ ಬಾಟಲಿ, ಹೊಸ ಕಬಾಬ್ ಇಂತದ್ದನ್ನು ಗುಪ್ತವಾಗಿ ಸಪ್ಲೈ ಮಾಡಿದರೆ ಕಟ್ಟಕಡೆಯ ವರೆಗೂ ನಿಮಗೆ ನಮ್ಮ ಆಶೀರ್ವಾದವಿರುತ್ತದೆ. ನಮ್ಮ ’ತಪಸ್ಸಿ’ನ ಫಲ ಅಂದ್ರೆ ಅಷ್ಟಿಷ್ಟಲ್ಲ; ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಪವಾಡಗಳ ಬಗ್ಗೆ ಹಳದೀ ತಾಲೀಬಾನ್ ಭಕ್ತರು ಪುಂಖಾನುಪುಂಖವಾಗಿ ಬರೆದದ್ದನ್ನು ನೀವು ಓದಬಹುದು.
ನಮ್ಮ ಪವಾಡಗಳ ಮಹಿಮೆ ತಾಳಲಾರದೆ ಎಲ್ಲೆಡೆ ಹನುಮಾನ್ ಚಾಲೀಸ್ ಪಠಿಸುತ್ತಿದ್ದಾರೆ, ಇನ್ನೂ ಕೆಲವರು ಪುಸ್ತಕ ಪರಿಕರ ನಮ್ಮ ಬಳಗದಿಂದಲೇ ಪಡೆದುಕೊಂಡು ಆದಿತ್ಯ ಹೃದಯ ಪಾರಾಯಣ ಹೋಮ ಎಲ್ಲ ಮಾಡ್ತಿದ್ದಾರೆ. ಯಾಕೆಂದರೆ ಬರೆದವರಿಗೇ ನಮ್ಮ ಪವಾಡಗಳು ಅಷ್ಟೆಲ್ಲ ’ಮಹಿಮಾನ್ವಿತ’ ಎಂಬುದು ಗೊತ್ತಿದೆ; ನಾಳೆ ಚಾತುರ್ಮಾಸದೊಳಗೇ ಎತ್ತಾಕ್ಕೊಂಡೋದ್ರೆ ಕಷ್ಟ ಅಂತ, ನಿರ್ವಿಘ್ನವಾಗಿ ಚಾತುರ್ಮಾಸ ಸಾಗಲಿ ಅಂತ ಹಾಗೆ ಮಾಡ್ತಿದ್ದಾರಂತೆ. ಈ ಸಲ ಚಾತುರ್ಮಾಸ ಬರೀ ಬೇಜಾರು-ಬೋರು. ಚಿಕ್ಕವರನ್ನು ಕರೆದರೆ ಅವರ ಅಮ್ಮಂದಿರೂ ಬರುತ್ತಾರಲ್ಲ? ಆಗಲೇ ನಾವು ಕಣ್ತುಂಬಾ ಬೇಕಾದ್ದನ್ನು ಸವಿಯಬಹುದು ಎಂಬ ಲೆಕ್ಕಾಚಾರದಲ್ಲಿ ಹಾಗೆ ಮಾಡಿದ್ದೇವೆ.
ನಮ್ಮ ಕುಲಪತಿ ಬಾವಯ್ಯನ ತಲೆ ಅಂದರೆ ತಲೆ; ಅವನಿರೋದಕ್ಕಾಗಿ ಇವತ್ತಿಗೂ ನಾವು ಇಲ್ಲಿದ್ದೇವೆ. ನಮ್ಮ ಪೂರ್ವಾಶ್ರಮದ ಮೂಲ ಹೆಸರಿನಲ್ಲಿ ಇರುವ ಪಾಸ್ ಪೋರ್ಟ್ ನಾವಿನ್ನೂ ಗುಪ್ತವಾಗಿ ಇರಿಸಿಕೊಂಡಿದ್ದೇವೆ; ತೋರಿಕೆಗೆ ಒಂದನ್ನು ಕೊಟ್ಟಿದ್ದೇವೆ. ನಮ್ಮ ಬಾವಯ್ಯನದು ಅಂತಾ ಪ್ರಶ್ನೆ ಬರಲಿಲ್ಲ, ಅವನಲ್ಲೇ ಇದೆ. ಸಮಯ ಬಂದರೆ ಒಟ್ಟಿಗೇ ಹಾರಬಹುದು ಎಂದುಕೊಂಡಿದ್ದೇವೆ-ಚಂದ್ರಶೇಖರ ಇಟ್ಲಂಗೆ ಕಾಣದ ಹಾಗೆ.
ಪ್ರವಚನ ಬಾಳ ಉದ್ದ ಆಯ್ತಲ್ವೇ? ನಾಳೆ ನಾಡಿದ್ದು ಮುಂದುವರಿಸೋಣ. ಬಾವಯ್ಯಂಗೆ ನಿನ್ನೆ ಇಂದು ಎಗ್ ಆಮ್ಲೇಟ್ ಸಿಗಲಿಲ್ಲ. ಯಾರಾದರೂ ನಮ್ಮಲ್ಲಿಗೆ ಬರುವವರು ಸಾಧ್ಯವಾದರೆ ತಂದುಕೊಟ್ಟು ಸೇವೆ ಮಾಡಿ, ಮಂತ್ರಾಕ್ಷತೆ ತೆಗೆದುಕೊಂಡು ಹೋಗಬಹುದು. [ಮಂತ್ರಾಕ್ಷತೆಗೇನು ಕೊರತೆಯಿಲ್ಲ, ಕ್ವಿಂಟಾಲ್ ಲೆಕ್ಕದಲ್ಲಿ ಅಕ್ಕಿ-ಅರಿಷಿಣ ಪುಡಿ ಹಾಕೋದು ಕಲ್ಸೋದೇ. ನಮ್ಮ ನಮೇಸ ಅದನ್ನೆಲ್ಲ ಮಾಡ್ತಾ ಇರ್ತಾನೆ]"

July 7 
https://www.facebook.com/groups/1499395003680065/permalink/1637348226551408/

ಅರೆ ಅರೆ ಸಾಗುತಿದೆ..ಕಾಮದ ಗಾಳಿಗೆ ಕಾಮಿಯ ದೋಣಿಯು ಎಲ್ಲಿಗೆ ಹೋಗುತಿದೆ?
ಯಕ್ಷಗಾನದಲ್ಲಿ ಸಭಾಲಕ್ಷಣ ಅಂತ ಪೂರ್ವರಂಗವೊಂದಿತ್ತು; ಅದರ ಅಗತ್ಯತೆ ನಮಗೀಗ ಕಾಣುತ್ತಿದೆ ಯಾಕೆಂದರೆ ಯಕ್ಷಗಾನವೆಂಬುದು ಕೇವಲ ನಾಟ್ಯವಲ್ಲ, ಕೇವಲ ಮಾತುಗಾರಿಜೆಯೂ ಅಲ್ಲ; ನರ್ತನ, ಗಾಯನ, ವಾದನ, ವಚನ-ವಾಚನ, ಆಂಗಿಕ, ಆಹಾರ್ಯ, ಸಾತ್ವಿಕ [ಸತ್ವವುಳ್ಳದ್ದು ಎಂದರ್ಥ] ಎಲ್ಲವನ್ನೂ ಒಳಗೊಂಡ ಅದೊಂದು ಸಮಗ್ರ ಕಲೆ. ಆ ಕಲೆಯ ರಸದೌತಣವನ್ನು ಅನುಭವಿಸಬೇಕಾದರೆ ಅದಕ್ಕೊಂದು ಮನೋಭೂಮಿಕೆ [ಮೂಡ್] ಸಿದ್ಧವಾಗಬೇಕು. ಆ ತಯಾರಿಗಾಗಿ ಪೂರ್ವರಂಗ ನಿರ್ವಹಿಸಲ್ಪಡುತ್ತಿತ್ತು.
ಯಕ್ಷಗಾನದಲ್ಲಿ ಪೂರ್ವರಂಗ ಇಲ್ಲದಿದ್ದರೂ ಒಂದೊಮ್ಮೆ ನಡೆದುಬಿಡಬಹುದು. ಆದರೆ ಯೋಗದಲ್ಲಿ ಹಾಗಲ್ಲ. ಯೋಗದ ಬಗ್ಗೆ ಇತ್ತೀಚೆಗೆ ಬಹಳ ತಲೆಕೆಡಿಸಿಕೊಂಡಿದ್ದೆ. ಯೋಗಿಗಳಿಗೂ ಹಾದರದ ಮನೋಭಾವ ಹೋಗುವುದಿಲ್ಲವೇ? ಎಂಬುದು ನನ್ನಲ್ಲಿದ್ದ ಪ್ರಶ್ನೆ. ಅದಕ್ಕೆ ಸಿಕ್ಕ ಉತ್ತರ ಮಾತ್ರ ಸುದೀರ್ಘ ಮತ್ತು ಸವಿಸ್ತಾರ. ಅದನ್ನು ಅರಗಿಸಿಕೊಂಡು ಕನ್ನಡದಲ್ಲಿ ಬರೆಯಲಿಕ್ಕೆ ಬಹಳ ಸಮಯ ಹಿಡಿಯಿತು.
ಯೋಗಕ್ಕೆ ಅಧಿಕಾರಿ ಯಾರು ಅಥವಾ ಯೋಗವನ್ನು ನಡೆಸುವ ಅರ್ಹತೆ ಯಾರಿಗಿದೆ ಎಂಬುದು ಬಹುದೊಡ್ಡ ಪ್ರಶ್ನೆ. ಮೇಲ್ನೋಟಕ್ಕೆ ಎಲ್ಲರೂ ಒಳ್ಳೆಯವರೇ ಮತ್ತು ಆಸ್ತಿಕರೇ ಆಗಿ ಕಾಣಿಸಬಹುದು. ಅನೇಕರು ವೇಷ-ಭೂಷಣಗಳಿಂದ ಸಾಧು, ಸಂತ, ಸನ್ಯಾಸಿಗಳೇ ಆಗಿರಬಹುದು. ಇಂತಹ ಅನೇಕರಲ್ಲಿ ಢಾಂಬಿಕತೆ ಮನೆಮಾಡಿರುತ್ತದೆ.
ಯಾರು ಪ್ರಾಪಂಚಿಕ ವಸ್ತು-ವಿಷಯ-ವೈಭೋಗದಲ್ಲಿ ಆಸಕ್ತನಾಗಿರುತ್ತಾನೋ, ಯಾವನು ಜನಮೆಚ್ಚುಗೆಗಾಗಿ ಇಲ್ಲಸಲ್ಲದ್ದನ್ನು ಶಾಸ್ತ್ರವೆಂಬ ಹೆಸರಿನಲ್ಲಿ ಆಚರಿಸಲು ಅನುಮೋದಿಸುತ್ತಾನೋ, ಯಾರು ಜನರ ಓಲೈಕೆಗಾಗಿ ತೀರಾ ಹೆಚ್ಚು ಮಾತನಾಡುತ್ತಾನೋ[ವಾಚಾಳಿಯೋ], ಪ್ರಾಪಂಚಿಕ ವಿಷಯಗಳಲ್ಲಿ ಅತ್ಯಾಸಕ್ತರಾದ ಜನರೊಡನೆ ಅತಿಯಾಗಿ ಯಾವನು ಬೆರೆಯುತ್ತಾನೋ, ಯಾವನು [ಅಂತರಂಗ ಅಥವಾ ಬಹಿರಂಗ] ಕ್ರೂರಿಯೋ, ಅತ್ಯಾಚಾರಿಯೋ, ಲೌಕಿಕ ವ್ಯವಹಾರ-ವ್ಯಾಜ್ಯಗಳಲ್ಲಿ ಸಿಲುಕಿಕೊಂಡಿರುವನೋ, ಯಾವನು ಜಗಳಗಂಟನೋ, ಪರೋಪದ್ರವಿಯೋ, ಯೋಗದಲ್ಲಿ ನಂಬಿಕೆಯಿಲ್ಲದವನೋ, ಅಂಥವನಿಗೆ ಯೋಗಾಚರಣೆಗೆ ಅಧಿಕಾರವಿಲ್ಲ; ಒಂದೊಮ್ಮೆ ಅವನು ಯೋಗವನ್ನು ಆಚರಿಸಿದರೂ ಯಾವ ರೀತಿಯ ಪ್ರಯೋಜನವನ್ನಾಗಲೀ ಸಿದ್ಧಿಗಳನ್ನಾಗಲೀ ಪಡೆಯಲಾರ. ಇಂಥವನನ್ನು ಗುರುವೆಂದು ಅವನಲ್ಲಿ ಯೋಗ ಕಲಿಯುವುದೂ ಸಹ ಕಲಿಕೆಯಲ್ಲಿ ಆಸಕ್ತಿಯುಳ್ಳವನ ಅಧಿಕಾರವನ್ನು ಮೊಟಕುಗೊಳಿಸುತ್ತದೆ.
ಯೋಗಕ್ಕೆ ಅಧಿಕಾರ ಯಾರಿಗಿದೆ ಎಂದು ಹುಡುಕಿದಾಗ ಉತ್ತಮ, ಮಧ್ಯಮ ಮತ್ತು ಅಧಮ ಎಂಬ ಮೂರು ವರ್ಗದ ಜನರನ್ನು ಕಾಣಬಹುದು. ಇಲ್ಲಿನ ವರ್ಗೀಕರಣ ನಡೆಯುವುದು ವ್ಯಕ್ತಿ ಪಡೆದುಕೊಂಡ ಸಂಸ್ಕಾರ, ಬುದ್ಧಿಮತ್ತೆ, ಮುಮುಕ್ಷುತ್ವ ಮತ್ತು ವೈರಾಗ್ಯದ ಹಂತಗಳಿಂದ.
ಗುರುವಿನ ಆಯ್ಕೆಯಲ್ಲಿ ನಿಮಗೆ ಇದೆಲ್ಲ ತಿಳಿದಿರಬೇಕು. ಗುರುವೆಂಬಾತ ಪ್ರಾಪಂಚಿಕ ಮತ್ತು ವ್ಯಾವಹಾರಿಕ ವಿಷಯಗಳಿಂದ ಸಾಧ್ಯವಾದಷ್ಟೂ ದೂರವಿರುತ್ತಾನೆ. ಅತ್ಯಾಚಾರ, ಅನಾಚಾರ, ಮೋಸ, ವಂಚನೆ, ಲೂಟಿ, ಪರಸ್ತ್ರೀಗಮನ, ಸ್ವೇಚ್ಛಾಚಾರ, ರಾಜಸ/ತಾಮಸ ಆಹಾರಗಳ ಸೇವನೆ ಇವುಗಳನ್ನು ನಡೆಸುವುದಿಲ್ಲ. ಬಾಹ್ಯಾಂತರಂಗದಲ್ಲಿ ಏಕನಿಷ್ಠೆಯುಳ್ಳವನಾಗಿದ್ದು ಆಡಂಬರ ರಹಿತ ಬದುಕನ್ನು ನಡೆಸುತ್ತಾನೆ. ಸರಳ-ಸಾತ್ವಿಕ ನಡೆ-ನುಡಿಗಳಿಂದ ಕೂಡಿದ್ದು ಪರರನ್ನು ನೋಯಿಸುವ ಮಾತುಗಳನ್ನು ಆಡುವುದಿಲ್ಲ; ಕೆಟ್ಟ ಬೈಗುಳ ಪದಗಳನ್ನು ಉಪಯೋಗಿಸುವುದಿಲ್ಲ. ಯೋಗದಲ್ಲಿ ಶ್ರದ್ಧಾ-ಭಕ್ತಿ ಉಳ್ಳವನಾಗಿದ್ದು ಗುರುಪರಂಪರೆಗೆ ದ್ರೋಹವಾಗದಂತೆ ನಡೆದುಕೊಳ್ಳುವವನಾಗಿರುತ್ತಾನೆ. ಪ್ರಾಮಾಣಿಕನಾಗಿದ್ದು ಸದಾ ಸರ್ವದಾ ಸತ್ಯವನ್ನೇ ಪಾಲಿಸುತ್ತಾನೆ. ಎಲ್ಲರಲ್ಲಿಯೂ ದಯೆ, ಕರುಣೆ ಉಳ್ಳವನಾಗಿರುತ್ತಾನೆ.
ಉತ್ತಮ ಯೋಗಗುರುವನ್ನು ಆಯ್ದುಕೊಂಡು, ಅವನ ಚರಣಗಳಲ್ಲಿ ನಮಸ್ಕರಿಸಿಕೊಂಡು, ಮಾರ್ಗದರ್ಶನ ಪಡೆದುಕೊಳ್ಳಬೇಕು. ಯೋಗವನ್ನು ಆಚರಿಸಲು ಉದ್ಯುಕ್ತನಾಗುವ ವ್ಯಕ್ತಿ ಮೇಲೆ ಹೇಳಿದ ಉತ್ತಮ ಗುಣಗಳಿಂದ ಕೂಡಿ ಸಂಸ್ಕಾರಭರಿತನಾಗಿರಬೇಕು. ಸಂಸಾರಿಯಾಗಿದ್ದರೂ ಸಹ ಪರಸ್ತ್ರೀಯರ ವಿಷಯದಲ್ಲಿ ಮಾತೃತ್ವವನ್ನು ಕಾಣುವಂತಹ ಸ್ವಭಾವದವನಿರಬೇಕು. ಅದಿಲ್ಲದಿದ್ದರೆ ಯೋಗವನ್ನು ಆಚರಿಸುವ ಅಧಿಕಾರವೇ ಅವನಿಗೆ ಇರುವುದಿಲ್ಲ.
ನುರಿತ ಯೋಗಿಯು ಯೋಗಕ್ಕೆ ನಿರೋಧವನ್ನು ತಂದೊಡ್ಡುವ ಆಹಾರವನ್ನು ವರ್ಜಿಸಬೇಕು. ಉಪ್ಪು, ಹುಳಿ, ಖಾರ, ಕಹಿ, ಸಾಸಿವೆ, ಇಂಗು, ಬಿಸಿ ಪದಾರ್ಥಗಳು, ಈರುಳ್ಳಿ, ಬೆಳ್ಳುಳ್ಳಿ, ಬೆಂಕಿಯ ಆರಾಧನೆ, ಹೆಣ್ಣು, ಅತಿಯಾದ ನಡಿಗೆ, ಸೂರ್ಯೋದಯದಲ್ಲಿ ಸ್ನಾನ, ಉಪವಾಸ ವ್ರತಗಳಿಂದ ದೇಹವನ್ನು ಜರ್ಜರಿತಗೊಳಿಸುವುದು ಮೊದಲಾದವುಗಳನ್ನು ಬಹಳ ದೂರ ಇಡುತ್ತಾನೆ.
ಆರಂಭಿಕ ಹಂತದಲ್ಲಿ ಹಾಲು ಮತ್ತು ತುಪ್ಪವನ್ನು ಬಳಸಬಹುದು. ಅದೇರೀತಿ ಗೋಧಿ, ಹಸಿರು ಧಾನ್ಯಗಳು ಮತ್ತು ಕೆಂಪು ಅಕ್ಕಿಯನ್ನು ಬಳಸಬಹುದು. ಹೀಗೆ ಮಾಡಿದಲ್ಲಿ ಯೋಗಿಯು ಉಸಿರಾಟವನ್ನು ತಾನಿಷ್ಟಪಟ್ಟಂತೆ ದೀರ್ಘಕಾಲದವರೆಗೆ ನಿಯಂತ್ರಿಸಲು ಸಾಧ್ಯವಾಗುವುದು. ಹೀಗೆ ಹೊರಗಿನಿಂದ ಯಾವುದೇ ಶ್ವಾಸೋಛ್ವಾಸ ನಡೆಸದೇ, ತನ್ನೊಳಗೇ ತಡೆಹಿಡಿದ ವಾಯುವಿನಿಂದ ’ಕೇವಲ ಕುಂಭಕ’ವನ್ನು ಆಚರಿಸಬಲ್ಲವನಾಗುತ್ತಾನೆ. ಹೀಗೆ ಕೇವಲ ಕುಂಭಕವನ್ನು ಆಚರಿಸಲು ಮೊದಲುಮಾಡಿದವನಿಗೆ ಮೂರು ಜಗದಲ್ಲಿ ಪಡೆದುಕೊಳ್ಳಲಾಗದ್ದು ಯಾವುದೂ ಇರುವುದಿಲ್ಲ!
ಯೋಗದ ಆರಂಭದಲ್ಲೇ ಅವನಿಂದ ಬೆವರು ಹೊರಬರುತ್ತದೆ. ಕಪ್ಪೆಯು ಜಿಗಿಯುವ ಹಾಗೆ, ಪದ್ಮಾಸನದಲ್ಲಿ ಕುಳಿತ ಯೋಗಿಯು ಹಾಗೆಯೇ ಭೂಮಿಯಮೇಲೆ ಚಲಿಸುತ್ತಾನೆ. ಇದು ಇನ್ನೂ ಮುಂದಿನ ಹಂತಕ್ಕೇರಿದಾಗ ನೆಲದಿಂದ ತಂತಾನೇ ಮೇಲಕ್ಕೇರುವ ಮಟ್ಟಕ್ಕೆ ಬೆಳೆಯುತ್ತಾನೆ. ಆಗ ಅವನಿಗೆ ಹಲವು ಸಿದ್ಧಿಗಳು ಮೈಗೂಡುತ್ತವೆ. ಚಿಕ್ಕ ಅಥವಾ ದೊಡ್ಡ ಯಾವುದೇ ನೋವಿನ ಅನುಭವ ಅವನಿಗೆ ಇರುವುದಿಲ್ಲ. ಶಿಶ್ನದ ನಿಮಿರುವಿಕೆ ಮತ್ತು ನಿದ್ರೆ ಎರಡನ್ನೂ ಸಂಪೂರ್ಣ ತೆಗೆದು ಹಾಕುತ್ತಾನೆ. ಕಣ್ಣೀರು ಹರಿಯುವುದು, ಜೊಲ್ಲು ಸುರಿಯುವುದು, ಬೆವರು ಅಸರುವುದು, ಬಾಯಿಯ ದುರ್ನಾತ ಹೊರಹೊಮ್ಮುವುದು ಇವೆಲ್ಲವೂ ಅವನಲ್ಲಿ ಉದಯವಾಗುವುದೇ ಇಲ್ಲ!
ಇನ್ನೂ ಮುಂದಿನ ಹಂತದಲ್ಲಿ ಅವನು ಇನ್ನಷ್ಟು ಸಿದ್ಧಿಗಳನ್ನು ಪಡೆದುಕೊಳ್ಳುತ್ತಾನೆ; ಅವುಗಳಲ್ಲಿ ‘ಭೂಚರ ಸಿದ್ಧಿ’ ಎಂಬ ವಿಶಿಷ್ಟ ಸಿದ್ಧಿಯು ಈ ಪ್ರಪಂಚದ ಎಲ್ಲ ಸಜೀವ-ನಿರ್ಜೀವ ವಸ್ತುಗಳನ್ನು ತನ್ನ ನಿಯಂತ್ರಣದಲ್ಲಿಡಲು ಅವಕಾಶ ಕಲ್ಪಿಸುತ್ತದೆ. ಅವನ ಒಂದೇ ಉಸಿರಿನಿಂದ ಕಾಡಿನ ಕ್ರೂರ-ಹಿಂಸ್ರ ಪಶುಗಳು ಸತ್ತುಹೋಗಬಹುದು! ಆದರೆ ಯೋಗಿ ಹಾಗಾಗುವುದನ್ನು ಬಯಸಲಾರ. ಸಾಕ್ಷಾತ್ ಪ್ರೇಮಮಯೀ ಜಗನ್ನಿಯಾಮಕನಂತೆ ಸುಂದರವಾಗಿ ಕಂಗೊಳಿಸುತ್ತಾನೆ. ವೀರ್ಯ ತಡೆಹಿಡಿಯಲ್ಪಟ್ಟಿರುವುದರಿಂದ ಆತನ ಶರೀರದಿಂದ ಸುಗಂಧವು ಹೊರಸೂಸುತ್ತದೆ.
ಅಂತರಂಗದ ದನಿಯೇ ಯೋಗಿಗೆ ಸಿಂಧುವಾದ ಆಹಾರವನ್ನು ಆಯ್ದುಕೊಳ್ಳಲು ಪ್ರೇರೇಪಿಸುತ್ತದೆ. ನೀವು ನೀವಾಗಿಯೇ ಯೋಗಿಗೆ ಯೋಗ್ಯವಾದ ಆಹಾರ ಕ್ರಮಗಳಲ್ಲಿ ಆಯ್ದುಕೊಂಡು, ಯೋಗಿಯ ಆಹಾರ ಸಂಹಿತೆಗೆ ಧಕ್ಕೆಬಾರದಂತೆ ಒಂದು ಯಾದಿಯನ್ನು ತಯಾರಿಸಿಕೊಳ್ಳಬಹುದು. ಸಂಪೂರ್ಣ ಸಾತ್ವಿಕ ಆಹಾರವನ್ನು ಅರ್ಧಹೊಟ್ಟೆಯಷ್ಟು ಮಾತ್ರ ತೆಗೆದುಕೊಳ್ಳಬೇಕು. ಉಳಿದರ್ಧ ಹೊಟ್ಟೆಯಲ್ಲಿ ಕಾಲು ಭಾಗವನ್ನು ಶುದ್ಧ ನೀರಿನಿಂದ ಭರ್ತಿಮಾಡಬೇಕು. ಉಳಿದ ಕಾಲುಭಾಗವನ್ನು ವಾಯು ವೃದ್ಧಿಯಾಗುವುದಕ್ಕೆ ಅವಕಾಶ ನೀಡುವ ಸಲುವಾಗಿ ಹಾಗೇ ಬಿಡಬೇಕು.
ಯೋಗವನ್ನು ಆಚರಿಸಬಯಸುವ ಒಬ್ಬ ಸಾಮಾನ್ಯ ವ್ಯಕ್ತಿಗೇ ಯೋಗದ ನಿಯಮಗಳು ಹೀಗಿವೆ ಎನ್ನುವಾಗ ನಿಜವಾದ ಸನ್ಯಾಸಿಗೆ ಹೇಗಿರಬೇಡ? ಅಂದಹಾಗೆ ಮೇಲಿನ ಎಲ್ಲ ಷರತ್ತುಗಳಲ್ಲೂ ಹಾವಾಡಿಗ ಮಹಸಂಸ್ಥಾನದವರು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ; ಹಾಗಾಗಿಯೇ ಯೋಗ ಫಲಿಸಲಿಲ್ಲ, ಫಲಿಸುವುದೂ ಇಲ್ಲ.
ಇನ್ನು ಹಾವಾಡಿಗ ಸಂಸ್ಥಾನದವರ ಹಗರಣಗಳಿಗಂತೂ ಲೆಕ್ಕವೇ ಇಲ್ಲ. ಅವುಗಳನ್ನೆಲ್ಲ ಪರಿಶೀಲಿಸುವ ಹಡಗು ಆಕಡೆ ಹೋಗಿದೆ. ಇಂಚಿಂಚೂ ಬಿಡದೇ ಮಾಹಿತಿ ಕಲೆಹಾಕುವ ಪ್ರಯತ್ನ ನಡೆದಿದೆ. ಆದರೆ ಕಾಮಿಯ ದೋಣಿ ಮಾತ್ರ ಎತ್ತಹೊರಟಿದೆ ಮತ್ತು ಎಲ್ಲಿಗೆ ಸೇರಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ದೈಹಿಕವಾಗಿ ಇಲ್ಲಿದ್ದರೂ ಮಾನಸಿಕವಾಗಿ ಇಲ್ಲಿಲ್ಲ; ಪೂಜೆ-ಪುನಸ್ಕಾರಗಳೆಲ್ಲ ನೆಗೆದುಬಿದ್ದು ಕೇವಲ ಢಾಂಬಿಕತೆಯಿಂದ ನಡೆಯುತ್ತಿವೆ.
ಅನ್ನ ಬೆಂದಿದೆಯೋ ಇಲ್ಲವೋ ಎಂದು ನೋಡಲು ಒಂದು ಅಗುಳನ್ನು ಎತ್ತಿ ಹಿಸುಕಿ ನೋಡಿದರೆ ಸಾಕು, ಬದಲಿಗೆ ಪಾತ್ರೆಯಲ್ಲಿರುವ ಅನ್ನವನ್ನೆಲ್ಲ ರಾಶಿ ಹಾಕಿ ಹಿಸುಕಿ ನೋಡುವರೇ? ಇಲ್ಲ. ಹಾವಾಡಿಗ ಸಂಸ್ಥಾನದ ಒಂದೆರಡು ಹಗರಣಗಳೇ ಅಲ್ಲೇನು ನಡೆಯುತ್ತಿದೆ ಎಂದು ಅರಿಯುವುದಕ್ಕೆ ಸಾಕು; ಅಲ್ಲಿನ ಹಗರಣಗಳನ್ನು ಕೆದಕಿದರೆ ಆಸ್ತಿಕ ಮಹಾಶಯರು ದೇವರಲ್ಲೇ ನಂಬಿಕೆ ಕಳೆದುಕೊಂಡಾರು.
ಸಮಾಜದ ಮರ್ಯಾದೆ ಹೋಗುತ್ತದೆ, ಸೀಟಿನಲ್ಲೇ ಉಳಿಸಿಕೊಳ್ಳೋಣ ಎಂಬ ಪ್ರಚಾರ ನಡೆಯುತ್ತಿದೆಯಂತೆ; ಸಮಾಜಕ್ಕೆ ಇನ್ನೂ ಮರ್ಯಾದೆ ಇದೆಯೇ ಹಾಗಾದರೆ? ಮರ್ಯಾದೆ ಇದ್ದರೆ ಇಷ್ಟೆಲ್ಲ ಆಗಲು ಬಿಡುತ್ತಿದ್ದರೇ? ಅಷ್ಟಕ್ಕೂ ಈ ಸರ್ವತಂತ್ರ ಸ್ವತಂತ್ರ ಎಂಬ ಸರ್ವಾಧಿಕಾರೀ ಧೋರಣೆಯೇ ಸಮಾಜ ಘಾತುಕವಾದದ್ದು. ಹಿಂದೊಂದು ಕಾಲಕ್ಕೆ ಅದಕ್ಕೆ ಯೋಗ್ಯವಾದ ಯೋಗಿಗಳು ಇದ್ದರು, ಈಗಲೂ ಅಪರೂಪಕ್ಕೆ ಕೆಲವರು ಸಿಗಬಹುದು. ಆದರೆ ಯೋಗಿಗಳು ಎಂದು ಹೇಳಿಕೊಂಡು ತಿರುಗುವವರೆಲ್ಲ ಯೋಗಿಗಳೆನ್ನಲು ಸಾಧ್ಯವಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧ್ಯಾಷ್ಟಾಂಗಯೋಗ ...ಎಂದೆಲ್ಲ ಪದವಾಕ್ಯಗಳಲ್ಲಿ ಪ್ರಾವೀಣ್ಯವನ್ನು ತೋರಿಸುವ ’ಮಹಾನುಭಾವರೆಲ್ಲರೂ’ ಹಾಗೇ ಇದ್ದಾರೆಂದರ್ಥವಲ್ಲ. ಬಣ್ಣ ಮಾಸುವ ವರೆಗೆ ಗ್ಯಾರಂಟೀ ಗೋಲ್ದು ಅಪ್ಪಟ ಚಿನ್ನಕ್ಕಿಂತ ಚೆನ್ನಾಗಿ ಕಾಣುತ್ತದೆ.
ಇಷ್ಟೆಲ್ಲ ನಡೆದರೂ ಇನ್ನೂ ಕೆಲವರು ಜೈಕಾರ ಹಾಕುವುದಕ್ಕೆ ಅವರ ಸ್ವಾರ್ಥಪರ ಪ್ರಾಯೋಜಿತ ವ್ಯವಹಾರಗಳೇ ಕಾರಣ ಎನ್ನುವುದನ್ನು ಬೇರೆ ಯಾರೋ ಹಳದೀ ಶಾಲಿನ ಬಾವಯ್ಯಂದಿರು ವೇದಿಕೆಯೇರಿ ಅಧಿಕೃತವಾಗಿ ಘೋಷಿಸಬೇಕಾದ ಅಗತ್ಯವೇನಿಲ್ಲ ಬಿಡಿ.

July 8 
https://www.facebook.com/groups/1499395003680065/permalink/1637761423176755/


ಯೋಗ ಡೀಕೋಡೆಡ್-ಕಾಮಿ ಈಸ್ ಅನ್ ಫಿಟ್ ಫಾರ್ ಯೋಗ ಆಲ್ ದಿ ವೇ
ಇವತ್ತಿನ ಚಿತ್ರಕ್ಕೂ ಕತೆಗೂ ಯಾವ ಸಂಬಂಧವೂ ಇಲ್ಲ. ಯಾರೋ ಪುಣ್ಯಾತ್ಮನಿಗೆ ತುಮರಿಯ ಕಾದಂಬರಿ ಓದುವ ಬಯಕೆ. ಕತೆ, ಕವನ, ಕಾದಂಬರಿಗಳನ್ನು ಯಾರಾದರೂ ಬರೆಯಬಹುದು. ಶಾಸ್ತ್ರಗಳನ್ನು ಅವುಗಳ ಮೂಲ ಭಾಷೆಯಿಂದ ಹೀರಿಕೊಂಡು, ಋಷಿವಾಕ್ಯ-ಭಾವನೆಗಳಿಗೆ ಪ್ರಮಾದವೆಸಗದಂತೆ ಬರೆಯುವುದು ಹಿಮಾಲಯದ ತುದಿಗೆ ಹೋಗಿಬರುವಷ್ಟೇ ಕಷ್ಟ. ಕಾದಂಬರಿ ಬಯಸಿದವರು ಚಿತ್ರ ನೋಡಿಕೊಂಡು ತೃಪ್ತರಾಗಿ, ಉಳಿದವರು ಇಂದಿನ ಕತೆಯನ್ನು ಓದಿಕೊಂಡು ಹಸನ್ಮುಖಿಗಳಾಗಿ.
ಕುಡಿದು ವಾಹನ ಓಡಿಸಬೇಡಿ ಎಂದು ಹೇಳುತ್ತಾರಲ್ಲವೇ? ಒಂದೊಮ್ಮೆ ಪೈಲಟ್ ಎಣ್ಣೆ ಹೊಡೆದುಬಿಟ್ಟರೆ ಹೇಗಿರಬಹುದು? ಕೆಲವು ವರ್ಷಗಳ ಹಿಂದೆ ಕಟೌಟ್ ಒಂದರಲ್ಲಿ ಹೀಗೆ ಓದಿದ ನೆನಪು- ಮೇಲೆ ’ಕರ್ನಾಟಕ ಸರ್ಕಾರ’ ಎಂಬ ಬರಹ ಮತ್ತು ಲೋಗೊ. ಒಂದು ಚಿತ್ರ, ಅದರ ಕೆಳಗೆ ದೊಡ್ಡದಾಗಿ ’ಕುಡಿತದಿಂದ ಸರ್ವನಾಶ.’ ಪ್ರಾಯಶಃ ಹಾಗೆ ಬರೆದವ ಎಣ್ಣೆಹಾಕಿದ್ದನೇ? ಸರ್ಕರದ ಪರವಾಗಿ ಬರೆಸಿದವ ಹಾಕಿದ್ದನೇ? ಗೊತ್ತಿಲ್ಲ. ಅದನ್ನು ಓದಿದ ಇಂದಿನ ಸಾರ್ವಜನಿಕರಿಗೂ ಕನ್ನಡ ವ್ಯಾಕರಣ ಗೊತ್ತಿರಲಿಲ್ಲ ಎನ್ನಬಹುದೇ? ಅಥವಾ ಹಾಗೆ ಬರೆದಿದ್ದೇ ಸರಿಯೇ?
ಟೀಕೆಗಿಂತ ಹೆಚ್ಚಾಗಿ, ಕಾಮಿಯ ಆಯ್ಕೆಯಲ್ಲಿ ನಾವೆಲ್ಲಿ ಎಡವಿದ್ದೇವೆ ಎಂಬುದು ಇವುಗಳನ್ನೆಲ್ಲ ನೋಡಿದರೆ ನಮಗೆ ತಿಳಿಯುತ್ತದೆ. ಇಂದಿನ ದಿನಮಾನಗಳಲ್ಲಿ ಬೂದುಗುಂಬಳ ಬುದ್ಧಿಗೆ ಉಪಯುಕ್ತವೆಂದೂ, ಈರುಳ್ಳಿ-ಬೆಳ್ಳುಳ್ಳಿಗಳಲ್ಲಿ ಔಷಧೀಯ ಗುಣವಿದೆಯೆಂದೂ ಆಹಾರವಿಜ್ಞಾನಿಗಳು ಹೇಳುತ್ತಿದ್ದಾರೆ. ಹಾಗಾದರೆ ಅಂತವುಗಳನ್ನೇ ಯೋಗಿ ತಿನ್ನಬಾರದೆನ್ನಲಿಕ್ಕೂ ಕಾರಣಗಳಿರಬೇಕಲ್ಲ? ಅವುಗಳಿಂದ ಶಾರೀರಿಕ ಸೈಡ್ ಇಫೆಕ್ಟ್ ಇಲ್ಲದಿರಬಹುದು, ಮನಸ್ಸಿನಮೇಲೆ ಅವುಗಳ ಪರಿಣಾಮ?
ಮಹಾನ್ ಯೋಗಿಯೊಬ್ಬರ ಸ್ವಾನುಭವದ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ಮಾಂಸಕ್ಕಿಂತಲೂ ಕಡೆಯಂತೆ. ಚಿತ್ತವೃತ್ತಿಯನ್ನು ನಿಯಂತ್ರಿಸುವಲ್ಲಿ ಅವುಗಳು ಉಂಟುಮಾಡುವ ಅಡೆತಡೆಗಳು ಬಹಳವಂತೆ. ತಿಳಿದವರು ಅವುಗಳನ್ನು ಕಾಮೋತ್ತೇಜಕಗಳೆಂದೂ ಕರೆದಿದ್ದಾರೆ. ತಾಲೂಕು ಪ್ರದೇಶಗಳ ಹೋಟೆಲ್ ಗಳಲ್ಲಿ ಮುಂಗಾರು ಮಾರುತ ಬೀಸುವಾಗ, ಈರುಳ್ಳಿ ಬಜೆ ಮತ್ತು ಬೆಳ್ಳುಳ್ಳಿ ಚಟ್ನಿ ಹಚ್ಚಿದ ಮಸಾಲೆ ದೋಸೆಯ ಪರಿಮಳ ಅರ್ಧ ಕಿ.ಮೀ ದೂರದಿಂದಲೇ ದಾರಿಹೋಕರನ್ನು ಕರೆಯುತ್ತದೆ. ಎಂದಾಗ ಬಾಗಿಲಲ್ಲಿ ನಿಂತು ಕರೆಯುವ ಸ್ವಭಾವಕ್ಕೆ ಅವು ಪುಷ್ಟಿ ನೀಡುತ್ತವೆ ಎನ್ನುವುದಕ್ಕೆ ಇದೊಂದೇ ಸಂಗತಿ ಪುಷ್ಟಿಕರವಾಗುತ್ತದೆ.
ಹೋಗಲಿ, ಶರೀರ ಮತ್ತು ಮನಸ್ಸುಗಳ ಬಗೆಗೆ ವಿಜ್ಞಾನಿಗಳು ಏನಾದರೂ ಹೇಳಬಹುದು, ನಾಡಿಗಳ ಬಗ್ಗೆ ಅವರಲ್ಲಿ ಯಾವ ವಿವರಣೆಯೂ ಸಿಗುವುದಿಲ್ಲ. ರಕ್ತನಾಳಗಳಲ್ಲಿ ಹರಿಯುವ ರಕ್ತವೇ ಕೆಲವೊಮ್ಮೆ ಹೆಪ್ಪುಗಟ್ಟುವುದಂತೆ, ಮೂತ್ರನಾಳದಲ್ಲಿ ಹರಿಯುವ ಮೂತ್ರವೇ ಹರಳುಗಟ್ಟುವುದಂತೆ, ನಾಡಿಗಳಲ್ಲಿ ಹರಿದಾಡುವ ವಾಯು ವಿದ್ಯುತ್ತಿನ ಕತೆ ಏನು? ಅದಕ್ಕೆ ಅವರಲ್ಲಿ ಉತ್ತರವಿಲ್ಲ.
ಯೋಗಿಗಳು ಪ್ರಾಣಾಯಾಮದಲ್ಲಿ ನಾಲ್ಕು ಹಂತಗಳನ್ನು ಹೇಳಿದ್ದಾರೆ-
ಮೊದಲನೆಯ ಹಂತ-ಆರಂಭ ಅವಸ್ಥೆ
ಆರಂಭಿಕ ಹಂತದಲ್ಲಿ ಮೂರು ಮಾತ್ರೆಗಳ ಕಾಲ ಓಂಕಾರವನ್ನು ಪಠಿಸಬೇಕು. ಹಿಂದೆ ನಡೆದ ಪಾಪಗಳಿಂದ ಮುಕ್ತಿಪಡೆಯುವ ಸಲುವಾಗಿ ಹೀಗೆ ಮಾಡಲಾಗುತ್ತದೆ. ಪ್ರಣವ ಮಂತ್ರವೆನಿಸಿದ ಓಂ, ಹಿಂದಿನ ಪಾಪಗಳನ್ನು ಪರಿಹರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಯೋಗಿಯು ಈ ಸಮಯದಲ್ಲಿ ಬೆವರುತ್ತಾನೆ. ಬೆವರನ್ನು ಕೈಗಳಿಂದ ಒರೆಸಿ ಸ್ವಚ್ಛಗೊಳಿಸಿಕೊಳ್ಳಬೇಕು. ಶರೀರವು ಅದುರಲು ಅರಂಭಗೊಳ್ಳುತ್ತದೆ. ಕೆಲವೊಮ್ಮೆ ಯೋಗಿ ಕಪ್ಪೆಯಂತೆ ಜಿಗಿಯುವ ಸಾಧ್ಯತೆಯೂ ಇದೆ.
ಎರಡನೆಯ ಹಂತ-ಘಟ ಅವಸ್ಥೆ
ಇದು ಯೋಗಿಯ ಪ್ರಾಣಾಯಾಮದ ಎರಡನೇ ಹಂತ. ಸತತವಾದ ಅಭ್ಯಾಸದಿಂದ ಶ್ವಾಸದ ನಿಯಂತ್ರಣವನ್ನು ಕಲಿತುಕೊಂಡ ನಂತರ ಈ ಹಂತವನ್ನು ತಲುಪಬಹುದು. ಈ ಹಂತಕ್ಕೆ ಬರುವಾಗ ಪ್ರಾಣ ಮತ್ತು ಅಪಾನಗಳ ನಡುವೆ, ಮನಸ್ಸು ಮತ್ತು ಬುದ್ಧಿಗಳ ನಡುವೆ, ಜೀವಾತ್ಮ ಮತ್ತು ಪರಮಾತ್ಮರ ನಡುವೆ ಒಮ್ಮತವು ಒಡಮೂಡಿ ವೈರುಧ್ಯವು ಅಳಿಯುತ್ತದೆ. ಇದೇ “ಘಟ ಅವಸ್ಥೆ.” ಇದನ್ನು ಯೋಗಿಯು ಬೆಳಿಗ್ಗೆ ಮತ್ತು ಸಾಯಂಕಾಲ ದಿನದಲ್ಲಿ ಒಂದು ಯಾಮದವರೆಗೆ ಅಂದರೆ ಮೊರು ಗಂಟೆಗಳ ಕಾಲ ನಡೆಸಬಹುದು. ಒಮ್ಮೆ ಮಾತ್ರ ಕೇವಲ ಕುಂಭಕವನ್ನು ಆಚರಿಸಬೇಕು.
ವಿಷಯವಸ್ತುಗಳ ಮೇಲೆ ಕೇಂದ್ರಿತವಾದ ಇಂದ್ರಿಯಗಳನ್ನು ಪ್ರಾಣಾಯಾಮದ ಸಮಯದಲ್ಲಿ ವಿಷಯವಸ್ತುಗಳಿಂದ ಅಥವಾ ವಿಷಯವಾಸನೆಯಿಂದ ವಿಮುಕ್ತಗೊಳಿಸುವುದೇ ಪ್ರತ್ಯಾಹಾರವಾಗಿದೆ. ಕಣ್ಣಿಂದ ನೋದುವುದೆಲ್ಲವೂ ಅತ್ಮವನ್ನೇ ಎಂದು ತಿಳಿಯಬೇಕು. ಅದೇರೀತಿ, ಕಿವಿಯಿಂದ ಕೇಳುವುದೆಲ್ಲವನ್ನೂ, ಮೂಗಿನಿಂದ ಆಘ್ರಾಣಿಸುವುದೆಲ್ಲವನ್ನೂ, ನಾಲಿಗೆಯಿಂದ ಸ್ವಾದಗ್ರಹಿಸುವುದೆಲ್ಲವನ್ನೂ ಮತ್ತು ಚರ್ಮದಿಂದ ಸ್ಪರ್ಶಿಸುವುದೆಲ್ಲವನ್ನೂ ಆತ್ಮವೆಂಬ ಭಾವನೆ ಅವನಲ್ಲಿರಬೇಕು. ಈ ಸಮಯದಲ್ಲಿ ಅವನು ಅಪರೋಕ್ಷ ಜ್ಞಾನವನ್ನು ಪಡೆದುಕೊಳ್ಳುತ್ತಾನೆ. ಇರುವಲ್ಲಿಂದ ಇಚ್ಛಿಸಿದ ಬಹುದೂರದೆಡೆಗೆ ಅರೆನಿಮಿಷದಲ್ಲಿ ಸಾಗಿಹೋಗುವ ಶಕ್ತಿ, ಅಜ್ಞಾಪನೆಯಂತೆ ನಿಖರವಾಗಿ ಅದ್ಭುತವಾಗಿ ಮಾತನಾಡು ಶಕ್ತಿ, ಇಚ್ಛಿಸಿದ ಯಾವುದೇ ರೂಪವನ್ನೊ ಧಾರಣೆಮಾಡಿಕೊಳ್ಳುವ ಶಕ್ತಿ, ಇರುವಲ್ಲೇ ಮಾಯವಾಗುವ ಶಕ್ತಿ ಮತ್ತು ಕಬ್ಬಿಣವನ್ನು ಬಂಗಾರವನ್ನಾಗಿ ಪರಿವರ್ತಿಸುವಂತಹ ಹಲವು ಶಕ್ತಿ-ಸಿದ್ಧಿಗಳನ್ನು ಆತ ಪಡೆದುಕೊಳ್ಳುತ್ತಾನೆ.
ಜೊತೆಗೆ ಗಾಳಿಯಲ್ಲಿ ತೇಲಾಡುವ ಶಕ್ತಿಯನ್ನೂ ಸಹ ಯೋಗಿ ಪಡೆದುಕೊಳ್ಳುತ್ತಾನೆ. ಹೀಗಿದ್ದರೂ ದೊರೆತ ಈ ಸಿದ್ಧಿಗಳೆಲ್ಲ ಮುಕ್ತಿಯೋಗದ ಹಾದಿಯಲ್ಲಿ ಇರುವ ಅಡೆತಡೆಗಳೆಂದು ಯೋಗಿಯು ಭಾವಿಸುತ್ತಾನೆ. [ಭಾವಿಸಿದರೆ ಮುಂದಕ್ಕೆ ತೆರಳಲು ಸಾಧ್ಯ, ಸಿದ್ಧಿಯ ದುರುಪಯೋಗಮಾಡಿಕೊಂಡರೆ ಮತ್ತೆ ಮೂಲಸ್ಥಾನಕ್ಕೆ ಬಿದ್ದುಬಿಡುತ್ತಾನೆ.] ಯೋಗಿಯ ಸುತ್ತ ಇರುವ ಶಿಷ್ಯರು ಯೋಗಿಯಲ್ಲಿ ಸಿದ್ಧಿಯಿಂದ ಉಂಟಾಗುವ ಪವಾಡಗಳನ್ನು ತೋರಿಸಲು ವಿನಂತಿಸುತ್ತಾರೆ. ಹಾಗೊಮ್ಮೆ ಪವಾಡಗಳಲ್ಲಿ ನಿರತನಾದರೆ ಯೋಗಿಯ ಯೋಗದ ಬದುಕು ಅಲ್ಲಿಗೆ ಮೊಟಕುಗೊಳ್ಳುತ್ತದೆ. ಸಿಷ್ಯರಿಗೆ ತಿಳುವಳಿಕೆ ನೀಡಿ, ಗುರುವಿನ ಹೇಳಿಕೆಗಳತ್ತ ಗಮನವಿಟ್ಟು ಯೋಗದಲ್ಲಿ ಮುನ್ನಡೆದರೆ ಪ್ರಾಪಂಚಿಕ ವಿಷಯಗಳಿಂದ ಮುಕ್ತನಾಗಿ, ಮೋಕ್ಷವು ದೊರೆಯುತ್ತದೆ.
ಮೂರನೆಯ ಹಂತ-ಪರಿಚಯ ಅವಸ್ಥೆ
ಯೋಗಿಯ ನಿರಂತರ ಯೋಗೋಪಾಸನೆಯು ಅವನನ್ನು “ಪರಿಚಯ ಅವಸ್ಥೆ” ಎಂಬ ಮೂರನೇ ಹಂತಕ್ಕೆ ಕೊಂಡೋಯ್ಯುತ್ತದೆ. ವಾಯುವು ಅಗ್ನಿಯ ಜೊತೆಗೂಡಿ ಕುಂಡಲಿನಿಯನ್ನು ಜಾಗೃತಗೊಳಿಸುವುದರಿಂದ ಕುಂಡಲಿನೀ ಶಕ್ತಿಯು ಮೂಲಾಧಾರದಿಂದ ಸಹಸ್ರಾರದೆಡೆಗೆ ನಿರಂತರವಾಗಿ ಪ್ರವಹಿಸತೊಡಗುತ್ತದೆ. ಚಿತ್ತದ ಜೊತೆಗೆ ಪ್ರಾಣವೂ ಸೇರಿಕೊಂಡು ಸುಷುಮ್ನಾ ನಾಡಿಯ ಮುಖಾಂತರ ಸಹಸ್ರಾರ ಉನ್ನತ ಕೇಂದ್ರದೆಡೆಗೆ ಕರೆದೊಯ್ಯುತ್ತದೆ. ಯಾವಾಗ ಯೋಗಿಯು ಕ್ರಿಯಾಶಕ್ತಿಯನ್ನು ಪಡೆದುಕೊಳ್ಳುತ್ತಾನೋ, ಆರು ಚಕ್ರಗಳನ್ನು ದಾಟಿದ ಯೋಗಿಗೆ ಆಗ ಏಳನೇ ಚಕ್ರದ ಪರಿಚಯ ನಿಚ್ಚಳವಾಗುತ್ತದೆ. ಆಗ ಯೋಗಿಯು ಮೂರು ಮಜಲುಗಳ ಕರ್ಮವನ್ನು ಅರಿಯಲು ಸಾಧ್ಯವಾಗುತ್ತದೆ. ಮೂರು ಮಜಲುಗಳ ಕರ್ಮಗಳನ್ನು ಯೋಗಿಯು ಪ್ರಣವದಿಂದ ನಾಶಪಡಿಸುತ್ತಾನೆ.
ಆಗ ಅವನು “ಕಾಯವ್ಯೂಹ”ವನ್ನು ರಚಿಸುತ್ತಾನೆ. ಕಾಯವ್ಯೂಹ ಎಂಬುದು, ಹಲವು ವಿಧ ಸ್ಕಂದಗಳನ್ನು ದೇಹದಲ್ಲೆಲ್ಲ ವ್ಯವಸ್ಥಾಪನೆಗೊಳಿಸಿ, ಜನ್ಮಾಂತರ ಪಾಪಗಳಿಂದ ಮುಕ್ತಿಯನ್ನು ಪಡೆದುಕೊಂಡು, ಮತ್ತೆ ಮರುಹುಟ್ಟು ಪಡೆಯದಂತೆ ಜೀವನ್ಮುಕ್ತನಾಗುವ ಒಂದು ರಹಸ್ಯ ವಿದ್ಯೆ. ಈ ಮಹಾನ್ ಯೋಗಿಯು ಮುಂದೆ ಪಂಚಧರ್ಮ ಅಂದರೆ ಪಂಚಭೂತಗಳ ಮೇಲೆ ನಿಗಾ ಇರಿಸಿ ಅವುಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾನೆ. ಪಂಚಭೂತಗಳಿಂದ[ಪೃಥ್ವಿ, ಆಕಾಶ, ವಾಯು, ಜಲ ಮತ್ತು ಅಗ್ನಿ]ಅವನಿಗೆ ಯಾವ ಹಾನಿಯೂ ತಟ್ಟದು.
ನಾಲ್ಕನೇ ಹಂತ-ನಿಷ್ಪತ್ತಿ ಅವಸ್ಥೆ
ಪ್ರಾಣಾಯಾಮದ ನಾಲ್ಕನೇ ಅವಸ್ಥೆ ಇದಾಗಿದೆ. ಹಂತಹಂತವಾಗಿ ಯೋಗಿಯು ಮೂರು ಹಂತಗಳನ್ನು ಮುಗಿಸಿ “ನಿಷ್ಪತ್ತಿ ಅವಸ್ಥೆ”ಗೆ ಏರುತ್ತಾನೆ. ಎಲ್ಲಾ ಕರ್ಮಬೀಜಗಳನ್ನು ನಾಶಪಡಿಸಿದ ಯೋಗಿಯು ಈ ಹಂತದಲ್ಲಿ ಅಮೃತಪಾನಮಾಡಿ ಅಮರತ್ವವನ್ನು ಪಡೆದುಕೊಳ್ಳುತ್ತಾನೆ. ಅಲ್ಲಿಂದಾಚೆಗೆ ಅವನಿಗೆ ಹಸಿವಿಲ್ಲ, ನೀರಡಿಕೆಯಿಲ್ಲ, ನಿದ್ದೆ-ಉದ್ವೇಗಗಳು ಇರುವುದಿಲ್ಲ. ಅವನು ಅವುಗಳೆಲ್ಲದರಿಂದ ಸ್ವತಂತ್ರನಾಗಿರುತ್ತಾನೆ.
ಈ ಜಗದಲ್ಲಿ ಇಚ್ಛಿಸದಲ್ಲಿಗೆ ಅವನು ಹೋಗಬಹುದು. ಅವನಿಗೆ ಯಾವುದೇ ಕಾಯಿಲೆಗಳು, ಶಾರೀರಿಕ ನ್ಯೂನತೆಗಳು [ಕಣ್ಣು ಕಾಣಿಸದಿರುವುದು, ಕಿವಿ ಕೇಳಿಸದಂತಾಗುವುದು ಇತ್ಯಾದಿ ವಯಸ್ಸಿಗನುಗುಣವಾಗಿ ಕಾಣಿಸಿಕೊಳ್ಳುವ ತೊಂದರೆಗಳು]ಮತ್ತು ಮುಪ್ಪು ಬಾಧಿಸುವುದಿಲ್ಲ. ಸಮಾಧಿ ಸ್ಥಿತಿಯ ಪರಮಾನಂದವನ್ನು ಹೊಂದುತ್ತಾನೆ. ಆಗ ಅವನಿಗೆ ಮತ್ತೆ ಯೋಗದ ಆಚರಣೆಗಳು ಬೇಕಾಗಿಲ್ಲ. ಗಂಟಲು ಮೂಲದಲ್ಲಿ ನಾಲಿಗೆಯಿಟ್ಟು ಪ್ರಾಣವಾಯುವನ್ನು ಕುಡಿಯುವ ಕುಶಲ ತಂತ್ರವನ್ನು ಪಡೆದುಕೊಂಡ ಈ ಯೋಗಿಗೆ ಪ್ರಾಣ ಮತ್ತು ಅಪಾನಗಳ ನಿಯಮಗಳು ಅರ್ಥವಾಗಿ ಮೋಕ್ಷವನ್ನು ಪಡೆದುಕೊಳ್ಳಲು ಅರ್ಹನಾಗುತ್ತಾನೆ.
ಯೋಗವನ್ನು ನಿರಂತರವಾಗಿ, ಸಾಂಪ್ರದಾಯಿಕ ಶೈಲಿಯಲ್ಲಿ, ಶ್ರದ್ಧಾ-ಭಕ್ತಿ ಪುರಸ್ಸರವಾಗಿ, ಆಚರಿಸುವ ಯೋಗವಿದ್ಯಾರ್ಥಿಯು ಈ ಎಲ್ಲ ಹಂತಗಳನ್ನು ಕ್ರಮಬದ್ಧವಾಗಿ ಏರುತ್ತ ಹೋಗುತ್ತಾನೆ. ಯಾವಗಲೋ ಒಮ್ಮೆ ಕೇವಲ ಕ್ಷಣಿಕ ತೃಪ್ತಿಗಾಗಿ ಯೋಗದ ಮೊರೆಹೋಗುವ ಯಾವ ವ್ಯಕ್ತಿಗೂ ಸಹ ಈ ಅವಸ್ಥೆಗಳಾಗಲೀ ಯೋಗದ ನಿಜವಾದ ಪ್ರಯೋಜನಗಳಾಗಲೀ ಪ್ರಾಪ್ತವಾಗುವುದಿಲ್ಲ. ಇದೆಲ್ಲದಕ್ಕೂ ಪ್ರಮುಖ ಅಧಾರಗಳೆಂದರೆ ಮಿತಾಹಾರ ಮತ್ತು ಬ್ರಹ್ಮಚರ್ಯ.
ದೀಕ್ಷೆಯಾದ ಒಂದೇ ತಿಂಗಳಿನಲ್ಲಿ ಈರುಳ್ಳಿ ಹಾಕಿದ ಉಫ್ಫಿಟ್ಟು ತಿಂದವರಿದ್ದಾರೆ. ಕದ್ದುಮುಚ್ಚಿ ಮಸಾಲೆ ಪದಾರ್ಥಗಳನ್ನೂ ಯೋಗಿಗೆ ನಿಷಿದ್ಧವಾದ ತಿಂಡಿ-ತಿನಿಸುಗಳನ್ನೂ ತಿಂದವರಿದ್ದಾರೆ. ಅಂತವರಲ್ಲಿ ಯೋಗ ಸಕ್ರಿಯವಾಗಿದೆ ಎಂಬುದನ್ನು ಒಪ್ಪುವುದೇ ಯೋಗಿ ಪತಂಜಲಿಗೆ ಅಪಚಾರ ಎಸಗುವುದಾಗುತ್ತದೆ. ಯೋಗವನ್ನೇ ಅರಿಯದ ಕೆಲವರು ಯೋಗ ದಿನಾಚರಣೆಯ ಬಗ್ಗೆ ಪತ್ರಿಕೆಗಳಲ್ಲಿ ಹೇಳಿಕೆ ಕೊಡುತ್ತಾರೆ.
ಯಾವ ನೀತಿ, ನಿಯಮಗಳನ್ನೂ ಅರಿಯದೆ ಜೇಬು ಭರ್ತಿಗೆ ಜೈಕಾರ ಕೂಗುವ ಮಂದಿ ಮೂಲ ಸನಾತನ ವೈದಿಕ ಸಲ್ಲಕ್ಷಣಗಳಿಗೆ ಅಪಚಾರ ಮಾಡುತ್ತಿದ್ದಾರೆ. ಒಂದಷ್ಟು ದೀಪ ಹಚ್ಚಿ, ಹೂವು ಜೋಡಿಸಿ ಅಲಂಕಾರ ಮಾಡಿಬಿಟ್ಟ ಮಾತ್ರಕ್ಕೆ ದೈವೀ ಶಕ್ತಿಯ ಆವಾಸ ಅಲ್ಲಿದೆಯೆಂದು ನಂಬಬಾರದು. ದೈವೀ ಶಕ್ತಿಯ ಆವಾಸಕ್ಕೆ ಹಲವು ಕಟ್ಟುಪಾಡುಗಳಿವೆ. ಸೆಕ್ಯೂರಿಟಿಗಳಿಗೆ ಮುಖ ತೋರಿಸಿ ವಿಮಾನವೇರುವ ವಿಗ್ರಹಗಳಲ್ಲಿ ಸಾನ್ನಿಧ್ಯ ಇರಲು ಸಾಧ್ಯವಿಲ್ಲ, ನಮಾಮಿ ಸಾಬೂನಿನ ನೊರೆ ತಾಗಿದ ಕೈಯಿಂದ ಅಭಿಷೇಕ ಪಡೆದ ವಿಗ್ರಹಗಳಲ್ಲಿ ಭೂತಾವಾಸವಾದರೂ ತಪ್ಪಿಲ್ಲ.
ಇನ್ನು, ಇಪ್ಪತ್ತೈದು ಲಕ್ಷಕೊಟ್ಟು ಮಲ್ಲಿಕಾ ಮಾವಿನ ಹಣ್ಣನ್ನು ಮುಟ್ಟಲು ಹವಣಿಸಿ, ಕೈಗೂಡದ್ದಕ್ಕೆ ಕೋಪಾವಿಷ್ಟನಾದ ಕಾಮಿಯನ್ನು ಆರಾಧಿಸುವ ಭಕ್ತರಲ್ಲಿ ಕಾಮವಾಸನೆ ಆವಾಸವಾಗುವುದೇ ಹೊರತು ಮೋಕ್ಷಮಾರ್ಗದ ಗಾಳಿ ಎಂದೆಂದಿಗೂ ಬೀಸುವುದಿಲ್ಲ. ಕುಳಿತವ ಕಚ್ಚೆಹರುಕನಾದರೆ ಸೀಟು, ದೇವರು, ಮಂತ್ರಾಕ್ಷತೆ, ಆಶೀರ್ವಾದ ಯಾವುದರಿಂದಲೂ ಉತ್ತಮ ಪರಿಣಾಮಗಳಿಲ್ಲ;ಎಲ್ಲವೂ ಅಡ್ಡ ಪರಿಣಾಮಗಳೇ. ಇದನ್ನೆಲ್ಲ ನೋಡಿಯೇ ಹಿಂದಿನವರು ಹೇಳಿದ್ದಾರೆ-ಚೋರ ಗುರುವಿಗೆ ಚಾಂಡಾಲ ಶಿಷ್ಯರು.

July 9 
https://www.facebook.com/groups/1499395003680065/permalink/1638151403137757/

ಆಂತರಿಕ ಕೈಗಾರಿಕಾ ತಾಣ ಕಳ್ಳರ ಅಡಗುದಾಣವಾಗಬಾರದಲ್ಲವೇ?
"ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ?
ಅರಿಯುವಂ ಸೋಂಕಿಂದೆ ಬಿಸಿಲುತನಿವುಗಳ
ನರನುಮಂತೆಯೇ ಮನಸಿನನುಭವದಿ ಕಾಣುವನು
ಪರಸತ್ವಮಹಿಮೆಯನು - ಮಂಕುತಿಮ್ಮ.
ಸೂರ್ಯ ಚಂದ್ರರು ಎದುರೇ ಇದ್ದರೂ ಕುರುಡನಿಗೆ ಕಾಣಲಾಗುವುದೆ? ಬಿಸಿಲಿನ ಬಿಸಿ ಮತ್ತು ಬೆಳದಿಂಗಳ ತಂಪನ್ನು ಸ್ಪರ್ಶಮಾತ್ರದಿಂದಲೇ ಅವನು ಅರಿಯುವುದಾಗುತ್ತದೆ. ಅದರಂತೆ, ಮನಸ್ಸಿಗೆ ನಿಲುಕುವ ಅನುಭವದಿಂದ ಮನುಷ್ಯನೂ ಸಹ ಪರಮಾತ್ವ ತತ್ವವನ್ನು ಕಾಣುತ್ತಾನೆ ಎಂಬುದು ಡಿವಿಜಿಯವರ ಹೇಳಿಕೆ.
ಅವರವರ ಭಾವಕ್ಕೆ ಅವರವರ ಬಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ, ಹರಿಯ ಭಕ್ತರಿಗೆ ಹರಿ
ನರರೇನು ಭಾವಿಸುವರದರಂತೆ ಕಾಣುವನು
-ಎಂದು ನಿಜಗುಣ ಶಿವಯೋಗಿಳು ಹೇಳಿದ್ದಾರೆ.
ಪರಮಾತ್ಮನೆಂದರೆ ಕಣ್ಣಿಗೆ ಕಾಣುವ ಆಕಾರವೆಂದಲ್ಲ. ಭಗವಂತ ಎಂಬುದೊಂದು ಭಾವನಾತ್ಮಕ ವಿಚಾರ. ಭಗವಂತನನ್ನು ಹರಿಯೆನ್ನುವವರೂ ಇದ್ದಾರೆ, ಹರನೆನ್ನುವವರೂ ಇದ್ದಾರೆ, ಇನ್ನೂ ಹಲವು ನಾಮ-ರೂಪಗಳಿಂದ ಧೇನಿಸುವವರಿದ್ದಾರೆ. ಎಲ್ಲ ನಾಮ-ರೂಪ-ಉಪಾಧಿಗಳಿಂದ ಆರಾಧಿಸಲ್ಪಡುವ ಶಕ್ತಿಯi ಮೂಲ ಒಂದೇ; ನಮ್ಮ ನಮ್ಮ ಭಾವನೆಯಲ್ಲಿ, ಮನೋಭೂಮಿಕೆಯಲ್ಲಿ ಪಡಿಮೂಡಿದ ನಾಮ-ರೂಪಗಳಿಂದ ನಾವು ಭಗವಂತ ಹೀಗೆಯೇ ಎನ್ನುತ್ತೇವಷ್ಟೆ.
ಮನುಷ್ಯನಿಗೆ ಹೊರಗಿನಿಂದ ಏನನ್ನಾದರೂ ಹೇಳಿಕೊಡಬಹುದು. ಹೀಗೆ ಮಾಡು-ಹೀಗೆ ಮಾಡಬೇಡ ಎಂದೆಲ್ಲ ತಿಳಿಸಿ ಹಾಗೆ ನಡೆದುಕೊಳ್ಳುವಂತೆ ಮಾಡಬಹುದು. ಅವನ ಅಂತರ್ಯದಲ್ಲಿ ನಡೆಯುವ ಮನೋವ್ಯಾಪಾರವನ್ನು ಮತ್ತು ಕ್ರಿಯೆಯನ್ನೂ ಹೇಳಿಕೊಡಲು ಅಥವಾ ನಿಯಂತ್ರಿಸಲು ನಮಗೆ ಸಾಧ್ಯವೇ? ಪ್ರತಿಯೊಬ್ಬರಿಗೂ ಅವರವರದ್ದೇ ಆದ ಅನುಭವವಿರುತ್ತದೆ. ಪ್ರತಿಯೊಬ್ಬರಿಗೂ ಅವರವರ ಅನುಭವದ ಪ್ರಕಾರ ಆ ಪರತತ್ವದ ದರ್ಶನವಾಗುತ್ತದೆ.
ಯಾರೊಬ್ಬರ ಅಂತರಂಗವನ್ನು ಹೊಕ್ಕು ನೋಡಲೂ ನಮ್ಮಿಂದ ಸಾಧ್ಯವಿಲ್ಲ. ಅವರವರೇ ಅವರ ಅಂತರಂಗವನ್ನು ಹೊಕ್ಕು ನೋಡಿದರೆ, ಅವರವರ ಭಾವನೆಗೆ ತಕ್ಕಂತೆ ಪರಮಾತ್ಮ ಅಷ್ಟು ದೊಡ್ಡದಾಗಿಯೋ ಸಣ್ಣದಾಗಿಯೋ ಕಾಣಿಸುತ್ತಾನೆ. ಮಿಥ್ಯಾ ಪ್ರಪಂಚದ ಬ್ರಹ್ಮಾಂಡ ಬಹಳ ದೊಡ್ಡದು; ಯೋಗಿಗೆ ಈ ಪ್ರಪಂಚ ಅಥವಾ ಬ್ರಹ್ಮಾಂಡ ಬಹಳ ಚಿಕ್ಕದು. ಜನಸಾಮಾನ್ಯ ಈ ಪ್ರಪಂಚವನ್ನು ಭೋಗಾಸಕ್ತಿಯಿಂದ ನೋಡುತ್ತಾನೆ; ಪರಮಯೋಗಿ ಅದನ್ನು ಯೋಗಾಸಕ್ತಿಯಿಂದ ನೋಡುತ್ತಾನೆ. ಅಂದರೆ ವ್ಯಕ್ತಿಯ ಮನಸ್ಸಿನಲ್ಲಿರುವ ಭಾವನೆಗೆ ತಕ್ಕಂತೆ ಎಲ್ಲವೂ ಕಾಣುತ್ತದೆ ಯಾಕೆಂದರೆ ಇಹದ ರಹಸ್ಯ ಎಲ್ಲರ ಅರಿವಿಗೆ ನಿಲುಕುವುದಿಲ್ಲ. ದೇವರು ನಿರಾಕಾರ, ನಿರಾಮಯ ಎಂದು ವೇದಗಳು ಸಾರುತ್ತವೆ. ಹೀಗಿದ್ದೂ ಕೆಲವರಿಗೆ ಮನೆಯಲ್ಲಿರುವ ಸಣ್ಣ ಮೂರ್ತಿಯೇ ದೇವರು ಮತ್ತು ಉಳಿದೆಡೆ ದೇವರಿಲ್ಲ.
ಕನಕದಾಸರಿಗೂ ಸೇರಿದಂತೆ ಹಲವು ಶಿಷ್ಯರಿಗೆ ಯಾರೂ ಇಲ್ಲದ ಜಾಗದಲ್ಲಿ ಅಡಗಿ ತಿಂದುಬರುವಂತೆ ತಿಳಿಸಿ ಬಾಳೆಯ ಹಣ್ಣನ್ನು ಅವರ ಗುರುಗಳು ಕೊಟ್ಟರು. ಎಲ್ಲರೂ ಅಲ್ಲಲ್ಲಿ ಬಾಗಿಲ ಮರೆಯಲ್ಲಿ, ಗೋಡೆಯೆ ಇರುಕಿನಲ್ಲಿ, ಯಾವ್ಯಾವುದೋ ಸಂದು-ಮೂಲೆಗಳಲ್ಲಿ ನಿಂತು ತಿಂದುಬಂದರೆ ಕನಕ ಅದನ್ನು ಹಾಗೆಯೇ ಹಿಡಿದು ಮರಳಿ ಬಂದ!
“ಏನಯ್ಯಾ ಕನಕಾ? ಬಾಳೆಹಣ್ಣನ್ನು ತಿನ್ನಲು ನಿನಗೆ ಜಾಗ ಸಿಗಲಿಲ್ಲವೇ?” ಎಂದು ಗುರುಗಳು ಕೇಳಿದರು.
ವಿನಮ್ರನಾಗಿ ಕನಕ ಉತ್ತರಿಸಿದ, “ಸ್ವಾಮೀ, ಎಲ್ಲರಂತೆ ನಾನೂ ಸಹ ಸಂದು-ಮೂಲೆಗಳನ್ನು ಹುಡುಕಿ ಹೋದದ್ದು ನಿಜ. ಆದರೆ ಸರ್ವಾಂತರ್ಯಾಮಿಯಾದ ಭಗವಂತನ ಕಣ್ಣಿನಿಂದ ತಪ್ಪಿಸಿಕೊಂಡು ತಿನ್ನಲು ನನ್ನಿಂದ ಸಾಧ್ಯವಾಗಲಿಲ್ಲ. ಯಾರಿಗೂ ತೋರಿಸಬಾರದೆಂದು ತಾವು ಹೇಳಿದ್ದಿರಿ. ಯಾರಿಗೂ ತೋರಿಸದೇ ತಿಂದೆನೆಂದರೆ ಅಪರಾಧವಾಗುತ್ತದೆ; ಆತ್ಮವಂಚನೆಯಾಗುತ್ತದೆ. ಹೀಗಾಗಿ ತಿನ್ನಲಾರದೆ ಮರಳಿ ತಂದೆ.”
ಮನಸ್ಸಿನ ಪ್ರಬುದ್ಧ ಸ್ಥಿತಿ ಕನಕನಿಗೆ ಬಾಳೆಯ ಹಣ್ಣನ್ನು ತಿನ್ನಲು ಬಿಡಲಿಲ್ಲ, ಅದೇ ಯೋಗದಲ್ಲಿ ಹೇಳಿದ ಪ್ರತ್ಯಾಹಾರದ ಆರಂಭಿಕ ಹಂತ, ಕನಕನಿಗೆ ಫಾರ್ಮಲ್ ಎಜುಕೇಶನ್ ಇರಲಿಲ್ಲ-ಹಾಗಾಗಿ ಅದನ್ನೆಲ್ಲ ಹೇಳಲು ಬರುತ್ತಿರಲಿಲ್ಲ; ಎಲ್ಲರ ಕಣ್ತಪ್ಪಿಸಿ ಬಾಳೆಯ ಹಣ್ಣನ್ನು ತಿಂದವರು ತಾವು ಮಂಗಗಳಾದುದನ್ನು ಆಗ ಅರಿತಿರಬೇಕು; ಅಥವಾ “ಈ ಕನಕ ಹೀಗೆ, ಎಲ್ಲದರಲ್ಲೂ ಕೊಂಕು ಬುದ್ಧಿ” ಎಂದು ತಮ್ಮೊಳಗೇ ಆಡಿಕೊಂಡಿರಬಹುದು.
ಯೋಗ ಹೇಳುತ್ತದೆ-ದೇವರು ಹೃದಯದಲ್ಲೇ ಇದ್ದಾನೆ, ಕಳೆಬೆಳೆದ ಹೊಲದಲ್ಲಿ ಬೆಳೆಯಾವುದು ಕಳೆಯಾವುದು ಗೊತ್ತಾಗುವುದು ಕಷ್ಟವಾದಂತೆ ಪ್ರಾಪಂಚಿಕ ವ್ಯವಹಾರದ ಕಳೆಗಳು ಬೆಳೆದ ಮನಸ್ಸಿನಲ್ಲಿ ದೇವರು ಎಂಬ ಬೆಳೆಯನ್ನು ಹುಡುಕುವುದು ಬಹಳ ಕಷ್ಟ. ತಿಳಿನೀರ ತಳದಲ್ಲಿ ಕುಳಿತಿರುವ ಬಂಗಾರದ ನಾಣ್ಯ ಥಳುಕಿನ ಬಣ್ಣ-ಬೆಳಕು ಸೇರಿದರೆ ಕಾಣಿಸುವುದಿಲ್ಲ.
ನೋಡಿ, “ದೇವರು ಇದೇ ಮೂರ್ತಿ”ಎಂದು ಕೆವರು ವಾದಿಸಬಹುದು. ಅದೇ ದೇವರಲ್ಲ; ಅದರೊಳಗೆ ದೇವರು ಎಂದರೆ ಅವರಿಗೆ ಬೇಸರವಾಗಬಹುದು. ಆದರಿಸಬೇಕಾದ ರೀತಿಯಲ್ಲಿ ಆದರಿಸಿದರೆ ಕಲಶ, ಮಂಡಲ, ಚಿತ್ರ, ಪ್ರತಿಮೆ ಅಥವಾ ವಿಗ್ರಹದೊಳಗೆ ದೇವರು ಸನ್ನಿಹಿತನಾಗುತ್ತಾನೆ. ಅನುಸರಿಸುವ ರೀತಿಯೇ ಸರಿಯಿಲ್ಲದಿದ್ದರೆ ಯಾವುದರಲ್ಲೂ ಏನೂ ಇಲ್ಲ. ಭಕ್ತನಿಗೆ ಅಷ್ಟೊಂದು ಕಣ್ತುಂಬಿಸಿ ಕಾಣಿಕೆ ಪಡೆದುಕೊಳ್ಳುವ ದೇವರು ಕಳ್ಳನಿಗೆ ಕೈತುಂಬ ಅದನ್ನೇ ನೀಡಿ ಕಳಿಸಬಹುದು; ಅಲ್ಲಿ ಎರಡು ವಿಧದ ಕರ್ಮಗಳು ನಡೆಯುತ್ತವೆ. ಒಂದು ಉತ್ತಮ ಕರ್ಮ, ಇನ್ನೊಂದು ಅಧಮ ಕರ್ಮ. ಅವರವರ ಭಾವಕ್ಕೆ ತಕ್ಕಂತೆ ಇಬ್ಬರ ಮನದಲ್ಲೂ ತಪ್ಪುಗಳಿಲ್ಲ. ಯಾರಿಗೆ ಯಾವ ಫಲವೆಂದು ನಿರ್ಧರಿಸುವ ಶಕ್ತಿ ಮಾತ್ರ ಅವರಿಗಿಲ್ಲ.
ಕೆಲವೊಮ್ಮೆ ಸಂದಿಗ್ಧ ಹೀಗಿರುತ್ತದೆ: ಹಸಿದ ಹದ್ದೊಂದು ಹಾವನ್ನು ಹಿಡಿದು ಹಾರುತ್ತಿತ್ತು. ಹದ್ದಿನ ಹಿಡಿತಕ್ಕೊಳಗಾಗಿ ಸಾಯುತ್ತಿರುವ ಹಾವು ಹದ್ದನ್ನು ಕಚ್ಚಲೆತ್ನಿಸುತ್ತ ವಿಷವನ್ನು ಉಗುಳಿತ್ತು. ಅತಿಥಿಸತ್ಕಾರ ನಿಷ್ಠನಾದ ಬ್ರಾಹ್ಮಣನೋರ್ವ ಮಧ್ಯಾಹ್ನ ಯಾರೂ ಸಿಗಲಿಲ್ಲವೆಂಬ ಕಾರಣಕ್ಕೆ ಪಾತ್ರೆಗಳಲ್ಲಿ ಆಹಾರವನ್ನು ತೆಗೆದುಕೊಂಡು ಹೊರಗೆ ಯಾರಾದರೂ ಹಸಿದವರು ಸಿಕ್ಕಾರೆಂದು ಹೊರಟಿದ್ದ. ಮೇಲಿನಿಂದ ಉದುರಿದ ಹಾವಿನ ವಿಷದ ಹನಿಗಳು ಆಹಾರದ ಪಾತ್ರೆಯಲ್ಲಿ ಬಿದ್ದವು. ಬ್ರಾಹ್ಮಣ ಭಕ್ತಿಯಿಂದ ಅನ್ನದಾನ ಮಾಡಿದ. ಉಂಡವರು ಕೈಲಾಸ ಕಂಡರು! ಪಾಪ ಯಾರಿಗೆ? ಹದ್ದಿಗೋ? ಹಾವಿಗೋ? ಬ್ರಾಹ್ಮಣನಿಗೋ? ಇಂತಹ ಕ್ಲೇಶಗಳು ಜನಜೀವನದಲ್ಲಿ ಒಂದೆರಡಲ್ಲ. ಇವುಗಳನ್ನು ನಿರ್ಧರಿಸುವುದೂ ನಮ್ಮಿಂದ ಸಾಧ್ಯವಾಗುವುದಿಲ್ಲ.
ನಮ್ಮ ಭಾವನೆಗಳಲ್ಲಿ ಪರತತ್ವ ಬೃಹತ್ತಾಗಬೇಕು ಮತ್ತು ಆ ಭಾವ ಗಟ್ಟಿಯಾಗಿ, ಸ್ಥಿರವಾಗಿ, ದೀರ್ಘಕಾಲ ಇರಬೇಕೆಂಬ ಪ್ರಯತ್ನ ನಮ್ಮದಾಗಬೇಕು. ಸಾಮಾನ್ಯ ಮನುಷ್ಯನ ಮನಸ್ಸೆಂಬುದು ಕಳೆಬೆಳೆದ ಹೊಲ. ಆಧುನಿಕ ವಿದ್ಯೆಯನ್ನು ಅವನೆಷ್ಟೇ ಕಲಿತಿದ್ದರೂ ಮನೋನಿಗ್ರಹ ವಿದ್ಯೆಯನ್ನು ಕಲಿಯದಿದ್ದರೆ ಯಾವ ಪ್ರಯೋಜನವೂ ಇಲ್ಲ. ಕೇವಲ ಆಧ್ಯಾತ್ಮಿಕ ಪುಸ್ತಕಗಳನ್ನು ಓದುವುದರಿಂದ, ಯಾರದೋ ಪ್ರವಚನ ಕೇಳುವುದರಿಂದ ಮನೋನಿಗ್ರಹವಿದ್ಯೆಯನ್ನು ಕಲಿಯುವುದು ಸಾಧ್ಯವಿಲ್ಲ. ಅದಕ್ಕಿರುವ ಏಕೈಕ ಮಾರ್ಗವೆಂದರೆ ಯೋಗವೊಂದೇ.
ಯೋಗದ ಹಂಗಿಲ್ಲದ ಹಾವಾಡಿಗ ಸಂಸ್ಥಾನದವರಾದ ನಾವು ಇಂತಹ ಹಲವು ಕತೆಗಳನ್ನು ಶಿಷ್ಯಗಣಗಳಿಗೆ ಇನ್ನಷ್ಟು ಬಣ್ಣ ಹಚ್ಚಿ ಬಡಿಸುತ್ತೇವೆ; ಆದರೆ ನಮಗೆ ಮಾತ್ರ ಅವು ಬೇಕಾಗಿಲ್ಲ. ಬುಸ್ಸಪ್ಪನ ಕತೆಗಳಿಗಂತೂ ನಮ್ಮಲ್ಲಿ ಕೊರತೆಯೇ ಇಲ್ಲ.
ಕಾನ್ಕುಳಿಯಲ್ಲಿ ಬುಸ್ಸಪ್ಪನನ್ನು ಹೊರಗೆ ಬಿಟ್ಟು ಆಡಿಸಿದ ಕೋಣೆಯನ್ನೇ ವಾಸ್ತುದೋಷವೆಂದು ಕೆಡವಿಸಿಬಿಟ್ಟಿದ್ದೇವೆ ನಾವು. ಅದರಂತೆ ಇನ್ನಷ್ಟು ಕಡೆಗೆ ಹಾಗೆ ಮಾಡಿದ್ದೇವೆ, ಎಲ್ಲವನ್ನೂ ಇಲ್ಲಿ ಹೇಳಲಾಗುವುದಿಲ್ಲ. ಹಾದರದ ಕತೆಗಳಿಗೆ ಆಧಾರವೇ ಸಿಗಬಾರದು ಎಂಬುದು ನಮ್ಮ ಉದ್ದೇಶ; ಹಾಗಾಗಿ ವಾಸ್ತು, ಅಷ್ಟಮಂಗಲ, ದೃಷ್ಟಿ, ಮಾಟ, ಮಂತ್ರ, ಯಂತ್ರ, ತಂತ್ರ ಎಲ್ಲವನ್ನೂ ಬಳಸಿಕೊಳ್ಳುತ್ತಿದ್ದೇವೆ.
ಅಷ್ಟಮಂಗಲದವನಿಗೆ ಮ್ಯಾಚ್ ಫಿಕ್ಸ್ ಮಾಡಿಕೊಂಡರೆ ಇಷ್ಟವಾಗುವ ಹೇಳಿಕೆಯನ್ನೇ ನೀಡುತ್ತಾನೆ; ಉಳಿದ ಎಲ್ಲಾ ಕಲಾವಿದರೂ ಅಷ್ಟೆ-ಅವರನ್ನೆಲ್ಲ ಮೊದಲೇ ಮಾತನಾಡಿಸಿಬಿಟ್ಟರೆ ಎಲ್ಲವೂ ನಮ್ಮ ನೇರಕ್ಕೇ ನಡೆಯುತ್ತದೆ. ನಮ್ಮ ಆಂತರಿಕ ಕೈಗಾರಿಕಾ ತಾಣ ಎಂಬುದು ಕಳ್ಳರ ಅಂದರೆ ಕಳ್ಳ ಭಾವನೆಗಳು ಮತ್ತು ದುಷ್ಟ ಯೋಚನೆಗಳ ಅಡಗುದಾಣವಾಗಿದೆ.
ಮಂಜು ಗಾವಿಗೆ ಕೊಂಕಣಿ ಭಕ್ತನೊಬ್ಬ ದಾನವಾಗಿ ಕೊಟ್ಟ ಅರವತ್ತು ಸೆಂಟ್ಸ್ ಜಾಗವನ್ನು ಸೈಟುಗಳನ್ನಾಗಿ ಪರಿವರ್ತಿಸಿ ಮಾರಿದ್ದೇವೆ ನಾವು. ಮೊದಲು ಅಲ್ಲಿ ಶಾಲೆ ನಿರ್ಮಿಸುತ್ತೇವೆ ಅಂತ ಅವರಿಂದ ಪಡೆದುಕೊಂಡಿದ್ದು. ಅಲ್ಲಿಗೆ ಹೋಗಲು ಸರಿಯಾದ ದಾರಿಯಿಲ್ಲ, ದಾರಿಗಾಗಿ ಜಾಗ ಬಿಡಬೇಕು ಅಂತ ಪಕ್ಕದಲ್ಲಿರುವ ಪ್ರೊಫೆಸರ್ ಮನೆಯ ಕಾಂಪೌಂಡನ್ನು ತುರ್ತಾಗಿ ರಾತ್ರೋರಾತ್ರಿ, ಪ್ರೊಫೆಸರ್ ಅವರ ಮುದಿ ತಾಯಿ ಮಾತ್ರ ಮನೆಯಲ್ಲಿರುವಾಗ, ಒಡೆದು ದಾರಿ ಮಾಡಿಸಿದೆವು.
ಇಂತಹ ನೂರಾರು ಶಿಷ್ಯೋದ್ಧಾರಕ ಸುಧಾರಣೆಗಳನ್ನು ಮಾಡಿದ್ದೇವೆ ನಾವು. ಬಿಡುವಾದಾಗ ಒಂದೊಂದಾಗಿ ಪ್ರವಚನದಲ್ಲಿ ನಿಮಗೆ ಹೇಳುತ್ತ ಹೋಗುತ್ತೇವೆ. ಪರಮ ಮಂಗಲವೂ ಪರಮ ಪವಿತ್ರವೂ ಆದ ಅಂತಹ ಕತೆಗಳನ್ನು ಕೇಳುವಾಗ ನೀವು, ಆದಿ ಮಂಗಲ ಅಂತ್ಯಮಂಗಲ ಮತ್ತು ಮಧ್ಯಮಂಗಲದ ಜೊತೆಗೆ ಅಷ್ಟಮಂಗಲದ ಕತೆಗಳನ್ನೂ ಸೇರಿಸಿಕೊಂಡು ಕೇಳಬೇಕಾಗುತ್ತದಷ್ಟೆ.
ಒಂದೆರಡು ದಿನಗಳಲ್ಲಿ ಸುಂದರ ರಾವಣನ ಕತೆಯನ್ನು ಕೇಳಲಿದ್ದೀರಿ. ಈಗ ವಿಶೇಷತಃ ಮಹಿಳಾ ಶಿಷ್ಯರು ಎಲ್ಲವನ್ನೂ ಅರ್ಪಣೆ ಮಾಡಿದ ಭಾವನೆಯಲ್ಲಿ ಎಲ್ಲವನ್ನೂ ಬಿಚ್ಚಾಕಿ ಎರಡೂ ಕೈ ಮೇಲೆತ್ತಿ ಚಪ್ಪಾಳೆ ತಟ್ಟುತ್ತ ನರ್ತನ ಮಾಡಿ.
ಬರೇ ಕಾಮ
ಬರೇ ಕಾಮ"

July 12

https://www.facebook.com/groups/1499395003680065/permalink/1639067779712786/

ಸುಂದರ ರಾವಣೋಪಾಖ್ಯಾನ ಮತ್ತು ಸುಂದರಿಯರ ಪರಿಣಯ
________________________________________
"ಸುರಾಪಾನ ಪ್ರಿಯಂ ದೇವಂ ಮಂತ್ರಿರೂಪಂ ಮಹೋದಯಂ|
ಲಂಚದೇವಿ ನಮಸ್ತುಭ್ಯಂ ಮಾನಭಂಗ ನಮೋಸ್ತುತೇ ||
ಮಂತ್ರ ಮೂಲೇ ಮಾವಿನಕಾಯಿ ತಂತ್ರಮೂಲೇ ಅಥರ್ವಣಃ |
ಧ್ಯಾನಮೂಲೇ ಪಾನಮೂಲಂ ಸರ್ವಮೂಲೇ ಮಣ್ಣಂಗಟ್ಟಿಃ ||
ಬರೇ ಕಾಮ ...
ನಾವಿವತ್ತು ಪ್ರಾಣ, ಮನಸ್ಸು ಮತ್ತು ವೀರ್ಯದ ಬಗ್ಗೆ ಹೇಳ್ತೇವೆ.
ನಿತ್ಯ ಜೀವನದಲ್ಲಿ ನಮಗೆ ಅರಿತೋ ಅರಿವಿಲ್ಲದೆಯೋ ನಾವು ಕೆಲಮಟ್ಟಿಗಿನ ಪ್ರಾಣಾಯಾಮವನ್ನು ನಡೆಸುತ್ತಿರುತ್ತೇವೆ. ನೀವು ಧ್ಯಾನದಲ್ಲಿ ಆಸಕ್ತರಾದರೆ ಅಲ್ಲಿ ತಂತಾನೇ ಒಂದು ವಿಧದ ಪ್ರಾಣಾಯಾಮ ಜರುಗುತ್ತದೆ. ಉತ್ತಮವಾದೊಂದು ಕಥೆಯ ಹೊತ್ತಗೆಯನ್ನು ನೀವು‌ಓದುತ್ತಿರುವಾಗ ಅಥವಾ ಗಣಿತದ ಸಮಸ್ಯೆಯೊಂದಕ್ಕೆ ಪರಿಹಾರವನ್ನು ಹುಡುಕುತ್ತಿರುವಾಗ ನಿಮ್ಮ ಮನಸ್ಸು ಆಯಾಯ ವಿಷಯದಲ್ಲಿ ಕೇಂದ್ರಿತವಾಗಿರುತ್ತದೆ.
ಆಗ ನಿಮ್ಮ ಶ್ವಾಸದ ಕಡೆಗೆ ಗಮನ ಹರಿಸಿದರೆ ಉಸಿರಾಟವು ತುಂಬಾ ನಿಧಾನವಾಗಿರುವುದು ಗೊತ್ತಾಗುತ್ತದೆ. ದುರಂತ ನಾಟಕವೊಂದನ್ನು ವೇದಿಕೆಯಲ್ಲಿ ನೋಡುವಾಗ ಅಥವಾ ಸಿನಿಮಾವನ್ನು ನೋಡುವಾಗ, ಸಂತೋಷ ಅಥವಾ ದುಃಖದ ಸನ್ನಿವೇಶವನ್ನು ನೀವು ಅನುಭವಿಸುತ್ತೀರಷ್ಟೇ? ಆಗೆಲ್ಲ ಕಣ್ಣೀರೋ ಅಥವಾ ಅನಂದಬಾಷ್ಪವೋ ಸುರಿಯುತ್ತದೆ. ಅಲ್ಲೆಲ್ಲ ದೀರ್ಘ ಉಸಿರಾಟದ ಪ್ರಕ್ರಿಯೆ ಕಾಣುತ್ತದೆ. ಯೋಗಾಸನದ ವಿದ್ಯಾರ್ಥಿಗಳು ಶೀರ್ಷಾಸನ ನಡೆಸುವಾಗ ಪ್ರಾಣಾಯಾಮವು ತಂತಾನೇ ನಡೆಯುತ್ತದೆ.
ಮನಸ್ಸು ಯಾವುದಾದರೊಂದು ವಿಷಯದಲ್ಲಿ ಆಳವಾಗಿ ಕೇಂದ್ರಿತವಾಗಿದ್ದಾಗ ಪ್ರಾಣಾಯಾಮ ನಡೆಯುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಪ್ರಾಣ ಮತ್ತು ಮನಸ್ಸು ಅನನ್ಯ ಸಂಬಂಧವನ್ನು ಹೊಂದಿವೆ. ಅಂತಹ ವೇಳೆಗಳಲ್ಲಿ ನೀವು ಉಸಿರಾಟದತ್ತ ಗಮನಹರಿಸಿದರೆ ತಕ್ಷಣವೇ ಅದು ಮರಳಿ ಸಹಜ ಸ್ಥಿತಿಗೆ ಬಂದುಬಿಡುತ್ತದೆ. ಹೀಗಾಗಿ ಆಳವಾದ ಜಪ, ತಪ, ಬ್ರಹ್ಮ ಧ್ಯಾನಗಳಲ್ಲಿ ನಿರತರಾದವರಲ್ಲಿ ಪ್ರಾಣಾಯಾಮವು ಸಹಜವಾಗಿ ನಡೆಯುತ್ತಿರುತ್ತದೆ.
ಪ್ರಾಣ,ಮನಸ್ಸು ಮತ್ತು ವೀರ್ಯ[ವೀರ್ಯಶಕ್ತಿ]ಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ನೀವು ಮನಸ್ಸನ್ನು ನಿಗ್ರಹಿಸಿದರೆ ಪ್ರಾಣ ಮತ್ತು ವೀರ್ಯಗಳು ತಂತಾನೇ ನಿಗ್ರಹಗೊಳ್ಳುತ್ತವೆ. ನೀವು ಪ್ರಾಣವನ್ನು ನಿಯಂತ್ರಿಸಿದರೆ ಮನಸ್ಸು ಮತ್ತು ವೀರ್ಯಗಳು ತಂತಾನೇ ನಿಯಂತ್ರಣಕ್ಕೊಳಪಡುತ್ತವೆ. ಸತತ ಹನ್ನೆರಡು ವರ್ಷಗಳ ಕಾಲ ಒಂದೇ ಒಂದು ವೀರ್ಯದ ಹನಿಯೂ ಹೊರಚೆಲ್ಲದಂತಹ ಬ್ರಹ್ಮಚರ್ಯವನ್ನು ನೀವು ಆಚರಿಸಿದರೆ ಮನಸ್ಸು ಮತ್ತು ಪ್ರಾಣಗಳು ತಂತಾನೇ ನಿಗ್ರಹಗೊಳ್ಳುತ್ತವೆ.
ಇಲ್ಲಿ ವಾಯು ಮತ್ತು ಅಗ್ನಿಯ ನಡುವೆ ಒಂದು ಸಂಬಂಧವಿದೆ; ಪ್ರಾಣ ಮತ್ತು ಮನಸ್ಸಿನ ನಡುವೆಯೂ ಅದೇರೀತಿಯ ಸಂಬಂಧವಿದೆ. ಗಾಳಿಯು ದೀಪ[ಎಣ್ಣೆಯ ದೀಪ]ವನ್ನು ಆಲ್ಲಾಡಿಸುತ್ತದೆ. ಪ್ರಾಣವು ಮನಸ್ಸನ್ನು ಉತ್ತೇಜಿಸುತ್ತದೆ. ಗಾಳಿ ರಭಸವಾಗಿ ಬೀಸದಿದ್ದರೆ ದೀಪವು ಸ್ಥಿರವಾಗಿ ಉರಿಯುತ್ತದೆ. ಹಠಯೋಗಿಗಳು ಪ್ರಾಣವನ್ನು ನಿಗ್ರಹಿಸಿ ಭಗವಂತನನ್ನು ಸಂಧಿಸುತ್ತಾರೆ; ರಾಜಯೋಗಿಗಳು ಮನಸ್ಸನ್ನು ನಿಗ್ರಹಿಸಿ ಭಗವಂತನನ್ನು ಸಂಧಿಸುತ್ತಾರೆ. ಇದು ಯೋಗ ಸಾರುವ ವಿಷಯವಾಯ್ತು.
ಈಗ ನಮ್ಮನ್ನೇ ತೆಗೆದುಕೊಳ್ಳಿ, ನಮ್ಮ ಮನಸ್ಸು ಸದಾ ಸುಂದರಿಯರನ್ನು ಧ್ಯಾನಿಸುತ್ತಿರುವುದರಿಂದ ನಮ್ಮಲ್ಲಿ ಪ್ರಾಣಾಯಾಮ ತಂತಾನೇ ನಡೆಯುತ್ತದೆ ಎಂಬುದು ನಮಗೆ ಗೊತ್ತಿದೆ; ತಂತಾನೇ ನಡೆಯುವ ಪ್ರಾಣಾಯಾಮಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ದಶಕದ ಹಿಂದಿನಿಂದಲೇ ನಾವು ’ಸುಂದರೀ ಧ್ಯಾನ’ವನ್ನು ಆರಂಭಿಸಿದೆವು. ಸುಂದರಿಯರ ಧ್ಯಾನದಲ್ಲೇ ಮನಸ್ಸನ್ನು ಕೇಂದ್ರೀಕರಿಸಿ ಪ್ರಾಣಾಯಾಮ ತಂತಾನೇ ನಡೆಸುವುದು ಯೋಗಕ್ಕೆ ನಾವು ನೀಡಿದ ಹೊಷ ಆವಿಷ್ಕಾರ.
ಸನ್ಯಾಸಿ ಗುಂಡು ಹೊಡೆಸಿಕೊಳ್ಳುವುದು, ಬ್ರಾಹ್ಮಣ ಗುಂಡುಹೊಡೆಸಿಕೊಂಡು ಗೋವಿನ ಹೆಜ್ಜೆ ಗಾತ್ರದ ಜುಟ್ಟು ಬಿಟ್ಟುಕೊಳ್ಳುವುದು ಇದರಲ್ಲೆಲ್ಲ ಕೆಲವು ಅರ್ಥಗಳಿವೆ; ಪ್ರಮುಖವಾಗಿ ಸೌಂದರ್ಯ ವರ್ಧನೆ ಆಗುವುದು ಬೇಡ ಎಂಬುದು ಪ್ರಧಾನ ಕಾರಣ. ನೆತ್ತಿಯಮೇಲಿನ ಕೂದಲು ಬೇಕಾಬಿಟ್ಟಿ ಹಾರಾಡುತ್ತಿದ್ದರೆ ಚಿತ್ತವೃತ್ತಿಯನ್ನು ನಿಗ್ರಹಿಸುವುದು ಕಷ್ಟವಂತೆ. ನಾವು ಗುಂಡು ಹೊಡೆಸಿಕೊಳ್ತಿರಲಿಲ್ಲ; ಹಾಗೊಮ್ಮೆ ಹಿಪ್ಪಿ ಬಿಟ್ಟರೆ ಭಕ್ತರನ್ನು ನಂಬಿಸಲಾಗದು ಮತ್ತು ಅವರು ದೊಣ್ಣೆ ಹಿಡಿಯಬಹುದು ಎಂಬ ಮುಂಧೋರಣೆಯಿಂದಲೇ ನಾವು ಗುಂಡು ಹೊಡೆಸಿಕೊಳ್ತೇವೆ.
ನಮ್ಮ ಮುಖಕ್ಕೆ ಕೆಲವು ವಿಧದ ಲೇಪದ ಲೆಪ್ಪಗಳನ್ನೂ ಬಳಸುತ್ತೇವೆ. ಹೀಗಾಗಿ ಗುಂಡು ಹೊಡೆಸಿಕೊಂಡರೂ ’ಮಹಿಳಾ ಸಬಲೀಕರಣ’ದ ಫಲಾನುಭವಿಗಳಿಗೆ ನಾವು ಸುಂದರವಾಗೇ ಕಾಣುತ್ತೇವೆ. ತಲೆ ಇಲ್ಲದ ಸನ್ಯಾಸಿಗಳು ರುದ್ರಾಕ್ಷಿ ಸರ ಹಾಕ್ಕೋತಾರೆ. ನಮ್ಮಂತಹ ಸ್ಟಾರ್ ವೀರ್ಯಸನ್ಯಾಸಿಗಳಿಗೆ ಅವೆಲ್ಲ ಬೇಕಿಲ್ಲ; ಧರಿಸಿದರೆ ಅವುಗಳನ್ನೆಲ್ಲ ಏಕಾಂತದಲ್ಲಿ ಬೇಕಾದವರ ಕೊರಳಿಗೆ ಹಾಕಿ ಆಟವಾಡಲು ಸಾಧ್ಯವಾಗುವುದಿಲ್ಲ. ರುದ್ರಾಕ್ಷಿ ಧಾರಣೆಯಿಂದ ಬಂಗಾರವನ್ನು ಧರಿಸಿದರೆ ಸಿಗುವ ಧನಾತ್ಮಕ ಪರಿಣಾಮಗಳೇ ಸಿಗುತ್ತವಂತೆ; ಸನ್ಯಾಸಿಗಳು ಸದಾ ಬಂಗಾರವನ್ನು ಧರಿಸುವುದು ವಿಹಿತವಲ್ಲ ಎಂಬ ಕಾರಣದಿಂದ ರುದ್ರಾಕ್ಷಿ ಧಾರಣೆಯನ್ನು ಹೇಳಿದ್ದಾರೆ. ಮೇಲಾಗಿ ರುದ್ರಾಕ್ಷಿ ರಕ್ತದೊತ್ತಡವನ್ನು ಸಮಸ್ಥಿತಿಯಲ್ಲಿ ಇಡುತ್ತದೆ ಎಂಬ ಇನ್ನೊಂದು ಕಾರಣವೂ ಇದೆ. ಇನ್ನೂ ಕೆಲವು ಕಾರಣಗಳಿವೆ, ಎಲ್ಲವನ್ನೂ ನಾವಿಲ್ಲಿ ಹೇಳುವುದಿಲ್ಲ.
ಕಾವಿಯಲ್ಲಿ ನಮ್ಮಷ್ಟು ಸುಂದರರು ಯಾರಿದ್ದಾರೆ ಹೇಳಿ? ನಾವು ವಿಶ್ವವಿಖ್ಯಾತಿಯನ್ನು ಇನ್ನೇನು ಪಡೆಯಲಿದ್ದೆವು. ನಮ್ಮ ಲೈನಿನಲ್ಲಿ ಸ್ನೇಹಿತ ಮಿತ್ಯಾನಂದ ಮೊದಲೇ ’ಕ್ಯಾತ’ನಾಗಿದ್ದಾನಲ್ಲಾ? ನಮ್ಮ ಇನ್ನೊಬ್ಬ ಸ್ನೇಹಿತ ಅಸರಾಂ ಬಾಪುವನ್ನು ಅನಗತ್ಯವಾಗಿ ಒಳಗಿಟ್ಟಿದ್ದಾರೆ; ಸಾಕ್ಷಿಗಳಾಗಿರುವ ಎಂಟು ಜನರನ್ನು ಮುಗಿಸಲು ಹೋಗಿ ಇಬ್ಬರು ಮೂವರು ಸತ್ತೇಹೋದರು ಮತ್ತು ಉಳಿದವರು ಮಾರಣಂತಿಕ ಹಲ್ಲೆಯನ್ನು ಅನುಭವಿಸಿದರು ಎಂದು ಸುಖಾಸುಮ್ಮನೆ ಆರೋಪಿಸುತ್ತಾರೆ. ಅವರೂ ನಮ್ಮಂತೆಯೇ ಹಿಂದೂ ಸಂಘಟನೆಗಳ ಸಹಾಯ ಕೇಳಿದ್ದಾರೆ. ಅವು ಕೈಬಿಟ್ಟ ನಂತರ ಈಗ ಮರದ ಕೆಳಗೆ ಬಿದ್ದ ಮಂಗನಂತಾಗಿದ್ದಾರೆ ಎಂದು ಯಾರೋ ಹಲುಬುತ್ತಿದ್ದರು. ಸಾಕ್ಷಿ ಹೇಳಲಿರುವ ಇನ್ನೊಬ್ಬನನ್ನು ನಿನ್ನೆ ಕೊಂದುಹಾಕಲು ಯತ್ನಿಸಿದ್ದಾರೆ ಅಂತ ವಿನಾಕಾರಣ ಆರೋಪ ಮಾಡುತ್ತಾರೆ. ಇದೆಲ್ಲ ಸರಿಯೇ? ಅವರೂ ನಮ್ಮಂತೆಯೇ ’ಸಮರ್ಥ ಪುರುಷರು’; ನಮ್ಮ ’ಅಖಿಲ ಭಾರತ ಪ್ರಸಾದ ತಯಾರಕ ಹಾವಾಡಿಗ ಮಹಾ ಒಕ್ಕೂಟ ಮಹಾಮಂಡಲ[ಅ]’ದ ಬೋರ್ಡ್ ಕಮಿಟಿಯಲ್ಲಿ ಒಬ್ಬರು.
ಏಕಾಂತ ನಡೆಸುತ್ತಲೇ ಅತ್ಯಂತ ಜನಪ್ರಿಯ ಎನಿಸಿ, ಅಮೇರಿಕಕ್ಕೆ ಹಾರಿ, ಅಲ್ಲಿ ಇಂಟರ್ ನ್ಯಾಷನಲ್ ಕ್ಯಾಟ್ ವಾಕ್ ಗಳನ್ನು ಉದ್ಘಾಟಿಸಲಿದ್ದೆವು ನಾವು. ಕ್ಯಾಟ್ ವಾಕ್ ನಲ್ಲಿ ಬಳುಕುತ್ತ ಬರುವ ಸುಂದರಿಯರನ್ನು ನೋಡಬೇಕು-ಒಬ್ಬರಿಗಿಂತ ಒಬ್ಬರು ಬಲ. ಒಬ್ಬಳ ಮೂಗು ಚಂದ, ಇನ್ನೊಬ್ಬಳ ಕಣ್ಣು ಚಂದ, ಮತ್ತೊಬ್ಬಳ ನಡು ಚಂದ, ಇನ್ನೊಬ್ಬಳ ಪೃಷ್ಟ ಚಂದ, ಒಬ್ಬಳ ಉದ್ದದ ಕಾಲು ಚಂದ, ಮತ್ತೊಬ್ಬಳ ನೀಳ ತೋಳು ಚಂದ, ಇನ್ನೊಬ್ಬಳ ಹಲ್ಲು ಚಂದ, ಎಲ್ಲರ ಸೂರ್ಯ-ಚಂದ್ರರನ್ನು ನೋಡುವುದೇ ನಮ್ಮ ಕಣ್ಣಿಗೆ ಪರಮಾನಂದ.
ಗುರುಗಳು ಬರುತ್ತಾರೆಂದರೆ ಅಮೆರಿಕದಲ್ಲಿರುವ ನಮ್ಮ ಹಳದೀ ಕುರಿಗಳಿಗೆ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. "ಅಭೂತಪೂರ್ವ ಪುರಪ್ರವೇಶವನ್ನು ಆಯೋಜಿಸುತ್ತೇವೆ" ಅಂತ ಹೇಳಿದ್ದರು ಕೆಲವರು. ಸನ್ಯಾಸಿ ಸಾಗರೋಲ್ಲಂಘನ ಮಾಡಬಾರದು ಎಂಬುದು ಹಿಂದಿನ ಕಾಲಕ್ಕಾಯ್ತು, ಅದು ಈ ಕಾಲಕ್ಕೆ ನಮಗೆ ಬೇಕಾಗಿಲ್ಲ ಎಂದಿದ್ದೆವು ನಾವು; ನಮ್ಮಷ್ಟು ಶಾಸ್ತ್ರ ಬಲ್ಲವರು ಈ ಲೋಕದಲ್ಲಿ ಯಾರಿದ್ದಾರೆ ಹೇಳಿ? ಸಕಲ ಶಾಸ್ತ್ರಗಳನ್ನೆಲ್ಲ ಎತ್ತಿ ಪಕ್ಕಕ್ಕೆಸೆದು ಕಾಮಶಾಸ್ತ್ರವೇ ಮಾನವ ಜೀವನವನ್ನು ಪಾವನಗೊಳಿಸುತ್ತದೆ ಎಂದು ಹೇಳಿದ್ದೇವೆ ನಾವು; ’ಹೇಳೋದು ಶಾಸ್ತ್ರ, ತಿನ್ನೋದು ಬದನೇಕಾಯಿ’ ಅಂತ ಜನ ಆಡಿಕೊಳ್ಳಬಾರದಲ್ಲ? ಅದಕ್ಕಾಗಿ ಕಾಮಶಾಸ್ತ್ರವನ್ನು ಆಚರಣೆಗಳ ಮೂಲಕ ಜಗತ್ತಿಗೆ ತೋರಿಸಿದ್ದೇವೆ ನಾವು. ನಮ್ಮ ಕಚ್ಚೆಹರುಕ ಶಿಷ್ಯರಿಗೂ ಅದನ್ನೇ ಬೋಧಿಸಿದ್ದೇವೆ. ಸುಂದರಿಯರನ್ನು ಕಂಡು ಒಳಗೊಳಗೇ ಜೊಲ್ಲು ಸುರಿಸುತ್ತಿದ್ದ ಅವರು ನಾವೇ ಖುದ್ದಾಗಿ ಅಚರಿಸಿದ್ದನ್ನು ಕಂಡು ತಾವೂ ಶಕ್ತ್ಯಾನುಸಾರ ಯೋಗದಾನ ಮಾಡಲು ಮುಂದೆಬಂದಿದ್ದಾರೆ.
ಲೋಕಾಂತ[ಏಕಾಂತದಿಂದ ಆಚೆ ಬಂದಾಗ ಅಂತ]ದಲ್ಲಿ ನಮ್ಮ ಪ್ರಸನ್ನ ವದನವನ್ನು ನೋಡಿ ಮರುಳಾಗದ ಮಹಿಳೆಯಿದ್ದರೆ ಅವಳ ಶೀಲ ಮತ್ತು ಮನಸ್ಸು ಗಟ್ಟಿಯಾಗಿದೆ ಎಂದೇ ಅರ್ಥ. ನಮ್ಮ ಕತೆಗಳಿಗೆ ಬರುವ ಹಲವು ಮಹಿಳೆಯರು ನಾವು ಹಲ್ಲು ಕಿಸಿದಾಗ ತಾವೂ ಕಿವಿಯವರೆಗೆ ಹಲ್ಲು ಕಿಸಿಯುತ್ತ ಪಕ್ಕಕ್ಕೇ ಬಂದು ನಿಲ್ಲುತ್ತಿದ್ದರು. ಯಾರ್ಯಾರ ಕಣ್ಣುಗಳಲ್ಲಿ ಯಾವ ಯಾವ ಭಾವನೆಗಳಿವೆ ಎಂಬುದನ್ನು ನಾವು ಗಮನಕ್ಕೆ ತೆಗೆದುಕೊಳ್ಳುತ್ತಿದ್ದೆವು. ಧ್ಯಾನಕ್ಕೆ ತೊಡಗಿದಾಗ ಅದನ್ನೆಲ್ಲ ನೆನಪಿಸಿಕೊಂಡು ಯಾವುದು ಆಗಬಹುದು? ’ಯಾವುದು ಹಣ್ಣು’-’ಯಾವುದು ಕಾಯಿ’? ಎಂಬುದನ್ನೆಲ್ಲ ಗುಣಾಕಾರ, ಭಾಗಾಕಾರ, ಸಂಕಲನ, ವ್ಯವಕಲನ ಮಾಡಿ, ಇದಿಷ್ಟನ್ನು ಒಂದೊಂದಾಗಿ ಕರೆಸಬೇಕು ಎಂದು ಸಂಕಲ್ಪ ಮಾಡುತ್ತಿದ್ದೆವು.
ಮುಂದಿನ ಕತೆಯ ದಿನಗಳಲ್ಲಿ ಸಂಕಲ್ಪವನ್ನು ಕಾರ್ಯಗತಗೊಳಿಸುವುದಕ್ಕೆ ಬೇಕಾದ ತಯಾರಿಯನ್ನೆಲ್ಲ ನಡೆಸಿಕೊಳ್ಳುತ್ತಿದ್ದೆವು. "ನಿಮಗೆ ಈ ಜನ್ಮದಲ್ಲಿ ಏಕಾಂತ ಸಿಗುವುದಕ್ಕೆ ಜನ್ಮಾಂತರಗಳಲ್ಲಿ ನೀವು ಪುಣ್ಯ ಮಾಡಿರಬೇಕು. ಇಲ್ಲಾಂದ್ರೆ ಎಷ್ಟೊಂದು ಜನ ಎಷ್ಟೇ ಬಯಸಿದರೂ ಏಕಾಂತ ಸಿಗೋದೇ ಇಲ್ಲ"ಎಂದು ನಮ್ಮ ಗಿಂಡಿಗಳು ಅಂತವರಲ್ಲಿ ರಹಸ್ಯವಾಗಿ ಹೇಳುತ್ತಿದ್ದರು. ಒಮ್ಮೆ ಏಕಾಂತಕ್ಕೆ ಬಂದು ತೇಲ್ ಮಾಲಿಶ್‍ಗೆ ಸಿಕ್ಕರೆ, ’ಸೂರ್ಯ-ಚಂದ್ರ’ರನ್ನೆಲ್ಲ ಕೈವಶ ಮಾಡಿಕೊಂಡು, ಬಂದವಳಿಗೆ ’ಜರ್ಮನಿ’ ತೋರಿಸಿಯೇ ಕಳಿಸುತ್ತಿದ್ದೆವು.
ಶೀಲ ಕಳೆದುಕೊಂಡ ಮಹಿಳೆಯರಲ್ಲಿ ಒಬ್ಬೊಬ್ಬರೂ ಪರಿತಪಿಸುತ್ತ "ನಾನೊಬ್ಬಳೇ ಶೀಲ ಕಳೆದುಕೊಂಡರೆ ಸಾಲದು, ಅವಳೂ ಕಳೆದುಕೊಳ್ಳಲಿ, ಇವಳೂ ಕಳೆದುಕೊಳ್ಳಲಿ, ಕೇಳಿದರೆ ಆಹಾ ಸ್ವರ್ಗ ಸುಖ, ಗುರುಗಳೆಂದರೆ ಸಾಕ್ಷಾತ್ ದೇವರು ಎಂದು ಹೇಳಿಬಿಡ್ತೇನೆ. ಹೋಗ್ಲಿ ಬಿಡಿ" ಎಂದು ಸ್ವಗತದಲ್ಲಿ ಹೇಳಿಕೊಳ್ಳುತ್ತಿದ್ದರು. ಹೀಗಾಗಿ ಶೀಲ ಕಳೆದುಕೊಂಡ ಯಾವ ಹೆಂಗಸೂ ’ದೇವರಿಗೆ ಒಪ್ಪಿಸಿಕೊಂಡಿದ್ದ’ನ್ನು ಹೇಳಲೇ ಇಲ್ಲ. ಇನ್ನು ಕೆಲವರು ಎಲ್ಲಿ ಗಂಡ, ಮನೆ, ಮಕ್ಕಳನ್ನು ಕಳೆದುಕೊಂಡು ಬೀದಿ ಪಾಲಾಗುತ್ತೇನೋ ಎಂಬ ಭಯದಿಂದಲೇ ಹೇಳಲಿಲ್ಲ. ಕೆಲವರಿಗೆ ನಾವು ಹಿಂದೆ ಹೇಳಿದಂತೆ ನಮ್ಮ ಬುಸ್ಸಪ್ಪನೇ ಬಹಳ ಇಷ್ಟ.
ಏಕಾಂತಕ್ಕೆ ದೊರೆತ ಸುಂದರಿಯರಲ್ಲಿದ್ದ ಹುಡುಗಿಯರು ಮತ್ತೆ ಮತ್ತೆ ಬೇಕೆಂದರೆ ಏನು ಮಾಡೋದು? ಹೇಗೂ ನಮ್ಮ ಸಮಾಜದಲ್ಲಿ ಅನೇಕ ಹುಡುಗರಿಗೆ ಅರ್ಧಾಯುಷ್ಯ ಕಳೆದರೂ ಇನ್ನೂ ಮದುವೆಯಿಲ್ಲ. ಎಷ್ಟೇ ಪ್ರಯತ್ನಿಸಿದ್ರೂ ಕಲಿತು ನಗರ ಸೇರಿದ ಹುಡುಗೀರು ಕಡಿಮೆ ಕಲಿತ ಅಥವಾ ಕಡಿಮೆ ಗಳಿಸುವ ಗಂಡುಮಕ್ಕಳನ್ನು ಒಪ್ತಿರಲಿಲ್ಲ. ನಮ್ಮ ಪರಿವಾರದಲ್ಲೇ ಇರುವ ಗಿಂಡಿಗಳಾದಿಯಾಗಿ ಹಲವರಿಗೆ ಮದುವೆ ಆಗಿರಲಿಲ್ಲ. ಮಠಕ್ಕೆ ಬರುವ ಸುಂದರಿಯರನ್ನು ನೋಡಿದ್ದರಲ್ಲಿಯೇ ತೃಪ್ತಿಪಟ್ಟುಕೊಳ್ತಿದ್ದರು ಪಾಪ. ಅವರಿಗೂ ಹೆಣ್ಣು ಸಿಕ್ಕಿದಹಾಗಾಯ್ತು; ಕರೆದಾಗ ನಮ್ಮ ಸೇವೆಗೂ ಬರುವುದಕ್ಕೆ ವ್ಯವಸ್ಥೆಯಾಯ್ತು ಅಂತ ಅಂತಹ ಹುಡುಗಿಯರನ್ನೆಲ್ಲ ಪ್ರಸಾದ ರೂಪವಾಗಿ ನಮ್ಮ ಪರಿವಾರ ಗಣಗಳಿಗೇ ಕಟ್ಟಿದ್ದೇವೆ ನಾವು.
ಹಾಂ...ಎಲ್ಲದಕ್ಕೂ ನಾವು ಬಾವಯ್ಯ ಸೇರಿ ಸ್ಕೆಚ್ ಹಾಕಿಯೇ ಮಾಡಿರ್ತೇವೆ. ಎಲ್ಲವೂ ಕಾಯ್ದೆಬದ್ದ, ರಜಿಸ್ಟ್ರೇಷನ್ ಮದುವೆಗಳು; ಆ ಹುಡುಗೀರ ಪಾಲಕರು ಮಾತನಾಡೋ ಹಾಗಿಲ್ಲ. ಅದಕ್ಕೆ ನಮ್ಮ ಅಡ್ಡಗೇಟುಗಳ ಸಹಕಾರದಿಂದ ಎಲ್ಲಾವಿಧದ ಬಂದೋಬಸ್ತು. ಗಿಂಡಿಗಳು ಜಾಸ್ತಿ ಕೆಮ್ಮಿದರೆ ಡೈವೋರ್ಸು ಮತ್ತು ನಮ್ಮ ಹಾವಾಡಿಗ ಮಹಾಸಂಸ್ಥಾನದಿಂದ ಗೇಟ್ ಪಾಸು. ಬಡತನ, ಅಲ್ಪವಿದ್ಯೆ, ನಿರುದ್ಯೋಗ, ಬುದ್ಧಿಗೇಡಿತನ, ಬೆಳೆದ ವಯಸ್ಸು ಇದೇ ಹಿನ್ನೆಲೆಯ ನಮ್ಮ ಪರಿವಾರದವರು ಏನು ಮಾಡಲೂ ಅಸಹಾಯಕರೆಂಬುದು ನಮಗೆ ಗೊತ್ತು. ಬಳಸಿದ ಪ್ರತಿಯೊಬ್ಬ ಹುಡುಗಿಗೂ,"ನೀನು ಅವನೊಟ್ಟಿಗೆ ಇರು, ಮಿಕ್ಕಿದ್ದಕ್ಕೆ ನಾವಿದ್ದೇವೆ" ಎಂದು ಅಭಯ ನೀಡಿ, ಕೆಲವರಿಗೆ ಸಂತಾನಾನುಗ್ರಹವನ್ನೂ ಕರುಣಿಸಿದ್ದೇವೆ ನಾವು. "ನಾವಿದ್ದೇವೆ" ಎಂಬ ಪದ ಪ್ರಗತಿಗೆ ಬಂದಿದ್ದು ಅಲ್ಲಿಯೇ ಎಂದರೂ ತಪ್ಪಿಲ್ಲ.
ಸ್ವಂತಿಕೆಯನ್ನು ಪ್ರದರ್ಶಿಸಲು ನಗರಪ್ರದೇಶದಲ್ಲಿ ನೌಕರಿ ಹಿಡಿದು ಇಪ್ಪತ್ತೈದು ಕಳೆದಿದ್ದ ಹಲವು ಹುಡುಗೀರಿಗೂ ಮತ್ತು ಹಳ್ಳಿಗಳಲ್ಲಿ ಕಲಿತು ಅಲ್ಲಲ್ಲೇ ಇದ್ದು ಪರಮ ಭಕ್ತಿಯಿಂದ ಮಠಕ್ಕೆ ಬರುತ್ತಿದ್ದ ಕೆಲವು ಹುಡುಗೀರಿಗೂ ಆರಂಭದಲ್ಲಿ ಏಕಾಂತ ಬಹಳ ರಸವತ್ತಾಗಿ ಕಂಡಿತು. ಎಲ್ಲವೂ ಏನೋ ಹೊಸದು. ಇನ್ನೂವರೆಗೆ ಸಿಗದಿದ್ದಂತದ್ದು. ಕಚಗುಳಿ, ಮುದ್ದಾಡುವಿಕೆ, ಬಿಸಿಯಪ್ಪುಗೆ, ಕೋಲಾಟ ಎಲ್ಲವೂ ’ಜೀವಂತ ದೇವರಿಂದ.’ ಎರಡು ಗಂಟೆಯ ಮೊದಲ ದರ್ಶನದಲ್ಲೇ ಎಲ್ಲವನ್ನೂ ಕಳೆದುಕೊಳ್ಳುವ ಅವರೂ ಸಹ ಏನೂ ಮಾಡುವ ಹಾಗಿರಲಿಲ್ಲ. ಪಾಲಕರಿಗೆ ಹೇಳಿದರೆ "ಗುರುಗಳ ಮೇಲೆ ಇಲ್ಲಸಲ್ಲದ್ದನ್ನೆಲ್ಲ ಹೇಳಲಿಕ್ಕೆ ನಿನಗೆಲ್ಲೋ ತಲೆಕೆಟ್ಟಿರಬೇಕು" ಎಂದು ಅವರನ್ನೇ ತದುಕುತ್ತಾರೆ. ಆ ಕಡೆ ಪರಿವಾರದವರು ಈ ಕಡೆ ಹುಡುಗೀರು ಯಾರೂ ಏನೂ ಮಾಡಲಾಗದಂತೆ ’ಕರು ಹಾರಿದರೂ ಗೂಟದ ಕೆಳಗೇ’ ಎಂಬಂತೆ ಎಲ್ಲವನ್ನೂ ನಮ್ಮ ಅಂಕಿತದಲ್ಲೇ ಇಟ್ಟುಕೊಂಡಿದ್ದೇವೆ ನಾವು.
ಆದರೂ ವರ್ಷಗಳ ಹಿಂದೊಬ್ಬ ಹುಡುಗಿಯನ್ನು ಅವರ ಮನೆಗೆ ಹೋದಾಗಲೇ ಏಕಾಂತಕ್ಕೆ ಕರೆದು ಸುರುವಿಟ್ಟುಕೊಂಡಾಗ ಕೆನ್ನೆಗೆ ಎರಡು ಬಿಟ್ಟು ಜಗಳವಾಡಿ ಹೊರಗೆ ಓಡಿದ್ದಳು. ನಾವು ಅಂದರೆ ಹಾವಾಡಿಗ ಮಹಾಸಂಸ್ಥಾನ ಕೋಣೆಯಿಂದ ಲಗುಬಗೆಯಿಂದ ಹೊರಗೆ ಬಂದು "ನಿಮ್ಮ ಮಗಳಿಗೆ ಯಾವುದೋ ಗಾಳಿ ಮೆಟ್ಟಿಕೊಂಡಿದೆ, ಹೀಘ್ರವೇ ಚಿಕಿತ್ಸೆ ಮಾಡಿಸಿ"ಎಂದು ಸಲಹೆ ಕೊಟ್ಟಿದ್ದೆವು. ಪಾಲಕರೇನಾದರೂ ಯಾವುದೋ ಕಿಟಕಿ ತೂತಿನಿಂದ ಕದ್ದು ನೋಡಿದ್ದರೆ ಅಥಬಾ ಮಗಳ ಮಾತನ್ನು ನಂಬಿದ್ದರೆ. ಅಲ್ಲಿಯೆ ನಮ್ಮ ಕಾಲು ಮುರಿದು ಕೈಲಿಕೊಟ್ಟು, ಕೆಲವು ಹಲ್ಲುಗಳನ್ನೂ ಕಿತ್ತು ಕಳಿಸುತ್ತಿದ್ದರು. ಆ ಹುಡುಗಿಯ ಧೈರ್ಯಕ್ಕೆ ನಾವು ಬೆರಗಾಗಿದ್ದೇವೆ. ಬಹಳ ಎಳಸಾಗಿತ್ತು, ಹಾಗಾಗಿ ಕೊಸರಿಕೊಂಡು ಹೋಯಿತು. ಹೋಗಲಿ ಬಿಡಿ, ನಮಗೇನು ಕೊರತೆಯೇ? ಬೆರಳು ಮಾಡಿದರೆ ದಿನಕ್ಕೈದು ಮಂದಿ ಏಕಾಂತಕ್ಕೆ ಬರುತ್ತಾರೆ. ಬಂದವರನ್ನೆಲ್ಲ ಸಮರ್ಥವಾಗಿ ನಿಭಾಯಿಸಿಯೇ ಕಳಿಸುವ ಸಮರ್ಥ ಪುರುಷರು ನಾವು.
ಏಕಾಂತ ಮುಗಿಸಿ ಹೊರಬರುವ ಹೆಂಗಸರು ಮತ್ತು ಹೆಣ್ಣುಮಕ್ಕಳೆಲ್ಲ ವಿಪರೀತ ಬೆವರುತ್ತಿರುತ್ತಾರೆ, ಕೆಲವರು ಅಪ್ಪಿತಪ್ಪಿ ಯಾರಿಗಾದರೂ ಗೊತ್ತಾಗಿಬಿಡಬಹುದೇ ಎಂಬ ಅಪರಾಧೀ ಪ್ರಜ್ಞೆಯಿಂದ ಬಟ್ಟೆ ಎಲ್ಲಾ ಕಡೆ ಸರಿಯಾಗಿದೆಯೋ ಎಂದು ನೋಡಿ ಸರಿಪಡಿಸಿಕೊಳ್ಳುತ್ತ ಬರುತ್ತಾರೆ ಏಕೆ? ಹೊರಗೆ ದೂರದಲ್ಲಿ ಕಾಯುತ್ತ ಕುಳಿತ ಯಾವ ಮಹಾಜನಗಳಿಗೂ ಈ ವಿಷಯದ ಅರಿವಿರದೇ? ಸನ್ಯಾಸಿಯೊಬ್ಬ ಕೋಣೆಯಲ್ಲಿ ಕೇವಲ ಹೆಂಗಸು ಅಥವಾ ಹುಡುಗಿಯೊಡನೆ ಅಷ್ಟುಹೊತ್ತು ಏನು ಮಾಡುತ್ತಾನೆ ಎಂಬ ಸಂದೇಹವೇ ಬರಲಿಲ್ಲವೇ ಅವರಿಗೆ? ಬರಲಿಲ್ಲ, ಯಾಕೆ ಗೊತ್ತೇ? ನಾವು ಸಾಕ್ಷಾತ್ ದೇವರೆಂದು ಭಾವಿಸಿದ್ದಾರೆ, ನಿತ್ಯವೂ ಮೂರು ಕಡೆ ನಾಮ ತೀಡಿಸಿಕೊಳ್ಳುತ್ತಲೇ ಇರುತ್ತಾರಲ್ಲ?
ಒಂದೇ ಒಂದು ಕೇಸ್ ದಾಖಲಾದ ನಂತರ ಇನ್ನಿತರ ಹಲವು ಸಂಭಾವ್ಯ ದೂರುದಾರದನ್ನು ನಮ್ಮ ಪರಿವಾರಗಣಗಳು ಮತ್ತು ಹಳದೀ ತಾಲಿಬಾನಿನವರು ದೂರವಾಣಿಗಳ ಮೂಲಕ ಮತ್ತೆ ಮತ್ತೆ ಸಂಪರ್ಕಿಸಿ, "ಹಾಗೇನಾದರೂ ಮಾಡಿದರೆ, ನಿಮ್ಮ ಸರ್ವಸ್ವವನ್ನೂ ಕಳೆದು ಕೊಂಡು ಬೀದಿಗೆ ಬರುವಂತೆ ಮಾಡ್ತೇವೆ" ಎಂದು ಬೆದರಿಕೆ ಹಾಕುವಂತೆ ಮಾಡಿದ್ದೇವೆ ನಾವು. ನಮ್ಮ ಹಳದೀ ತಾಲಿಬಾನಿನ ಶಕ್ತಿ ಪ್ರದರ್ಶನವನ್ನು ಕಂಡ ಪಾಲಕರಲ್ಲಿ ಒಬ್ಬೊಬ್ಬರೂ, "ಹೇಗೂ ಹುಡುಗಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಪಾಲಿಗೆ ಅವಳಿಲ್ಲವೆಂದುಕೊಂಡು ಸುಮ್ಮನಾಗೋಣ. ನಮಗ್ಯಾಕೆ ಆ ರೌಡಿಗಳ ಸಹವಾಸ. ನಮ್ಮ ಪ್ರಾಣಕ್ಕೇ ಸಂಚಕಾರ ತರಬಹುದು" ಎಂದು ಗಂಡ-ಹೆಂಡಿರಲ್ಲಿ ಪರಸ್ಪರ ಹೇಳಿಕೊಳ್ಳುತ್ತ ಸುಮ್ಮನಿದ್ದಾರೆ; ಮಠಕ್ಕೆ ಬರುವುದನ್ನು ನಿಲ್ಲಿಸಿಬಿಟ್ಟಿದ್ದಾರೆ.
ಕಾಲಿಗೆ ಸರಪಳಿ ಕಟ್ಟಿದ ಆನೆಯ ನೆನಪಾಗುತ್ತದೆ ನಮಗೆ. ತರಬೇತಿ ನಡೆಸುವಾಗ ಕಾಲಿನ ಸರಪಳಿ ಎಳೆದುಕೊಂಡು ಓಡಲು ಯತ್ನಿಸಿ ಮಾವುತನ ಕೈಲಿ ಹೊಡೆತ ತಿಂದ ನೋವು,ಅಂಕುಶದ ತಿವಿತ ಆನೆಗೆ ನೆನಪಿರುತ್ತದೆ. ದಶಕಗಳೇ ಕಳೆದರೂ ಬಲಾಢ್ಯ ಆನೆಗೆ ಕಾಲಿಗೆ ಕಟ್ಟಿದ ಸರಪಳಿ ತನ್ನ ಸಾಮರ್ಥ್ಯಕ್ಕೆಲ್ಲ ಯಾವ ಲೆಕ್ಕ ಎಂಬ ಯೋಚನೆಯೇ ಬರುವುದಿಲ್ಲ. ಯೋಚಿಸಲೂ ಆಗದಷ್ಟು ಹೆದರಿಕೆ. ಅಂತದ್ದೇ ಹೆದರಿಕೆಯನ್ನು ನಮ್ಮ ಭಕ್ತ ಕುರಿಗಳಿಗೆಲ್ಲ ಕಲಿಸಿದ್ದೇವೆ ನಾವು. ಎದುರಾ ಎದುರೇ "ಕುರಿಗಳು" ಎಂದರೂ, ಏನೂಮಾಡಲಾಗದ ಬಕರಾಗಳು ಅವರು. ಹಾಗಾಗಿಯೇ ನಮ್ಮಿಂದ ಪ್ರಾಯೋಜಿಸಲ್ಪಟ್ಟ ಒಂದೇ ತಂಡ ಇಡೀ ಸಮಾಜವನ್ನು ನಿಯಂತ್ರಿಸುತ್ತಿದೆ. ನಾಲ್ಕಾರು ಜನ ಒಟ್ಟಿಗೆ ಸೇರಿ ದೂರುಗಳನ್ನು ಕೊಟ್ಟಿದ್ದರೆ ಇಷ್ಟೊತ್ತಿಗೆ ಯಾವಾಗಲೇ ನಾವು "ಆ ಒಂದು.... ಆ ಎರಡು.......ಆ ಮೂರು " ಎಣಿಸಬೇಕಾಗಿತ್ತು. ಸದ್ಯ! ಹಾಗಾಗಲಿಲ್ಲ ಎಂಬುದು ನಮ್ಮ ಅದೃಷ್ಟ.
ಉಷ್ಣಃಕಾಲೇ ಶೀತಃಸ್ಪರ್ಶಂ
ಶೀತಃಕಾಲೇ ಉಷ್ಣಸ್ಪರ್ಶಂ
ಕೂಪೋದಕಂ ವಟಚ್ಛಾಯಾ
ತಾಂಬೂಲಂ ತರುಣೀ ಸ್ತನಂ
ಎಂದು ನಾವು ಚಿಲ್ಲರೆ ಓದು ನಡೆಸಿದ್ದ ಕಾಲದಲ್ಲಿ ಸಮುದ್ರದಡದಲ್ಲಿ ವಿದೇಶೀ ಬೆಡಗಿಯರನ್ನು ನೋಡಲು ಹೋದಾಗ ಯಾರೋ ಹೇಳಿಕೊಟ್ಟಿದ್ದರು. ಬಾವಿಯ ನೀರು, ಮರದ ನೆರಳು, ತಾಂಬೂಲ ಮತ್ತು ತರುಣಿಯ ಸ್ತನ ಇವಿಷ್ಟು ಉಷ್ಣವಾದಾಗ ತಂಪನ್ನೂ, ಶೀತವಾದಾಗ ಉಷ್ಣವನ್ನೂ ನೀಡುವವಂತೆ. ಇಂತಹ ಅದ್ಭುತ ಲೌಕಿಕ ಶಾಸ್ತ್ರಗಳನ್ನು ಬಿಟ್ಟು ಕಾಣದ ಲೋಕದ ಅಲೌಕಿಕ ವಿಷಯಗಳನ್ನು ಹೇಳುವ ಶಾಸ್ತ್ರಗಳು ನಮಗೆ ಬೇಕೇ? ಕೇದಾರದೆಡೆಗೆ ಎಲ್ಲವೂ ತೊಳೆದುಹೋಗುತ್ತಿದ್ದರೆ ಅಲ್ಲೇ ಸ್ವಲ್ಪ ದೂರದಲ್ಲಿದ್ದ ನಾವು, ಅಲ್ಲಿನ ಚಳಿಯ ವಾತಾವರಣದಲ್ಲಿ ಏಕಾಂತವನ್ನು ನಡೆಸಿ ಬೆಚ್ಚಗೆ ಮಾಡಿಕೊಳ್ಳುತ್ತಿದ್ದೆವು.
ಸುಂದರವೂ ರಸಭರಿತವೂ ಆದ ನಮ್ಮ ಪುಣ್ಯ ಕತೆಯನ್ನು ಕೇಳಿದ್ದೀರಿ. ಆದಿ ಮಂಗಲ, ಮಧ್ಯ ಮಂಗಲ ಮತ್ತು ಅಂತ್ಯ ಮಂಗಲ ಎಂದರೆ ಮೂರು ಕಡೆ ಮಂಗಲದ ಮೂರುನಾಮ ತೀಡುವುದು ಎಂದರ್ಥ. ಆದಿಯಿಂದಲೇ ನಾವು ಮೂರು ನಾಮ ತೀಡುತ್ತಲೇ ಬಂದಿದ್ದೇವೆ. ಹಳ್ಳಿ ಮನೆಯ ಅಂಗಳದಲ್ಲಿ ತುಳಸಿ ಕಟ್ಟೆಯ ಮುಂದೆ ಭಕ್ತಿಯಿಂದ ಬಾಯ್ದೆರೆದು ಭಜನೆ ಮಾಡುತ್ತ ನಿದ್ದೆ ಹೋಗಿದ್ದ ಮುದುಕಿಗೆ, ಹಾದಿಹೋಕ ಬೀದಿನಾಯಿ ಸೂ ಸೂ ಮಾಡಿದಾಗ ಅರೆಮಂಪರಿನಲ್ಲಿ ತೀರ್ಥವೆಂದು ಕುಡಿದಳಂತೆ ಎಂಬ ಕತೆಯ ಹಾಗೆ, ನೀವೆಲ್ಲ ಭಕ್ತಿಯಿಂದ ನಮ್ಮ ಕತೆಗಳನ್ನು ಕೇಳುತ್ತ ಪುನೀತರಾಗಿ.
ಬರೇ ಕಾಮ
.
.
ಬರೇ ಕಾಮ.."

July 14
https://www.facebook.com/groups/1499395003680065/permalink/1639831192969778/

ಕಚೆಹರುಕನ ಚಾತುರ್ಮಾಸ್ಯ
__________________
"ಹ ಕಾರೋ ಹಳ್ಳಿ ವಾಸಂ ಚ
ವಿ ಕಾರೋ ವೀಳ್ಯ ಭಕ್ಷಣಂ
ಕ ಕಾರೋ ಕತ್ತಿ-ಕಂಬ್ಳಿಶ್ಚ
ಇತ್ಯೇತಿ ...........ಲಕ್ಷಣಂ
ಮಂತ್ರಮೂಲೇ ಮಾವಿನಕಾಯಿ
ತಂತ್ರಮೂಲೇ ಅಥರ್ವಣಃ|
ಧ್ಯಾನಮೂಲೇ ಪಾನಮೂಲಂ
ಸರ್ವಮೂಲೇ ಮಣ್ಣಂಗಟ್ಟಿಃ||
.
.
ಬರೇ ಕಾಮ
.
.
ನಮ್ಮ ಕಥೆಯನ್ನು ನಾವೇ ಹೇಳಿಕೊಳ್ಳುವಷ್ಟು ಪುಣ್ಯದ ಕೆಲಸ ಇನ್ನೊಂದಿಲ್ಲ. ಯಾಕೆಂದ್ರೆ.....ಯಾಕೆಂದ್ರೆ.....ಯಾಕೆಂದ್ರೆ ನಮ್ಮ ’ಸನ್ಯಾಸ’ ಜೀವನದ ನಿಜವಾದ ಹಕೀಕತ್ತು ನಮಗೆ ಬಿಟ್ಟರೆ ನಮ್ಮ ಬಾವಯ್ಯನಿಗೆ ಮಾತ್ರ ಗೊತ್ತು. ಬಾವಯ್ಯ ಹೇಳುವುದಿಲ್ಲ ಹೀಗಾಗಿ ನಾವಾದರೂ ಅಲ್ಪ ಸ್ವಲ್ಪವನ್ನು ಹೇಳಬೇಕಲ್ಲ?
ಮೇಲಿನ ಮೊದಲ ’ಶ್ಲೋಕ’ವನ್ನು ಕೆಲವರು ಹೇಳಿಕೊಳ್ಳುವಾಗ ಯಾಕೆ ಹಾಗೆ ಹೇಳುತ್ತಿದ್ದರು ಎಂದು ಯೋಚಿಸುತ್ತಿದ್ದೆವು ನಾವು....ಹೌದು ಯೋಚಿಸುತ್ತಿದ್ದೆವು ನಾವು. ನಮ್ಮ ಸಮಾಜಕ್ಕೆ ಯಾಕೆ ಅವರೆಲ್ಲ ಹೀಗೆ ಹೇಳಬೇಕು ಎಂದು ನಮಗೆ ಪ್ರಶ್ನೆ ಉದ್ಭವವಾಗಿತ್ತು. ಆಗಲೇ ನಾವು ನಿರ್ಧರಿಸಿದ್ದು-ಶ್ರಾದ್ಧದ ಭಟ್ಟನಾಗಿ ಊರೂರು ಅಲೆದರೆ ಎಲ್ಲೋ ಅಪರೂಪಕ್ಕೆ ನಮ್ಮ ಚಿಕ್ಕಪ್ಪ ಉರುಳು ಭಟ್ಟ ಬಾಚಿದಂತೆ ಯಾರಾದರೂ ಎಡ ಮುದುಕೀರು ಸಿಕ್ಕಾರು, ಮೇಲಾಗಿ ದುಡ್ಡು-ಕಾಸು ಅಷ್ಟಕ್ಕಷ್ಟೆ. ಹೀಗಾಗಿ ಅಂದು ನಾವು ಮೇಲಿನ ’ಶ್ಲೋಕದಲ್ಲೇ ಅದಕ್ಕೆ ಪರಿಹಾರ ಕಂಡುಕೊಂಡೆವು.
ದಶಕಗಳ ಹಿಂದೆ ಸಮಾಜ ದೀನಾವಸ್ಥೆಯಲ್ಲಿತ್ತು. ಕುಗ್ರಾಮಗಳಲ್ಲಿ ವಾಸಿಸುತ್ತಿದ್ದ ನಮ್ಮ ಜನ ಜೀವನದಲ್ಲಿ ಬಹಳ ಕಷ್ಟನಷ್ಟಗಳನ್ನು ಎದುರಿಸುತ್ತಿದ್ದರು. ಸ್ವಾತಂತ್ರ್ಯ ಬಂದ ಮರುದಿನದಿಂದಲೇ ರಾಜಾಶ್ರಯ ಎಂಬುದೂ ತಪ್ಪಿಹೋಗಿತ್ತು. [ಅದು ಕೆಲವರಿಗೇ ಇತ್ತು ಅನ್ನಿ] ಸಂಸ್ಕೃತ ಪಾಠಶಾಲೆ ಓದಿಕೊಂಡರೆ ಇಡೀ ಕುಟುಂಬದ ನಿರ್ವಹಣೆ ಕಷ್ಟವೆಂದರಿತ ನಮ್ಮ ಜನ ಕೃಷಿಗೂ ಇಳಿದರು.
ಖುದ್ದಾಗಿ ಕೃಷಿಗಿಳಿದ ಬ್ರಾಹ್ಮಣ ಪಂಗಡಗಳು ದೇಶದಲ್ಲೇ ಎರಡು ಮಾತ್ರ! ಅವುಗಳಲ್ಲಿ ನಮ್ಮದೂ ಒಂದು. ಇದಕ್ಕೆ ಕಾರಣವೂ ಇತ್ತು. ಕೃಷಿ ಕೆಲಸಗಳಿಗೆ ಆಳು-ಕಾಳುಗಳನ್ನು ಕರೆಸಿದರೆ ಕೂಲಿ ಕೊಡುವ ತಾಕತ್ತೂ ಸಹ ಇರಲಿಲ್ಲ. ಬೆರ್ಳೆಣಿಕೆಯ ಜನರಿಗಿದ್ದ ಉಂಬಳಿಯ ಜಮೀನುಗಳು ಎಲ್ಲರಿಗೂ ಸಾಲುತ್ತಿರಲಿಲ್ಲ, ಹೊಸದಾಗಿ ಜಮೀನು ಮಾಡಬೇಕಿತ್ತು. ಜನ ದೇವರ ಪೂಜೆ ಮತ್ತು ನಿತ್ಯಾನುಷ್ಠಾನಗಳ ಜೊತೆಗೆ ಜಮೀನು ಮಾಡುವುದಕ್ಕೂ ಮುಂದಾದರು.
ಕಾಡುಗಳಂಚಿಗೆ ಹೋದರು, ಗುಡ್ಡಗಳನ್ನು ಕಡಿದರು, ನೆಲ ಸಮತಟ್ಟು ಮಾಡಿ ಉತ್ತು ಬಿತ್ತು ಕಷ್ಟದಲ್ಲೇ ಬೆಳೆತೆಗೆದರು. ನಂತರ ತೋಟ ಬೆಳೆಸಿದರು. ಜೀವನಾರಂಭ ಪುರಗಳಲ್ಲಿ ವಸತಿಗೆ ಆಶ್ರಮಗಳಂತಹ ಗುಡಿಸಲುಗಳು ಅಥವಾ ಸೋಗೆಯ ಮನೆಗಳನ್ನು ನಿರ್ಮಿಸಿಕೊಂಡರು. ಮಣ್ಣಿನ ನೆಲ ಮತ್ತು ಮಣ್ಣಿನದೇ ಗೋಡೆ, ಅದಕ್ಕೆ ಸಗಣಿ ಸಾರಿಸಿ ಒಪ್ಪ ಮಾಡುತ್ತಿದ್ದರು.
ಕೃಷಿ ಕೆಲಸದಲ್ಲಿ ಬೇಸತ್ತ ದಿನಗಳಲ್ಲಿ ದೇವರಿಗೆ ನೈವೇದ್ಯ ಅರ್ಪಿಸಿದ ತಾಂಬೂಲವನ್ನು ಮೆಲ್ಲುವ ಅಭ್ಯಾಸವಾಯ್ತು; ಈ ಆಭ್ಯಾಸದ ವಿಷಯ ತಲೆಯಿಂದ ತಲೆಗೆ, ಕಿವಿಯಿಂದ ಕಿವಿಗೆ ಹೊಸತನವೆಂಬಂತೆ ಪ್ರಸಾರಗೊಂಡು, ಅಭ್ಯಾಸವಿದ್ದಿದ್ದು ಚಟವಾಯಿತು. ಕಾನನದ ಕತ್ತಲ ವಾತಾವರಣದಲ್ಲಿ ರಾತ್ರಿ ಹೊತ್ತಿನಲ್ಲಿ ಜೀರುಂಡೆಗಳ ಜೀಗುಟ್ಟುವಿಕೆ, ಕಾಡುಮೃಗಗಳ ಕೂಗು, ಮಳೆಗಾಲದಲ್ಲಿ ಆರು ತಿಂಗಳು ಬಿಟ್ಟೂ ಬಿಡದೆ ಸುರಿವ ಮಳೆ, ಮನೆಯೊಳಗೂ ಹೊರಗೂ ಹಾವು,ಹರಣೆ, ಹಲ್ಲಿಗಳು ಇವೆಲ್ಲದರ ನಡುವೆಯೇ ಜೀವನ ಸಾಗುತ್ತಿತ್ತು.
ಆಯುರ್ವೇದೀಯ ಔಷಧಗಳ ಮಾಹಿತಿ ಪಾರಂಪರಿಕವಾಗಿ ಕೆಲವು ಕುಟುಂಬಗಳ ಸ್ವತ್ತಿನಂತಾಗಿ ಔಷಧದ ಮಾಹಿತಿ ಇಲ್ಲದೆಯೇ ಅದೆಷ್ಟೋ ರೋಗಿಗಳು ಅಸುನೀಗಿದರು. ನೈಸರ್ಗಿಕ ವಿಕೋಪ, ಅಪಘಾತ, ಹಾವು ಕಡಿತ, ಮೈಲಿ, ಗಾಂಡಗುದಗೆ ಜ್ವರ[ಟೈಫಾಯ್ಡ್]ಮೊದಲಾದ ತೊಂದರೆಗಳಿಂದ ಮನೆಗಳ ಜನಸಂಖ್ಯೆ ಕೆಲವೊಮ್ಮೆ ಎಷ್ಟಿದ್ದರೂ ಕ್ಷೀಣಿಸಿಬಿಡುತ್ತಿತ್ತು. ಹಾಗಾಗಿಯೇ ಯಾರೋ ಎಂದೋ ಸುಮಂಗಲಿಯರಿಗೆ ಆಶೀರ್ವದಿಸುವಾಗ "ಅಷ್ಟಪುತ್ರವತೀ ಭವ, ಐಶ್ವರ್ಯವತೀ ಭವ" ಎಂದು ಹರಸುತ್ತಿದ್ದರು; ಅದರರ್ಥ ಎಂಟು ಗಂಡುಮಕ್ಕಳೇ ಇರಬೇಕೆಂಬ ಉದ್ದೇಶವಲ್ಲ, ಗಂಡುಮಕ್ಕಳು ತಮ್ಮ ಸಹಜ ದೇಹದಾರ್ಢ್ಯತೆಯಿಂದ ಸಮಸ್ಯೆಗಳನ್ನು ಎದುರಿಸಿ ಗೆಲ್ಲಬಲ್ಲರು ಎಂಬರ್ಥದಲ್ಲಿ ಮತ್ತು ಎಂಟುಜನರಲ್ಲಿ ಕೆಲವರಾದರೂ ಬದುಕಿ, ಸಂಸಾರದ ನೊಗವನ್ನು ಎಳೆಯಲು ಸಿದ್ಧವಾಗಬಹುದು ಎಂಬ ನಿರೀಕ್ಷೆಯಿರುತ್ತಿತ್ತು.
ಅಂತಹ ಕಾಲದಲ್ಲೇ ನಮ್ಮಂತಹ ಕಚ್ಚೆಹರುಕರು ಅಲ್ಲಲ್ಲಿ ತಯಾರಾಗುತ್ತಿದ್ದರಾದರೂ ಹೆಂಗಸರು ತೀರಾ ಹೊರಬರದ ಕಾರಣ ಏಕಾಂತಕ್ಕೆಲ್ಲ ಆಸ್ಪದ ದೊರೆಯುತ್ತಿರಲಿಲ್ಲ. ಮಹಿಳೆಯರನ್ನು ಮನೆಗಳಲ್ಲಿ ಒಂಟಿಯಾಗಿ ಬಿಟ್ಟುಹೋಗುವ ಪರಿಪಾಟ ಇದ್ದಿರಲಿಲ್ಲವಾದ್ದರಿಂದ ನಮ್ಮಂತವರು ಮನೆಗಳಿಗೆ ನುಗ್ಗುವುದೂ ಸಹ ಕಷ್ಟವಾಗುತ್ತಿತ್ತು. ಹೀಗಾಗಿ ಜೊಲ್ಲು ಸುರಿಸಿಕೊಂಡೇ ಬದುಕು ಕಳೆದ ಕಚ್ಚೆಹರುಕರು ಕೆಲವರಿದ್ದರು. ಸಮಾಜದಲ್ಲಿ ಅಪವಾದವೋ ಎಂಬಂತೆ ಅಪರೂಪಕ್ಕೆ ಅಲ್ಲಲ್ಲಿ ಗಂಡನಿಂದ ಸಿಗದ ಏನನ್ನೋ ಹುಡುಕಲು ಜಾರುವ ಹೆಂಗಸರೂ ಇದ್ದರು. ನಮ್ಮ ಪೊರ್ವಜರಿಗೆ ಅಂತವರೆಲ್ಲ ಪ್ರಿಯವಾಗಿದ್ದರು.
ಬೆಳಗಾದರೆ ತಿಂಡಿ ತಿಂದು [ಕುಟ್ಟಿ ತಯಾರಿಸಿದ ಅವಲಕ್ಕಿ, ಬಾಳೆಕಾಯಿ ಪಲ್ಯ ಇಂಥದ್ದು ತಿಂಡಿ. ದೋಸೆ ಎಂಬುದು ಹಬ್ಬದ ವಿಶೇಷ ತಿನಿಸು!]ಕೃಷಿ ಕೆಲಸಕ್ಕೆ ಹೋದರೆ, ಸೂರ್ಯ ಪಶ್ಚಿಮಕ್ಕೆ ವಾಲಿದ ನಂತರ ಅಪರಾಹ್ನವಾಯ್ತೆಂದು ಮನೆ ಸೇರಿ ಆಹಾರ ಸ್ವೀಕರಿಸಿ, ಸ್ವಲ್ಪ ಹೊತ್ತಿದ್ದು ಮತ್ತೆ ಕೆಲಸಕ್ಕೆ ತೊಡಗುತ್ತಿದ್ದರು. ಮಳೆಯಿಂದ ರಕ್ಷಣೆಗೆ ಕಂಬಳಿ ಕೊಪ್ಪೆ, ಕೃಷಿ ಕೆಲಸಕ್ಕೆ ಕೈಯಲ್ಲಿ ಕತ್ತಿ, ಗೆಲುವಿಗಾಗಿ ಬಾಯ್ತುಂಬ ತಾಂಬೂಲ, ಉದ್ದನೆಯ ಲಂಗೋಟಿ ಇವಿಷ್ಟೇ ಸರ್ವಾಭರಣಗಳು.
ಅಪರೂಪಕ್ಕೊಮ್ಮೆ ತಮ್ಮಲ್ಲಿ ಬೆಳೆಯದ, ಜೀವನಾವಶ್ಯಕಗಳನ್ನು ತರಲು ಕಸೆ ಅಂಗಿ, ಪಾಣಿ ಪಂಚೆ ತೊಟ್ಟು ಪಟ್ಟಣಗಳಿಗೆ ಹೋಗುತ್ತಿದ್ದರು. ಚಟವಾದ ತಾಂಬೂಲಕ್ಕೆ ವಿರಾಮವಿರಲಿಲ್ಲ; ಹಲ್ಲುನೋವನ್ನೂ ಹಿಡಿತದಲ್ಲಿಡುತ್ತದೆ ಎಂದು ನಂಬಿದ್ದರು. ಪಟ್ಟಣಗಳಲ್ಲಿ ಯಾವ್ಯಾವುದೋ ಜನಾಂಗಗಳವರು ತಮ್ಮ ವಸಾಹತುಗಳನ್ನು ಹೂಡಿಕೊಂಡು ವ್ಯಾಪಾರ-ಸಾಪಾರ ನಡೆಸುತ್ತಿದ್ದರು. ಬ್ರಾಹ್ಮಣರು ವ್ಯಾಪಾರಿಗಳಾಗುವಂತಿರಲಿಲ್ಲ ಮತ್ತು ಯಾರ ಬಗೆಗೂ ಯಾವ ವಿಧದಲ್ಲೂ ಕೆಟ್ಟದ್ದನ್ನು ಯೋಚಿಸುವಂತಿರಲಿಲ್ಲ; ವಂಚನೆ,ಮೋಸ,ಧೂರ್ತತನ, ಲೋಭ ಇವೆಲ್ಲ ನಮ್ಮವರಲ್ಲಿ ಇರಲಿಲ್ಲ.
ತಿನ್ನೋದು ಅಪ್ಪಟ ಸಾತ್ವಿಕ ಆಹಾರ; ನಮ್ಮ ಹಾಗೆ ಈರುಳ್ಳಿ ಉಪ್ಪಿಟ್ಟನ್ನು ತಿನ್ನೋದಿರಲಿ, ಈರುಳ್ಳಿ ಹೇಗಿರುತ್ತದೆಂದು ನೋಡಿದವರೂ ಅಲ್ಲ! ವ್ಯಾಪಾರಿಗಳು ಹೇಳಿದ್ದನ್ನು ಇವರು ಏಕಾಏಕಿ ನಂಬುತ್ತಿದ್ದರು; ಇಂದು ನಮ್ಮನ್ನು ನಮ್ಮ ಭಕ್ತಕುರಿಗಳು ನಂಬಿಕೊಂಡಂತೆ. ವ್ಯಾಪಾರಿಗಳಿಗೆ ನಮ್ಮವರು ಬಂದರೆಂದರೆ ಸುಗ್ಗಿ. ಬಡ ಭಟ್ಟ, ಹೆಗಡೆ ಎಷ್ಟನ್ನು ದುಡಿದಾರು? ಎಷ್ಟನ್ನು ವ್ಯಯಿಸಿಯಾರು?
ಸಾಮಾಜಿಕ ನಡವಳಿಕೆಗಳು ಅಭಿವೃದ್ಧಿಪಥದಲ್ಲಿ ನಡೆಯಲಾರಂಭಿಸಿದಾಗ ಮದುವೆ, ಮುಂಜಿ ಕಾರ್ಯಗಳ ಸಂದರ್ಭದಲ್ಲಿ ಜವುಳಿ ತೆಗೆಯುವುದು, ಕಂಚು-ತಾಮ್ರ ಖರೀದಿ ಇತ್ಯಾದಿಗಳು ನಡೆಯುತ್ತಿದ್ದವು. ಅವುಗಳಿಗೆ ವ್ಯಾಪಾರಿಗಳು ಹಾಕಿದ್ದೇ ದರ, ಬರೆದದ್ದೇ ಪಟ್ಟಿ. ಉದ್ರಿ ಪಟ್ಟಿ ಬರೆಯುತ್ತಿದ್ದರು-ಯಾಕೆಂದರೆ ಭಟ್ಟ, ಹೆಗಡೇರ ಹತ್ತಿರ ಒಂದೇ ಸಲ ಕೊಡಲಿಕ್ಕೆ ಸಾಲುತ್ತಿರಲಿಲ್ಲ. ಉದ್ರಿ ಪಟ್ಟಿಯಲ್ಲಿ ಎರಡಿದ್ದಿದ್ದು ಮೂರಾದರೂ ನಾಲ್ಕಾದರೂ ಮರುಮಾತನಾಡದೇ ಪಾವತಿಸುವ ಮುಗ್ಧರು. ಹೀಗಾಗಿಯೇ ವ್ಯಾಪಾರಿಗಳು ಬೆಳೆದರು, ನಮ್ಮವರು ಉದ್ರಿ ಪಟ್ಟಿಯಲ್ಲಿ ಬೆಳೆದರು!
ಪಟ್ಟಣದ ಸಾಹುಕಾರನಲ್ಲಿ ಸಾಲ ಮಾಡಿದ್ದರೂ ಊರಲ್ಲಿ ಎಲ್ಲರೆದುದು ಹಾಗೆ ತೋರಿಸಿಕೊಳ್ಳದ ನಡಾವಳಿಗೆ ಕೆಲವರು ಮೊದಲಿಟ್ಟರು. ಹೀಗಾಗಿ ತಲೆಗಿಂತ ಮುಂಡಾಸು ದೊಡ್ಡದಾಗತೊಡಗಿತು. ಮುಂಡಾಸು ದೊಡ್ಡ ಇದ್ದಷ್ಟೂ ಅವರು ದೊಡ್ಡವರೆನಿಸಿದರು, ’ಶೆಟ್ಟಿ ಸಾಲ ಸತ್ತಮೇಲಷ್ಟೆ ಗೊತ್ತು’ ಅನ್ನೋ ಹಾಗೆ ಅವರ ಮುಂಡಾಸಿನ ಒಳಗಿನ ತಲೆನೋವನ್ನು ಯಾರೂ ಅರಿಯಲಿಲ್ಲ.
ಕಾಲ ಬದಲಾಯಿತು. ಕುಗ್ರಾಮಗಳು ಅಭಿವೃದ್ಧಿಗೆ ಬಂದವು. ಆಧುನೀಕರಣ ಕಾಲಿಟ್ಟಿತು. ನಮ್ಮವರಲ್ಲೂ ಬಹುತೇಕರು ಸಾಲ-ಸೋಲವನ್ನು ಕಡಿಮೆ ಮಾಡಿಕೊಂಡರು, ಕೆಲವರು ಹೆಚ್ಚಿನ ಮಟ್ಟದಲ್ಲಿ ಜಮೀನನ್ನು ಮಾಡಿ ಶ್ರೀಮಂತರೆನಿಸಿದರು. ಮಠಗಳಲ್ಲಿ ಅಂದು ಈಗ ನಾವು ನಡೆಸುತ್ತಿರುವ ರೀತಿಯ ಯಾವುದೇ ವ್ಯವಹಾರಗಳೂ ಇರಲಿಲ್ಲ. ಮಠ ಮತ್ತು ಭಕ್ತರಲ್ಲಿ ಅಂತರವಿರುತ್ತಿತ್ತು. ಸಮಾಜದಲ್ಲಿ ಶ್ರೀಮಂತಿಕೆಯಿಂದ ಮುಖ್ಯಸ್ಥರು ಎನಿಸಿದವರು ಉಪಾಧಿವಂತರಾಗಿ, ಮಠದ ನಿರ್ಧಾರಗಳು ತಮಗೆ ಬೇಕಾದಂತೆ ಇರುವಂತೆ ನೋಡಿಕೊಳ್ಳುತ್ತಿದ್ದರು.
ನಾಯಕತ್ವದ ಗುಣ ನಮ್ಮವರಲ್ಲಿ ಅನಿವಾರ್ಯವಾಗಿ ಇದ್ದಂತೆ ತೋರಿಸಿಕೊಳ್ಳುವ ಗುಣವೂ ಬೆಳೆಯುತ್ತಲೇ ಬಂದಿತು; ತಮ್ಮ ಮಾತೇ ನಡೆಯಿತು, ತಮಗೆ ಮಾತ್ರ ಅಂಥಾದ್ದೊಂದು ಅರ್ಹತೆಯಿದೆ ಎಂಬಂತಹ ವಾತಾವರಣವೂ ಇತ್ತು. ಅಂತಹ ಕಾಲದಲ್ಲೇ ನಮ್ಮ ಹಾವಾಡಿಗ ಸಂಸ್ಥಾನಕ್ಕೆ ಉತ್ತರಾಧಿಕಾರಿಯ ಆಯ್ಕೆ ನಡೆದಿತ್ತು.ನೀವೇ ಇಂದ್ರ ನೀವೇ ಚಂದ್ರ ನಿಮ್ಮಿಂದ ಇದೊಂದು ಕೆಲಸ ಆಗಬೇಕೆಂದು ನಾವು ಕೆಲವರ ಕೈಕಾಲು ಹಿಡಿದೆವು. ನಮ್ಮ ಜನ್ಮಜಾತ ಸ್ವಭಾವ, ಜಾತಕ ತಿದ್ದಿದ್ದು, ಹುಡುಗೀರ ಹಿಂದೆ ಬೀಳುತ್ತಿದ್ದದ್ದು ಯಾವುದೂ ಸಹ ಅವರಿಗೆ ಗೊತ್ತಿರಲಿಲ್ಲ. ನಮ್ಮಜನ ಎಷ್ಟು ಬುದ್ಧಿವಂತರೋ ಅಷ್ಟೇ ಬೋಳೆ ಸ್ವಭಾವದವರು ಅನ್ನೋದೇ ಇದಕ್ಕೆ. "ನೀವೊಂದಿದ್ರೆ ಎನ್ ಕೆಲಸ ಆದಂಗೇಯ ನೋಡಿ" ಎಂಬ ವರ್ಡ್ ಆಫ್ ಮೌತ್ ಸರ್ಟಿಫಿಕೇಟ್ ಗಾಗಿ ತಾವು ಹಿಡಿದ ಕೆಲಸವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದರು.
ಯಕ್ಷಗಾನವೊಂದೇ ದೊಡ್ಡಮಟ್ಟದ ಮನರಂಜನೆಯ ಕಾರ್ಯಕ್ರಮವಾದದ್ದಕ್ಕಿರಬಹುದು, ಅದರಲ್ಲಿನ ಕತೆಗಳಲ್ಲಿ ಬರುವ ಚಕ್ರವರ್ತಿಗಳಿಗೆ ತಮ್ಮನ್ನು ಹೋಲಿಸಿಕೊಂಡು ಸಾಮ್ರಾಜ್ಯ ವಿಸ್ತರಣೆಯಲ್ಲಿ ತೊಡಗುವಂತೆ ತಮ್ಮ ಕೀರ್ತಿ ವಿಸ್ತರಣೆಯಲ್ಲಿ ನಮ್ಮವರಲ್ಲಿನ ಶ್ರೀಮಂತರು ಬಹಳ ಆಸಕ್ತರು. "ಓ ಹೆಗಡೇರ ಮನೆ, ಅವರ ಮನೆಯಲ್ಲಿ ಕೊಪ್ಪರಿಗೆಯಲ್ಲೇ ಚಿನ್ನ ಇಟ್ಟಿದ್ದಾರಂತೆ, ಕಳ್ಳರು ಬಂದರೆ ಸಿಗಬಾರದೆಂದು ನೆಲಮಾಳಿಗೆಯಲ್ಲಿ ಹೂತಿಟ್ಟಿದ್ದಾರಂತೆ. ಓಹೋ ಇವರ ಮನೆ ಅಯ್ಯೋ ಅವರೂ ಅಷ್ಟೆ ಲಕ್ಷ್ಮಿ ಕಾಲುಮುರ್ಕಂಡು ಬಿದ್ದಿದಾಳ ಮಾರಾಯ ಅವರ ಮನೇಲಿ" ಎಂಬೆಲ್ಲ ಮಾತುಗಳು ಆಗ ಕೇಳಿಬರುತ್ತಿದ್ದವು.
ಅಂತಹ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವಂತಹ ಕಂತ್ರಿ ಬುದ್ಧಿ ನಮಗಿದ್ದುದರಿಂದ ಯಾರನ್ನೆಲ್ಲ ಹಿಡಿದರೆ ಕೆಲಸವಾಗುವುದೋ ಅವರೆಲ್ಲರ ಬೆನ್ನುಹತ್ತಿದೆವು. ಒತ್ತಾಯಕ್ಕೆ ಹಿಂದಿನವರು ಅಸ್ತು ಎಂದರು, ಮೊಹರು ಬಿದ್ದ ಮರುದಿನವೇ ನಾವು ಸೂತ್ರದಲ್ಲಿರುವ ಎಳೆಗಳನ್ನು ಲೆಕ್ಕಹಾಕಲಿಕ್ಕೆ ಸುರುಮಾಡಿದೆವು. ಯಾವುದನ್ನು ಬಿಗಿಯಬೇಕು, ಯಾವುದನ್ನು ಸಡಿಲಿಸಬೇಕು ಎಂಬುದನ್ನು ಪ್ರಯೋಗಕ್ಕೆ ಹಚ್ಚಿದೆವು. ಅಷ್ಟರಲ್ಲಿ ಸೀಟಿಗಾಗಿ ನಮ್ಮ ಜೊತೆ ಪೈಪೋಟಿ ನಡೆಸುತ್ತಿದ್ದ ಮನುಷ್ಯನನ್ನು ವಿಶ್ವಾಸಕ್ಕೆ ತೆಗೆದುಕೊಂಡೆವು, ಅವನಿಗೆ ತಂಗಿಯನ್ನು ಕೊಟ್ಟು ಬಾವಯ್ಯನನ್ನಾಗಿ ಮಾಡಿಕೊಂಡು, ವಾಮಮಾರ್ಗದಿಂದ ಅವನನ್ನು ಮಠದೊಳಕ್ಕೆ ಬಿಟ್ಟುಕೊಂಡವರು ಇಲ್ಲಿಯವರೆಗೂ ಹಾಗೆಯೇ ಇರಿಸಿಕೊಂಡಿದ್ದೇವೆ.
ಮುಂಡಾಸು ಸುತ್ತಿಕೊಂಡು ನಮ್ಮನ್ನು ಆಯ್ಕೆಮಾಡಿದವರನ್ನೆಲ್ಲ ಮಠದ ಅಡಳಿತಾತ್ಮಕ ವ್ಯವಹಾರದಿಂದ ಹೊರಗಿಟ್ಟೆವು ಮತ್ತು ಅಂತವರೆಂದೂ ಬಾರದಂತೆ ನೋಡಿಕೊಂಡೆವು. ಯಾರಿಗೆ ಮೂರು ನಾಮ ತೀಡಿದರೆ ಅಳಿಸಿಕೊಳ್ಳುವುದಿಲ್ಲವೋ, ಯಾರು ಎರಡೂ ಕಿವಿಗಳ ಮೇಲೆ ಹೂವಿಟ್ಟುಕೊಳ್ಳಲು ಸಿದ್ಧವೋ ಅಂತವರನ್ನೇ ಮಠದ ಆಡಳಿತಾತ್ಮಕ ವ್ಯವಹಾರಕ್ಕೆ ಹಚ್ಚಿದೆವು; ಹೆಸರು ಅವರದ್ದು ಬಸಿದು ನಮ್ಮದು ಮಾಡುವ ಪರಿಪಾಟ ಆರಂಭವಾಗಿದ್ದೇ ಆಲ್ಲಿಂದ. ನಂತರ ಅಕ್ಷರಶಃ ಬಸಿರುಮಾಡುವ ವ್ಯವಹಾರವನ್ನೇ ಆರಂಭಿಸಿದೆವು; ಹೆಸರಿಗೆ ಬೇರೆಯವರು ಇರುವಂತೆ ನೋಡಿಕೊಂಡೆವು.
ನಮ್ಮ ಜನರ ಮಕ್ಕಳು ಬೆಳೆದು, ಲೌಕಿಕ ವಿದ್ಯೆಯನ್ನು ಪಡೆದು, ದೇಶವಿದೇಶಗಳ ಮಹಾನಗರಗಳನ್ನು ಸೇರಿದಮೇಲೆ ಕಾಂಚಾಣವು ಕುಣಿಯತೊಡಗಿತು. ಅನುವಂಶೀಯವಾಗಿ ಮುಂಡಾಸನ್ನು ದೊಡ್ಡಮಾಡಿಕೊಳ್ಳುವ ಸ್ವಭಾವ ನಮ್ಮವರಲ್ಲಿ ಇದ್ದುದನ್ನು ಗಮನಿಸಿದ್ದೆವಲ್ಲ? ಅದನ್ನೇ ದಾಳವಾಗಿಸಿಕೊಂಡು ಹಲವು ಯೋಜನೆಗಳನ್ನು ರೂಪಿಸಿದೆವು. ಒಬ್ಬ ಲಕ್ಷ ಕೊಟ್ಟರೆ ಇನೊಬ್ಬನಿಗೆ ಅದನ್ನು ಹೇಳಿದಾಗ ಎರಡುಲಕ್ಷ ಕೊಟ್ಟ, ಮೂರನೆಯವ ಮೂರು, ನಾಲ್ಕನೆಯ ತಾನೇನು ಕಮ್ಮಿಯೇ ಎನ್ನುತ್ತ ನಾಲ್ಕು ಲಕ್ಷ ...ಹೀಗೇ ದೇಣಿಗೆಯ ವಹಿವಾಟು ಹೆಚ್ಚಿತು. ಯಾವುದಕ್ಕೂ ಲೆಕ್ಕಪತ್ರವಿಲ್ಲ.
ದೇವತೆಗಳಿಗೆ ಅರ್ಪಿಸುವ ಹವಿಸ್ಸನ್ನು ಅಗ್ನಿಗೇ ಹಾಕಬೇಕು ಎನ್ನುವಂತೆ ಕೊಡುವವರನ್ನು ಹಿಡಿದು ಕಾಡಿ,ಬೇಡಿ ಪಡೆದು ಬರಲು ಕೆಲವರನ್ನು ಬೆಳೆಸಿದೆವು. ಬರಿಗೈಲಿ ಹಾಗೆ ಬಂದು ಇಲ್ಲಿ ಬೆಳೆದವರು ಇಂದು ಬಂಗಲೆಗಳನ್ನು ಕಟ್ಟಿಕೊಂಡು, ಸೈಟುಗಳನ್ನು ಮಾಡಿಕೊಂಡು, ಕಾರಿನಲ್ಲಿ ಓಡಾಡುತ್ತ ಹಾಯಾಗಿದ್ದಾರೆ. ನಮ್ಮ ಸುತ್ತ ಕುಣಿಯುತ್ತಿರುವ ಜೈಕಾರದ ಬಳಗದಲ್ಲಿ ಇರುವವರೆಲ್ಲ ಹೀಗೇ ನಮ್ಮಿಂದ ಬೆಳೆದವರೇ ಆಗಿದ್ದಾರೆ; ಯಾರದೋ ದುಡ್ಡು ಸ್ವಾಮೀ ಜಾತ್ರೆ!
ಯಾವ ಅರ್ಹತೆಯೂ ಇಲ್ಲದ ನಮಗೆ ಇರುವ ಅರ್ಹತೆಯೆಂದರೆ ನಾವೊಬ್ಬ ಸಮರ್ಥ ರೌಡಿಯಾಗಲು ತಕ್ಕುದಾದ ಅರ್ಹತೆಗಳೆಲ್ಲ ಇರುವುದು ಧುತ್ತೆಂದು ಕಾಣುತ್ತಿದ್ದರೂ ಇಂದಿಗೂ ಸಹ ನಮ್ಮ ಸಮಾಜ ಏನೂ ಹೇಳುತ್ತಿಲ್ಲ ಏಕೆಂದರೆ ಮತ್ತದೇ ’ಮುಂಡಾಸಿನ ಸಮಸ್ಯೆ’, ನಾವು ಹೇಗಾದರೂ ಇರಲಿ, ಸಾರ್ವಜನಿಕವಾಗಿ ನಮ್ಮ ಸೀಟಿನ ಘನತೆಗೆ ತೊಂದರೆಯಾಗಬಾರದು ಎಂಬುದು ಅವರ ಅಪೇಕ್ಷೆ. ಮದುವೆಯಾದ ಹೊರತೂ ಹುಚ್ಚುಬಿಡೋದಿಲ್ಲ-ಹುಚ್ಚು ಬಿಟ್ಟ ಹೊರತೂ ಮದುವೆಯಾಗೋದಿಲ್ಲ ಅಂತಾರಲ್ಲ? ಹಾಗೆ, ಸೀಟಿನಿಂದ ನಮನ್ನು ಇಳಿಸಿದ ಹೊರತು ಸೀಟಿಗೆ ಪರಿಶುದ್ಧತೆ ಬರುವುದಿಲ್ಲ; ಸೀಟಿಗೆ ಪರಿಶುದ್ಧತೆ ಬೇಕೆಂದರೆ ನಮ್ಮನ್ನು ಸೀಟಿನಲ್ಲಿಡಲು ಸಾಧ್ಯವಿಲ್ಲ. ಈ ಸಮಸ್ಯೆ ಮುಂಡಾಸಿಗೆ ಅಂಟಿಕೊಂಡು ಇಲ್ಲಿಯವರೆಗೆ ಹೊರಗಿನಿಂದ ನಮಗೆ ಅನುಕೂಲವಾಗಿದೆ; ಒಳಗಿನಿಂದ ಬಹಳ ದೊಡ್ಡಮಟ್ಟದಲ್ಲಿ ಹೊಗೆಯಾಡುತ್ತಿದೆ ಎಂಬುದು ಬೇರೆ ಪ್ರಶ್ನೆ.
ಅಂದು ನಮ್ಮನ್ನು ಈ ಹುದ್ದೆಗೆ ಏರಿಸಿದವರಿಗೆ ಆಡಳಿತಾತ್ಮಕ ವ್ಯವಹಾರಗಳಲ್ಲಿ ಯಾವ ಹಕ್ಕೂ ಇಲ್ಲದ ಕಾರಣ ಅವರ ಮಾತುಗಳಿಂದ ನಮಗೇನೂ ಕಾನೂನುಬದ್ಧವಾಗಿ ತೊಂದರೆಯಾಗೋದಿಲ್ಲ. ಹಿಂದೆ ಭಕ್ತರು ಹಾಕಿದ ಭಿಕ್ಷೆಯನ್ನೆಲ್ಲ ಒಟ್ಟುಮಾಡಿ ಇಂದು ನಮ್ಮ ವಿರುದ್ಧ ಬೀಳುವ ಭಕ್ತರನ್ನು ನಿಗ್ರಹಿಸಲು ಅದನ್ನು ಬಳಸುತ್ತಿರುವುದರಿಂದ ಅನೌಪಚಾರಿಕವಾಗಿ ಅವರ ಹಂಗಿನಲ್ಲೇ ನಾವಿದ್ದರೂ ಕಾನೂನು ಹಾಗೆ ಹೇಳುವುದಿಲ್ಲ. ಈಗ ನಿಜವಾಗಿಯೂ ಹಾದಿಯಲ್ಲಿ ಬಿದ್ದವರೆಂದರೆ ಭಕ್ತಕುರಿಗಳು ಮತ್ತು ನಮ್ಮನ್ನು ಈ ಸ್ಥಾನಕ್ಕೆ ತಂದವರು.
ಈಗ ನಾವು ಆರಂಭದಲ್ಲಿ ಹೇಳಿದ ಮೊದಲ ’ಶ್ಲೋಕ’ವನ್ನು ಅರ್ಥೈಸಿ ನೋಡಿ, ಅರ್ಥವಾದರೆ ನಿಮಗೆ ಮುಂಡಾಸಿನ ಅನುವಂಶೀಯತೆಯಿಲ್ಲ; ಅರ್ಥವಾಗದಿದ್ದರೆ ಮುಂಡಾಸಿನ ಗಾಳಿ ನಿಮಗೂ ಬೀಸಿದೆ ಎಂದರ್ಥ. ಕಚ್ಚೆಹರುಕನ ತಾಉರ್ಮಾಸ್ಯವೆಂದರೆ ಇಂತಹ ದಿವ್ಯ ಚಿಂತನೆಗಳನ್ನು ನಡೆಸುವುದು ಮತ್ತು ಯಾರದರೂ ದಿವ್ಯಳು, ಭವ್ಯಳು ಎನಿಸಿಕೊಳ್ಳಲು ಸಿದ್ಧರಾಗುತ್ತರೋ ಎಂದು ಹುಡುಕುವುದು.
ಬರೇ ಕಾಮ
.
.
ಬರೇ ಕಾಮ"

June 2015

June 2015

June 2
https://www.facebook.com/groups/1499395003680065/permalink/1622690454683852/
ಭಸ್ಮಾಸುರ ಮೋಹಿನಿ ಪ್ರಸಂಗಕ್ಕೊಂದು ಹೊಸ ಭಾಷ್ಯ
"ಕಾಲ ಹೀಗೇ ಇರುತ್ತದೆಂದು ಯಾರೂ ಹೇಳಲು ಸಾಧ್ಯವಿಲ್ಲ. ನಮ್ಮ ಸನ್ಯಾಸದ ಆರಂಭದಿಂದಲೂ ನಾವು ಉಪಯೋಗಿಸಿದ ಟ್ರಿಕ್ಕುಗಳನ್ನು ನಾವೀಗ ಮನನ ಮಾಡುತ್ತಿದ್ದೇವೆ. ನಮ್ಮ ಟ್ರಿಕ್ಕುಗಳನ್ನು ಬೇರೆಯವರು ಅರಿಯುವ ಮೊದಲೇ ನಾವು ಬದಲಾಯಿಸಬೇಕಾಗಿತ್ತು. ಅಲ್ಲೇ ನಾವು ಎಡವಟ್ಟುಮಾಡಿಬಿಟ್ಟಿದ್ದೇವೆ.
ಬುಸ್ಸಪ್ಪನ ಆಟ ಕಾಟ ಏನಾದ್ರೂ ಅಂದ್ಕೊಳಿ ಅದರಿಂದ ನಮಗೆ ’ಹಾವಾಡಿಗ ಮಹಾಸಂಸ್ಥಾನ’ವೆಂಬ ’ಬಿರುದ’ನ್ನು ಜನತೆ ದಯಪಾಲಿಸಿದೆ. ಮೊದಮೊದಲು ಇಂತದ್ದೆಲ್ಲ ಅಂತರ್ಜಾಲದಲ್ಲಿ ಪ್ರಸಾರವಾದಾಗ ತಕ್ಷಣವೇ ಕೌಂಟರ್ ಅಟ್ಯಾಕ್ ಮಾಡಿಸಿ, ಸಂಬಂಧಿಸಿದವರ ಮೂಲ ಹುಡುಕಿಸಿ ಅವರ ಸಂಬಂಧಿಕರಿಗೆಲ್ಲ ಬೆದರಿಕೆಯ ಕರೆಗಳನ್ನು ಮಾಡಿಸುತ್ತಿದ್ದೆವು ನಾವು. ಇಂದು ನಮ್ಮ ಬೆದರಿಕೆಗಳಿಗೆ ಬೆಲೆಯೇ ಇಲ್ಲ. ಬೆದರಿಕೆ ಕರೆಗಳನ್ನು ಮಾಡುತ್ತಿದ್ದ ನಮ್ಮ ತಾಲಿಬಾನಿನವರೇ ಈಗ ಹಣಕ್ಕಾಗಿ ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ.
ಆಸ್ತಿಯಲ್ಲಿ ಸರಿಯಾಗಿ ಹಿಸ್ಸೆ ಬರೆದು ವಿಲ್ ಮಾಡುವವರೆಗೆ ಅಪ್ಪ ಹೇಳಿದಂತೆ ಕೇಳುವ ಮಕ್ಕಳು ಹಲವರಿದ್ದಾರೆ; ಆಮೇಲೆ ಅಪ್ಪ ಯಾರೋ ಮಕ್ಕಳು ಯಾರೋ ಎಂಬಂತೆ ನಡೆದುಕೊಳ್ಳುವುದೂ ಉಂಟು; ಅಪ್ಪನನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬರುವುದೂ ಉಂಟು.
ಸನ್ಯಾಸ ದೀಕ್ಷೆ ಸಿಗುವವರೆಗೆ ಬಳಲುತ್ತಿದ್ದ ಸ್ವಾಮಿಗಳ ಕೈಕಾಲು ಹಿಡಿದವರು ನಾವು. ಆಗ ಅವರು ಹೇಳಿದ್ದಕ್ಕೆಲ್ಲ ಅಸ್ತು ಎಂದೆವು; ಅಧ್ಯಯನಕ್ಕಾಗಿ ಹರಿದ್ವಾರಕ್ಕೆ ಹೋಗಲೂ ಒಪ್ಪಿಕೊಂಡಿದ್ದೆವು-ಅದು ಸಮಾಜದ ಗಣ್ಯರೆದುರಲ್ಲಿ ಮಾತ್ರ. ಮಾರನೇ ದಿನವೇ ನಾವು ಹಾಕಿದ ಪ್ಲೇಟ್ ಬದಲಾಯಿಸಿ ಹರಿದ್ವಾರಕ್ಕೆ ಹೋಗಲು ನಿರಾಕರಿಸಿದೆವು ನಾವು. "ಮಳ್ಳು ಹೇಳ್ತಿ, ಇಲ್ಲಿನ ಈರುಳ್ಳಿ ಉಪ್ಪಿಟ್ಟು, ಮಸಾಲೆ ದೋಸೆ, ಬಣ್ಣದ ಹುಡುಗಿಯರನ್ನೆಲ್ಲ ಬಿಟ್ಟು ಯಾರಾದ್ರೂ ಹರಿದ್ವಾರಕ್ಕೆ ಹೋಗ್ತಾರಾ?" ಎಂದುಕೊಂಡವರು.
ನಮಗೆ ಸಂಸ್ಥಾನದ ಆಸ್ತಿ ಮತ್ತು ಅದರಿಂದ ನಮಗೆ ಮತ್ತು ಕುಟುಂಬಕ್ಕೆ ಸಿಗುವ ಸುಲಭ ಆದಾಯದ ಮೇಲೆ ಕಣ್ಣಿತ್ತೇ ಹೊರತು ಸನ್ಯಾಸ ನಮಗೆ ಮುಖ್ಯವಾಗಿರಲಿಲ್ಲ. ಸನ್ಯಾಸ ತೆಗೆದುಕೊಂಡಮೇಲೆಯೂ ನಮಗೆ ಬೇಕಾದಂತೆ ನಾವು ನಡೆಯುತ್ತಿದ್ದೇವೆಯೇ ವಿನಃ ಸನ್ಯಾಸ ಧರ್ಮಕ್ಕೆ ನಾವು ಅಂಟಿಕೊಂಡಿಲ್ಲ. ಹೊರಗೆ ಇದನ್ನೆಲ್ಲ ಹೇಳಿದರೆ ಭಕ್ತ ಕುರಿಗಳಿಂದ ಬರುವ ಅದಾಯ ನಿಂತು ಹೋಗುತ್ತದೆಂಬ ತಿಳುವಳಿಕೆಯಿಂದ ಹೊರನೋಟಕ್ಕೆ ನಾವು ಮಹಾತಪಸ್ವಿಗಳು!
ಈಹ್ವರ ಭಸ್ಮವನ್ನು ಚೆಲ್ಲಿದಾಗ ಹುಟ್ಟಿದವ ಭಸ್ಮಾಸುರ. ಅಪ್ಪನಿಗಿಂತ ಮಗ ಶಕ್ತಿವಂತ ಎಂಬಷ್ಟು ಮೆರೆದಾಡಿದವ. "ನಿನ್ನಮ್ಮ" ಎಂದರೂ ಪಾರ್ವತಿಯನ್ನೇ ಮೋಹಿಸಿ ಕಾಡಲು ತೊಡಗಿದವ. ಬೋಳೇ ಶಂಕರ ತನ್ನ ಸಾತ್ವಿಕತೆಯಿಂದ ವರವನ್ನು ನೀಡಿದ ತಕ್ಷಣ ಮೊದಲು ಪ್ರಯೋಗಿಸಲು ಹೊರಟಿದ್ದೇ ಎದುರಿದ್ದ ಅಪ್ಪನಮೇಲೆ!
ನಾವೂ ಸಹ ಮೊದಲಿನಿಂದಲೂ ಮಾಡಿದ್ದು ಇದನ್ನೇ. ನಮ್ಮ ನಡತೆಗಳನ್ನು ಸರಿಯಾಗಿ ವಿಶ್ಲೇಷಿಸಿದವರಿಗೆ ಮಾತ್ರ ಇದು ಅರ್ಥವಾಗಿದೆ. ಅಲ್ಲಿಂದಿಲ್ಲಿಗೂ ನಾವು ಹಾಕಿದ ಪ್ಲೇಟ್ ಚೇಂಜ್ ಮಾಡುತ್ತಲೇ ಬಂದಿದ್ದೇವೆ. ಮೊದಲು ಹೇಳಿದ್ದಕ್ಕೆ ಗಂಟೆಗಳ ನಂತರ ಬೆಲೆ ಇರುವುದಿಲ್ಲ. ಹಾಗಾಗಿಯೇ ನಮ್ಮ ಯೋಜನೆಗಳೂ ಸಹ ಹಳ್ಳಹಿಡಿದಿದ್ದು.
ಮೇಲಾಗಿ ಅಂತಹ ಯೋಜನೆಗಳೆಲ್ಲದರ ಗುರಿ ಖಾಸಗಿ ಬೊಕ್ಕಸಕ್ಕಾಗಿ ಎತ್ತುವಳಿ ಮಾಡುವುದಾಗಿದ್ದು ಕುಲಪತಿ ಬಾವಯ್ಯ ಯೋಜನೆಗಳ ಸೂತ್ರಧಾರನಾಗಿದ್ದಾನೆ. ಬಂದದ್ದರಲ್ಲಿ, ಕೊಂಕಣಿಗರು ಹೇಳುವ ಹಾಗೆ ’ತುಕ್ ಅರ್ಧ ಮಕ್ ಅರ್ಧ’ ಎಂಬ ಲೆಕ್ಕಾಚಾರ.
ದುರುದ್ದೇಶಪೂರಿತ ಯಾವುದೇ ಕೆಲಸವೂ ಸಹ ದುರಂತವನ್ನೇ ಕಾಣುವುದು ಎಂಬುದು ಇಂದು ನಮಗೆ ಅರಿವಾಗುತ್ತಿದೆ; ಆದರೂ ಬಹಿರಂಗವಾಗಿ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಏನಿದ್ದರೂ ನಮ್ಮ ವ್ಯವಹಾರ ನಾಲ್ಕು ಗೋಡೆಗಳ ಮಧ್ಯವೇ ನಡೆಯಬೇಕೆಂಬುದು ನಮ್ಮ ನಿಯಮ. ನಾವು ಪರಕಾಯ ಶಯನ ಮಾಡಿದ ಪಲ್ಲಂಗದ ವ್ಯವಹಾರವೂ ಅದೇ ನಾಲ್ಕುಗೋಡೆಗಳ ನಡುವೆಯೇ ನಡೆದಿದ್ದು ಅದಕ್ಕೆ ಸಂಬಂಧಿಸಿದ ಮಾತುಕತೆಗಳೂ ಸಹ ಅಂತಲ್ಲೇ ನಡೆದಿದ್ದವು.
ಬೋಳೇ ಶಂಕರನ ಸಹಾಯಕ್ಕೆ ಮಹಾವಿಷ್ಣು ಮೋಹಿನಿಯಾಗಿ ಬಂದಂತೆ, ಇಲ್ಲಿ ಬೋಳೆ ಶಂಕರರಾದ ನಮ್ಮ ಭಕ್ತಕುರಿಗಳ ಸಹಾಯಕ್ಕೆ ಸೀತೆಯ ಗಂಡ ’ಗಾಯನಮೋಹಿನಿ’ಯ ರೂಪದಲ್ಲಿ ಬಂದ ಎಂದರೆ ತಪ್ಪಾಗಲಾರದು. ಮೋಹಿನಿಯ ಸೌಂದರ್ಯಕ್ಕೆ ಮನಸೋತ ಭಸ್ಮಾಸುರ ಆಕೆ ಹೇಳಿದ ಹಾಗೆಲ್ಲ ನಡೆದುಕೊಂಡು ಭಸ್ಮವಾಗಿ ಬಿದ್ದ. ’ಗಾಯನಮೋಹಿನಿ’ಯನ್ನು ನಾವಿಷ್ಟಪಟ್ಟಂತೆ ನಡೆದುಕೊಳ್ಳ ಹೇಳಿದ್ದರಿಂದ ನಾವು ಸಿಕ್ಕಿಬಿದ್ದು ಪರಪ್ಪ ವನವಾಸಕ್ಕೆ ದಿನ ಎಣಿಸುತ್ತಿದ್ದೇವೆ.
ಜಗವ ಸುತ್ತಿರುವುದು ನಿನ್ನಯ ಮಾಯೆ
ನನ್ನ ಸುತ್ತಿರುವುದು ನಿನ್ನ ದಯೆ ನೋಡಾ
ಎಂಬ ಹಾಡೊಂದನ್ನು ನಾವು ಕೇಳಿದ್ದೇವೆ. ಜಗವನ್ನೇ ಸುತ್ತಿರುವ ’ಜಗನ್ಮೋಹಿನಿ’ಗಳ ಮಾಯೆ ನಮ್ಮನ್ನೂ ಬಿಡಲಿಲ್ಲ; ವೇದವಿದ್ಯೆ, ತಪಸ್ಸು, ಸಿದ್ಧಿ ಯಾವುದೂ ಇಲ್ಲದ ನಮ್ಮನ್ನು ಭಗವಂತನ ದಯೆ ಸುತ್ತಿಕೊಳ್ಳಲಿಲ್ಲ. ಹಾಗಾಗಿಯೇ ಅಡಿಗೆ ಬಿದ್ದರೂ ಮೂಗು ಮೇಲೇ ಇದೆ ಎಂಬ ವಿತಂಡವಾದದೊಂದಿಗೆ ನಾವು ಮುನ್ನಡೆಯುತ್ತಲೇ ಇದ್ದೆವು.
ಒಳಕೋಣೆಯಲ್ಲಿ "ಆಯ್ತು ನಾವು ಸೀಟು ಬಿಟ್ಟು ಹೋಗುತ್ತೇವೆ, ದಮ್ಮಯ್ಯ, ಮರ್ಯಾದೆ ತೆಗೆಯಬೇಡಿ, ಈ ವಿಷಯ ಯಾರಿಗೂ ಬಹಿರಂಗ ಪಡಿಸಬೇಡಿ" ಎಂದ ನಾವು ವೇಗವಾಗಿ ಕುರಿವಾಡೆಗೆ ಹೋಗಿ ಅಲ್ಲಿ ಕುಳಿತು ಪ್ಲೇಟು ಬದಲಾಯಿಸಿಬಿಟ್ಟೆವು. ಹುಟ್ಟುಗುಣ ಘಟ್ಟ ಇಳಿದರೂ ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾದೆವು.
ನಮ್ಮ ಬಾಲಬಡುಕರಿಗೆಲ್ಲ ನಮ್ಮ ಅಸಲೀಯತ್ತಿನ ಪರಿಚಯವಿದೆ; ಆದರೆ ಭಕ್ತ ಕುರಿಗಳಿಗೆ ಮಾತ್ರ ನಮ್ಮ ನಿಜ ಮುಖದ ದರ್ಶನ ಇದುವರೆಗೂ ಆಗದಂತೆ ಸಂರಕ್ಷಿಸಿಕೊಂಡಿದ್ದೇವೆ ನಾವು. ಅಳುವ ಮಕ್ಕಳನ್ನು ರಮಿಸುವಾಗ ಅವರ ಗಮನವನ್ನು ಬೇರೆಡೆಗೆ ಸೆಳೆಯುವ ಹಾಗೆ ನಮ್ಮ ಕಚ್ಚೆಹರುಕತನದ ಭಯಂಕರ ಭಾನಗಡಿಗಳನ್ನು ಮುಚ್ಚಿಹಾಕಲು ಹಲವು ಹೊಸ ಯೋಜನೆಗಳನ್ನು ಹೊರಡಿಸುತ್ತಲೇ ಇದ್ದೇವೆ ನಾವು.
ನಮ್ಮ ಬಣ್ಣದ ಡೊಂಬರಾಟಗಳನ್ನು ನೋಡುತ್ತ, "ನಾವೇ ದೇವರು" ಎಂದು ನಾವು ಹೇಳಿದ್ದಕ್ಕೆ, ನಮ್ಮನ್ನೇ ದೇವರೆಂದು ನಂಬಿದ್ದ ಸಕಲ ಕುರಿಗಳಿಗೂ ಹೋಲ್ ಸೇಲ್ ಮಾದರಿಯಲ್ಲಿ ’ಅನುಗ್ರಹ’ವೆಂಬ ಲೇಬಲ್ಲು ಹಚ್ಚಿ ದ್ರೋಹ ಎಸಗಿದವರು ನಾವು. ಈಗ ನಿಧಾನವಾಗಿ ಒಂದೊಂದಾಗಿ ವಿಷಯವನ್ನು ಅರಿಯತೊಡಗಿದ ಕುರಿಗಳಲ್ಲಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದನ್ನು ಗಮನಿಸುತ್ತಿದ್ದರೆ ಮುಂದೆ ನಾವೆಲ್ಲಿಗೆ ಓಡಬೇಕು ಎಂಬುದರತ್ತ ಗಮನ ಹರಿಸಬೇಕಾಗಿದೆ.
ಓಡುವುದಕ್ಕಾದರೂ ಬಿಡುತ್ತಾರೆಯೇ? ಆ ಹಾಳಾದ ಚಂದ್ರಶೇಖರ ಇಟ್ಲ ಈ ಮೊದಲೇ ನಮ್ಮ ನಡೆಗಳ ಮೇಲೆ ಕಣ್ಣಿಟ್ಟಿದ್ದಾಗಿ ಹೇಳಿದ್ದಾನೆ. ನವನವೀನ ಆವಿಷ್ಕಾರಗಳ ಸ್ಕೆಚ್ ಬರೆಯುತ್ತಿದ್ದ ಇಮ್ಮಡಿ ವಿಶ್ವೇಶ್ವರಯ್ಯನವರ ಮಾತಿಗೆ ಈಗ ದಮ್ಮಡಿ ಬೆಲೆಯೂ ದೊರೆಯುತ್ತಿಲ್ಲ. ಈಗೀಗ ನಿತ್ಯ ’ಅರುಣೋದಯ ಕಾಲ’ದಲ್ಲಿ ’ಚೊಂಬ’ನ್ನು ಹಿಡಿದು ಹೋಗಿಬಂದರೂ ಮಲಬದ್ಧತೆಯಾದಂತೆ ಇನ್ನೂ ತಿಣುಕುತ್ತಲೇ ಇರುತ್ತೇವೆ ನಾವು.
"ಸೀಟು ಇಳಿದು ಹೋಗು ಎನ್ನುತ್ತಾರೆ ಆದರೆ ಎಲ್ಲಿಗೆ ಹೋಗಬೇಕೆಂದು ಹೇಳುವುದಿಲ್ಲ" ಎಂಬ ನಮ್ಮ ಮಾತಿಗೆ ಕೆಲವರು "ಎಲ್ಲಾದ್ರೂ ಹೋಗು, ಹಾಳಾಗಿ ಹೋಗು" ಎಂದು ಶಪಿಸಿದ್ದಾರಂತೆ; ’ನೊಂದವರು ಶಪಿಸುವ ಅಗತ್ಯವಿಲ್ಲ’ ಎಂಬ ಜಾಣ್ನುಡಿಯಂತೆ ಲಕ್ಷೋಪಾದಿಯ ಜನರ ಕ್ಷೋಭೆ ಮತ್ತು ಶಾಪ ನಮಗೆ ತಟ್ಟದಿರಲು ಸಾಧ್ಯವೇ? ಅವರು ಹಾಕಿದ ಭಿಕ್ಷೆಯಲ್ಲೇ ಆಲ್ಲವೇ ನಾವು ಬದುಕುತ್ತಿರುವುದು? ಇದನ್ನೆಲ್ಲ ಈಗೀಗ ನಾವು ಯೋಚಿಸುತ್ತಿದ್ದೇವೆ.
ನಮ್ಮ ಅಸಡ್ಡಾಳ ಧರ್ಮಬಾಹಿರ ನಡತೆಯಿಂದ ನಾವು ಪೂಜಿಸುವ ವಿಗ್ರಹಗಳಲ್ಲಿ ದೈವಾಂಹವೇ ಉಳಿದಿಲ್ಲ. ಸೀಟಿನಲ್ಲಿ ಯಾವ ಪ್ರಭಾವವೂ ಇರುವುದು ನಮಗೆ ಕಾಣುವುದಿಲ್ಲ. ನಮ್ಮ ಶಾಪವೆಲ್ಲ ನಮಗೇ ಉರುಳಾಗಿ ಮರಳುತ್ತಿದೆ. ಆದ್ದರಿಂದ ಮಾಂತ್ರಿಕ ಷಟ್ಕರ್ಮಗಳಾದ ಮಾರಣ, ಮೋಹನ, ಸ್ತಂಭನ, ಉಚ್ಛಾಟನ, ಆಕರ್ಷಣ, ಪ್ರತಿಗ್ರಹ ಇವುಗಳಲ್ಲಿ ಯಾವುದದರೂ ನಡೆಯುತ್ತದೋ ಎಂಬುದನ್ನು ಆಟದ ಕೊನೆಯ ದಾಳವಾಗಿ ಪ್ರಯೋಗಿಸುತ್ತಿದ್ದೇವೆ ನಾವು. ಅದೂ ಪ್ರಯೋಜನಕ್ಕೆ ಬಾರದಿದ್ದರೆ ಮುಂದೇನು? ಎಂಬುದು ಹೆಬ್ಭೂತದಂತೆ ಕಾಡುತ್ತಿರುವ ಸಮಸ್ಯೆ ನಮಗೆ.
ನೋಡೋಣ ನಮ್ಮ ಸ್ನೇಹಿತ ರಾಂ ಪಾಲ್ ಕಟ್ಟಿಕೊಂಡಂತೆ ನಾವೂ ಸಹ ಹಳದೀ ತಾಲಿಬಾನ್ ನಿರ್ಮಿಸಿಕೊಂಡಿದ್ದೇವೆ. ಅದನ್ನಾದರೂ ಗಟ್ಟಿಯಾಗಿ ಇರಿಸಿಕೊಂಡರೆ ಜಯವನ್ನು ಗಳಿಸಲಾದೀತು ಎಂಬುದು ನಮ್ಮ ಅನಿಸಿಕೆ; ನಾವು ಒಳಗೆ ಹೋದರೆ ಹಳದೀ ತಾಲಿಬಾನ್ ಬಳಗವೇ ಜೈಲ್ ಭರೋ ಚಳುವಳಿಯಂತೆ ಜೊತೆಗೆ ಬರಲೆಂದು ಅವರನ್ನೆಲ್ಲ ಪ್ರೇರೇಪಿಸುತ್ತಿದ್ದೇವೆ.
ಅಕ್ಷಮ್ಯ ವಿದ್ರೋಹ ಎಸಗಿದರೂ ಇನ್ನೂ ಕೆಲವು ಮೂರ್ಖ ಭಕ್ತ ಶಿಖಾಮಣಿಗೆ ಅದು ಅರ್ಥವಾಗದ ಕಾರಣ ಜೊತೆಗಿದ್ದಾರೆ. ನಮ್ಮ ಸಮಾಜ ಊಟ ತಿಂಡಿಗೆ ಒಗ್ಗಟ್ಟು ಎಂಬುದು ಗೊತ್ತಲ್ಲ? ಜೈಲಿಸ ಸುದ್ದಿ ಬಂದರೆ ತಲೆಯಮೇಲೆ ಟವಲ್ ಮುಚ್ಚಿಕೊಂಡು-ಕಣ್ಣಿಗೆ ಮಾತ್ರ ಜಾಗ ಬಿಟ್ಟುಕೊಂಡು, ಎಲ್ಲರೂ ಓಡುತ್ತಾರೇನೋ ಎಂಬ ಅನುಮಾನವೂ ನಮ್ಮನ್ನು ಕಾಡುತ್ತಿದೆ".

June 3
https://www.facebook.com/groups/1499395003680065/permalink/1623200834632814/
ಡಿವೈಡ್ ಅಂಡ್ ರೂಲ್ ಪಾಲಿಸಿ
"ಇದು ನಮಗೆ ಹೊಸದೇನೂ ಅಲ್ಲ. ಬ್ರಿಟಿಷರು ಇದನ್ನು ಕಲಿಸಿಕೊಟ್ಟು ತೆರಳಿದ್ದಾರೆ. ಮನುಷ್ಯನಿಗೆ ದೇವರು ತಲೆ ಕೊಟ್ಟಿದ್ದೇಕೆ? ಉಪಯೋಗಿಸಲಿಕ್ಕೆ. ಯಾವ ಸಮಯದಲ್ಲಿ ಯಾವುದನ್ನು ಡಿವೈಡ್ ಮಾಡಿದರೆ ಅನುಕೂಲ ಎಂಬುದನ್ನು ನೋಡಿ ಉಪಾಯದಿಂದ ಡಿವೈಡ್ ಮಾಡಬೇಕು.
ಅದು ಕೆಲಸವೇ ಇರಬಹುದು, ಭಕ್ತ ಕುರಿಗಳ ಮೆಂದೆಯೇ ಇರಬಹುದು, ನಮ್ಮಿಂದ ಪ್ರಯೋಜನ ಪಡೆದುಕೊಂಡು ನಮ್ಮ ಕೆಲಸಗಳನ್ನು ನಡೆಸಿಕೊಡುತ್ತ ಜೈಕಾರ ಕೂಗುವ ಹಳದೀ ತಾಲಿಬಾನ್ ಪಡೆಯೇ ಇರಬಹುದು, ನಮಗೆ ಆಗಾಗ ಬೇಕಾಗುವ ರಾಜಕಾರಣಿಗಳ ದಂಡೇ ಇರಬಹುದು, ಸೇವೆಯಲ್ಲಿರುವ ಗಿಂಡಿಗಳೇ ಇರಬಹುದು ಅಥವಾ ಮಂಚಕ್ಕೆ ಬರುವ ಲಲನೆಯರ ಗುಂಪೇ ಇರಬಹುದು.
ಯಾರಗುಂಪನ್ನು ಯಾವಾಗ ಒಡೆಯಬೇಕು ಮತ್ತು ಯಾರಿಗೆ ಎಲ್ಲಿ ಬತ್ತಿ ಇಡಬೇಕೆಂಬುದನ್ನು ಯತಿಯಾದವ ಮೊದಲು ತಿಳಿದುಕೊಳ್ಳಬೇಕೆಂಬುದು [ಕಳ್ಳ]ಸನ್ಯಾಸಿಯಾದ ನಮ್ಮ ಸಲಹೆ. ಬತ್ತಿ ಇಡುವುದಕ್ಕೆ ಹಲವು ಅರ್ಥಗಳಿವೆ. ಶಿಲೆಯ ಬಂಡೆಯನ್ನು ಒಡೆಯಲು ಡೈನಮೈಟ್ ಇಡುತ್ತಾರಲ್ಲ ಅಲ್ಲಿ ಬಳಸುವುದೂ ಬತ್ತಿಯನ್ನೇ. ಸಾಮಾನ್ಯವಾಗಿ ಬೆಂಕಿ ಹಚ್ಚಲು ಹಲವೆಡೆ ಕಾಮನ್ ಆಗಿ ಬಳಸುವುದು ಬತ್ತಿಯನ್ನೇ. ಬತ್ತಿ ಇಡುವುದು ಎಂಬ ಕೆಲಸದ ಅರ್ಥ ನಿಮಗೀಗ ತಿಳಿದಿರಬಹುದಲ್ಲವೇ?
ಭಕ್ತಕುರಿಗಳಲ್ಲಿ ಹಲವಂತೂ ಶತಮಾನ ಕಳೆದರೂ ಮತ್ತೆ ಕುರಿಯಾಗಲೇ ಲಾಯಕ್ಕು ಎಂಬುದು ನಮಗೆ ಗೊತ್ತಿತ್ತು. ಕೆಲವು ಮಾತ್ರ ಟ್ಯೂಬ್ ಲೈಟ್ ರೀತಿ ಇದ್ದವು, ಹೀಗಾಗಿ ಈಗಲೂ ನಾವು ಹೇಳುತ್ತಿರುವುದು ಎಲ್ಲರಿಗೂ ಅರ್ಥವಾಗುತ್ತದೆ ಎನ್ನಲು ಸಾಧ್ಯವಿಲ್ಲ.
ನಾವು ಬತ್ತಿ ಇಡುವ ಕೆಲಸ ಸಾಮಾನ್ಯ ಯಾರಿಗೂ ತಿಳಿಯೋದಿಲ್ಲ. ಹಿಂದೆಲ್ಲ ದೇವತೆಗಳು ರಾತ್ರೋರಾತ್ರಿ ಶಿಲಾಮಯ ದೇವಸ್ಥಾನಗಳನ್ನು ಕಟ್ಟಿ ನಿರ್ಮಿಸುತ್ತಿದ್ದರಂತಲ್ಲ? ಹಾಗೆಯೇ ನಮ್ಮ ಬತ್ತಿ ಇಡುವ ಕೆಲಸವೂ ಸಹ. ಎಷ್ಟು ಹೊತ್ತಿನಲ್ಲಿ ಯಾರಿಗೇ ಬೇಕಾದರೂ ನಾವು ಬತ್ತಿ ಇಡಬಹುದು. ಯಾಕೆಂದ್ರೆ...ಯಾಕೆಂದ್ರೆ.....ಯಾಕೆಂದ್ರೆ ನಾವು ಸರ್ವತಂತ್ರ ಸ್ವತಂತ್ರರು.
ಆರು ವರ್ಷಗಳ ಹಿಂದೆ ನಮ್ಮ ಕುಲಪತಿ ಬಾವಯ್ಯನ ರಾಸಲೀಲೆಗಳು ಮತ್ತು ಬಾಲಕಿಯರ ಮೇಲೆಸಗಿದ ದೌರ್ಜನ್ಯಗಳು ಬಯಲಾಗುತ್ತಿದ್ದಂತೆ ದೂರಕ್ಕೆ ಹಾರಿಬಿಟ್ಟೆವು ನಾವು. ಮರಳಿ ಬರುವುದರೊಳಗೆ ಹೇಗೂ ಒಂದು ಲೆವೆಲ್ಲಿಗೆ ಕುರಿಗಳು ಸಮಾಧಾನಗೊಂಡಿರುತ್ತವೆ ಎಂಬುದು ನಮ್ಮ ಅನಿಸಿಕೆಯಾಗಿತ್ತು.
ಮರಳಿ ಬಂದ ನಾವು ಮೊದಲು ಮಾಡಿದ್ದೇ ಕಂಡಲ್ಲೆಲ್ಲ ಹೋಗಿ ಭಕ್ತಕುರಿಗಳ ಮೆಂದೆಗಳ ಮುಂದೆ ಮೊಸಳೆ ಕಣ್ಣೀರು ಹಾಕಿದ್ದು. ನಂತರ ಮಾಡಿದ್ದೇ ನಮ್ಮ ಎಲ್ಲಾ ಮಂಡಲದ ಸೋ ಕಾಲ್ಡ್ ಅಧಿಕಾರಿಗಳನ್ನೆಲ್ಲ ಕಿತ್ತೆಸೆದು ಬದಲಾಯಿಸಿದ್ದು. ಈ ಕೆಲಸ ರಾತ್ರೋರಾತ್ರಿಯೇ ನಡೆಯಿತು. ಅನೇಕರಿಗೆ ನಾವು ಹೀಗೆ ಬತ್ತಿ ಇಡುತ್ತೇವೆ ಎಂಬ ಕನಸೂ ಕೂಡ ಬಿದ್ದಿರಲಿಲ್ಲ. ಮೊದಲಿದ್ದವರನ್ನೇ ಮುಂದೆಯೂ ಇಟ್ಟುಕೊಂಡರೆ ನಮಗೂ ಕಷ್ಟ, ನಮ್ಮ ಬಾವಯ್ಯನಿಗಂತೂ ಸಾಧ್ಯವೇ ಇಲ್ಲ. ಹೀಗಾಗಿ ಬದಲಾಯಿಸಿಬಿಟ್ಟೆವು.
ನಾವು ಹೀಗೆಲ್ಲ ಬದಲಾಯಿಸಿದರೂ "ಯಾಕೆ ಬದಲಾಯಿಸುತ್ತೀರಿ?" ಎಂದು ಕೇಳುವ ಎದೆಗಾರಿಕೆ ಯಾವ ಗಂಡಸಿಗೂ ಇಲ್ಲ ಬಿಡಿ; ನಮ್ಮಲ್ಲಿ ನಾವು ಮಹಿಳೆಯರಲ್ಲೇ ಸಕತ್ ’ಎದೆಗಾರಿಕೆ’ಯನ್ನು ಕಂಡಿದ್ದು, ಪುರುಷರಲ್ಲಲ್ಲ. ನಮ್ಮೆದುರು ಜಾಸ್ತಿ ಎದೆಗಾರಿಕೆ ತೋರುವ ಮಹಿಳೆಯರನ್ನು ’ಸಬಲೀಕರಣ’ಕ್ಕೆ ತೊಡಗಿಸಿದೆವು ಅಷ್ಟೆ. ಮಹಿಳೆಯರ ಸಬಲೀಕರಣ ನಡೆಸುವಾಗ ಅವರ ಗಂಡಂದಿರು ಎನ್ನುವ ಕುರಿಗಳನ್ನು ರೂಮಿನ ಹೊರಗೆ ಕೂರಲು ಹೇಳುತ್ತಿದ್ದೆವು. ಅಂತಹ ಅನೇಕ ಗಂಡ-ಹೆಂಡಿರ ನಡುವೆ ನಾವಿಟ್ಟ ಬತ್ತಿ ಅಂತಿಂತದ್ದಲ್ಲ.
ಕೈಮುಗಿದು ಗಂಟೆಗಟ್ಟಲೆ ಹೊರಗೆ ಕಾಯುತ್ತ ಕುಳಿತ ಒಂದೇ ಒಂದು ಗಂಡ ಯಾನೇ ಗಂಡು ಕುರಿಯೂ, ’ಯತಿ’ಯೊಡನೆ ಒಳಗುಳಿದ ತನ್ನ ಹೆಣ್ಣುಕುರಿಯ ಗತಿಯೇನಾಗಿರಬಹುದೆಂದು ಯಾವ ಕ್ಷಣದಲ್ಲೂ ಯೋಚಿಸದಂತೆ ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿದ್ದೆವು. ಹೀಗಾಗಿ ಒಳಗೆ ಬಂದವರಿಗೂ ಹೊರಗೆ ಕುಳಿತವರಿಗೂ ನಾವಿಡುತ್ತಿರುವ ಬತ್ತಿಯ ರಹಸ್ಯ ಗೊತ್ತಾಗಲೇ ಇಲ್ಲ.
ಹಿಂದೆ ಬೀಚಿನಲ್ಲಿ ನಾವು ವಿದೇಶೀ ’ಸೂರ್ಯ-ಚಂದ್ರ’ರನ್ನು ಕಣ್ತುಂಬಿಸಿಕೊಳ್ಳುತ್ತಿದ್ದುದು ಮತ್ತು ಭಟ್ಟರ ಮಗಳನ್ನು ಹಿಡಿಯಲು ಹೋಗಿದ್ದು, ದಶಕದಿಂದ ಏಕಾಂತದಲ್ಲಿ ಸರ್ಪಾಸ್ತ್ರ ಪ್ರಯೋಗ ನಡೆಸುತ್ತಿರುವುದು ಇವೆಲ್ಲವೂ ನಮ್ಮ ಕುಲಪತಿ ಬಾವಯ್ಯನಿಗೆ ನೂರಕ್ಕೆ ಇನ್ನೂರರಷ್ಟು ಗೊತ್ತು. ಅನೇಕ ಘಟನೆಗಳಲ್ಲಿ ನಾವೀರ್ವರೂ ಭಾಗೀದಾರರು.
ಆರು ವರ್ಷಗಳ ಹಿಂದೆ ಬಾವಯ್ಯನನ್ನು ಹೊರದೂಡಬೇಕಾದ ಪ್ರಸಂಗ ಎದುರಾದಾಗ "ನನ್ನನ್ನು ಹೊರದೂಡಿದರೆ ನಿನ್ನ ಸರ್ವ ಬಣ್ಣವನ್ನೂ ಬಯಲು ಮಾಡುತ್ತೇನೆ" ಎಂದು ಆತ ಗುಡುಗಿದ್ದರಿಂದ ಬಾವಯ್ಯನನ್ನು ಆಚೆ ಹಾಕಲಾರದ ಅನಿವಾರ್ಯ ಸ್ಥಿತಿಯಲ್ಲಿ ನಾವು ಸಿಲುಕಿಕೊಂಡೆವು. ತಿಂದರೂ ಉಂಡರೂ ನಮ್ಮ ಬಾವಯ್ಯನೇ ತಾನೇ? ಬಿದ್ಕೊಂಡಿರ್‍ಲಿ ಎಂದು ಬಿಟ್ಟುಬಿಟ್ಟೆವು.
ಬಾವಯ್ಯನ ವಿರುತ್ತ ದಂಡೆತ್ತಿ ಬಂದವರ ಮಧ್ಯೆ ಬತ್ತಿ ಇಟ್ಟು, ಅವರನ್ನೆಲ್ಲ ಒಡೆದಾಳುವ ಮೂಲಕ ಬಾವಯ್ಯನನ್ನು ಸೇಫ್ ಗಾರ್ಡ್ ಮಾಡಿ, "ಕೆಲವು ತಿಂಗಳು ಬಿಸಿ ತಣ್ಣಗಾಗುವವರೆಗೆ ಬೆಂಗಳೂರಲ್ಲಿರು ಮಾರಾಯ" ಎಂದು ಕಳಿಸಿಕೊಟ್ಟೆವು; ನಮ್ಮ ಹಾವಾಡಿಗ ಮಹಾಸಂಸ್ಥಾನದ ಗಿಂಡಿಗಳು,ಪಾರುಪತ್ತೆದಾರರು ಯಾರೇ ಇರ್ಲಿ, ಇಂತದ್ದೇ ಎಡವಟ್ಟುಗಳಲ್ಲಿ ಸಿಲುಕಿಕೊಂಡರೆ ಈಗಲೂ ನಾವು ಮಾಡುವುದೇ ಹಾಗೆ. ಸಸ್ಪೆಂಡ್ ಆದ ನೌಕರರು ಮತ್ತೆ ನಿಧಾನವಾಗಿ ಅದೇ ಜಾಗಕ್ಕೆ ಸೇರಿಕೊಳ್ಳುವ ಟ್ರಿಕ್ ನಿಮಗೆ ಗೊತ್ತಲ್ಲವೇ? ಅದೇ ವಿದ್ಯೆ ಇಲ್ಲೂ ಸಹ.
ಮರಳಿ ಪುರಪ್ರವೇಶ ಮಾಡಿದ ನಮ್ಮ ಬಾವಯ್ಯ ’ಗಾಂವ್ ಕಾ ಶೇರ್’ ಕತೆಯ ಬೃಹತ್ ಹೋರಿಯಂತೆ ಎದೆ ಸೆಟೆದು ಎದ್ದು ನಿಂತು, ಈ ಹಿಂದೆ ತಾನೇ ಹಾಕಿಟ್ಟ ಹಲವು ಎತ್ತುವಳಿ ಯೋಜನೆಗಳನ್ನು ಹಳದೀ ತಾಲಿಬಾನ್ ಮೂಲಕ ಪ್ರಚುರಪಡಿಸಿ, ಇನ್ನೊಂದಷ್ಟು ಮಸಾಲೆಯನ್ನು ಅರೆದು ಸೇರಿಸಿ ಗುಟುರು ಹಾಕಿದ.
"ದೊಡ್ಡ ಸಂಸ್ಥಾನ ಅಂದರೆ ಸುಳ್ಳು ಆಪಾದನೆಯೆಲ್ಲ ಇದ್ದಿದ್ದೇ ಅಲ್ವೆ?"
"ಅಲ್ವೇ ಮತ್ತೆ?"
ಎಂದು ಕೆಲವು ಬೊಚ್ಚುಬಾಯಿ ಭಕ್ತಕುರಿಗಳು ಜುಟ್ಟಾಲ್ಲಾಡಿಸುತ್ತ ತಮ್ಮತಮ್ಮಲ್ಲೇ ಪ್ರಶ್ನೋತ್ತರ ನಡೆಸಿ ಸಮಸ್ಯೆಗೆ ಮಂಗಳ ಹಾಡಿದವು; ನಮ್ಮ ಕೆಲಸ ಸಲೀಸಾಯಿತು.
ನಮ್ಮ ಅರ್ಥಾತ್ ’ಹಾವಾಡಿಗ’ ಮಹಾಸಂಸ್ಥಾನದವರ ಹೊರಗಡೆಯ ವ್ಯಾವಹಾರಿಕ ’ಸ್ನೇಹ’ದ ಫಲವಾಗಿ ಬಾವಯ್ಯ ಕೇಸಿನಲ್ಲಿ ವಿಜಯ ಪತಾಕೆ ಹಾರಿಸಿದ. ಸೋತವರು ಪಾನಿಪೂರಿ ಹಾಕಲೂ ಗತಿಯಿಲ್ಲದಷ್ಟು ಬಡತನಕ್ಕಿಳಿಯುವಂತೆ ನಾವು ನೋಡಿಕೊಂಡೆವು. ಅಷ್ಟೇ ಅಲ್ಲ; ನಡುವಯಸ್ಸಿನ ಆ ದಂಪತಿಯ ಮಧ್ಯೆ ಬತ್ತಿ ಇಟ್ಟು ಹೆಂಡತಿ ಗಂಡನನ್ನು ಬಿಟ್ಟುಹೋಗುವಂತ ಪುಣ್ಯಕಾರ್ಯ ನಡೆಸಿದೆವು.
ನಮ್ಮಲ್ಲಿ ಕೌಟುಂಬಿಕ ಸಮಸ್ಯೆ ಹೊತ್ತುಬಂದ ಯಾವುದೇ ದಂಪತಿಯನ್ನೂ ಒಟ್ಟಿಗೇ ನೆಟ್ಟಗೆ ಇರಲು ಬಿಡಲೇ ಇಲ್ಲ ನಾವು; ನಮ್ಮಲ್ಲಿ ಬಂದವರೆಲ್ಲ ಬೇರೆ ಬೇರೆಯಾಗಿ ಹೆಂಡಂದಿರಿಗೆ ನಮ್ಮ ’ವಿಶ್ವರೊಪ ದರ್ಶನ’ ಪ್ರಾಪ್ತಿಯಾಗಿ ಎಲ್ಲರೂ ’ಸುಖ’ವಾಗಿದ್ದಾರೆ ಈಗ.
ಸಮಸ್ಯೆ ಎದುರಾದಾಗ ವಿರೋಧೀ ಬಣವನ್ನು ಒಡೆದು ಬಿಡುವುದು ನಮ್ಮ ಸಾಧನೆ; "ಇಂತಹ ಮನೆಹಾಳ ಕಚ್ಚೆಹರುಕು ಮಹತ್ಸಾಧನೆ ಮಾಡಲು ಯತಿಯಾಗಬೇಕಿತ್ತೇ?" ಎಂದು ಯಾರೋ ಒಂದಷ್ಟು ಜನ ಕೇಳಿದ್ದರಂತೆ, ಹೋಗಲಿ ಬಿಡಿ; ಅದರಿಂದ ನಮಗೇನೂ ನಷ್ಟವಿಲ್ಲ.
ಈಗಲೂ ನಾವು ನಮ್ಮ ಬೇಳೆ ಬೇಯಿಸುತ್ತಿರುವುದು ಒಡೆದಾಳುವ ನೀತಿಯಿಂದಲೇ ಎಂಬುದು ಕುರಿಗಳಿಗೆ ಇನ್ನೂ ಅರ್ಥವಾಗಿಲ್ಲ; ಹಾಗಾಗಿಯೇ ನಾವು ಇನ್ನೂ ಸೀಟಿನಲ್ಲೇ ಇದ್ದೇವೆ. ಕಾವಿ ಎಂಬ ಹಗಲುವೇಷ ತೊಟ್ಟು ಬೆಳಗಾದರೆ ಪೂಜೆ,ಪ್ರವಚನ,ಪ್ರಸಾದ, ಸಂಜೆಯಾದರೆ ಬಾಯಲ್ಲಿ ಪುರಾಣ, ಪುಣ್ಯ ಕತೆ, ಜೊತೆಜೊತೆಗೆ ಅಂದಂದಿನ ಇರುಳಿನ ಏಕಾಂತದಲ್ಲಿ ಯಾರಿಗೆ ದೋಖಾ ಕೊಡೋಣ ಎಂಬ ಯೋಚನೆ, ರಾತ್ರಿ ’ವಿಶ್ವರೂಪ ದರ್ಶನ’ ವಿನಿಯೋಗ.
ಉತ್ತರದ ಕಡೆಗೆ ಹೇಗೂ ಬಡಕುರಿಗಳಿದ್ದಾವೆ, ದಕ್ಷಿಣದವು ತೀರಾ ಕುರಿಗಳಿರಲಿಕ್ಕಿಲ್ಲ ಎಂದುಕೊಂಡು ಕಳೆದ ಸಲ ಸೀದಾ ’ಕುರಿವಾಡೆ’ಗೆ ಹೋಗಿ ಝಾಂಡಾ ಹೂಡಿಬಿಟ್ಟೆವು. ನಂತರ ತಿಳಿದದ್ದು ದಕ್ಷಿಣದಲ್ಲೂ ಸಾಕಷ್ಟು ಕುರಿಗಳಿವೆ ಎಂಬುದು. ಅಂತಹ ಕುರಿಗಳನ್ನೆಲ್ಲ ನಮ್ಮ ಹಳದೀ ತಾಲೀಬಾನಿಗರ ಮೂಲಕ ಸಂಪರ್ಕಿಸಿ, ಒಟ್ಟಿಗೆ ಇಟ್ಟುಕೊಂಡೆವು.
ಮೆಂದೆಯಿಂದ ತಪ್ಪಿಸಿಕೊಳ್ಳಲಾರದಂತೆ ಸಲಹಿಕೊಂಡ ಕುರಿಗಳೆದುರಲ್ಲಿ ನಾವು ನಡೆಸಿದ್ದೇ ಪೂಜೆ, ಎತ್ತಿದ್ದೇ ಮಂಗಳಾರತಿ, ಕೊಟ್ಟಿದ್ದೇ ತೀರ್ಥ,ಪ್ರಸಾದ, ಹಾಕಿದ್ದೇ ಅಭಿವೃದ್ಧಿ ಯೋಜನೆ. ಏನೇ ಮಾಡಿದರೂ "ಜೈ ಜೈ ಜೈ ಜೈ ಮೇ ಮೇ ಮೇ" ಎನ್ನುತ್ತವೆಯೇ ವಿನಃ ಯಾವುದೂ ಹುಲಿಯಂತೆ ಗುರ್ರ್ ಎನ್ನುವುದಿಲ್ಲ.
ಇಂತಿಪ್ಪ ಕುರಿಮೆಂದೆಗೆ ಧರ್ಮ,ತರ್ಕ, ಶಾಸ್ತ್ರ,ವೇದ ಇವುಗಳಲ್ಲಿ ಆಳವಾದ ಪಾಂಡಿತ್ಯ ಇರಲು ಸಾಧ್ಯವೇ? ಇದ್ದರೆ ಪರಿಸ್ಥಿತಿ ಹೀಗಿರುತ್ತಿರಲಿಲ್ಲ ಎಂದು ಚಿತ್ರಗುಪ್ತ ಹೇಳಿದ್ದಾನೆ. ’ಯತಿ’ವೇಷದ ನಮಗೇ ಏನೊಂದೂ ಗೊತ್ತಿಲ್ಲ, ಇನ್ನು ನಮ್ಮನ್ನೇ ದೇವರೆಂದು ಆರಾಧಿಸುವ ಅವುಗಳ ಕತೆ ಏನು?
ಮಧ್ಯೆ ಮಧ್ಯೆ, "........ಇತಿಹಾಸವುಳ್ಳ ಪರಂಪರೆಯ ಯತಿಯ ಮೇಲೆ ಎಂತಹ ಆಪಾದನೆ ನೋಡಿ. ನಾವು ಆಪಾದನೆಗಳಿಗೆಲ್ಲ ಜಗ್ಗುವರಲ್ಲ. ಬಾಗಿದವರಿಗೆ ಹರಸಲೂ [ಬೋಳಿಸಲೂ?] ಗೊತ್ತು, ತಿರುಗಿ ಬಿದ್ದವರಿಗೆ ಬಾಣ ಬಿಡಲೂ ಗೊತ್ತು,ನಮ್ಮದು ವೀರ್ಯಸನ್ಯಾಸ" ಎಂದು ಭಾಷಣ ಮಾಡಿಬಿಟ್ಟರೆ ಎಲ್ಲಾ ಕುರಿಗಳು ಯಪರು ತೆಪರು ಮುಖಮಾಡಿಕೊಂಡು "ಮೇ ಮೇ" ಎನ್ನುತ್ತ ಸದ್ದುಹೊರಡಿಸುತ್ತವೆ."
-------------------
ಸಾರ್ವಜನಿಕರಲ್ಲಿ ಕೇಳಿಬಂದ ದನಿ-
"ಹೆಣ್ಣಿಗೆ ಶೀಲ, ಕೋತಿಗೆ ಬಾಲ, ಭಕ್ತಕುರಿಗಳಿಗೆ ಯಾವುದು ಭೂಷಣ?"
"ಕಚ್ಚೆಹರುಕನ ಭಾಷಣ."

June 4
https://www.facebook.com/groups/1499395003680065/permalink/1623577261261838/
ಜಗದ್ಗುರು ಚಾರ್ಲ್ಸ್ ಶೋಭರಾಜಾಚಾರ್ಯ
"ನಿಮಗೆ ಚಾರ್ಲ್ಸ್ ಶೋಭರಾಜ್ ಎಂಬ ಅಂತಾರಾಷ್ಟ್ರೀಯ ಕುಖ್ಯಾತಿಯ ಕ್ರಿಮಿನಲ್. ಸರಣಿ ಕೊಲೆಗಾರ, serial killer. ನೆನಪಿರಬಹುದಲ್ಲ? ಹಲವಾರು ಹೆಣ್ಣು ಮಕ್ಕಳನ್ನು ಕೊಲೆಗೈದಿದ್ದ ಈತನನ್ನು ’ಬಿಕಿನಿ ಕಿಲ್ಲರ್’ ಎಂದೂ ಕರೆಯುತ್ತಾರೆ. ಪೂಲೀಸರಿಗೆ ಲಂಚ ಕೊಟ್ಟೋ ಚಳ್ಳೆ ಹಣ್ಣು ತಿನ್ನಿಸಿಯೋ ತಪ್ಪಿಸಿಕೊಳ್ಳುತ್ತಿದ್ದುದು ಇವನ ಜಾಯಮಾನ.
ಒಮ್ಮೆ ಯಾರೋ, "ಒಬ್ಬ ಭಾರತೀಯ ಪೊಲೀಸರು ನಿಮ್ಮ ಹಿಂದೆ ಬಿದ್ದಿದ್ದಾರೆ" ಎಂದು ಪ್ರಸ್ತಾಪಿಸಿದಾಗ, "ಓಹ್, ಭಾರತೀಯ ಪೊಲೀಸರು ಐದು ರೂಪಾಯಿ ಪೊಲೀಸರು, ಐದು ರೂಪಾಯಿಯ ನೋಟನ್ನು ಕೊಟ್ಟರೆ ಬಿಟ್ಟು ಬಿಡುತ್ತಾರೆ" ಎಂದು ಗಹ ಗಹಿಸಿ ನಕ್ಕಿದ್ದ. ಕೊನೆಗೆ ಇವನಿಗೆ ಮುಳುವಾಗಿದ್ದು ಒಬ್ಬ ದಕ್ಷ ಭಾರತೀಯ ಪೊಲೀಸ್ ಅಧಿಕಾರಿಯೇ. ಮಧುಕರ್ ಜೆನ್ಡೇ ಎಂಬ ಚಾಣಾಕ್ಷ ಪೊಲೀಸ್ ಅಧಿಕಾರಿ 1996ರಲ್ಲಿ ಅತ್ಯದ್ಭುತವಾದ ಕಾರ್ಯಾಚರಣೆಯೊಂದರಲ್ಲಿ ಚಾರ್ಲ್ಸ್ ನನ್ನು ಅರೆಸ್ಟ್ ಮಾಡಿದ್ದರು.
ನಾವು ಖುದ್ದಾಗಿ ಹೇಳಿದರೂ ನೀವು ನಂಬದ ಒಂದು ವಿಷಯವೇನು ಗೊತ್ತೇ? ನಮಗೂ ಚಾರ್ಲ್ಸ್ ಶೋಭರಾಜ್ ಗೂ ಎಲ್ಲಾ ವಿಷಯಗಳಲ್ಲೂ ಹೋಲಿಕೆ ಇದೆಯೆಂದು ಅನೇಕರು ಹೇಳುತ್ತಿದ್ದಾರೆ. ನಾವು [ಕಪಟ]ಸನ್ಯಾಸಿ ಅವನೋ ಪ್ರೊಫೆಶನ್ ಬಿಕನಿ ಕಿಲ್ಲರ್.
ನಾವು ಏಕಾಂತದ ನಂತರ ನೇರವಾಗಿ ಕೊಲೆಮಾಡುವುದಿಲ್ಲ ಏಕೆಂದರೆ ಏಕಾಂತಕ್ಕೆ ಬಂದವರನ್ನೇ ದಾಳವಾಗಿ ನಮ್ಮ ಕೆಲಸಕ್ಕೂ ಬಳಸಿಕೊಳ್ಳುತ್ತೇವೆ. ಮತ್ತೆ ಬಯಸಿದರೆ ಅವರು ಏಕಾಂತಕ್ಕೆ ಬರುತ್ತಲೇ ಇರುತ್ತಾರೆ. ಹೀಗಾಗಿ ನಾವು ಬಿಕನಿ ಹಾಕಿಸಿ ನರ್ತನವನ್ನು ನೋಡಿದರೂ ಸಹ ’ಬಿಕನಿ ಕಿಲ್ಲರ್’ ಎಂಬ ಬಿರುದನ್ನು ಪಡೆಯಲು ಇಷ್ಟಪಡಲಿಲ್ಲ.
ಹಣ, ಹೆಣ್ಣುಗಳ ಜೊತೆಗೆ ಆಸ್ತಿಯನ್ನು ಬರಗುವ ಚಟವೂ ನಮಗಿದೆ. ಐದಾರು ವರ್ಷಗಳ ಹಿಂದೆ ಮಠವೊಂದು ದಿವಾಳಿ ಎದ್ದಿದೆ ಎಂಬ ಸುದ್ದಿ ಬಂದಿತ್ತು. ನಮ್ಮಲ್ಲಿ ಹಣದ ಥೈಲಿಯಲ್ಲಿ ಝಣ ಝಣದ ಝಣತ್ಕಾರ ಜೋರಾಗಿತ್ತು. ಒಂದು ಕರೆಮಾಡಿದರೆ, ಕಿವಿಯ ಮೇಲೆ ನಮ್ಮಿಂದಲೇ ಪ್ಲಾಸ್ಟಿಕ್ ಹೂವಿರಿಸಿಕೊಂಡು ಹಣೆಗೆ ನಾಮ ಎಳೆಸಿಕೊಂಡ ನಮಾಮಿಯ ಬೋಳೆ ಶಂಕರ ಬೇಕಾದಷ್ಟು ಸುರಿಯುತ್ತಿದ್ದ.
ಜೊತೆಗೆ ಲೋಕಲ್ ಉದ್ಯಮಿಗಳಿಗೆ ಕರೆಮಾಡಿಸಿ "ಏನೂ? ಬರಲೇ ಇಲ್ಲಾ ಮಠದ ಕಡೆಗೆ? ಮಹಾಸಂಸ್ಥಾನದವರು ನಿಮ್ಮನ್ನು ಕಾಣಬೇಕಂತೆ" ಅಂದರೆ ಅವರು ಎದ್ನೋಬಿದ್ನೋ ಎಂದುಕೊಂಡು ಓಡೋಡಿ ಬರುತ್ತಿದ್ದರು."ನಿಮ್ಮಿಂದ ಈ ಕೆಲಸ ಆಗಬೇಕೆಂದು ಹಾವಾಡಿಗ ಮಹಾಸಂಸ್ಥಾನದವರ ಅಪ್ಪಣೆಯಾಗಿದೆ" ಎಂದು ಪಕ್ಕದ ರೂಮಿನಲ್ಲಿ ಕೂರಿಸಿಕೊಂಡು ನಮ್ಮ ಬಾವಯ್ಯ ಅವರಿಗೆಲ್ಲ ತಾಕೀತು ಮಾಡುತ್ತಿದ್ದ.
ಮಹಾಪ್ರಭುಗಳ ಅಪ್ಪಣೆ ಎಂದಮೇಲೆ ಕೇಳಬೇಕೇ? ನಡೆಸಿಕೊಡದಿದ್ದರೆ ನಾಳೆ ಸಮಾಜದಲ್ಲಿ ಯಾರು ತಮ್ಮನ್ನು ಕೀಳಾಗಿ ನೋಡ್ತಾರೋ ಎಂಬ ಅಳುಕಿನಿಂದ ಒಪ್ಪಿಸಿದ ಕೆಲಸವನ್ನು ಮರುಮಾತಿಲ್ಲದೆ, ಸಾಲವೋ ಸೋಲವೋ ಮಾಡಿಯಾದರೂ ನಡೆಸಿಕೊಡುತ್ತಿದ್ದರು. ಹೀಗಾಗಿ ಅವರಿಂದಲೂ ನಾವು ಹಣ ಪೀಕುತ್ತಿದ್ದೆವು.
ದಿವಾಳಿಯೆದ್ದ ಮಠದ ಖರೀದಿಗೆ ಹರಾಜಿನಂತಹ ಸ್ಥಿತಿ ಏರ್ಪಟ್ಟಾಗ, ಅನ್ಯ ಮಠಗಳು ಕೊಡಲಾರದ ಮೊತ್ತವನ್ನು ಕೊಡುವುದಾಗಿ ನಂಬಿಸಿ ಭಾಗಶಃ ಹಣವನ್ನೂ ಕೊಟ್ಟು, ಆ ಮಠವನ್ನು ವಹಿಸಿಕೊಂಡೆವು. ಹೊರನೋಟಕ್ಕೆ ಹಗಲು[ಕಾವಿ]ವೇಷದಲ್ಲಿ ಬಹಳ ಸುಭಗರೆನಿಸಿದ್ದ ನಾವು ಆ ಮಠದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದೆವು ಎಂದು ನಮ್ಮ ಹಳದೀ ತಾಲಿಬಾನ್ ಜನರನ್ನು ಅಲ್ಲಿಗೆ ಕಳಿಸಿ ಹೋಮ ಸುಟ್ಟಿದ್ದೇ ಸುಟ್ಟಿದ್ದು, ಗೋಮಯ ಹಾಕಿದ್ದೇ ಹಾಕಿದ್ದು.
ನಿಜ ಹೇಳಬೇಕೆಂದರೆ ಅಂತಹ ಹೋಮದ ಮತ್ತು ಗೋಮಯದ ಅಗತ್ಯ ನಮ್ಮ ಸಂಸ್ಥಾನದಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿದೆ. ಹೋದಲ್ಲೆಲ್ಲಾ ವೀರ್ಯಾಣು ತುಂಬಿರುವೆಡೆ ಸೀತೆಯ ಗಂಡ ಪೂಜೆಗೊಳ್ಳುವುದಾದರೂ ಹೇಗೆ? ಹೋಗಲಿಬಿಡಿ, ಶಿರಸಿ ಕಡೆಯ ಕೆಲವು ಹುಲುಮಾನವರು ’ಪ್ರಶಸ್ತಿ ಪ್ರಹಸನ’ ಎಂಬ ನಾಟಕವನ್ನು ಅಭಿನಯಿಸಿದ್ದಾರಂತೆ. ಅದರಲ್ಲಿ ಮಠಗಳ ರಾಜಕೀಯ, ಢೋಂಗಿ ಸನ್ಯಾಸಿಗಳು, ಕಪಟ ಸನ್ಯಾಸಿಗಳಿಗಿರುವ ಮಾಧ್ಯಮದ ತೆವಲು, ಪ್ರಚಾರ ಪಡೆದುಕೊಳ್ಳುವ ಹುನ್ನಾರಗಳು ಎಲ್ಲವನ್ನೂ ಅಭಿನಯಿಸಿದ್ದಾರಂತೆ. ಅದನ್ನು ಬ್ಯಾನ್ ಮಾಡಬೇಕೆಂದು ನಾವು ಬುಲ್-ಪೀನ ತಟ್ಟಿ ಘೋಷಿಸುತ್ತೇವೆ.
ನಾವು ಪಾತಾಳಕ್ಕೇ ಬಿದ್ದರೂ ನಮ್ಮ ಕಣ್ಣುಮಾತ್ರ ಆಕಾಶವನ್ನೇ ನೋಡುತ್ತಿರುತ್ತದೆ ಎಂಬುದನ್ನು ನೀವೆಲ್ಲ ಮರೆಯಬಾರದು. ನಾವು ಓವರ್ ಟೇಕ್ ಮಾಡಿದ ಮಠದವ ಕೆಲವು ಸಮಯದಿಂದ ಒಂದೇ ಸಮನೆ "ನಮಗೆ ವಾಪಸ್ ಕೊಡಿ", "ನಿಮ್ಮ ವ್ಯವಹಾರ ಸರಿಯಿಲ್ಲ, ನಮಗೇ ವಾಪಸ್ ಕೊಡಿ" ಎಂದು ಬೆನ್ನುಬಿದ್ದಿದ್ದ.
ಅಂತಹ ಪೀಡೆಗಳನ್ನೆಲ್ಲ ನಿವಾರಿಸಿಕೊಳ್ಳುವುದು ನಮಗ್ಯಾವ ಮಹಾ? ನಮ್ಮ ಹಳದೀ ತಾಲಿಬಾನ್ ಸದಸ್ಯರನ್ನು ಬಿಟ್ಟು,ಆತನ ಚಲನವಲನಗಳನ್ನು ನೋಡಿಕೊಂಡು ಅಪಹರಿಸಿಬಿಟ್ಟೆವು. ತಾನು ಸಂಕಷ್ಟದಲ್ಲಿ ಸಿಲುಕಿದ್ದೇನೆ ಎಂದು ತಿಳುಯೋದರೊಳಗೆ ಆತ ಶೋಕರಹಿತ ಜಾಗ ಎಂಬಲ್ಲಿ ಸೆರೆಯಾಗಿಬಿಟ್ಟ!
ಆತನ ಕೈಲಿ ಮೊಬೈಲ್ ಇತ್ತೆಂದು ನಮಗೆ ತಿಳಿದಿರಲಿಲ್ಲ. "ನನ್ನ ಅಪಹರಣವಾಗಿದೆ" ಎಂದು ಕೆಲವರಿಗೆ ಸುದ್ದಿ ಬಿಟ್ಟುಬಿಟ್ಟ ಅಂತ ಕಾಣುತ್ತದೆ. ಸುದ್ದಿ ಹಂಚುವ ದರಿದ್ರದವರ ವ್ಯಾಪಾರ ನಮ್ಮ ಕೆಲಸ ಅಷ್ಟು ಸುಲಭವಾಗಿ ಆಗಲಿಲ್ಲ. ಇಲ್ಲಾಂದರೆ ನಮಗೆ ಬೇಕಾದ ಕಡೆಗೆಲ್ಲ ಅವನಿಂದ ಸಹಿಗಳನ್ನು ಪಡೆದುಕೊಂಡು, ಮಗ್ಗುಲು ಮುರಿಯುವಂತೆ ನಾಲ್ಕು ತದುಕಿ ಅಟ್ಟಿಸಿ ಓಡಿಸುವಂತೆ ಮಾಡುತ್ತಿದ್ದೆವು.
ನಾವು ಹಿಂದೆ ದರ್ಪದಿಂದ ಕಾಲಿಟ್ಟಲ್ಲೆಲ್ಲ ಇತ್ತೀಚೆಗೆ ಹೀಗೇ ಆಗುತ್ತಿದೆ. ಕೆಲವು ದೇವಸ್ಥಾನಗಳು ಕೈತಪ್ಪಿ ಹೋದವು. ಈಗ ಈ ಮಠವೂ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ನಂತರ ಯಾವ್ಯಾವುದು ಕೈತಪ್ಪುವುದೋ ಆ ಮಹಾಬಲನೇ ಬಲ್ಲ. ಆದರೆ ಸದ್ಯಕ್ಕಂತೂ ’ನಾವು ಗಟ್ಟಿ ಇದ್ದೇವೆ’ ಎಂದೇ ಬೋರ್ಡು ಹಾಕಿ ಕೂತಿದ್ದೇವೆ. ಆ ಬೋರ್ಡು ಗಟ್ಟಿ ನೇತಾಡುವವರೆಗೆ ತಾಲೀಬಾನಿನವರು "ನಾವಿದ್ದೇವೆ". "ನಾವಿದ್ದೇವೆ" ಎನ್ನುತ್ತಿರುತ್ತಾರೆ; ಹೀಗಾಗಿ ಆ ಬೋರ್ಡು ಸುರಕ್ಷಿತವಾಗಿ ಬಾಗಿಲ ಮೇಲೆ ನೇತಾಡುತ್ತಿರುವಂತೆ ನೋಡಿಕೊಂಡಿದ್ದೇವೆ.
ಧರ್ಮವನ್ನು ಪುನರುತ್ಥಾನ ಮಾಡಿದ ಐತಿಹಾಸಿಕ ಸಾಧಕ ಸನ್ಯಾಸಿಗಳಿಗೆ ನಮ್ಮನ್ನು ಹೋಲಿಸುವ ಭಕ್ತ ಕುರಿಗಳು ಹಲವಿದ್ದಾವೆ. ಇನ್ನೂ ಕೆಲವು ಮಹಾನ್ ತಪಸ್ವಿಗಳಿಗೆ ನಮ್ಮನ್ನು ಹೋಲಿಸುತ್ತಾರೆ.
’ಪುಷ್ಪಕ ವಿಮಾನ’ ಸಿನಿಮಾದಲ್ಲಿ ಹೀರೋ ಕಮಲ್ ಹಾಸನ್ ಸುಂದರ ಪೆಟ್ಟಿಗೆಯೊಂದರಲ್ಲಿ ಕಕ್ಕವನ್ನು ತುಂಬಿ ಗಿಫ್ಟ್ ಕೊಡುತ್ತಾನಲ್ಲ? ಹಾಗೆ ನಾವೂ ಸಹ ಅಂತದೇ ’ಗಿಫ್ಟ್’ ಕೊಟ್ಟು, ನಮ್ಮ ಬಾವಯ್ಯ ಹೋಗಿ, "ಹಾವಾಡಿಗ ಮಹಾಸಂಸ್ಥಾನದವರು ಅನುಗ್ರಹಿಸಿದ ಧಾರವಾಡ ಪೇಡಾ ಪ್ರಸಾದ, ಎಲ್ಲರೂ ಭಕ್ತಿಯಿಂದ ಸ್ವೀಕರಿಸಿ ಹಂಚಿಕೊಳ್ಳಬೇಕೆಂದು ಅಪ್ಪಣೆಯಾಗಿದೆ" ಎಂದುಬಿಟ್ಟರೆ ಭಕ್ತಕುರಿಗಳೆಲ್ಲ ಅದನ್ನೇ ಪೇಡಾ ಪ್ರಸಾದವೆಂದು ತಿನ್ನುವುದರಲ್ಲಿ ನಮಗೆ ಅನುಮಾನವಿಲ್ಲ.
ನಮ್ಮ ಇಂತಹ ಸಾಧನೆಗಳನ್ನು ಕಂಡೇ ಅವರೆಲ್ಲ ಹಾಗೆ ಹೋಲಿಸಿರಬಹುದು. ಆದರೆ ನಾವು ಶೋಭರಾಜ್‍ಗೆ ಯಾವ ಲೆಕ್ಕದಲ್ಲೂ ಕಮ್ಮಿಯಿಲ್ಲ, ಅದಕ್ಕಿಂತ ದೊಡ್ಡ ಕ್ರಿಮಿನಲ್ ಐಡಿಯಾ ಇರುವವರು ಎಂಬುದು ಭಕ್ತ ಕುರಿಗಳಿಗೆ ಹೇಗೆ ಗೊತ್ತಾಗಬೇಕು? ಶ್ಶ್ ಶ್ಶ್ ... ಗೊತ್ತಾಗ್ಬಾರ್‍ದು ಗೊತ್ತಾಗ್ಬಾರ್‍ದು ಗೊತ್ತಾಗ್ಬಿಟ್ರೆ ನಮ್ಮ ಕೆಲಸ ಹೇಗೆ ನಡೀಬೇಕು, ಅಲ್ವೇ?
ನಾವು ಇಲ್ಲೀವರೆಗೆ ನಿಭಾಯಿಸಿದ ಎಲ್ಲಾ ವ್ಯವಹಾರಗಳನ್ನೂ ಬೇಕಾದರೆ ತೆಗೆದುನೋಡಿ, ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದೇವೆ ನಾವು, ಇನ್ನು ವಿಚಾರಣೆ ನಡೆಸುವವರಿಗೆ ಹೇಗೆ ಮಾಡಬೇಕೆಂಬುದು ನಮಗೆ ಗೊತ್ತಿಲ್ವಾ? ಹೀಗಾಗಿಯೇ ನಮ್ಮ ನಡತೆಗಳನ್ನು ಕೂಲಂಕಷವಾಗಿ ಅರಿತವರು ನಮ್ಮನ್ನು ಅತ್ಯಂತ ಗೌರವದಿಂದ "ಜಗದ್ಗುರು ಚಾರ್ಲ್ಸ್ ಶೋಭರಾಜಾಚಾರ್ಯ" ಎಂದು ಕರೆಯುತ್ತಿದ್ದಾರಂತೆ.

June 6
https://www.facebook.com/groups/1499395003680065/permalink/1624714531148111/

ಜಗದ್ಗುರು ಶೋಭರಾಚಾಚಾರ್ಯ ಹಾವಾಡಿಗ ಮಹಾಸಂಸ್ಥಾನ ಎಂದರೆ ದೊಡ್ಡ ಎಸ್.ಟಿ.ಡಿ ಬೂತ್
[ಇದು ವೈಜ್ಞಾನಿಕ ಮಾಹಿತಿಯುಳ್ಳ ಲೇಖನ, ಅಶ್ಲೀಲತೆ ಇಲ್ಲಿ ನಗಣ್ಯ]
"ನಾವು ಅವರ ಕ್ಲಿನಿಕ್ಕಿಗೆ ಟ್ರೀಟ್ ಮೆಂಟ್ ಸಲುವಾಗಿ ಹೋದಾಗ, ನಮಸ್ಕರಿಸಿಯೇ ನಮ್ಮನ್ನು ಸ್ವಾಗತಿಸಿದ್ದ ಶಿವಮೊಗ್ಗ ಜಿಲ್ಲೆಯ ಚರ್ಮ ವೈದ್ಯರೊಬ್ಬರು ನಮ್ಮ ಕಾಯಿಲೆಗಳ ಬಗ್ಗೆ ಪರೀಕ್ಷಿಸಿದ ನಂತರ ಕಂಗಾಲಾಗಿ ಹೋಗಿದ್ದರು. ಅವರ ಮುಖದಲ್ಲಿ ಯಾಕೆ ಅಂತಹ ಭಾವನೆ ಎಂದು ನಮಗೆ ಅರ್ಥವಾಗಿರಲಿಲ್ಲ.
ತೊಡೆಯ ಸಂದಿಯಲ್ಲಿ ಸನ್ಯಾಸಿಗೆ ಇಂತಹ ಕಪ್ಪು ವರ್ತುಲಗಳು ಹೇಗೆ ಮೂಡುತ್ತವೆ? ಸನ್ಯಾಸಿಯ ಶಿಶ್ನದಲ್ಲಿ ಈ ಸೋಂಕು ಹೇಗೆ ಕಾಣಿಸಿಕೊಂಡಿತು? ಪರಮಹಂಸ, ಪರಿವ್ರಾಜಕ, ಸರ್ವಸಂಗ ಪರಿತ್ಯಾಗಿ ಎನಿಸಿಕೊಂಡ ಸನ್ಯಾಸಿಗೆ ಇಂತಹ ಕಾಯಿಲೆಗಳು ಹೇಗೆ ಬರಲು ಸಾಧ್ಯ? ವೈದ್ಯರಲ್ಲಿ ಮೂಡಿದ ಸಂದೇಹಗಳು ಒಂದೆರಡಲ್ಲ. ನಮ್ಮಲ್ಲಿ ಅಂತದ್ದನ್ನು ಅವರು ನಿರೀಕ್ಷಿಸದಿದ್ದರಿಂದ ಕಂಗಾಲಾಗಿದ್ದರಷ್ಟೆ.
ಅನ್ಯ ಶರೀರದ ಸಂಪರ್ಕದ ಹೊರತು ಬೇರೆ ಯಾವ ಕಾರಣದಿಂದ ಈ ಕಾಯಿಲೆಗಳು ಬರಬಹುದು ಎಂದು ಅವರು ಅಂತರ್ಜಾಲದಲ್ಲಿ ಮಾಹಿತಿಗಾಗಿ ಹುಡುಕಾಡಿದ್ದರಂತೆ. ನಂತರ ಪರಿಚಿತ, ಪರಿಣತ ಹಿರಿಯ ವೈದ್ಯರಲ್ಲಿಯೂ ವಿಚಾರಿಸಿದ್ದರಂತೆ. ಬೇರಾವುದೇ ಕಾರಣದಿಂದ ಅಂತಹ ರೋಗಗಳು ಬರಲು ಸಾಧ್ಯವಿಲ್ಲ ಎಂಬುದನ್ನರಿತ ಅವರು ತಮ್ಮಲ್ಲೇ ವಿಷಾದದ ನಗೆ ನಕ್ಕು ಸುಮ್ಮನಾಗಿದ್ದರು.
ಏಕಾಂತಕ್ಕೆ ಬಂದ ವಿಜಯನಗರದ ಕಡೆಗಿನ ನಮ್ಮ ಭಕ್ತೆಗೆ ನಾವು ನಮ್ಮಲ್ಲಿದ್ದ ಹಲವು ರೋಗಗಳನ್ನು ಅನುಗ್ರಹಿಸಿದ್ದೇವೆ. ಅವಳೀಗ ಬಳಲುತ್ತಲೇ ಇದ್ದಾಳೆ; ನಮ್ಮ ಪವಾಡದಿಂದ ವಾಸಿಯಾಗಲಿಲ್ಲ. ತನಗೇನಾದರೂ ಆಗಲಿ ತನ್ನ ಸರ್ಪಾಸ್ತ್ರ ಗುರು ಮಾತ್ರ ಚೆನ್ನಾಗಿರಲಿ ಎಂದು ಬಯಸುವ ಆ ಮುಗ್ಧೆ ನಮ್ಮಮೇಲೆ ಆಪಾದನೆ ಬಂದಾಗ ಮುಂದೇನು ಮಾಡ್ತೀರಿ? ಹೇಗೆ ತಪ್ಪಿಸಿಕೊಳ್ತೀರಿ? ಎಂದು ಪೋನಾಯಿಸಿದ್ದಳು. "ನೋಡ್ತಾ ಇರು ನಾವು ದೋಷಮುಕ್ತರಾಗಿ ಬರ್ತೇವೆ, ಏನೂ ಚಿಂತಿಸಬೇಡ, ಮತ್ತೆ ಅನುಕೂಲವಾದಾಗ ದರ್ಶನಕ್ಕೆ ಬಾ" ಎಂದು ಹೇಳಿದ್ದೇವೆ.
ಎಸ್.ಟಿ.ಡಿ ಎಂಬ ಪದ ಕಿವಿಗೆ ಬಿದ್ದ ತಕ್ಷಣ ನಮ್ಮ ಸಮಾಜದವರಿಗೆ ನೆನಪಾಗೋದು ದೂರದ ಟೆಲಿಫೋನ್ ಕಾಲ್. ಹಳ್ಳಿಗಳಿಂದ ತಮ್ಮ ಮಕ್ಕಳನ್ನು ಮಹಾನಗರಗಳಿಗೆ ಓದಲೋ, ನೌಕರಿಗೋ ಕಳಿಸಿದ ನಮ್ಮಜನ, ಮಕ್ಕಳೊಡನೆ ಸಂವಹಿಸಲು ದಶಕದ ಹಿಂದೆ ಬಳಸುತ್ತಿದ್ದುದು ಎಸ್.ಟಿ.ಡಿ ಸೌಲಭ್ಯ. ಮದುವೆಯಾಗಿ ಗಂಡನೊಟ್ಟಿಗೆ ದೂರ ಪ್ರದೇಶಗಳಲ್ಲಿ ನೆಲೆಸಿದ ಮಗಳನ್ನು ಸಂಪರ್ಕಿಸಲೂ ಅದೇ ಬಳಕೆಯಾಗುತ್ತಿತ್ತು. ಅದನ್ನು ಬಿಟ್ಟರೆ ಎಸ್.ಟಿ.ಡಿ ಎಂಬ ಪದದ ಉಳಿದ ಅರ್ಥ ವಿಸ್ತರಣೆ ತಿಳಿಯಿದ ಮುಗ್ಧಜನ ನಮ್ಮವರು.
ಈಗ ದೂರವಾಣಿ ಸಂಬಂಧಿಸದ ಎಸ್.ಟಿ.ಡಿ ಎಂದರೇನು ಎಂದು ನೋಡೋಣ. ಎಸ್.ಟಿ.ಡಿ ಎಂದರೆ ಸೆಕ್ಸ್ವಲಿ ಟ್ರಾನ್ಸ್‍ಮಿಟೆಡ್ ಡಿಸೀಸ್ ಅಂತ; ಅಂದರೆ ಲೈಂಗಿಕ ಕ್ರಿಯೆಯಿಂದ ಸಾಂಸರ್ಗಿಕವಾಗಿ ಹರಡುವ ಗುಹ್ಯ ರೋಗ ಎಂದರ್ಥ.
ಲೈಂಗಿಕ ಕ್ರಿಯೆ ಇಲ್ಲವೇ ಲೈಂಗಿಕ ಚಟುವಟಿಕೆಗಳ ಮೂಲಕ ಹರಡುವ ಕಾಯಿಲೆಗಳನ್ನು ಲೈಂಗಿಕ ಕಾಯಿಲೆಗಳು [ Sexually Transmitted Diseases ]ಅಥವಾ S.T.D ಎಂದು ಕರೆಯುತ್ತಾರೆ. ಈ ಕಾಯಿಲೆಗಳನ್ನು ಹಿಂದೆ Venereal Diseases ಎಂದು ಕರೆಯುತ್ತಿದ್ದರು.
ಲೈಂಗಿಕ ಕಾಯಿಲೆಗಳು ಮುಖ್ಯವಾಗಿ ನಾಲ್ಕು ವಿಧಗಳಿಂದ ಹರಡುತ್ತವೆ.
೧. ಯೋನಿ ಇಲ್ಲವೇ ಗುದ ಸಂಭೋಗ
೨. ಬಾಯಿಯಿಂದ ಬಾಯಿಗೆ ಆಳವಾದ ಚುಂಬನ
೩. ಯೋನಿ, ಶಿಶ್ನ ಇಲ್ಲವೇ ಗುದಕ್ಕೆ ಮುಖ ಮೈಥುನ
೪. ಮುಖ, ಶಿಶ್ನ ಅಥವಾ ಯೋನಿ ಕಾಯಿಲೆಯಿರುವ ಚರ್ಮದೊಂದಿಗೆ ಸ್ಪರ್ಶ.
[ಇದೆಲ್ಲ ನಮಗೊಂದು ರೀತಿ ಮಾರ್ಷಿಯಲ್ ಆರ್ಟ್ಸ್ ಇದ್ದಹಾಗೆ, ಇವೆಲ್ಲದರಲ್ಲೂ ನಾವು ಎಕ್ಸ್‍ಪರ್ಟ್ ಇದ್ದು, ವಿಕೃತ ಕಾಮಕ್ಕೆ ಗೌರವ ಡಾಕ್ಟರೇಟ್ ಕೊಡುವುದಾದರೆ ಅದು ಪ್ರಥಮವಾಗಿ ನಮಗೇ ಸಲ್ಲಬೇಕು. ಯಾಕೆಂದರೆ ಋತುಸ್ರಾವವನ್ನು ಅನುಭವಿಸುತ್ತಿರುವ ಮಹಿಳೆಯರನ್ನೂ ಸಹ ಒತ್ತಡಹಾಕಿ ಏಕಾಂತಕ್ಕೆ ಕರೆಯುತ್ತೇವೆ ನಾವು.
ಋತುಸ್ರಾವದ ಸಮಯದಲ್ಲಿ ಮಹಿಳೆ ದೈಹಿಕ ನೋವು, ಹತಾಶೆ ಮೊದಲಾದವುಗಳನ್ನು ಅನುಭವಿಸುತ್ತ ದುರ್ಬಲೆಯಗಿರುತ್ತಾಳೆ ಎಂದು ಹಿಂದಿನವರು ನಾಲ್ಕು ದಿನ ಬಹಿಷ್ಠೆಯಾಗಿರು ಎಂದು ಶಾಸ್ತ್ರ ಮಾಡಿದರು; ಆ ಸಮಯ ಅಸಹ್ಯವೆಂಬಂತೆ ನಡೆದುಕೊಳ್ಳುವ ಗಂಡಂದಿರು ಕೂಡ ತಮ್ಮ ಹೆಂಡಂತಿಯನ್ನು ಮುಟ್ಟುತ್ತಿರಲಿಲ್ಲ. ಆದರೆ ಕಾವಿ[ಹಗಲು]ವೇಷದ ನಮಗೆ ಈ ನಿಯಮ ಅನ್ವಯಿಸುವುದಿಲ್ಲ.]
ಕೆಲವು ಲೈಂಗಿಕ ಕಾಯಿಲೆಗಳು ತೀವ್ರವಾದ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೆ ಕಾರಣವಾಗಬಹುದು. ಅದರಲ್ಲೂ ಏಡ್ಸ್, ಹೆಪಟಿಟಿಸ್ ಮತ್ತು ಹರ್ಪಿಸ್ ಕಾಯಿಲೆಗಳಿಗೆ ಸದ್ಯಕ್ಕೆ ಯಾವುದೇ ಚಿಕಿತ್ಸೆಗಳಿಲ್ಲ. ಮುಂಜಾಗರುಕತೆ ವಹಿಸುವುದೇ ಇದಕ್ಕಿರುವ ಸದ್ಯದ ದಾರಿ. ಆದರೂ ಲೈಂಗಿಕ ರೋಗಗಳು ಇತ್ತೀಚೆಗೆ ತೀವ್ರ ಗತಿಯಲ್ಲಿ ಹರಡುತ್ತಿರುವುದಂತು ಸತ್ಯ.
ಲೈಂಗಿಕ ಕಾಯಿಲೆಗಳ ಯಾದಿ ಇಲ್ಲಿದೆ-
೧. ಜನನೇಂದ್ರಿಯಗಳ ಮೇಲೆ ಗಾಯ, ಹುಣ್ಣುಗಳಾಗುವ ಲೈಂಗಿಕ ಕಾಯಿಲೆಗಳು
ಲೈಂಗಿಕ ಹರ್ಪಿಸ್ ಕಾಯಿಲೆ [herpes]
ಸಿಪಿಲಿಸ್ [Syphilis ]
ಲಿಂಪೋಗ್ರಾನುಲೋಮ ವೇನೇರಿಯಂ [Lymphogranuloma Venereum ]
ಷಾಂಕ್ರಾಯಿಡ್ [Chancroid ]
೨. ಚರ್ಮದ ಮೇಲೆ ಕಾಣುವ ಕಾಯಿಲೆಗಳು
ಲೈಂಗಿಕ ನರೂಲಿ ಅಥವಾ ನರೆಹುಲಿ [Genital Warts ]
೩. ಗೋನೋಕಾಕ್ಕಲ್ ಕಾಯಿಲೆಗಳು; ಗನೋರಿಯಾ [Gonorrhea ]
೪. ಕ್ಲಾಮಿಡಿಯಾ ಕಾಯಿಲೆಗಳು
೫. ಹೊರ ಪರ ಪಿಂಡಿಕ [Parasitic ]
ಗುಂಜಲುವಿನ ಹೇನು [pubic lice] ಕಜ್ಜಿ [ Scabies ]
೬. ಚಲ್ಕಣಬೇನೆ [AMOEBIASIS]
೭. ಯೋನಿಯ ಉರಿಯೂತಗಳು
ಟ್ರ್ಕೋಮೊನಿಯಾಸ್ [Trichomoniasis ]
ಹುದುಗು [vaginal Yeast infections ]
೮. ಕಿಳ್ಗುಳಿಯ ಉರಿಯೂತ [pelvic inflammatory Disease ]
ಕ್ರಿಸ್ಟೊಫರ್ ಕೋಲಂಬಸ್ ಅಮೆರಿಕ ಕಂಡುಹಿಡಿದದ್ದು ಇತಿಹಾಸದ ಪುಟಗಳಲ್ಲಿ ಬರೆಯಲ್ಪಟ್ಟ ಬಹು ಮುಖ್ಯ ಘಟನೆ. ಆದರೆ ಕೋಲಂಬಸ್ ಮತ್ತು ಅವನ ತಂಡದವರು ಸಾಹಸಮಯ ಚಾರಿತ್ರಿಕ ಯಾತ್ರೆಯನ್ನು ಪೂರೈಸಿ 1492ರಲ್ಲಿ ತಾಯ್ನಾದಿಗೆ ಹಿಂತಿರುಗಿದ ವೇಳೆ ‘ಸಿಫಿಲಿಸ್~ ರೋಗ ಹರಡುವಿಕೆಗೂ ಕಾರಣರಾದರು ಎನ್ನುತ್ತದೆ ಹೊಸ ಅಧ್ಯಯನ.
‘ಟ್ರೆಪೊನಿಮಾ ಪಲ್ಲಿಡಮ್’ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಈ ಕಾಯಿಲೆಗೆ ಔಷಧ ಕಂಡುಹಿಡಿಯಲಾಗಿದ್ದರೂ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಹೃದಯ, ಮಿದುಳು, ಕಣ್ಣು ಮತ್ತು ಮೂಳೆಗೆ ಹಾನಿಯಾಗುವ ಸಾಧ್ಯತೆ ಇದೆಯಂತೆ.
ಇನ್ನು, ಪ್ರಜನನಾಂಗಗಳ ಮೇಲೆ ಚರ್ಮ ಮತ್ತು ಲೋಳೆಪದರಗಳಲ್ಲಿ ಉಂಟಾಗುವ ಮೃದುವಾದ ಗುಳ್ಳೆಗಳನ್ನು ಪ್ರಜನನಾಂಗದ ಗುಳ್ಳೆ ಎನ್ನುವರು. ಲೈಂಗಿಕ ಸಂಪರ್ಕದಿಂದ ’ಹ್ಯೂಮನ್ ಪ್ಯಾಪಿಲ್ಲೋಮ’ಎಂಬ ವೈರಸ್ ನ ಸೋಂಕಿನಿಂದ ಈ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
ಹೆಚ್.ಐ.ವಿ ಸೋಂಕು ಹರಡುವ ವಿಧಾನಗಳು ಹೀಗಿವೆ-
* ಸೋಂಕಿತ ವ್ಯಕ್ತಿ ಜೊತೆ ಲೈಂಗಿಕ ಸಂಪರ್ಕ
* ಸೋಂಕಿತ ರಕ್ತಪೂರಣ
* ಸೂಜಿ,ಸಿರಿಂಜುಗಳನ್ನು ಸೋಂಕಿತ ವ್ಯಕ್ತಿಗಳ ಜೊತೆ ಹಂಚಿಕೊಳ್ಳುವುದು
* ಸೋಂಕಿತ ತಾಯಿಯಿಂದ ಭ್ರೂಣಕ್ಕೆ ಜರಾಯುವಿನ ಮೂಲಕ
ರೋಗಗಳ ಬಗ್ಗೆ ಹೆಚ್ಚಿನ ವಿವರಣೆ ನೀಡುವ ಅಗತ್ಯ ಇಲ್ಲಿಲ್ಲ. ಮನುಷ್ಯ ಪ್ರಜನನಾಂಗ/ಗುಹ್ಯ ಎಂಬುದು ಅತ್ಯಂತ ಸೂಕ್ಷ್ಮ ಸಂವೇದೀ ಅಂಗ. ಕಾಮಾಸಕ್ತರಾದಾಗ ಹೆಚ್ಚಿನ ಪ್ರಮಾಣದಲ್ಲಿ ರಕ್ತಪರಿಚಲನೆ ಇಲ್ಲಿ ಉಂಟಾಗುತ್ತದೆ, ಜೊತೆಗೆ ಹಲವು ಜೀವದ್ರವಗಳೂ ಸ್ರವಿಸಲ್ಪಡುತ್ತವೆ. ಇವೆಲ್ಲ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಇಲ್ಲಿ ಹಲವು ರೀತಿಯ ಬ್ಯಾಕ್ಟೀರಿಯಾಗಳು ಇರುತ್ತವೆ.
ನಿರೋಗಿಯಾದ ಗಂಡು ಮತ್ತು ಹೆಣ್ಣು ಸೇರುವುದರಿಂದ ಯಾವುದೇ ತೊಂದರೆಯೂ ಆಗುವುದಿಲ್ಲ; ಆದರೆ ’ದೇಶೋದ್ಧಾರ’ಕ್ಕೆ ನಮ್ಮಂತಹ ಸುಪುತ್ರರು ಜನಿಸಬಹುದಷ್ಟೆ. ಯಾವಾಗ ವ್ಯಕ್ತಿಯ ದೈಹಿಕ ಸಂಬಂಧ ಒಬ್ಬರಿಗಿಂತ ಹೆಚ್ಚಿನ ನಿರೋಗಿಯೊಡನೆ ನಡೆಯುತ್ತದೋ ಆಗ ಬ್ಯಾಕ್ಟೀರಿಯಾಗಳ ಬೀಗತನದಲ್ಲಿ ಜಗಳ ಆರಂಭವಾಗುತ್ತದೆ. ಬ್ಯಾಕ್ಟೀರಿಯಾಗಳ ನಡತೆಯಲ್ಲಿ ವ್ಯತ್ಯಯ ಉಂಟಾದಾಗ ಅವೇ ವೈರಾಣುಗಳಾಗಿ ಮಾರ್ಪಡುತ್ತವೆ.
ಹೀಗಾಗಿ, ಜೀವಶಾಸ್ತ್ರದ ಪ್ರಕಾರ ಮನುಷ್ಯ ಪ್ರಾಣಿವರ್ಗಕ್ಕೇ ಸೇರಿದ್ದರೂ, ಉಳಿದ ಪ್ರಾಣಿಗಳಂತೆ ಹಲವು ತಾತ್ಕಾಲಿಕ ಸಂಗಾತಿಗಳನ್ನು ರೆಡಿ ಮಾಡಿಕೊಂಡು ರತಿಕ್ರೀಡೆಯಲ್ಲಿ ನಿರತನಾ/ಳಾಗುವಂತಿಲ್ಲ. ಇದನ್ನೆಲ್ಲ ಮನಗಂಡ ಭಾರತೀಯ ಋಷಿಗಳು ಆರೋಗ್ಯಕರ ಬದುಕಿಗಾಗಿ ’ಕುಟುಂಬ’ ಎಂಬ ಜೀವನ ವಿಧಾನವನ್ನು ರೂಪಿಸಿದರು.
ಕುಟುಂಬದ ನಿಯಮಗಳೆಲ್ಲ ನಿಮಗೆ ಹೇಳಿದ್ದೇ ಹೊರತು ಕಪಟ ಸನ್ಯಾಸಿಯಾದ ನಮಗೆ ಇದೆಲ್ಲ ಅನ್ವಯಿಸುವುದಿಲ್ಲ. ಹೀಗಾಗಿ ನಾವು ನೂರರ ಮೇರೆಯನ್ನೂ ಮೀರಿ ಹಾರುತ್ತಲೇ ಇದ್ದೇವೆ. ಕಾಯಿಲೆಗಳ ಗೂಡಾಗಿದ್ದೇವೆ;ಹೊರಗೆ ಕಾಣಿಸುತ್ತಿಲ್ಲ ಅಷ್ಟೆ.
೨೦೦೯-೧೦ ರಲ್ಲಿ ನಾವು ಹಲವು ದಿನಗಳ ಕಾಲ ಯಾರಿಗೂ ಸಿಗಲೇ ಇಲ್ಲ; ಕಾರಣ ನಮ್ಮ ಅನಾರೋಗ್ಯ. ಅನಾರೋಗ್ಯ ಯಾವುದೆಂದು ಕೇಳಬೇಡಿ, ಅದು ಇದೇ ಅನಾರೋಗ್ಯ. ಜನರೆಲ್ಲ ಎಲ್ಲೆಲ್ಲೋ ಹುಡುಕಿದರೂ ನಾವು ಗುಪ್ತ ಜಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆವು.
ಶಿರಸಿ ಕಡೆಯ ಚರ್ಮವೈದ್ಯರಲ್ಲೂ ನಾವು ಹೋಗಿದ್ದೆವು. ದಕ್ಷಿಣ ಕನ್ನಡದ ವೈದ್ಯರಲ್ಲೂ ನಾವು ಚಿಕಿತ್ಸೆ ಪಡೆದಿದ್ದೆವು, ಉತ್ತರ ಭಾರತ ಮತ್ತು ಪಶ್ಚಿಮ ಭಾರತದಲ್ಲೂ ನಾವು ಚಿಕಿತ್ಸೆ ಪಡೆದಿದ್ದಿದೆ. ನಾವು ಚಿಕಿತ್ಸೆ ಪಡೆದುಕೊಂಡ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವುದರಿಂದಲೂ ಮತ್ತು ವೈದ್ಯರು ರೋಗಿಯ ಗೋಪ್ಯತೆ ಕಾಪಾಡಬೇಕೆಂಬ ನಿಯಮ ಇರುವುದರಿಂದಲೂ ನಮ್ಮ ವಿಷಯ ಬಹಿರಂಗಗೊಳ್ಳಲಿಲ್ಲ ಅಷ್ಟೆ.
ಏಕಾಂತದ ವಿಶ್ವರೂಪ ದರ್ಶನದಲ್ಲಿ ನಮ್ಮನ್ನೇ ದೇವರೆಂದು ನಂಬಿ, ’ದೇವರಿಗೆ’ ತಮ್ಮ ಮೈ ಅರ್ಪಿಸಿಕೊಂಡ ಮತ್ತು ಅರ್ಪಿಸಿಕೊಳ್ಳುತ್ತಿರುವ ಹಲವು ಮಹಿಳೆಯರಿಗೆ, ಕೆಲವು ಪಿಜಿ ಹೆಣ್ಣುಮಕ್ಕಳಿಗೆ ಈಗಾಗಲೇ ಕೆಲವು ಎಸ್.ಟಿ.ಡಿ ಗಳನ್ನು ನಾವು ಅನುಗ್ರಹಿಸಿದ್ದೇವೆ.
ಮೊದಮೊದಲು ಸರ್ಪಾಸ್ತ್ರ ಪ್ರಯೋಗಕ್ಕೆ ಒಪ್ಪದ ಕೆಲವು ಮಹಿಳೆಯರೂ ಸಹ, ಸರ್ಪಾಸ್ತ್ರ ಪ್ರಯೋಗಕ್ಕೆ ಒಳಗಾಗಿ ನಮ್ಮಿಂದ ಆರ್ಥಿಕ ಸಹಾಯವನ್ನು [ಸುವರ್ಣ ಮಂತ್ರಾಕ್ಷತೆ ಎನ್ನುತ್ತೇವೆ ನಾವು] ಪಡೆದುಕೊಂಡಿದ್ದನ್ನು ಕಂಡ ನಂತರ, ಅಂತಹ ಆಮಿಷಕ್ಕೊಳಗಾಗಿ ಒಪ್ಪಿಕೊಂಡು ದರ್ಶನ ಪಡೆದಿದ್ದಾರೆ. ಕೌಂಟುಂಬಿಕ ಘನತೆ ಗೌರವ ಹಾಳಾಗುವ ಪ್ರಮೇಯದಿಂದ ಅವರ್ಯಾರೂ ನಮ್ಮ ವಿರುದ್ಧ ದೂರು ನೀಡುವುದಿಲ್ಲ ಎಂಬುದನ್ನು ನಾವು ಎಂದೋ ಮನದಟ್ಟು ಮಾಡಿಕೊಂಡಿದ್ದೇವೆ.
ವಿಚಾರಣೆ ನಡೆಸುವವರು ಪ್ರಮುಖ ಪರೀಕ್ಷೆಗಳಿಗೆ ನಮ್ಮನ್ನು ಒಡ್ಡಿದರೆ ಸಿಕ್ಕಿ ಬೀಳುವುದಂತೂ ಗ್ಯಾರಂಟಿ ಎಂಬುದೂ ಸಹ ನಮಗೆ ಗೊತ್ತಿದೆ. ನಮ್ಮಲ್ಲಿರುವ ಗುಹ್ಯರೋಗಗಳ ನಿವಾರಣೆಗೆ ನಾವು ಈ ನಡುವೆ ಬಹಳ ಪ್ರಯತ್ನ ನಡೆಸಿದ್ದೇವೆ. ಹಲವಾರು ವಿದೇಶೀ ಚುಚ್ಚುಮದ್ದು ಮತ್ತು ಲಸಿಕೆಗಳನ್ನು ತೆಗೆದುಕೊಂಡಿದ್ದೇವೆ. ಆದರೂ ಕೆಲವು ರೋಗಗಳು ಸಂಪೂರ್ಣವಾಗಿ ವಾಸಿ ಆಗುವ ಲಕ್ಷಣ ಕಾಣುತ್ತಿಲ್ಲ.
ಪರೀಕ್ಷಿಸಿದವರು ನಾವು ಹೇಳಿದ ಹಾಗೆ ಕೇಳೋದಾದರೆ ನಮ್ಮದೇನೂ ಅಭ್ಯಂತರವಿರಲಿಲ್ಲ; ಆದರೆ ಅವರು ಹಾಗೆ ಮಾಡದೆಯೂ ಇರಬಹುದಲ್ಲ? ಮೊದಲೇ ನಮ್ಮ ಖಜಾನೆ ಬರಿದಾಗಿರೋದರಿಂದ ನಮ್ಮ ಬಾವಯ್ಯ ಎತ್ತುವಳಿಗಾಗಿ ಹೊಸ ಗೊತ್ತುವಳಿ ಯೋಜನೆಯನ್ನು ಹಮ್ಮಿಕೊಂಡು ಯಕ್ಷಗಾನದ ಭಾಷೆಯಲ್ಲಿ ಹೇಳುವುದದರೆ ಗೇಟ್ ಕಲೆಕ್ಷನ್ ಆಗದೇ ಮಿಕಿಮಿಕಿ ನೋಡುತ್ತಿದ್ದಾನೆ.

June 07
https://www.facebook.com/groups/1499395003680065/permalink/1624914254461472

ಅಕ್ಕಯ್ಯಂದಿರು ಬಾವಯ್ಯನ ಪೂಜೆ ಮಾಡಲು ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ.
"ಗುರುಮಂದಿರದಲ್ಲಿ ಸದಾ ಏನಾದರೂ ಚಟುವಟಿಕೆಗಳು ನಡೆಯುತ್ತಿರಬೇಕೆಂಬ ಭಾವನೆ ಗುರುಭಕ್ತರಲ್ಲಿರುತ್ತದೆ. ಆದರೆ ನಮ್ಮಲ್ಲಿ ಅದು ಆಧ್ಯಾತ್ಮಿಕ ಚಟುವಟಿಕೆಗೇ ಮೀಸಲಾಗಿರಬೇಕೆಂದಿಲ್ಲ. ನಮ್ಮ ಲೈನಿನಲ್ಲಿರುವ ಕೆಲವರು ಪಂಚಾಗ್ನಿ ತಪಸ್ಸನ್ನು ಆಚರಿಸಿ ಜಗತ್ತಿನ ಕಣ್ತೆರೆಸಿದರು.
ಅಂತದ್ದೇನಾದರೂ ಮಾಡಿದರೆ ಜನ ಬರ್ತಾರೆ ಐವತ್ತು ಸಾವಿರಕ್ಕೂ ಅಧಿಕ ಹಣ ಕೊಟ್ಟು ಸೇವೆ ಮಾಡ್ತಾರೆ ಅಂತ ನಮ್ಮ ಬಾವಯ್ಯ ಹೇಳಿದ. ಈ ಜಗತ್ತೇ ಹಾಗೆ ಕಣ್ರೀ....ನೀವು ಎಷ್ಟೇ ಕುಲಗೆಟ್ಟು ಹೋಗಿದ್ರೂ ಒಂದಷ್ಟು ಜನ ನಿಮಗೆ ಜೈಕಾರ ಹಾಕ್ತಾನೇ ಇರ್ತಾರೆ. ಅವರದು ಕುರುಡು ಅಭಿಮಾನ.
ನಾವು ಇದನ್ನೆಲ್ಲ ತಿಳ್ಕೊಳ್ಳೋದಕ್ಕೆ ಪಿಜಿ ಡಿಗ್ರಿ ಪಡೆದವರಿಗಿಂತ ಎಕ್ಸ್ ಪರ್ಟು. ಜನರ ನಾಡಿಮಿಡಿತ ಅಂತಾರಲ್ಲ ಅದನ್ನು ನಾವು ಸದಾ ತಿಳಿದುಕೊಳ್ತೇವೆ. ಈಗ ಎಷ್ಟು ಜನ ನಮ್ಮ ವಿರುದ್ಧ ತುರುಗಿಬಿದ್ದಿದ್ದಾರೆ ಎಂಬುದೂ ಸಹ ನಮಗೆ ಗೊತ್ತು. ಆದರೂ ಎಲ್ಲರೂ ನಮ್ಮೊಂದಿಗೇ ಇದ್ದಾರೆ ಎಂದು ಬಿಂಬಿಸುವುದು ನಮ್ಮ ಆದ್ಯತೆ.
ಯಾವ ಯೋಜನೆಗೂ ಜನ ಬರದಾಗ ಮತ್ತು ಎಲ್ಲಾದರೂ ಜನರನ್ನು ಕರೆಸಿ ಸಮ್ಮೋಹನ ಗೊಳಿಸಬೇಕೆಂಬ ವಿಚಾರ ಬಂದಾಗ ನಮಗೆ ಬಾವಯ್ಯ ಸಲಹಾ ಮಂಡಳಿ ನೀಡಿದ ಸಲಹೆಯೇ ಬಾವಯ್ಯ ಪೂಜೆ. ನಾವು ಅಕ್ಕಯಂದಿರ ಪೂಜೆಯನ್ನು ನಿತ್ಯ ತ್ರಿಕಾಲದ ಕೈಂಕರ್ಯವಾಗಿ ಮಾಡಿಕೊಂಡಿದ್ದರೂ ಅದನ್ನೆಲ್ಲ ಎಲ್ಲರ ಎದುರಿಗೆ ಹೇಳಲಾಗುವುದೇ? ಛೆ ಛೆ ನಮ್ಮ ಘತನೆಯೇನು? ಸ್ಥಾನಮಾನವೇನು?
ಯಾರನ್ನು ಹಿಡಿದು ಎಲ್ಲಿಗೆ ಹೋದರೆ ಅಲ್ಲಿ ಪ್ರಮುಖ ರಾಜಕಾರಣಿಗಳನ್ನು ಕಂಡು ಅವರಿಗೊಂದು ಶಾಲು ಹೊದೆಸಿದ ನೆಪದಲ್ಲಿ ಅದರಲ್ಲೇ ಒಂದಷ್ಟು ’ಮಂತ್ರಾಕ್ಷತೆ’ ಎಸೆದು ಸೆಂಟಿಮೆಂಟ್ಸ್ ಆರಂಭಿಸಬಹುದು ಎಂದು ಯೋಚಿಸುತ್ತೇವೆ ನಾವು. ಅಂದಹಾಗೆ ನಮ್ಮಲ್ಲಿ ಕೆಲವು ರಾಜಕಾರಣಿಗಳೂ ಬಡ್ಡಿರಹಿತ ಹಣ ಹೂಡಿಕೆ ಮಾಡಿದ್ದರು. ನಮ್ಮಲ್ಲಿ ಇಟ್ಟುಬಿಟ್ಟರೆ ಸ್ವಿಸ್ ಬ್ಯಾಂಕಿಗಿಂತ ಸೇಫು.
ಕಳೆದವರ್ಷ ಆನೆಮರಿಯ ಇಮ್ಮಡಿ ವಿಶ್ವೇಶ್ವರಯ್ಯನವರು ನಿದ್ದೆ ನಾಮಯ್ಯನನ್ನು ನಮಗೆ ಭೇಟಿ ಮಾಡಿಸಿದ್ದರು. ಅದಾದ ಎರಡು ಮೂರು ತಿಂಗಳಿಗೆ ಆ ಭೇಟಿ ಬಹಳ ಉಪಕಾರಕ್ಕೆ ಬಂತು ನಮಗೆ. ಆದರೆ ಅವರು ನಮ್ಮಲ್ಲಿ ಹಣಹೂಡಿಕೆ ಮಾಡಲಿಲ್ಲ. ಹಿಂದಿನ ಒಂದಿಬ್ಬರು ನಮ್ಮಲ್ಲಿ ವ್ಯವಹಾರ ಇರಿಸಿಕೊಂಡಿದ್ದರು. ಆಗಾಗ ನಮ್ಮಲ್ಲಿಗೆ ಬರುತ್ತಿದ್ದರು, ವೇದಿಕೆಯಲ್ಲಿ ಎಲ್ಲಿಲ್ಲದ ಭಕ್ತಿಯನ್ನು ಪ್ರದರ್ಶಿಸುತ್ತಿದ್ದರು-ಜನ ನೋಡಬೇಕಲ್ಲ ಅದಕ್ಕೆ. ವೋಟೂ ಸಿಗಬೇಕು ಕಪ್ಪುಹಣವೂ ಸೇಫಾಗಬೇಕು.
ಈಗ ಅಂತವರು ಯಾರೂ ಬರುತ್ತಿಲ್ಲ. ಹಣ ಹೂಡಿಕೆ ಮಾಡಿದವರು ವಾಪಸ್ ಕೇಳುತ್ತಲೇ ಇದ್ದಾರೆ ಆದರೆ ನಮಗೆ ಮರಳಿಸಲು ಸಾಧ್ಯವಾಗುತ್ತಿಲ್ಲ. ಅಧಿಕೃತವಾಗಿ ಅವರು ನಮ್ಮ ಮೇಲೆ ಕ್ರಮ ಜರುಗಿಸುವಂತಿಲ್ಲ ಆದರೆ ಅನಧಿಕೃತವಾಗಿ ಯಾವ ಕ್ರಮವನ್ನು ಬೇಕಾದರೂ ಜರುಗಿಸಬಹುದು. ಹಾಗೊಮ್ಮೆ ಕ್ರಮ ಜರುಗಿಸಿದರೆ ಅವರ ಹಣ ಮರಳಿ ಸಿಗುತ್ತದೆಯೇ? ಇಲ್ಲ. ನಾವು ಇದ್ದರೆ ಮಾತ್ರ ಅವರ ಹಣ ವಾಪಸ್ ಕೊಡುತ್ತೇವೆ ಎಂದು ನಾವು ಹೇಳಿದ್ದೇವೆ. ಹಾಗಾಗಿ ಅವರೆಲ್ಲರೂ ನಮ್ಮ ಹಿಂದೆ ನಮ್ಮ ಬೆಂಬಲಕ್ಕೆ ನಿಂತುಬಿಟ್ಟಿದ್ದಾರೆ.
ನಾವು ಇರಿಸಿಕೊಂಡ ಹಣದಲ್ಲಿ ಕೆಲವು ಪಾಲನ್ನು ನಾವು ಬೇಟೆನಾಯಿಗಳಂತೆ ಸಾಕಿಕೊಂಡ ಕೆಲವು ಉದ್ಯಮಿಗಳಿಗೆ ನೀಡಿದ್ದೇವೆ. ಅವರಲ್ಲಿ ಕೆಲವರು ಪಡೆದುಕೊಂಡಿದ್ದನ್ನು ಮರಳಿಸಬೇಕಾಗುತ್ತದೆಂದು ಆದಷ್ಟೂ ಪರೋಕ್ಷವಾಗಿ ನಮ್ಮ ವಿರುದ್ಧವೇ ಇದ್ದಾರೆ ಈಗ. ಎದುರಿಗೆ ಮಾತ್ರ ಜೈ ಎನ್ನುತ್ತಾರೆ. ಅವರಿಗೂ ಗೊತ್ತು, ನಾಳೆ ತಮ್ಮ ಕಾಲಬುಡದ ವರೆಗೂ ಬರುವ ವ್ಯವಹಾರ ಇದು. ಆದಷ್ಟೂ ಹೇಗಾದರೂ ಮಾಡಿ ಬೀಳುವ ಕುಣಿಕೆಯಿಂದ ಜಾರಿಕೊಳ್ಳಬೇಕು ಎಂದು ಅವರ ಯೋಚನೆ.
ಈ ಜಗತ್ತಿನಲ್ಲಿ ಹಣಕ್ಕಿರುವಷ್ಟು ಮಾನ ಸನ್ಮಾನ ಇನ್ನವುದಕ್ಕೂ ಇಲ್ಲ ಎಂಬ ಸತ್ಯವನ್ನು ನಾವು ಚೆನ್ನಾಗಿ ತಿಳ್ಕೊಂಡಿದ್ದೇವೆ. ಎಳ್ಳಷ್ಟೂ ಯತಿಧರ್ಮ ಪಾಲಿಸದ ನಮ್ಮಲ್ಲಿ ಅಲೌಕಿಕವಾದ ಯಾವ ಬೆಂಬಲವಾಗಲೀ ಶಕ್ತಿಯಾಗಲೀ ಇಲ್ಲ. ’ಸರ್ವಂ ಕಾಂಚಾಣಮಯಂ’ ಆದ್ದರಿಂದ ನಾವೂ ಅದನ್ನೇ ಆಶ್ರಯಿಸಿದ್ದೇವೆ. ಭಕ್ತಕುರಿಗಳಿಂದ ಎತ್ತುವಳಿ ಮಾಡಿದ ಹಣವನ್ನು ನಮ್ಮ ಸ್ವೇಚ್ಛಾಚಾರ ಮತ್ತು ರಕ್ಷಣೆಗೆ ಬಳಸಿಕೊಳ್ಳುತ್ತಲೇ ಇದ್ದೇವೆ.
ಈಗೇನಾಗಿದೆಯೆಂದರೆ ಮೊದಲು ಹೂಡಿಕೆ ಮಾಡುತ್ತಿದ್ದ ರಾಜಕೀಯ ಮುಖಂಡರು ಈಗ ನಮ್ಮಲ್ಲಿಂದ ಬರಲಿ ಎಂದು ಅಪೇಕ್ಷಿಸುತ್ತಾರೆ. ಅನಿವಾರ್ಯ ಅಂತ ನಾವು ಕೆಲವು ಸೂಟ್ ಕೇಸ್ ಕಳಿಸಿಕೊಟ್ಟಿದ್ದೇವೆ. ಕತ್ತಲಲ್ಲಿ ನಮ್ಮವರು ಅದನ್ನು ಹಸ್ತಾಂತರಿಸಿದ್ದು ನಿಮಗೆ ಕಾಣಿಸಿಲ್ಲ ಅಷ್ಟೆ. ಹೀಗಾಗಿ ಅವರೆಲ್ಲ ನಮ್ಮನ್ನು ಇಲ್ಲಿಯವರೆಗೆ ಸಂರಕ್ಷಿಸಿದ್ದಾರೆ. ಇನ್ನು ಮುಂದೆ ಕಷ್ಟವಾಗಿದೆ.
ಸಮುದ್ರದಲ್ಲಿ ಅಟ್ಟಿಸಿಕೊಂಡು ಬರುವ ಶಾರ್ಕ್ ಮತ್ತು ತಿಮಿಂಗಿಲಗಳಿಗೆ ಧೂಳಿನ ಮೂಟೆ ಎಸೆಯುತ್ತ ತಪ್ಪಿಸಿಕೊಳ್ತಾರಂತಲ್ಲ ಹಾಗೆ ನಾವೂ ಹಣದ ಮೂಟೆ ಎಸೆಯುತ್ತ ತಪ್ಪಿಸಿಕೊಳ್ಳುತ್ತಲೇ ಇದ್ದೆವು. ಈಗ ನಮ್ಮಲ್ಲಿ ಹಣದ ಮೂಟೆಗಳಿಲ್ಲ. ಬಾವಯ್ಯ ಹಳೆಯ ಬ್ಯಾಂಕ್ ಅಕೌಂಟಿನ ಸಂದು ಮೂಲೆ ಎಲ್ಲಾ ಹುಡುಕಿ ಬಾಚಿ ಬರಗಿ ಒಂದಷ್ಟು ರೆಡಿಮಾಡಿ ಇಟ್ಟಿದ್ದಾನೆ. ಇನ್ನೂ ಕುರಿಗಳಾಗಿಯೇ ಇರುವ ಕೆಲವು ಪುಣ್ಯಾತ್ಮರು ಬಾವಯ್ಯನ ಪೂಜೆಗೆ ಹಣ ಕೊಡ್ತಾರಲ್ಲ-ಅದರಿಂದ ಒಂದಷ್ಟು ಬರುತ್ತದೆ. ಇದನ್ನೆಲ್ಲ ಸೇರಿಸಿ ಗಂಟು ಮಾಡಿ ಕಳಿಸುತ್ತಿದ್ದೇವೆ ನಾವು.
ಮುಂದಕ್ಕೆ ವಿಚಾರಣೆಯ ಗತಿ ಹೆಚ್ಚಿದಾಗ ನಮ್ಮ ಬಾವಯ್ಯ ಎಲ್ಲಾದರೂ ತಪ್ಪಿಸಿಕೊಂಡು ಓಡಿಹೋಗುವ ಸಾಧ್ಯತೆ ಇದೆ. ಹೀಗಾಗಿ ಅವನೂ ನಮ್ಮ ಜೊತೆಗಿರುವಂತೆ ನೋಡಿಕೊಳ್ಳುತ್ತಲೇ ಇದ್ದೇವೆ ನಾವು. ಉತ್ತರದ ಕಡೆಗೆ ಮಂಡನಮಿಶ್ರರಂತಹ ಅಪ್ಪಟ ವಿದ್ವತ್ತು ತನ್ನದೆಂದು ಭೋಂಗು ಬಿಟ್ಟು ಸನ್ಮಾನ ಮಾಡಿಸಿಕೊಂಡ ಈ ಕುಳ್ಳನನ್ನು ನಾನು ಸಂಪೂರ್ಣ ನಂಬುವ ಹಾಗಿಲ್ಲ ಪರಿಸ್ಥಿತಿ. ಗಾದೆಯೇ ಇದೆಯಲ್ಲ ಕಳ್ಳರನ್ನು ನಂಬಿದರೂ ಕುಳ್ಳರನ್ನು ನಂಬಬಾರದು ಅಂತ.
ವೀಸಾ ಪಾಸ್ ಪೋರ್ಟು ರೆಡಿ ಇಟ್ಟುಕೊಂಡ ನಮ್ಮ 420 ಬಾವಯ್ಯ ಮಾರುವೇಷದಲ್ಲಿ ಮಾರ್ವಾಡಿಯ ವೇಷ ತೊಟ್ಟು ಹಾರಿಹೋಗಬಾರದೆಂದೇನೂ ಇಲ್ಲ. ಅದಕ್ಕಾಗಿ "ಅಕ್ಕಯ್ಯಂದಿರು ಬಾವಯ್ಯನನ್ನು ಇಲ್ಲೇ ಇರಿಸಿಕೊಳ್ಳಬೇಕು. ಮುಂದೊಂದು ದಿನ ಬಾವಯ್ಯನ ಪೂಜೆಯನ್ನು ಚೆನ್ನಾಗಿ ಮಾಡಲು ಬೇಕೆಂಬ ಕಾರಣಕ್ಕೆ ಅಕ್ಕಯ್ಯಂದಿರು ಅವನನ್ನು ಹಿಡಿದಿಟ್ಟುಕೊಂಡರೆ ಒಳ್ಳೇದು" ಅಂತ ಹೊರಗಡೆ ಯಾರೋ ಹೇಳಿದರಂತೆ. ನಾವು ನೇರವಾಗಿ ಹಾಗೆ ಹೇಳಲಿಕ್ಕಾಗುತ್ತದೆಯೇ?
ಅಂದಿನಿಂದ ಇಂದಿನವರೆಗೂ ನಾನೂ ನೀನೂ ಒಟ್ಟಿಗೇ ಇದ್ದೇವೆ.
ಮಂದದ ಬೋಳುಗಳಿಗೆ ಗಂಧದೆಣ್ಣೆ ಹಚ್ಚಿ ನಮ್ಮ ಕನಸುಗಳನ್ನೆಲ್ಲ ಒಟ್ಟಿಗೇ ಸಾಕಾರ ಮಾಡಿಕೊಂಡಿದ್ದೇವೆ.
ಚಂದದ ಹುಡಿಗಿಯರು ಹೆಂಗಸರನ್ನು ಒಟ್ಟಿಗೇ ..............
ಬಂಧುಗಳು ನೀವೆಲ್ಲ ಎಂದು ರಾಜಕಾರಣಿಗಳನ್ನು ಕರೆದು ಒಟ್ಟಿಗೇ ಕುಳಿತು ಮಾತನಾಡಿಸಿದ್ದೇವೆ
ತಿಂದಿದ್ದು ಉಂಡಿದ್ದು ಎಲ್ಲವೂ ಒಟ್ಟಿಗೇ ನಡೆದಿದೆ ಬಾವಯ್ಯ
ಮುಂದೆ ಮುದ್ದೆ ಮುರಿಯುವುದಾದರೆ ಅದನ್ನೂ ಒಟ್ಟಿಗೇ ಮಾಡೋಣ ಎಂಬುದು ನಮ್ಮ ಅನಿಸಿಕೆ.
ಹೀಗಾಗಿ ನಮ್ಮ ಹಾವಾಡಿಗ ಮಹಾಸಂಸ್ಥಾನದ ಘನಪಂಡಿತರಾದ ಕುಲಪತಿ ಬಾವಯ್ಯನವರನ್ನು ಎಲ್ಲರೂ ರಕ್ಷಣೆ ಮಾಡಿಕೊಳ್ಳಿ. ನಮ್ಮಂತಹ ಕಳ್ಳರಿಗೂ ಗುರು ಎಂಬವರು ಇರುತ್ತಾರೆ. ಹೊರಗೆ ವೇದಿಕೆಯಲ್ಲಿ ಗಂಟಲು ಬಿಗಿದುಕೊಂಡು ಮೈಕಿನಲ್ಲಿ"ಮಹಾಸಂಸ್ಥಾನದವರ ಅಪ್ಪಣೆಯಾಗಿದೆ" ಎನ್ನುವ ಬಾವಯ್ಯ ನಮ್ಮ ಎಲ್ಲಾ ಕೆಲಸಗಳಿಗೂ ಗುರು. ಜನರೆದುರು ಬಾಯಿಗೆ ಪಂಚೆ ಅಡ್ಡಹಿಡಿದು ನಮ್ಮೊಂದಿಗೆ ಮಾತನಾಡುವ ಬಾವಯ್ಯ ಒಳಗೆ ನಮಗೆ ಬಳಸುವ ಪದಗಳನ್ನು ದೇವರೇ ಬಲ್ಲ. ನಾವು ಏಕಾಂತದಲ್ಲಿ ಮಹಿಳೆಯರಿಗೆ ಒದ್ದರೆ ನಮ್ಮಿಬ್ಬರ ಮೀಟಿಂಗಿನಲ್ಲಿ ಬಾವಯ್ಯ ನಮಗೆ ಒದೆಯುತ್ತಾನೆ.
ಅಂದಹಾಗೆ, ನಮ್ಮ ಬಾವಯ್ಯ ಕೂಡ ಎಸ್.ಟಿ.ಡಿ ಬೂತು ಎನ್ನುವುದು ನಿಮಗೂ ತಿಳಿದಿರಲಿ."




June 08
https://www.facebook.com/groups/1499395003680065/permalink/1625302351089329

ತುಮರಿ ತುರ್ಯಾನಂದ ಮಹಾಸಂಸ್ಥಾನದಲ್ಲಿ ವಿದ್ವಾನ್ ಬಾವಯ್ಯನ ಹುದ್ದೆ ಖಾಲಿ ಇದೆ
"ನಮ್ಮ ವಿರುದ್ಧ ಇಡೀ ಕರ್ನಾಟಕವೇ ಎದ್ದು ನಿಲ್ಲಲು ಸಜ್ಜಾಗುತ್ತಿದೆ ಎಂಬ ಸತ್ಯದ ಅರಿವು ನಮಗೀಗೀಗ ಆಗುತ್ತಿದೆ ಗೊತ್ತಾಯ್ತಲ್ಲ? ನಮ್ಮ ವಿರುದ್ಧ ಯಾರು ಎಷ್ಟೇ ಸುಳ್ಳು ಹೇಳಿದರೂ ನಾವು ನಿಜವನ್ನೇ ಹೇಳಬೇಕೆಂದು ತೀರ್ಮಾನಿಸಿದ್ದೇವೆ ಅರ್ಥವಾಯ್ತಲ್ಲ?
"ಸೀತೆಯ ಗಂಡನ ಮೇಲೆ ಆಣೆಮಾಡಿ ಹೇಳುತ್ತೇವೆ ಸತ್ಯವನ್ನೇ ಹೇಳುತ್ತೇವೆ, ಸತ್ಯವಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾವು ಹೇಳುವುದೆಲ್ಲ ಸತ್ಯ" ಎಂದು ಕಟಕಟೆಯಲ್ಲಿ ನಿಂತು ಹೇಳುವ ಸಮಯ ಹತ್ತಿರ ಬಂದಿದೆ. ಹೀಗಾಗಿ ಸುಳ್ಳನ್ನೇ ಸತ್ಯವೆಂದು ಪಕ್ಕಾ ಮಾಡಬೇಕೆಂಬುದು ನಮ್ಮ ಆಲೋಚನೆ ಈಗ.
ನಮ್ಮನ್ನು ಅಂದರೆ ಜಗದ್ಗುರು ಶೋಭರಾಜಾಚಾರ್ಯ ಹಾವಾಡಿಗ ಮಹಾಸಂಸ್ಥಾನದ ಪೀಠಾಧೀಶ್ವರರನ್ನು ಇತ್ತೀಚೆಗೆ ಪಾದಪೂಜೆ ಮತ್ತು ಭಿಕ್ಷಕ್ಕೆ ಆಹ್ವಾನಿಸುವ ಜನವೂ ಕಮ್ಮಿ ಆಗಿದ್ದಾರೆ. ಅಲ್ಲಿ ನಾವು ಹೇಳುವ ಕಾಣಿಕೆ ರೇಟ್ ಎಲ್ಲ ಹಾರಿಹೋಗಿ ಈಗೊಂತರ ಫೂಟ್ ಪಾತ್ ನಲ್ಲಿ ನಡೆಯುವ ಬಾರ್ಗೇನ್ ವ್ಯಾಪಾರಕ್ಕೆ ಬಂದು ನಿಂತಿದೆ. ಎಲ್ಲಾದರೂ ಯಾರಾದರೂ ಕರೆಯುತ್ತಾರಾ ಎಂದು ನಾವು ಹುಡುಕುತ್ತಲೇ ಇದ್ದೇವೆ. ಆದರೂ ಕೆಲವು ಕುರಿಗಳು ಜನ್ಮದಲ್ಲೇ ಬದಲಾಗುವುದಿಲ್ಲ ಎಂಬುದಕ್ಕೆ ನಮ್ಮನ್ನು ಇನ್ನೂ ಪೂಜಿಸುತ್ತಿರುವುದೇ ಸಾಕ್ಷಿ.
ಜಗದ್ವಿಖ್ಯಾತಿ ಪಡೆಯಯುತ್ತಿದ್ದೇವೆಂದು ಸುದ್ದಿ ಹಬ್ಬಿದ್ದರಿಂದ ಸೀಟಿನಲ್ಲೇ ಇದ್ದರೆ ಅಮೆರಿಕದಲ್ಲೊಂದು ಬ್ರ್ಯಾಂಚ್ ತೆರೆಯೋಣ ಅಂದುಕೊಂಡಿದ್ದೆವು. ಅಲ್ಲಿನ ಮಹಿಳೆಯರ ಬಣ್ಣ ಆಹಹ ಅದೆಂತಹ ಬಣ್ಣ ಅಂತೀರಿ. ಜೊತೆಗೆ ಅನಿವಾಸಿ ಭಾರತೀಯರು ಹೇಗೂ ಇರ್ತಾರಲ್ಲ. ಅಲ್ಲಿಗೆ ಹೋದಾಗ ಏಕಾಂತ ಜೋರಾಗೇ ನಡೆಸಬಹುದಿತ್ತು ಎಂಬ ಆಲೋಚನೆಯೂ ಇತ್ತು. ಆದರೆ ನಡುವೆ ಹೀಗಾಗಿಬಿಡ್ತು.
ಎರಡನೇ ಐಡಿಯಾ ಇದ್ದಿದ್ದು-ಇದೆಲ್ಲ ಯಾಕೆ? ಯಾವ್ದಾದ್ರೂ ರಂಭೆಯನ್ನು ಕಟ್ಟಿಕೊಂಡು ಅಮೆರಿಕಕ್ಕೆ ಹಾರಿ, ಅಲ್ಲಿ ಹಾಯಾಗಿ ಇನ್ನಷ್ಟು ಸಖಿಯರನ್ನು ಮಾಡಿಕೊಂಡು ಇರೋಣ ಅನ್ನಿಸ್ತಿತ್ತು; ಯಾಕೆಂದರೆ ಪರ್ಸನಲ್ ಅಕೌಂಟಿನಲ್ಲಿ ಕೋಟಿಗಟ್ಟಲೆ ಹಣ ಇದೆಯಲ್ಲ, ಅದಕ್ಕೆ.
ಈಗ ನಮ್ಮ ಅವಸ್ಥೆ ನಾಯಿ ನರಿಗೆ ಕೊಟ್ಟರೂ ಬೇಡ ಅನ್ನೋ ಹಂತ ತಲುಪುತ್ತಿದೆ. ಒಂದುಕಡೆ ಶರೀರವನ್ನು ಅಮರಿಕೊಂಡು ಅಲ್ಲಾಡಿಸುತ್ತಿರುವ ಕಾಯಿಲೆಗಳು, ಇನ್ನೊಂದೆಡೆ ಸೀಟನ್ನೇ ಅಲ್ಲಾಡಿಸುತ್ತಿರುವ ಹುಲುಮಾನವ ವಿರೋಧಿಗಳು, ಮತ್ತೊಂದೆಡೆ ಹಿಡಿದು ಶಿಕ್ಷಿಸಲು ಯತ್ನಿಸುತ್ತಿರುವ ಮಾನವ ಲೋಕದ ಕಾನೂನು ತಜ್ಞರು, ಮಗದೊಂದೆಡೆ ಘೇರಾವ್ ಹಾಕಲು ರೆಡಿಯಾಗುತ್ತಿರುವ ಸಾರ್ವಜನಿಕರು ಯಾರಿಗ್ ಬೇಕು ಹೇಳಿ? ತಲೆ ಮರೆಸಿಕೊಂಡು ಓಡಿ ಹೋಗಿ, ಅನ್ಯಮತಕ್ಕೆ ಮತಾಂತರಗೊಂಡು, ಅಲ್ಲಿ ಸಿಗುವ ಸಖಿಯರೊಡನೆ ಸುಖವಾಗಿರೋಣವೇ? ಚಂದ್ರಶೇಖರ ಇಟ್ಲ ಬಿಡುತ್ತಿಲ್ಲ-ಕಾವಲಿಗೆ ಬೇಹುಗಾರಿಕೆ ಜನರನ್ನು ಇಟ್ಟಿದ್ದಾನೆ.
ಈ ನಡುವೆ ಅದ್ಯಾವುದೋ ಕವಳದ ಗೋಪಣ್ಣನಂತೆ. ಅವನ ಸಲಹೆಯ ಮೇರೆಗೆ ಆ ತುಮರಿ ರಾಮಚಂದ್ರ ಎಂಬಾತ ನಮಗೆ ಕಾಂಪೀಟ್ ಮಾಡುವುದಕ್ಕೆ ಮುಂದಾಗಿದ್ದಾನಂತೆ. ತಾನೇ ಏಕೆ ಕಾವಿ ಹಾಕಬಾರದು ಎಂದುಕೊಂಡು ’ತುಮರಿ ತುರ್ಯಾನಂದ’ ಎಂಬ ನಾಮದೊಂದಿಗೆ ’ತುಮರಿ ತುರ್ಯಾನಂದ ಮಹಾಸಂಸ್ಥಾನ’ವನ್ನು ಅಮೆರಿಕದಲ್ಲಿ ಆರಂಭಿಸಿಕೊಂಡು ಈ ಸರ್ತಿ ಚಾತುರ್ಮಾಸಕ್ಕೆ ಕೂರ್ತಾನಂತೆ.
ಚಾತುರ್ಮಾಸ ಕಾಲದಲ್ಲಿ ಬೆಲ್ಲಿ ಡಾನ್ಸ್, ಸಲ್ಸ, ಜಾಜ್, ಹಿಪ್ ಹಾಪ್, ಟ್ಯಾಪ್, ಯಾಂಗ್ ಕೋ, ಗಂಗ್ನಮ್ ಸ್ಟೈಲ್ [ಜೊತೆಗೆ ದೇಸೀ ಗಂಗಮ್ಮನ ಸ್ಟೈಲೂ ಪ್ರತ್ಯೇಕ ಇದೆ], ಬಿ-ಬಾಯಿಂಗ್, ಬ್ಯಾಲೆ, ಲೈನ್ ಮೊದಲಾದ ಜಗತ್ತಿನ ಎಲ್ಲ ವಿಧದ ನರ್ತನ ಕಾರ್ಯಕ್ರಮಗಳನ್ನು ದಿನಕ್ಕೊಂದರಂತೆ ಹಮ್ಮಿಕೊಳ್ಳುತ್ತಾನಂತೆ. ಜಗತ್ತಿನ ವಿವಿಧ ದೇಶಗಳ ರಮಣಿಯರು, ಅವರ ಹೊಕ್ಕುಳು, ನಿತಂಬ ....ಇನ್ನೂ ಏನೇನೋ ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತದೆ ನಮಗೆ. ವಾಸ್ತವವಾಗಿ ಇದನ್ನೆಲ್ಲ ನಾವು ಮುಂದಿನ ಚಾತುರ್ಮಾಸಗಳಲ್ಲಿ ನಡೆಸಬೇಕೆಂದಿದ್ದೆವು. ಆದರೆ ಆ ತುಮರಿ ನಮಗೇ ಟಾಂಗ್ ಕೊಡುತ್ತಿದ್ದಾನೆ ನೋಡಿ.
ಯಾಕೆ ಸನ್ಯಾಸಿ ಆಗ್ತೀಯ ಅಂತ ಕೇಳಿದ್ದಕ್ಕೆ, "ಅದಕ್ಕೆ ಯಾವುದೇ ಪರಿಶ್ರಮವಾಗಲೀ, ಸ್ಪರ್ಧಾತ್ಮಕ ಪರೀಕ್ಷೆಗಳಾಗಲೀ ಇಲ್ಲ, ಎಸ್.ಎಸ್.ಎಲ್.ಸಿ ಫೇಲಾಗಿದ್ದರೂ ಆಗಬಹುದು, ಹೈಸ್ಕೂಲ್ ಮೆಟ್ಟಿಲು ಹತ್ತದವನಾದರೂ ಆಗಬಹುದು, ವೇದ ಉಪನಿಷತ್ತು ಶಾಸ್ತ್ರಗಳೆನ್ನೆಲ್ಲ ಓದಿದ್ದೇನೆ ಎಂದು ಕತೆ ಕಟ್ಟಿದರಾಯ್ತು, ಜಾತಕ ಕೇಳಿದರೆ ನಮಗೆ ಬೇಕಾದ ಹಾಗೆ ಬರೆಸಿಕೊಟ್ಟರಾಯ್ತು.
ಯಾವ್ದಾದ್ರೂ ಪರಂಪರೆ ಸೀಟು ಬೇಕಂದ್ರೆ ಅದರ ಭಕ್ತರ ಕಾಲು ಹಿಡಿದು, ಮುಖಂಡರ ಜೊತೆ ಸ್ವಲ್ಪ ರಾಜಕೀಯ ಮಾಡಿದ್ರೆ ಆಯ್ತು. ಸತ್ಯಾನಂದನಂತೆ ಪರಂಪರೆ ರಹಿತವಾದರೆ ಅದಕ್ಕೆ ಹೇಳೋರಿಲ್ಲ ಕೇಳೋರಿಲ್ಲ, ಬರೋರೆಲ್ಲ ಭಕ್ತರೇ. ಹೊರಗೆ ಕಾಣಿಸಿಕೊಳ್ಳುವಾಗ ಕಾವಿ ಹಾಕಿಕೊಂಡರಾಯ್ತು; ಒಳಗೆ ಏನ್ಮಾಡ್ಕೋತೀವೋ ಅದು ನಮಗೇ ಬಿಟ್ಟಿದ್ದು.
ಭಾಷಣ ಚೆನ್ನಾಗಿ ಬಿಗಿಯೋದಕ್ಕೆ ಕಲಿತುಕೊಂಡರೆ ಸರಿ. ಹೇಳಬೆಕ್ಕಾದ್ದೆಲ್ಲ ಸತ್ಯವೇ ಆಗಿರಬೇಕೆಂದೇನಿಲ್ಲ, ಸಮಯ, ಸನ್ನಿವೇಶ ಮತ್ತು ಅನುಕೂಲ ನೋಡಿಕೊಂಡು ಯಾವ ಕತೆಯನ್ನಾದರೂ ಕಟ್ಟಿ ಹೇಳಬಹುದು. ಭಕ್ತರು ಮಳ್ಳು ಬೀಳ್ತಾರೆ. ಹಾರ, ತುರಾಯಿ, ಕಾಣಿಕೆ ಎಲ್ಲವೂ ಬರ್ತದೆ. ಪಾದಪೂಜೆ ಮಾಡ್ತಾರೆ, ಗುರು ಭಿಕ್ಷ ಅಂತ ಮಾಡ್ತಾರೆ.
ಸ್ಥಳೀಯ ರಾಜಕಾರಣಿಗಳ ಸಹವಾಸ ಬೆಳೆಸಿಕೊಂಡು ಅವರ ಕಪ್ಪು ಹಣವನ್ನು ಸೇಫಾಗಿ ಇಟ್ಕೋಬಹುದು. ನಮಗೆ ಬೇಕಾದ ಕೆಲಸನೆಲ್ಲ ಅವರನ್ನು ಹಿಡಿದು ಮಾಡಿಸ್ಕೊಳ್ಳಬಹುದು. ಇದಕ್ಕೆಲ್ಲ ಏನ್ ಐ.ಎ.ಎಸ್ ಓದಬೇಕೇ? ಎಂಜಿನೀಯರಿಂಗ್ ಪಾಸಾಗಬೇಕೆ? ಇದರಷ್ಟು ಸಲೀಸ್ ಧಂದೆ ಬೇರಾವುದೂ ಇಲ್ಲ. ಕೋಟಿಗಟ್ಟಲೆ ಆದಾಯ.
ಪಾಪದ ಹೈಕ್ಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಜಾಬ್ ಹಿಡಿದು ಜೀವಮಾನವಿಡೀ ದುಡದ್ರೂ ಕೋಟಿಗಳಲ್ಲಿ ಎಣಿಸೋದು ಕಷ್ಟ. ಹೀಗಿದ್ದಾಗ ಯಾವುದು ಮೇಲು? ಆ ಕಾರಣದಿಂದ ಇರುವ ಜಾಬ್ ಬಿಟ್ಟು ಕಾವಿ ತೊಡಲು ಮನಸ್ಸಾಗಿದೆ" ಎಂದು ಹೇಳಿಕೆ ಕೊಟ್ಟಿದ್ದಾನಂತೆ ತುಮರಿ.
ನಮ್ಮಲ್ಲಿ ಕುಲಪತಿ ಬಾವಯ್ಯ ಇರುವ ಹಾಗೆ ಭಾವೀ ’ತುಮರಿ ತುರ್ಯಾನಂದ ಮಹಾಸಂಸ್ಥಾನ’ದಲ್ಲಿ ಬಾವಯ್ಯನ ಹುದ್ದೆ ಖಾಲಿ ಇದೆಯಂತೆ. ಬಾವಯ್ಯನ ಹುದ್ದೆ ಎಂದರೆ ನಿಮಗೆ ಗೊತ್ತಾಗ್ತದಲ್ಲ, ಬಾವಯ್ಯ ಅಂದರೆ ನವನವೀನ ಯೋಜನೆಗಳನ್ನು ಹಮ್ಮಿಕೊಂಡು, ಬರುವ ಆಸ್ತಿಕ ಭಕ್ತರ ಬೋಳಿಗೆ ಎಣ್ಣೆ ಹಚ್ಚಿ, ಅವರ ಒಳ ಉಡುಪು ಕಿತ್ತೋಗುವವರೆಗೂ ಅವರನ್ನು ಆರ್ಥಿಕವಾಗಿ ಸುಲಿಯುವವರು ಎಂದರ್ಥ.
ಹೊರನೋಟಕ್ಕೆ ಬಾವಯ್ಯನ ಹುದ್ದೆಯವರು ಸಂಸ್ಥಾನದ ಮಹಾ ಘನಪಾಠಿಗಳು, ಪಂಡಿತ ವರೇಣ್ಯರು ಮತ್ತು ಮಹಾಭಕ್ತರು. ವೇದಿಕೆಯಲ್ಲಿ ಮಹಾಸಂಸ್ಥಾನದವರು ಸೀಟಿನಲ್ಲಿ ಆಸೀನರಾದಾಗ, ಮಹಾಸಂಸ್ಥಾನದವರ ಮೇಲೆ ಎಂಜಲು ಹನಿ ಹಾರಿಬೀಳದಂತೆ ಬಾಯಿಗೆ ಬಟ್ಟೆ ಅಡ್ಡಹಿಡಿದುಕೊಂಡು ಹತ್ತಿರದಿಂದ ಮಾತನಾಡುವವರು. ಒಳಗೆ ಅವರ ವ್ಯವಹಾರವೇ ಬೇರೆ. ಬೀದಿ ನಾಯಿಗೆ ಒದೆದ ಹಾಗೆ ಒದೆಯುವ ಬಾವಯ್ಯಂದಿರೂ ಇರುತ್ತಾರೆ ಬಿಡಿ. ಅದೊಂದು ಖಾಸಗಿ ಜಾಯಿಂಟ್ ಅಕೌಂಟ್ ಹುದ್ದೆ. ಇಂತದ್ದೊಂದು ಅಸಿಸ್ಟೆಂಟ್ ಹುದ್ದೆಗೆ ತುಮರಿಗೆ ಇನ್ನೂ ಯಾರೂ ಸಿಗದೇ ಹುಡುಕಾಟದಲ್ಲಿದ್ದಾನೆ ಎಂದು ಸುದ್ದಿ ಬಂದಿದೆ.
ಅಂತೂ ನಮ್ಮನ್ನು ನೋಡಿದ ಅನೇಕ ಕಚ್ಚೆ ಹರುಕರು ಈಗ ಕಾವಿ ತೊಡಲು ಮುಂದಾಗಿದ್ದಾರೆ ಬಿಡಿ. ತುಮರಿ ಕಚ್ಚೆಹರುಕನಲ್ಲ ಅಂತ ನಮ್ಮ ಭಾತ್ಮೀದಾರರು ಹೇಳಿದ್ದಾರೆ; ಆದರೆ ತಾನೂ ಏಕೆ ಸಂಸ್ಥಾನ ಮಾಡಿತೋರಿಸಬಾರದು ಎಂಬ ಹಠದಿಂದ ಸ್ನೇಹಿತ ಕವಳದ ಗೋಪಣ್ಣನ ಜೊತೆ ಸೇರಿ ಈ ಕೆಲಸಕ್ಕೆ ಮುಂದಾಗಿದ್ದಾನಂತೆ ಎಂದು ಕೇಳಿದ್ದೇವೆ. ತುಮರಿಯೂ ನಮ್ಮ ಹಾಗೆ ಕಚ್ಚೆಹರುಕನೇ ಅಂತ ಕತೆ ಕಟ್ಟಿ ಅವನನ್ನೂ ನಮ್ಮ ಸಾಲಿಗೆ ಸೇರಿಸಿಬಿಟ್ಟರಾಯ್ತು ಬಿಡಿ.
ಯಾಕೆ ಹಾಗೆ ನೋಡ್ತೀರಿ? ಈಗ ನಾವು ಈ ಹಿಂದೆ ನಮ್ಮ ವಿರುದ್ಧ ತಿರುಗಿಬಿದ್ದ ಮಹಿಳೆಯರ ಚಾರಿತ್ರ್ಯವೇ ಸರಿ ಇಲ್ಲ ಎಂದು ಕತೆ ಕಟ್ಟಲಿಲ್ಲವೇ? ನಾವೇ ದೇವರು ಆಂತ ನಂಬಿಸಿ, ಅಂತಹ ಮಹಿಳೆಯರ ಚಾರಿತ್ರ್ಯ ಹರಣ ಮಾಡಿದವರೇ ನಾವು; ತಪ್ಪು ನಮ್ಮದೇ ಇದ್ದರೂ "ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ದೋಷಮುಕ್ತರಾಗಿ ಹೊರಬರುತ್ತೇವೆ. ತಪ್ಪು ನಮ್ಮ ವಿರೋಧಿಗಳದ್ದೇ. ಅವರೆಲ್ಲ ಚಾರಿತ್ರ್ಯ ಹೀನರು" ಎಂದು ಜನರನ್ನು ನಂಬಿಸಬೇಕೆಂಬುದು ನಮ್ಮ ಇಚ್ಛೆ."





June 9
https://www.facebook.com/groups/1499395003680065/permalink/1625773684375529

ಕ್ಷೌರಿಕ ಕಿತ್ತೆದ್ದು ಓಡಿದ ಕಥಾಪ್ರಸಂಗ
"ನಾವು ಎಲ್ಲೇ ಹೋಗುವುದಾದರೂ ಸಾಕಿಕೊಂಡ 20-25 ಹಳದೀ ತಾಲಿಬಾನ್ ಬೇಟೆ ನಾಯಿಗಳು ನಮ್ಮನ್ನು ಎಸ್ಕಾರ್ಟ್ ಮಾಡುತ್ತವೆ. ನಾವು ಎಲ್ಲೇ ಇದ್ದರೂ ಅಲ್ಲಿ ಪಾಳಿಯಲ್ಲಿ ಪಹರೆ ನಡೆಸುವಂತೆ ನಾವು ಅಪ್ಪಣೆ ವಿಧಿಸಿದ್ದೇವೆ. ಇದು ಹೆಚ್ಚು-ಕಮ್ಮಿ ಕಳೆದ ಎಂಟತ್ತು ತಿಂಗಳಿಂದ ಜಾರಿಯಲ್ಲಿದೆ.
ಹಳದೀ ತಾಲಿಬಾನ್ ಮುಖಂಡರಿಗೆ ನಾವು ಒಳಗೆ ಹೋದರೆ ಎಂಬ ಹೆದರಿಕೆ ಇದೆ. ಯಾಕೆಂದರೆ ನಾವು ಒಳಗೆ ಹೋದರೆ ಹಲವರ ಬಣ್ಣ ಬಯಲಾಗುತ್ತದೆ. ಹಲವರ ಹೆಸರುಗಳನ್ನು ನಾವು ಅಲ್ಲಿ ನೀಡುತ್ತೇವೆ. ಅವರೆಲ್ಲರೂ ನಮ್ಮ ಜೊತೆಗೇ ಮುದ್ದೆ ಮುರಿಯಲು ಕೆಲವು ದಿನಗಳವರೆಗಾದರೂ ಸಹಕಾರ ಕೊಡುವಂತಾಗುತ್ತದೆ.
ಆರಂಭದಿಂದ ನಾವು ಅವರನ್ನೆಲ್ಲ ತಯಾರು ಮಾಡಿದ್ದೇ ಹಾಗೆ. ನಾವೆಲ್ಲೇ ಹೋದರೂ ಅವರು ನಮ್ಮನ್ನು ಬಿಡುವಂತಿರಬಾರದು , ನಾವೇ ಇಷ್ಟಪಟ್ಟು ಅವರನ್ನೆಲ್ಲ ಯಾಮಾರಿಸಿ ಬೇರೆ ದೇಶಕ್ಕೆ ಹೋದರೆ ಮಾತ್ರ ಪ್ರಶ್ನೆ ಬೇರೆ ಇತ್ತು. ಈಗ ನಾವು ಹೋಗುವಂತಿಲ್ಲ. ಹೀಗಾಗಿ ನಾವು ಹಳದೀ ತಾಲಿಬಾನನ್ನು ಇನ್ನಷ್ಟು ಸ್ಟ್ರಾಂಗ್ ಮಾಡಿದ್ದೇವೆ. ಕೊಚ್ಚು ಅಂದರೆ ಕೊಚ್ಚಬೇಕು, ಕಡಿ ಅಂದರೆ ಕಡಿಯಬೇಕು, ಬಹಿಷ್ಕರಿಸಿ ಅಂದರೆ ಬಹಿಷ್ಕರಿಸಬೇಕು, ಏಕಾಂತ ಅಂದರೆ ಏಕಾಂತಕ್ಕೆ ಅನುಕೂಲ ಕಲ್ಪಿಸಿ ಬೇಕಾದವರನ್ನು ಪುಸಲಾಯಿಸಿ ಕರೆತಂದು ಒಪ್ಪಿಸಬೇಕು.
ಹಳದೀ ತಾಲಿಬಾನಿನಲ್ಲಿ ನಮ್ಮಂತೆಯೇ ಕಚ್ಚೆ ಹರುಕರೂ ಇರುವುದನ್ನು ನಾವು ಬಲ್ಲೆವು ಮತ್ತು ಅದನ್ನು ಈ ಹಿಂದೆ ನಿಮಗೆಲ್ಲ ಹೇಳಿದ್ದೆವು. ನಮ್ಮ ಶೊಭರಾಜಾಚಾರ್ಯ ಹಾವಾಡಿಗ ಮಹಾಸಂಸ್ಥಾನದ ಹೆಸರಿನಲ್ಲಿ ಅವರು ನೂರೆಂಟು ವಿಧಗಳ ಪೂಜೆ ಮಾಡಿಸುವುದಕ್ಕೆ, ಸೇವಾ ವಿನ್ಯೋಗಕ್ಕೆ ಅಂತ ವಸೂಲಿಗೆ ಇಳಿಯುತ್ತಾರಲ್ಲಾ ಅದರಲ್ಲಿ ಎಷ್ಟನ್ನು ತಾವಿಟ್ಟುಕೊಂಡರು ಮತ್ತು ಎಷ್ಟನ್ನು ಸಂಸ್ಥಾನಕ್ಕೆ ಕೊಟ್ಟರು ಎಂದು ನಾವೆಂದೂ ಕೇಳಿದ್ದಿಲ್ಲ, ಕೇಳುವುದೂ ಇಲ್ಲ. ಡೂಪ್ಲಿಕೇಟ್ ರಸೀದಿ ಮಾಡಿ ಕೊಟ್ಟರೂ ಸಹ ಕೇಳುವುದಿಲ್ಲ.
ಹಾಗೆ ವಸೂಲಿಗೆ ಇಳಿದವರೇ ತಮ್ಮ ಹಿತರಕ್ಷಣೆಗಾಗಿ ಒಂದಷ್ಟು ಭಾಗವನ್ನು ನಮ್ಮ ಸಂಸ್ಥಾನಕ್ಕೆ ಕೊಟ್ಟೇ ಕೊಡುತ್ತಾರೆ. ಮಿಕ್ಕಿದ್ದನ್ನು ಇಟ್ಟುಕೊಂಡು ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ. ಸಂಸ್ಥಾನಕ್ಕೆ ಅರೆಕಾಲಿಕ ಅಥವಾ ತಾತ್ಕಾಲಿಕ ಸೇವೆ ಸಲ್ಲಿಸಿದವರೆಲ್ಲ ಹೊಸ ಮನೆಗಳನ್ನು ಕಟ್ಟಿಸಿದ್ದಾರೆ, ಕುತ್ತಿಗೆಗೆ ಮತ್ತು ಕೈಗೆ ಬಂಗಾರದ ಹಗ್ಗಗಳನ್ನು ಮಾಡಿಸಿಕೊಂಡಿದ್ದಾರೆ. ಎರಡು ಮೂರು ಹಲಗೆ ಮೊಬೈಲುಗಳನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆಲ್ಲ ನಮ್ಮ ತಕರಾರಿಲ್ಲ.
ಯಾರೋ ನಮ್ಮಲ್ಲಿ ನಿಮ್ಮ ಪರಿಚಾರಕರು ಸರಿಯಿಲ್ಲ ಎಂದು ಆಪಾದಿಸಿದಾಗ "ನಮ್ಮಲ್ಲಿಗೆ ಸರಿ ಇರುವವರು ಸೇವೆಗೆ ಬರುವುದಿಲ್ಲ. ನಾವು ಗೊತ್ತಿದ್ದೂ ಅಂತವರನ್ನೇ ಇಟ್ಟುಕೊಳ್ತೇವೆ. ಅವರನ್ನು ಕಳಿಸಿದರೆ ನಮಗಿಲ್ಲಿ ಯಾರು ಬರ್ತಾರೆ? ನೀವು ಬರ್ತೀರಾ?" ಎಂದು ಕೇಳಿಬಿಟ್ಟೆವು. ಆ ಮನುಷ್ಯ ಮರುಮಾತಾಡಲಿಲ್ಲ. ಹೀಗಾಗಿ ನಮ್ಮ ಜೊತೆಗಿರುವವರೆಲ್ಲ ಅಂತವರೇ ಗೊತ್ತಾಯ್ತಲ್ಲ?
ಕಾಂಚಾಣದ ರುಚಿ ಕಂಡವರು ಕಾಲಿನಿಂದ ಮುಸುಡಿ, ತಲೆಯವರೆಗಿನ ನಮ್ಮ ಛಾಯಾಚಿತ್ರಗಳನ್ನಿಟ್ಟುಕೊಂಡು ಆರಾಧಿಸುತ್ತಾರೆ. ಅವರಿಗೆ ನಿತ್ಯ ಕಾಂಚಾಣ ದಾಸೋಹ ನಡೆಸುತ್ತಿರುವ ನಮ್ಮನ್ನು ಬಿಡಲು ಸಾಧ್ಯವೇ? ಬಿಟ್ಟರೆ ಅವರಿಗೆ ಮುಂದಿನ ಆದಾಯಕ್ಕೆ ಎಲ್ಲಿಗೆ ಹೋಗಬೇಕು? ಯಾರ ಕೈಕೆಳಗೆ ಇಷ್ಟು ಸಲೀಸಾಗಿ ಮುಂಡಾಯಿಸುವ ಜಾಬ್ ಸಿಗುತ್ತದೆ? ಹೀಗಾಗಿ ಅವರಿಗೆ ನಾವು ಬೇಕು, ನಮಗೆ ಅವರು ಬೇಕು, ಈ ಚೋರ-ಚಾಂಡಾಲ ನಡುವಿನ ಕಾಮಿನಿ, ಕಾಂಚಾಣ ಬಾಂಧವ್ಯ ಅನನ್ಯ ಮತ್ತು ಸಾಮಾನ್ಯ ಭಕ್ರರಿಗೆ ಅನೂಹ್ಯ.
ತಿಂಗಳುಗಳ ಹಿಂದೆ ನಾವು ಮಂಗನಕಟ್ಟೆ ಗ್ರಾಮಕ್ಕೆ ಹೋಗಿದ್ದೆವಲ್ಲ. ನಾವು ಹೋಗಿದ್ದೇ ಬೇರೆ ಲೆಕ್ಕಾಚಾರಕ್ಕೆ. ಪ್ರಯೋಗಾಲಯದಲ್ಲಿ ನಮ್ಮ ವೀರ್ಯಾಣುವಿನ ಜೊತೆಗೆ ನಮ್ಮ ಕೆಳಗಿನ ಕೂದಲುಗಳೂ ಸಿಕ್ಕಿದ ಬಗ್ಗೆ ನಮಗೆ ಖಾತ್ರಿಯಾಗಿದೆ. ಮತ್ತು ವಿವರ ಪಡೆದುಕೊಂಡವರು ನಮ್ಮ ಅಂಗಾಂಗಗಳ ಸಂಪೂರ್ಣ ಚಹರೆಗಳನ್ನು ನಮ್ಮ ವಿರೋಧಿಗಳಿಂದ ಕೇಳಿ ಬರೆದುಕೊಂಡಿದ್ದಾರಂತೆ. ಹೀಗಾಗಿ ಏನು ಮಾಡುವುದು ಎಂದು ನಮ್ಮ ಸಂಸ್ಥಾನದ ಕಿಚನ್ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚಿಸಿದ್ದೆವು.
ನಮ್ಮ ಕಿಚನ್ ಕ್ಯಾಬಿನೆಟ್ ನವರಿಗೆ ನಮ್ಮ ಅಷ್ಟೂ ವಿಷಯ ಗೊತ್ತಿದೆ. ಅದೇನೂ ಅಂತರಂಗವಲ್ಲ; ಅವರ ವಿಷಯಗಳೂ ನಮಗೆ ಗೊತ್ತಿವೆ. ಇಲ್ಲಿ ಹಣ-ಹೆಣ್ಣುಗಳನ್ನು ಹಂಚಿತಿನ್ನುತ್ತ ಬದುಕುವಂತ ವಹಿವಾಟು ಇರೋದು. ನಮ್ಮನ್ನವರು ಇಂದು ರಕ್ಷಿಸದಿದ್ದರೆ ನಾಳೆ ಅವರೂ ನಮ್ಮಂತೆಯೇ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಹೀಗಾಗಿ ನಮ್ಮನ್ನು ಅವರು ಸೇಫ್ ಗಾರ್ಡ್ ಮಾಡುತ್ತಾರೆ. ಇದರಲ್ಲಿ ಯಾರೋ ಒಂದಿಬ್ಬರು ಮಾತ್ರ ಚಟ ರಹಿತರು; ಅವರು ಆಗಾಗ ’ಸುವರ್ಣ ಮಂತ್ರಾಕ್ಷತೆ’ ತೆಗೆದುಕೊಂಡು ಸಹಾಯ ಮಾಡುತ್ತಾರೆ.
ಮಂಗನಕಟ್ಟೆ ಗ್ರಾಮಕ್ಕೆ ನಾವು ಹದಿನೈದಿಪ್ಪತ್ತು ’ಬೇಟೆ ನಾಯಿ’ಗಳೊಡನೆ ಹೋಗಿದ್ದೆವು. ಅಲ್ಲಿನ ನಮ್ಮ ಭಕ್ತರಲ್ಲಿ ಕೆಲವು ಜನರೂ ಸೇರಿದಂತೆ ಒಂದು ಸಭೆ ನಡೆಸಿದೆವು. ಅಲ್ಲಿಗೆ ಹತ್ತಿರದ ಕಗ್ಗಾಡಿನ ಜಂಬುನಾತ ಬಂಡೂರಿ ಎಂಬ ಕ್ಷೌರಿಕನನ್ನು ಕರೆಸಿದೆವು.
"ನೋಡಯ್ಯ, ಹಾವಾಡಿಗ ಸಂಸ್ಥಾನಧೀಶ್ವರರ ಎಲ್ಲಾ ಅಂಗಾಂಗಗಳ ಕೂದಲನ್ನೂ ತಾನು ತೆಗೆದಿದ್ದೇನೆ ಮತ್ತು ಅವರ ದೇಹದ ಸಂಪೂರ್ಣ ಚಹರೆ ತನಗೆ ಗೊತ್ತಿದೆ. ಈ ವಿಷಯವನ್ನು ತಿಳಿದು .........ಯವರು ತನ್ನನ್ನು ಸಂಪರ್ಕಿಸಿದರು. ’ಎಷ್ಟು ಹಣ ಬೇಕಾದರೂ ಕೊಡುತ್ತೇವೆ. ಸ್ವಲ್ಪ ಸಂಸ್ಥಾನಾಧೀಶ್ವರರ ಕೆಳಗೂದಲು ಕೊಡು ಮತ್ತು ಚಹರೆಗಳನ್ನು ಹೇಳು’ ಎಂದು ಕೇಳಿದರು. ತಾನು ಅದೇ ಪ್ರಕಾರ ಅವರಿಂದ ಹಣ ತೆಗೆದುಕೊಂಡು ಕೂದಲನ್ನು ಕೊಟ್ಟು ವಿವರಗಳನ್ನು ನೀಡಿದೆ ಎಂದು ಹೇಳಬೇಕು ನೀನು, ನಿನಗೆ ಕೇಳಿದಷ್ಟು ಹಣ ಕೊಡುತ್ತೇವೆ ನಾವು" ಎಂದೆವು.
ಜಂಬುನಾತ ಬಂಡೂರಿ ಹೆದರಿ, ಕುಳಿತಲ್ಲೇ ಮೈಯ್ಯೆಲ್ಲ ಬೆವರಿ, ಏನೂ ಉತ್ತರಿಸಲೂ ನಿಲ್ಲದೇ ಕಿತ್ತೆದ್ದು ಹಾರಿ ಹೋಗಿಬಿಟ್ಟ. ಹೀಗಾಗಿ ನಮ್ಮ ಅಂದಿನ ಆ ಪ್ರಯತ್ನ ನೆಗೆದುಬಿದ್ದು ಹೋಯಿತು. ಆದರೂ ನಮ್ಮ ಇಂತಾ ’ಸಾಹಸಗಳು’ ನಡೆಯುತ್ತಲೇ ಇವೆ. ತಪ್ಪಿಸಿಕೊಳ್ಳಲು ಏನು ಬೇಕೋ ಅದೆಲ್ಲವನ್ನೂ ತಯಾರಿಮಾಡಿಕೊಳ್ಳುತ್ತಿದ್ದೇವೆ ನಾವು. ನಡುವೆ ನಮಗೆ ಅವರು ಸಾಕಷ್ಟು ಸಮಯವನ್ನೂ ಒದಗಿಸಿದ್ದು ಬಹಳ ಉಪಕಾರವಾಗಿದೆ.
ಇನ್ನೊಂದು ಮಗ್ಗುಲಲ್ಲಿ ನಮ್ಮ ಸೇವೆಯಲ್ಲಿರುವ ಸಿಂಗಳೀಕಗಳಲ್ಲಿ ಯಾವುದಾದರೂ ಬಲಿಪಶುವಾಗುವುದಕ್ಕೆ ಸಿದ್ಧವಿದೆಯೇ ಎಂದೂ ನಾವು ಹುಡುಕುತ್ತಿದ್ದೇವೆ. "ಹಾವಾಡಿಗ ಸಂಸ್ಥಾನಾಧೀಶ್ವರಿಗೆ ಅನಾರೋಗ್ಯ ಬಾಧಿಸಿದ್ದಾಗ ಹಾಸಿಗೆಯಲ್ಲಿ ಡೈಪರ್ ಹಾಕುವ ಕೆಲಸ ನಾನೇ ಮಾಡುತ್ತಿದ್ದೆ. ಅವರ ಶರೀರಕ್ಕೆ ಸ್ಪಾಂಜ್ ಬಾತ್ ಒದಗಿಸುವಾಗ ಇಡೀ ಶರೀರವನ್ನು ನೋಡಿದ್ದೆ. ಇದನ್ನು ತಿಳಿದ .......ಯವರು ನನ್ನನ್ನು ಸಂಪರ್ಕಿಸಿ ’ಎಷ್ಟು ಹಣ ಬೇಕಾದರೂ ಕೊಡುತ್ತೇವೆ. ಸಂಸ್ಥಾನಾಧೀಶ್ವರರ ಒಂದೆರಡು ಕೆಳಗೂದಲು ಕೊಡು ಮತ್ತು ಚಹರೆಗಳನ್ನು ಹೇಳು’ ಎಂದು ಕೇಳಿದರು. ನಾನು ಅದೇ ಪ್ರಕಾರ ಅವರಿಂದ ಹಣ ತೆಗೆದುಕೊಂಡು ಕೂದಲನ್ನು ಕೊಟ್ಟು ವಿವರಗಳನ್ನು ನೀಡಿದೆ"ಎಂದು ಆತ ಹೇಳಿದರಾಯಿತು.
ಇಂದು ರಾಜಕಾರಣಿಗಳು ಎಂತೆಂತಹ ಕೇಸುಗಳಲ್ಲಿ ಬಡಪಾಯಿಗಳನ್ನು ಹೀಗೆ ಬಲಿಪಶುಗಳನ್ನಾಗಿ ಮಾಡುವುದಿಲ್ಲ?ಹಣಕೊಟ್ಟು ಅವರನ್ನು ಖರೀದಿಸುವುದಿಲ್ಲ? ನಾವೂ ಕೂಡ ಅದೇ ಹಾದಿಯಲ್ಲಿದ್ದೇವೆ. ಆದರೆ ಎದುರಿಗೆ ಎಂದಿನಂತೆ ಕೃತಕ ಮಂದಹಾಸದ ಕಾಮಚಂದಿರ ಮುಖವನ್ನು ತೋರಿಸುತ್ತ, ಢಾಂಬಿಕ ಪೂಜಾದಿಗಳನ್ನು ನಡೆಸುತ್ತ ಬುದ್ಧಿಮಾಂದ್ಯ ಭಕ್ತರಿಗೆ ಶ್ರೀಸಂಸ್ಥಾನವಾಗಿಯೇ ತೋರುವಂತೆ ನಡೆದುಕೊಳ್ಳುತ್ತಿದ್ದೇವೆ.
ಮೇಲಿನಿಂದ ಸುಂದರ ಮಾರ್ಬಲ್ ನೆಲಹಾಸಿನ ಕೆಳಭಾಗದ ನೆಲದಲ್ಲಿರುವ ಹೆಗ್ಗಣದ ದೋಬು, ಸುರಂಗಗಳನ್ನು ಬಲ್ಲವರಷ್ಟೇ ಬಲ್ಲರು. ಅಲ್ಲಿಯೇ ಮೇಲೆ ಆಡಂಬರದ ಧಾರ್ಮಿಕ ಕಾರ್ಯಗಳೆಲ್ಲವೂ ಕಾರ್ಪೊರೇಟ್ ಸ್ಟೈಲಿನಲ್ಲಿ ನಡೆಯುತ್ತವೆ; ತಾಲಿಬಾನಿಗಳು ವೇದಿಕೆಯಲ್ಲಿ ನಮ್ಮನ್ನು ಅತಿಮಾನುಷ ಶಕ್ತಿ ಎಂಬಂತೆ ಹೊಗಳುತ್ತಾರೆ. ಅವರ ಹೊಗಳಿಕೆಯ ಭಾಷಣಗಳನ್ನೂ ಪವಾಡದ ಕತೆಗಳನ್ನೂ ನೆಲದಲ್ಲಿ ಕುಳಿದು ಬಾಯ್ದೆರೆದು ಕೇಳುವ ಬುದ್ಧಿಮಾಂದ್ಯ ಭಕ್ತರು ತಾಲಿಬಾನಿಗಳ ದನಿಗೆ ದನಿಗೂಡಿಸಿ ಜೈಕಾರ ಕೂಗುತ್ತಾರೆ.
ಕೆಳಗೆ ಒಳ ಸುರಂಗಗಳಲ್ಲಿ ನಮ್ಮ ಖಾಸಗೀ ವಸಾಹತು ವ್ಯವಹಾರ ನಡೆಸುತ್ತದೆ ಎಂಬಂತೆ ನಾವಿದ್ದೇವೆ. "ನಾವಿದ್ದೇವೆ" ಗುಟ್ಟು ತಿಳಿಯಿತಲ್ಲ? ಹೀಗಾಗಿ ನಮಗೆ ಬೇಕಾದವರ ಜೊತೆ ನಾವಿದ್ದೇವೆ, ನಮ್ಮ ಜೊತೆ ಇರುವ ಅವರು ನಮಗಾಗಿ ಹೇಳುತ್ತಾರೆ "ನಾವಿದ್ದೇವೆ."
ಹುಟ್ಟುವಾಗಿನ ಬುದ್ಧಿಮಾಂದ್ಯತೆ ಎಂಬುದೊಂದು ನ್ಯೂನತೆ. ಆದರೆ ಇಲ್ಲಿ ಹಾಗಲ್ಲ; ಸಮಾಜದಲ್ಲಿ ಬುದ್ಧಿಯಿದ್ದೂ ಬುದ್ಧಿಹೀನರಾದ ಹಲವರಿದ್ದಾರೆ. ಅವರನ್ನು ’ಬುದ್ಧಿಮಾಂದ್ಯರು’ ಎಂದರೇ ಸರಿ, ಅವರು ನಮ್ಮ ಒಂದೇ ಮುಖವನ್ನು ಮಾತ್ರ ಕಾಣಬಲ್ಲರು.
ಮಡದಿ ಚಂದ್ರಮತಿಯ ಮಾಂಗಲ್ಯ ಗಂಡ ಹರಿಶ್ಚಂದ್ರನಿಗೆ ಮಾತ್ರ ಹೇಗೆ ಕಾಣಿಸುತ್ತಿತ್ತೋ ಹಾಗೆಯೇ ನಮ್ಮ ಇನ್ನೊಂದು ಮುಖ ಹಳದೀ ತಾಲಿಬಾನಿಗೆ ಮಾತ್ರ ಕಾಣಿಸುತ್ತದೆ. ಅವರ ಕೆಳಹಂತದ ಯಾವ ’ಬುದ್ಧಿಮಾಂದ್ಯ’ಭಕ್ತನೂ ಅದನ್ನು ಕಾಣಲಾರ. ಹೀಗಾಗಿ ಇನ್ನೂ ಕೆಲವೆಡೆ ನಾವು ಬಿಲ್ಡಪ್ ತೋರಿಸುವ ಸಲುವಾಗಿ ಹೋಗುತ್ತೇವೆ; ನಮ್ಮ ಪಾದಪೂಜೆ, ಭಿಕ್ಷ, ಮಂಗಳಾರತಿ ಮತ್ತು ಏಕಾಂತ ಎಲ್ಲವೂ ನಡೆಯುತ್ತಲೇ ಇದೆ.
"ಉಮೇಶ್ ರೇಡ್ಡಿಯಂತಹ ವಿಕೃತ ಕಾಮಿಯನ್ನು ಸೀಟಿನ ಮೇಲೆ ಕೂರಿಸಿದಂತಾಗಿದೆ" ಎಂದು ಯಾರೋ ಹೇಳಿದರಂತೆ. ಅಂತಹ ಹೇಳಿಕೆಗಳೆಲ್ಲ ನಮಗೆ ನಾಟುವುದಿಲ್ಲ. ಹಸಿ ಹಸಿ ಸುಳ್ಳನ್ನೇ ಅಪ್ಪಟ ಸತ್ಯವೆಂದು ನಾವು ನಮ್ಮ ಬುದ್ಧಿಮಾಂದ್ಯ ಭಕ್ತರಿಗೆ ಪ್ರವಚನಮಾಡುತ್ತೇವೆ. ಅವರು ನಂಬಿದ್ದರು, ನಂಬಿದ್ದಾರೆ, ನಂಬುತ್ತಾರೆ. ಅವರು ಹಾಗೆಯೇ ನಂಬಿರುವವರೆಗೆ ನಮಗೆ ಬೇಕಾದಂತೆಯೇ ನಾವು ಬದುಕುತ್ತೇವೆ."




June-10-2015
https://www.facebook.com/groups/1499395003680065/permalink/1626177201001844

ಹಾವಾಡಿಗ ಸಂಸ್ಥಾನದ ಹೆಸರು ಹಾಳುಮಾಡಲು ಷಡ್ಯಂತ್ರ ನಡೆಸಿದ್ದಾರೆ........!!
"ನಾವು ಎಲ್ಲಿಂದೆಲ್ಲಿಯವರೆಗೆ ಮಾಡಿದ್ದೂ ಲಫಡಾಗಳೇ ಎಂಬುದು ನಮ್ಮಾತ್ಮಕ್ಕೆ ಗೊತ್ತು. ಆದರೆ ಅದನ್ನು ಹೇಳಿದರೆ ನಮಗೆ ಬೇಕಾದಂತೆ ಬದುಕಲು ಸಾಧ್ಯವೇ?
ರಾಜ ಸನ್ಯಾಸ ಎಂಬುದರ ಅರ್ಥ ಕೆಲವರಿಗೆ ಇನ್ನೂ ಗೊತ್ತಿಲ್ಲ. ರಾಜ ಸನ್ಯಾಸ ಎಂದರೆ ರಾಜನ ಹಾಗೆ ಇರಬೇಕೆಂದೇ ಅರ್ಥವಲ್ಲ. ರಾಜರು ಬಳಸುತ್ತಿದ್ದ ಛತ್ರ, ಚಾಮರ, ದೀವಟಿಗೆ, ಪಲ್ಲಕ್ಕಿ ಇದನ್ನೆಲ್ಲ ಕಡ್ಡಾಯವಾಗಿ ಬಳಸಲೇಬೇಂಬ ಯಾವ ನಿಯಮವೂ ಇಲ್ಲ.
ರಾಜರಿಗೆ ಧರ್ಮಮಾರ್ಗ ಬೋಧನೆ ಮಾಡುವ, ರಾಜರಿಗೂ ಗುರುವಾಗಿರುವ ಹುದ್ದೆ ಎಂಬುದನ್ನು ಸಾಂಕೇತಿಕವಾಗಿ "ರಾಜಸನ್ಯಾಸ"ಎನ್ನುತ್ತಾರೆ. ರಾಜ ದಿಕ್ಕೆಟ್ಟರೆ, ಕಂಗೆಟ್ಟರೆ, ಅಧರ್ಮಿಯಾದರೆ, ಅನೈತಿಕತೆಗಿಳಿದರೆ, ದಾರಿತಪ್ಪಿದರೆ, ಧರ್ಮಸಂಕಟದಲ್ಲಿ ಸಿಲುಕಿಹಾಕಿಕೊಂಡರೆ ಸನ್ಮಾರ್ಗ ಯಾವುದು? ಯಾವುದು ಧರ್ಮಮಾರ್ಗ? ಹೇಗೆ ನಿಭಾಯಿಸಬೇಕು? ಎಂಬುದನ್ನು ರಾಜನಿಗೆ ಬೋಧಿಸುವ ಮಟ್ಟದ ಪ್ರಜ್ಞಾವಂತಿಕೆಯನ್ನೂ ಪಾಂಡಿತ್ಯವನ್ನೂ ಇರಿಸಿಕೊಂಡೂ, ತಾನು ಮಾತ್ರ ನಿರ್ಮೋಹಿಯಾಗಿರುವ ವ್ಯಕ್ತಿ ಎಂದರ್ಥ.
ಹಿಂದಕ್ಕೆ ಶಂಕರಾಚಾರ್ಯರು ಎಂಬೊಬ್ಬರಿದ್ದರಂತೆ. ತೀರಾ ಎಳೆಯ ವಯಸ್ಸಿನಲ್ಲಿಯೇ ಅವರಿಗೆ ಅಗಣಿತ ವಿದ್ವತ್ತು ಪ್ರಾಪ್ತವಾಗಿತ್ತು. ಹೇಳಬೇಕೆಂದರೆ ಅವರ ಇತಿಹಾಸ ನೋಡಿದರೆ, ವಿದ್ವತ್ತು ಜನ್ಮಜಾತವಾಗಿ ಅವರಿಗೆ ಬಂದಿತ್ತು; ಲೌಕಿಕವಾಗಿ ಅದನ್ನು ಪ್ರಚುರಪಡಿಸಲು ನೆಪಕ್ಕೆ ಗುರು ಮುಖವೊಂದು ಬೇಕಾಗಿತ್ತು. ೫-೬ ವಯಸ್ಸಿನಲ್ಲೇ ವೇದಾಧ್ಯಯನದಲ್ಲಿ ನಿರತರಾದರು. ೯ ವರ್ಷದೊಳಗೆ ಸಕಲ ವೇದೋಪನಿಷತ್ತುಗಳು,ಪುರಾಣಗಳು, ಷದ್ದರ್ಶನಗಳು ಎಲ್ಲದರಲ್ಲೂ ಪಾರಂಗತರಾಗಿಬಿಟ್ಟಿದ್ದರು.
ರಾಜಪ್ರಭುತ್ವದ ಕಾಲದಲ್ಲಿ ಬಹುತೇಕ ರಾಜರುಗಳು ಸಂಸ್ಕೃತ ಭಾಷೆಯನ್ನು ಕಲಿತುಕೊಳ್ಳುತ್ತಿದ್ದರು; ತಕ್ಕಮಟ್ಟಿಗೆ ವೇದ,ಶಾಸ್ತ್ರಗಳ ಅಧ್ಯಯನವೂ ನಡೆದಿರುತ್ತಿತ್ತು. ಅವರಲ್ಲಿ ಕೆಲವರು ಸ್ವಯಂ ಪಾಂಡಿತ್ಯ ಉಳ್ಳವರಾಗಿದ್ದು ಜನಸಾಮಾನ್ಯರ ಜ್ಞಾನವೃದ್ಧಿಗಾಗಿ ಸಾಹಿತ್ಯಕ ಕೃತಿಗಳನ್ನು ರಚಿಸುತ್ತಿದ್ದರು. ಅಂತಹ ಸಾಂಸ್ಕೃತಿಕ ಪರಂಪರೆ ನಮ್ಮ ಮೈಸೂರು ಮಹಾರಾಜರುಗಳ ಆಳ್ವಿಕೆಯ ವರೆಗೂ ಹರಿದುಬಂದಿತ್ತು. ಅದಿರಲಿ.
ಪಾಂಡಿತ್ಯದಲ್ಲಿ ಸಹಜ ಸವ್ಯಸಾಚಿಯೆನಿಸಿದ ಶಂಕರರ ತೇಜಸ್ಸನ್ನೂ, ಘನಮಹಿಮೆಯನ್ನೂ ದೂರದಿಂದಲೇ ತಿಳಿದ ಹಲವು ಅರಸರು ಪಲ್ಲಕ್ಕಿ, ಛತ್ರ, ಚಾಮರಾದಿ ಗೌರವಗಳನ್ನು ಸಮರ್ಪಿಸಿ ತಮ್ಮಲ್ಲಿಗೆ ದಯಮಾಡಿಸಬೇಕೆಂದು ಸ್ವಾಗತಿಸುತ್ತಿದ್ದರು. ಶಂಕರರ ತವರು ಕಾಲಟಿಯ ಪ್ರದೇಶವನ್ನು ಆಳುತ್ತಿದ್ದ ಕೇರಳದ ರಾಜ ರಾಜಶೇಖರ, ಶಂಕರರು ತಮ್ಮಲ್ಲೇ ಇರಬೇಕೆಂದೂ ಏನು ಸೌಕರ್ಯ, ವ್ಯವಸ್ಥೆ, ಧನ-ಕನಕ ಕೇಳಿದರೂ ಒದಗಿಸುತ್ತೇನೆಂದೂ ಹೇಳಿದ್ದ.
ಮಿಥ್ಯಾ ಪ್ರಪಂಚದ ಜನರನ್ನು ಓಲೈಸುವ ಸಲುವಾಗಿ ಹುಟ್ಟಿದ ಜನ್ಮ ಶಂಕರರದ್ದಲ್ಲ. ಹೀಗಾಗಿ ಅವರು ಯಾವ ರಾಜ ಏನನ್ನೇ ಕೊಡಲು ಮುಂದೆ ಬಂದರೂ ನಯವಾಗಿಯೇ ತಿರಸ್ಕರಿಸಿದರು. ಅಂದಿನ ಅಖಂಡ ಭಾರತವನ್ನು ಮೂರು ಸಲ ಓಡಾಡಿದರು; ನೆನಪಿಡಿ ಬಾಲ ಸನ್ಯಾಸಿ, ಕಾಲ್ನಡಿಗೆಯಲ್ಲಿ, ಕಾಡುಮೇಡುಗಳುಳ್ಳ, ಗುಡ್ಡಬೆಟ್ಟಗಳುಳ್ಳ, ನದಿ ಕಣಿವೆಗಳುಳ್ಳ ಮಾರ್ಗದಲ್ಲಿ.
ಇಂದು ನಾವು ಯಾವುದೋ ರಾಜ ಕೊಟ್ಟ ಎಂಬ ಕತೆ ಕಟ್ಟಾದರೂ ಇಲ್ಲದ ಅಡ್ಡವೇಷಗಳನ್ನು ಬರೆದುಕೊಳ್ಳುತ್ತೇವೆ. ಹಾರ ತುರಾಯಿ, ಛತ್ರ, ಚಾಮರ, ಮಕರತೋರಣ, ಪಲ್ಲಕ್ಕಿ, ಕಿರೀಟ ಇತ್ಯಾದಿ ಎಷ್ಟಿದ್ದರೂ ನಮಗೆ ಸಾಲುವುದೇ ಇಲ್ಲ. ಸದ್ಯ ಸೀಟಿನಲ್ಲಿರುವ ನಮಗಂತೂ ಅವುಗಳನ್ನೆಲ್ಲ ಧರಿಸಿ ಹೊರಟಾಗ ಸುಂದರ ಮಹಿಳೆಯರಿಗೆ ಚಂದದ ಪೋಸು ಕೊಡುವಾಸೆ.
ನಮ್ಮ ಕತೆಗೆ ಸಾಹಿತ್ಯವೊದಗಿಸುವ ಜನ ಹೇಳಿದರೆಂದು ಕಾಳಿದಾಸನಿಂದ ಡಿವಿಜಿಯವರೆಗೆ ಎಲ್ಲರ ಕೃತಿಗಳನ್ನೂ ನಾವು ಬಳಸುತ್ತೇವೆ. ಸಂತ, ದಾರ್ಶನಿಕ ಮಹಾಕವಿ ಕಾಳಿದಾಸ ವೇಶ್ಯೆಯ ಮನೆಯಲ್ಲಿ ವಿಶ್ರಮಿಸುತ್ತಿದ್ದರೂ ಅವಳನ್ನೆಂದೂ ಕಾಮದ ಕಣ್ಣುಗಳಿಂದ ನೋಡಲೇ ಇಲ್ಲ. ಆಕೆ ಅದೆಷ್ಟೇ ಯತ್ನಿಸಿದರೂ ಕಾಳಿದಾಸ ಅವಳ ದೇಹಸೌಂದರ್ಯ ಒದಗಿಸಬಹುದಾದ ಅಲ್ಪತೃಪ್ತಿಗಾಗಿ ತಯಾರಾಗಲೇ ಇಲ್ಲ. ಆಕೆಯನ್ನು ತನ್ನ ಸಹೋದರಿಯಂತೆಯೇ ಕಂಡ.
ಜ್ಞಾಪಕ ಚಿತ್ರಶಾಲೆಯಲ್ಲಿ ತಮ್ಮ ಜೀವನದ ಹಲವು ಪ್ರಮುಖರ ವ್ಯಕ್ತಿತ್ವಗಳನ್ನು ಅಕ್ಷರಗಳಲ್ಲಿ ಚಿತ್ರಿಸಿದ ದಾರ್ಶನಿಕ ಕವಿ ಡಿವಿಜಿ, ಒಂದೆಡೆ ತಮ್ಮ ತಾತ [ಅಜ್ಜ-ತಂದೆಯ ತಂದೆ]ನನ್ನು ಪರಿಚಯಿಸುತ್ತಾರೆ. ತಮ್ಮ ತಾತನಿಗೆ ಎರಡು ಹೆಂಡಿರೆಂದೂ, ಕಟ್ಟಿಕೊಂಡವಳೊಬ್ಬಳು ಮತ್ತು ಇಟ್ಟುಕೊಂಡವಳೊಬ್ಬಳು ಎಂದೂ ಶಾರ್ಟ್ ಆಗಿ ತಿಳಿಸಿ, "ನಮಗ್ಯಾತಕ್ಕೆ ಅವೆಲ್ಲ; ಅವರಲ್ಲಿದ್ದ ಒಳ್ಳೆಯತನವನ್ನು ನಾವು ಅನುಸರಿಸಿಕೊಂಡರಾಯಿತು" ಎನ್ನುತ್ತಾರೆ.
ಬೆಂಗಳೂರಿನ ನಾಗರತ್ನಮ್ಮ ಎಂಬ ಹೆಸರಾಂತ ವೇಶ್ಯೆಗೆ ಇನ್ನೂ ವಯಸ್ಸಿರುವ ಕಾಲದಲ್ಲಿ ಡಿವಿಜಿ ಸ್ವತಃ ಒಮ್ಮೆ ಅವಳ ಮನೆಗೆ ಹೋಗಿದ್ದರು; ಮಲಗಲಿಕ್ಕಲ್ಲ-ಸಂದರ್ಶನ ಮಾಡಲಿಕ್ಕೆ. ಅನೇಕ ಗಂಡಸರ ತನುವನ್ನು ತಣಿಸಿದ ನಾಗರತ್ನಮ್ಮಳನ್ನು ಡಿವಿಜಿ ಬಯಸ ಬಹುದಿತ್ತು; ಯಾಕೆಂದರೆ ತೀರಾ ಪ್ರಾಯದಲ್ಲಿಯೇ ಹೆಂಡತಿ ಭಾಗೀರಥಮ್ಮನನ್ನು ಕಳೆದುಕೊಂಡಿದ್ದರು ಡಿವಿಜಿ. ಆದರೆ ಅವರ ಮನಸ್ಸು ಕಾಮಕ್ಕೆ ಫುಲ್ ಸ್ಟಾಪ್ ಹಾಕಿತ್ತು. ಗುಂಡಗಿದ್ದ ಗುಂಡಪ್ಪನವರು ಕಾಮಕೇಳಿಯಲ್ಲಿ ತೊಡಗಲು ಅನೇಕ ಅವಕಾಶಗಳಿದ್ದರೂ ಅವರು ತ್ರಿಕರಣ ಪೂರ್ವಕ ಬ್ರಹ್ಮಚರ್ಯವನ್ನು ಪಾಲಿಸಿದರು.
ಕನ್ನಡ ಸಾಹಿತ್ಯ ರಂಗದಲ್ಲಿ ನುಡಿದಂತೆಯೇ ನಡೆದ ಒಬ್ಬನೇ ಒಬ್ಬ ವ್ಯಕ್ತಿಯೆಂದರೆ ಡಿವಿಜಿ. ನೆಂಟರ ಮನೆಯ ಸಮಾರಂಭಕ್ಕೆ, ಇರುವ ಒಂದೇ ಹರುಕು ಸೀರೆಯಲ್ಲಿ ಹೇಗೆ ಹೋಗಲಿ ಎಂದು ಯೋಚಿಸಿ. ಗಂಡನಿಗೆ ಬಡತನದ ನೋವು ತಾಗಬಾರದೆಂದು ನಿಜವಾದ ಕಾರಣ ತಿಳಿಸದೇ, ಯಾವುದೋ ಸಬೂಬು ಹೇಳಿ ನಿರಾಕರಿಸಿದ ಸಾಧ್ವಿ ಅವರ ಮಡದಿ. ಕಿತ್ತುತಿನ್ನುವ ಬಡತನವನ್ನು ಅನುಭವಿಸಿದ ಡಿವಿಜಿ ಬ್ರಿಟಿಷರ ಕಾಲದಲ್ಲಿ ಶ್ರೀಮಂತ ಶೇಕ್ ದಾರ್ ಕುಟುಂಬದಲ್ಲಿ ಜನಸಿದವರು.
ಸಿರಿತನ ಮತ್ತು ಬಡತನಗಳ ಮೇಲಾಟಗಳನ್ನು ಕಂಡುಂಡು ಹಣ್ಣಾದ ಜೀವ ಈ ಲೋಕಕ್ಕೆ ಕಗ್ಗವನ್ನೂ ಜೀವನಧರ್ಮಯೋಗವನ್ನೂ ಅನುಗ್ರಹಿಸಿತು. ತನಗೆ ಬರಬೇಕಾಗಿದ್ದ ಹಣವನ್ನೂ ಬಳಸದೇ ಬಿಟ್ಟ, ಮೈಸೂರು ಸಂಸ್ಥಾನದಿಂದ ನೀಡಲ್ಪಟ್ಟ ಚೆಕ್‍ಗಳನ್ನು ಎನ್ ಕ್ಯಾಶ್ ಮಾಡಿಸದೇ ಬಿಟ್ಟ ನಿರ್ಮೋಹಿ ಸಂತ. ಹೀಗಾಗಿಯೇ ಇಡೀ ಕರ್ನಾಟಕ ಇಂದಿಗೂ ಅವರನ್ನು ಸ್ಮರಿಸುತ್ತದೆ. ದಾರ್ಶನಿಕರೆಂದು ಗೌರವಿಸುತ್ತದೆ.
ಕಚ್ಚೆಹರುಕರಾದ ನಮಗೆ ಇವರೆಲ್ಲರ ಜೀವನಾದರ್ಶಗಳು ಕಣ್ಣಿಗೆ ಕಾಣಿಸುವುದಿಲ್ಲ. ಯಾರೋ ಏನನ್ನೋ ಬರೆದುಕೊಡುತ್ತಾರೆ; ಅದನ್ನೇ ನಾವು ಐಪ್ಯಾಡಿನಲ್ಲಿ ಹಾಕಿಕೊಂಡು ಓದುತ್ತೇವೆ. ಕೆಸರೊಳಗಿದ್ದೂ ಮೇಲೇಳುವ ಕಮಲ, ಮೇಲಿಂದ ನೀರನ್ನು ಹೀರದ ಕಮಲಪತ್ರ ನಮಗೆ ಕಾಣಿಸುವುದಿಲ್ಲ. ಒಬ್ಬ ಕಾಳಿದಾಸ, ಒಬ್ಬ ಡಿವಿಜಿ ಅನುಸರಿಸಿದ ಸಂತ ಜೀವನ, ನಿರ್ಮೋಹೀ ಜೀವನ ನಮ್ಮ ಯೋಚನೆಗೂ ನಿಲುಕಲಾರದ್ದು.
ಒಡೆಯನೆಂದೋ ಬಂದು ಕೇಳ್ವನದಕ್ಕುತ್ತರವ |
ಕೊಡಬೇಕು ತಾನೆನುವವೊಲು ಋಜತೆಯಿಂದ ||
ಒಡಲ ಜಾಣಿನ ಜೀವ ಶಕ್ತಿಗಳನೆಲ್ಲವನು |
ಮುಡುಪುಕೊಟ್ಟನು ಭರತ-ಮಂಕುತಿಮ್ಮ ||
ಭರತನ ವ್ಯಕ್ತಿತ್ವ, ಅವನಲ್ಲಿದ್ದ ಸತ್ಯ, ಕಾರ್ಯತತ್ಪರತೆ, ನೈತಿಕತೆ, ಜವಾಬ್ದಾರಿ, ಭಯ ಮೊದಲಾದ ಅಂಶಗಳನ್ನೆಲ್ಲ ಅದೆಷ್ಟು ಎಳೆ ಎಳೆಯಾಗಿ ಸೆರೆಹಿಡಿದಿದ್ದಾರೆ ಡಿವಿಜಿ. ಪ್ರಾಯಶಃ ಸಂತರ ಚಿಂತನೆ ಎಂದರೆ ಇಂತದ್ದೇ ಸಾತ್ವಿಕ ಮತ್ತು ಉದಾತ್ತ ಚಿಂತನೆ. ಇವುಗಳನ್ನು ಬಿಟ್ಟು ರೌಡೀರಾಜ್ಯಭಾರ ಮಾಡಲು ಹೊರಟ ಕಾವಿ ವೇಷದವನಿದ್ದರೆ ಅವನು ಸಂತನಲ್ಲ ಶೋಭರಾಜ.
ಆದಿಶಂಕರ, ಕಾಳಿದಾಸ ಮತ್ತು ಡಿವಿಜಿ ಈ ಮೂರೂ ಹೆಸರಿಗೆ ಮಸಿ ಹಚ್ಚಿದ್ದೇವೆ ನಾವು; ಯಾಕೆಂದರೆ ಅವರ ಹೆಸರು ಹೇಳುವ ಅರ್ಹತೆಯೂ ನಮಗಿಲ್ಲ. ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ಏನೇ ಬಂದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಪಟಾಲಮ್ಮಿನ ಕೆಲವರನ್ನು ಕಳಿಸಿ "ಇದೆಲ್ಲ ನಮ್ಮ ಸಂಸ್ಥಾನದ ಹೆಸರು ಹಾಳುಮಾಡುವ ಷಡ್ಯಂತ್ರ" ಎಂದು ಹೇಳಿಸುತ್ತೇವೆ ನಾವು.
ಉತ್ತಮ ಮಾರ್ಗದಲ್ಲಿ ನಡೆಯುವ ಸನ್ನಡತೆಯ ಸನ್ಯಾಸಿಯ ವಿರುದ್ಧ ಯಾರೂ ಯಾವಕಾಲಕ್ಕೂ ಯಾವ ಷಡ್ಯಂತ್ರವನ್ನೂ ಮಾಡುವುದಿಲ್ಲ. ’ಷಡ್ಯಂತ್ರ’ ಎಂಬುದು ದುಷ್ಟಬುದ್ಧಿಯ ಕಾಲದಲ್ಲಿ ಜನಿಸಿದ ರಾಜಕೀಯ ಪದ; ರಾಜಕಾರಣಿಗಳು ಬಳಸುವ ಪದ.
ಅದರಲ್ಲಂತೂ ನಮ್ಮ ಸಮಾಜದಲ್ಲಿ ಯಾರೊಬ್ಬರೂ ಸಹ ಯವುದೇ ಸನ್ಯಾಸಿಯ ವಿರುದ್ಧ ವಿನಾಕಾರಣ ತಿರುಗಿ ಬೀಳುವುದಿಲ್ಲ. ನಮ್ಮ ನಡತೆಗೆಟ್ಟ ನಡಾವಳಿಗಳನ್ನು ಕಂಡು ಬೇಸತ್ತ ಬಹುತೇಕ ಸಮಾಜ ಬಾಂಧವರು ಇಂದು ಒಳಗೊಳಗೇ ತಿರುಗಿಬಿದ್ದಿದ್ದಾರೆ. ಯಾವಕ್ಷಣದಲ್ಲಿ ನಾವು ಒಳಗೆ ಹೋಗುತ್ತೇವೋ ಎಂದು ನೋಡುತ್ತಿದ್ದಾರೆ. ಅವರೆಲ್ಲರ ಮನದಿಂಗಿತವೂ ಅದೇ ಆಗಿದೆ.
ನಮ್ಮ ಒತ್ತಾಯಕ್ಕೆ ಕಟ್ಟುಬಿದ್ದ ಬೆರಳೆಣಿಕೆಯ ಮುತ್ಸದ್ದಿಗಳಿಗೆ ನಮಗಿಂತ ನಮ್ಮ ಸೀಟಿನ ಗೌರವದ ಪ್ರಶ್ನೆ ಇದಾಗಿಬಿಟ್ಟಿದೆ; ನಾವು ಒಳಗೆ ಹೋದರೆ ಸೀಟಿಗೆ ಅವಮಾನವಾಗುತ್ತದೆ ಎಂಬ ಯೋಚನೆ ಅವರಲ್ಲಿದೆ. ನಮ್ಮನ್ನು ಕಳಿಸಿ ಸೀಟನ್ನು ಶುದ್ಧೀಕರಿಸಲು ಅವರು ಒಪ್ಪುತ್ತಿಲ್ಲ. ಇನ್ನು ನಾವೇ ಸೃಷ್ಟಿಸಿದ ಹಳದೀ ತಾಲಿಬಾನ್, ಜೊತೆಗೆ ಬುದ್ಧಿಮಾಂದ್ಯ ಭಕ್ತರು. ಇವರನ್ನುಳಿದು ಇನ್ಯಾರೂ ನಮ್ಮನ್ನು ಒಪ್ಪುತ್ತಿಲ್ಲ.
ಪತ್ರಿಕೆಗಳು ನಮ್ಮ ನಖಶಿಖಾಂತ ಎಲ್ಲಕಡೆಗೂ ಫೋಕಸ್ ಮಾಡಿ ಜನ್ಮ ಜಾಲಾಡಿವೆ. ಸಾಕಷ್ಟು ಹಗರಣಗಳು ಸಾರ್ವಜನಿಕ ಕಿವಿಗೆ ಒಂದೊಂದಾಗಿ ಕೇಳಿಬಂದಿವೆ. ಇನ್ನೂ ನಮಗೆ ಮರ್ಯಾದೆ ಇದೆ, ಸ್ಥಾನಮಾನ ಇದೆ, ಘನತೆ ಇದೆ ಎಂದು ಹೇಳುವುದು ನಮಗಿರುವ ದಾಂಡಿಗತನದ ದರ್ಪವಷ್ಟೆ.
ಒಪ್ಪಿತದ ರತಿಕ್ರೀಡೆಯೋ ಸಮ್ಮತಿಯ ಜಲಕ್ರೀಡೆಯೋ; ಅದಲ್ಲ ವಿಷಯ. ರತಿಕ್ರೀಡೆ ನಡೆದಿದ್ದು ಹೌದು ಎಂಬುದು ಸಾಬೀತಾಗಿದೆ. ಹೀಗಾಗಿ ನಾವು ಕಪಟ ಸನ್ಯಾಸಿ ಎಂಬುದೂ ಜನರಿಗೆ ತಿಳಿದುಹೋಗಿದೆ. ಇನ್ನೂ ನಾವು ಇಲ್ಲೇ ಇದ್ದರೆ ಮುಂದೊಂದು ದಿನ ಸಾರ್ವಜನಿಕರು ಕಲ್ಲು ಹೊಡೆದಾರು ಎಂಬ ಭಯವೂ ಇದೆ. ಆದರೂ ತಾಲಿಬಾನಿಗಳ ಪಹರೆ ಕಾವಲಿನಲ್ಲಿ ಅಷ್ಟಮಂಗಲ ಪ್ರಶ್ನೆಗಳನ್ನು ಕೇಳುತ್ತ, ನಾನಾವಿಧ ಡೊಂಬರಾಟಗಳನ್ನು ನಡೆಸುತ್ತ ಬಿಲ್ಡಪ್ ತೋರಿಸುತ್ತಿದ್ದೇವೆ ನಾವು.
ವೃತ್ತಿಯಲ್ಲಿ ವೇಶ್ಯೆಯಾಗಿದ್ದ ಬೆಂಗಳೂರಿನ ನಾಗರತ್ಮಮ್ಮ ಮಾನಸಿಕವಾಗಿ ತನ್ನ ದೇಹವನ್ನು ಎಂದೋ ಬಿಟ್ಟುಬಿಟ್ಟಿದ್ದಳು. ಸಂತ ತ್ಯಾಗರಾಜರ ಪುಣ್ಯಜೀವನಕ್ಕೆ ಮಾರುಹೋಗಿ, ಅವರ ಹಾಡುಗಳ ಮೂಲಕ ಭಗವಂತನನ್ನು ಆರಾಧಿಸುತ್ತ, ತಾನು ದುಡಿದ ಹಣವನ್ನೆಲ್ಲ ಸುರಿದು ತಮಿಳುನಾಡಿನಲ್ಲಿ ತ್ಯಾಗರಾಜರಿಗೊಂದು ಭವ್ಯ ಸ್ಮಾರಕ ಕಟ್ಟಿಸಿದಳು. ಇಂತಹ ವೇಶ್ಯೆಗಿರುವ ಮನೋನ್ನತಿ ನಮಗಿಲ್ಲ ಎಂದು ನಮಗೆ ಗೊತ್ತಾಗುವುದೇ ಇಲ್ಲ.
ನಮ್ಮ ಕಾಮಕೇಳಿ. ದರ್ಪ, ದುರಹಂಕಾರ, ಆಸ್ತಿ ಕಬಳಿಕೆ, ತಪಸ್ಸು ರಹಿತ ಜೀವನ, ಬೂಟಾಟಿಕೆಯ ಮಾತುಗಳು, ಬುದ್ಧಿ ಹೇಳಿದವರ ಮೇಲ ರೌಡಿಸಂ, ಕೆಟ್ಟ ರಾಜಕಾರಣ, ಒಡೆದಾಳುವ ಅನೀತಿ, ಪಾಪದ ಹಣಸಂಗ್ರಹ, ಪರಂಪರೆಗೆ ವಿದೋಧವಾದ, ಯತಿಧರ್ಮಕ್ಕೆ ನಿಷಿದ್ಧವಾದ ನಡಾವಳಿಗಳು, ಐಶಾರಾಮೀ ಜೀವನ ಇದನ್ನೆಲ್ಲ ಕಂಡ ಭಕ್ತರು ನಿಜವಾಗಿಯೂ ಕೆಲವು ವರ್ಷಗಳಿಂದ ಧರ್ಮಸಂಕಟದಲ್ಲಿ ಬಿದ್ದಿದ್ದಾರೆ; ಧರ್ಮಸಂಕಟಕ್ಕೆ ಪರಿಹಾರೋಪಾಯಗಳನ್ನು ಹೇಳಬೇಕಾದ ಜಾಗದಲ್ಲಿದ್ದ ನಾವೇ ಅವರನ್ನು ಧರ್ಮಸಂಕಟದಲ್ಲಿ ಇರಿಸಿದ್ದೇವೆ.
ಬತ್ತಿಯ ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದಂತೆ, ನಮ್ಮ ಗತಿಯೂ ಹಾಗೆಯೋ ಎಂಬ ಅನುಮಾನದಲ್ಲೇ ಮುಂದಿನ ಜಲಸ್ತಂಭನಕ್ಕೆ ರೆಡಿಯಾಗುತ್ತಿದ್ದೇವೆ ನಾವು. ಯಾರಲ್ಲಿ? ಸಂಜಯ............ "

June 11 
https://www.facebook.com/groups/1499395003680065/permalink/1626530900966474/


ಶಾಲೆಗೆ ಚಕ್ಕರ್, ಊಟಕೆ ಹಾಜರ್, ಲೆಕ್ಕಕೆ ಬರಿಸೊನ್ನೆ...
[ಇಂದು ನಿರ್ವಾಣ ಷಟ್ಕದ ಗಹನ ಆಧ್ಯಾತ್ಮ ವಿಚಾರ]
"ಸನ್ಯಾಸಿಯಾಗುವವನ ಮೊಟ್ಟ ಮೊದಲಿನ ಪ್ರಶ್ನೆ ನಾನು ಯಾರು? ನಾನು ಯಾರು ಎಂಬ ಸಂದೇಹಕ್ಕೆ ಉತ್ತರ ಹುಡುಕತೊಡಗುವವರು ಆಧ್ಯಾತ್ಮದ ಆಳಕ್ಕೆ ಹೋಗಬೇಕಾದ ಅನಿವಾರ್ಯತೆ ಬರುತ್ತದೆ. ಉತ್ತರದಾಯಿತ್ವ ಇರುವುದು ಸಾಧಕರಲ್ಲಿ ಮಾತ್ರ. ಸಾಮಾನ್ಯ ಸಾಧಕರೂ ತಾವು ಯಾರೆಂದು ಹೇಳಬಲ್ಲರಷ್ಟೇ ವಿನಃ ಇನ್ನೊಬ್ಬ ಯಾರು ಎಂದು ಹೇಳುವುದು ಕಷ್ಟ.
ನಾನು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟ ಕೆಲವರು ಆಧ್ಯಾತ್ಮ ಪಥಿಕರಾಗುತ್ತಾರೆ. ನಾನು ಯಾರು ಎಂಬ ಸಮಸ್ಯೆಗೆ ಪರಿಹಾರ ಹುಡುಕ ಹೊರಡುವವರಿಗೆ ಜಾತಿ ಮತ ಭೇದಗಳಿಲ್ಲ. ಬೆಳಗೆರೆ ಕೃಷ್ಣಶಾಸ್ತ್ರಿಗಳು ’ಯೇಗ್ದಾಗೆಲ್ಲಾ ಐತೆ’ ಮೂಲಕ ಮುಕುಂದೂರು ಸ್ವಾಮಿಗಳನ್ನು ಪರಿಚಯಿಸಿದ್ದರು. ’ಯೇಗ್ದಾಗೆಲ್ಲಾ ಐತೆ’ ಎಂಬುದು ಮುಕುಂದೂರರ ಮಾತು; ಯೋಗದಲ್ಲೆ ಎಲ್ಲವೂ ಇದೆ ಎಂದರ್ಥ. ಮುಕುಂದೂರರ ತನ್ನೊಳಗಿನ ತನ್ನ ಬಗೆಗೆ ಹೇಳುವ ಸ್ವಾರಸ್ಯವನ್ನು ನೀವೆಲ್ಲ ಅರಿಯಬೇಕು.
ಇನ್ನೊಬ್ಬರು ಮಹಾನ್ ಸಾಧಕರು ಹೀಗೆ ಹೇಳಿದ್ದಾರೆ-"ಮೃಷ್ಟಾನ್ನ ಭೋಜನವೇ ಬೇಕು ಅಂತ ಹಠ ಹಿಡಿದಿದ್ದ, ಮೂರು ದಿನಗಳಿಂದ ಇಲ್ಲೇ ಕಟ್ಟಿಹಾಕಿದ್ದೇನೆ. ನದಿಯಲ್ಲಿ ಸ್ನಾನ ಮಾಡಿಸಿದೆ. ಈಗ ಹದಕ್ಕೆ ಬಂದಿದ್ದಾನೆ." ಅವರ ಮಾತುಗಳನ್ನು ಕೇಳುತ್ತಿದ್ದವರು ಹಾಗೆ ಹಠ ಹಿಡಿದವ ಯಾರಿರಬಹುದು ಎಂದು ಸುತ್ತಮುತ್ತ ಹುಡುಕುತ್ತಿದ್ದರಂತೆ. ಆಗ ಅದೇ ಸಾಧಕರು ಅವರ ಕುತೂಹಲವನ್ನು ತಣಿಸಿದರು, "ಏ ಅಲ್ಯಾಕೆ ಹುಡುಕ್ತೀರಿ? ಇಲ್ಲೇ ಇದ್ದಾನವ, ನನ್ನೊಳಗೇ ಇದ್ದಾನೆ. ಈಗ ಮೃಷ್ಟಾನ ಕೊಡೆಂದು ಹೇಳುವುದನ್ನು ನಿಲ್ಲಿಸಿದ್ದಾನೆ."
ಹಾಗಾದರೆ ಸಾಧಕರು ಹೇಳಿದ ವ್ಯಕ್ತಿ ಯಾರು? ಬೇರೆ ಯಾರಲ್ಲ. ಅದು ಅವರದ್ದೇ ಅಂತರಂಗ, ಅವರ ಜೀವಾತ್ಮ. ಜೀವಾತ್ಮನನ್ನು ಪರಮಾತ್ಮನನ್ನಾಗಿ ಪರಿವರ್ತಿಸುವುದು ಬಹಳ ಸುಲಭದ ಕೆಲಸವಲ್ಲ. ಸುಲಭವಾಗಿದ್ದರೆ ಜನ ಅಲ್ಲಿಯೂ ಮೀಸಲಾತಿ ಕೇಳುತ್ತಿದ್ದರು! ಆ ಪ್ರಯತ್ನದಲ್ಲಿ ತೇರ್ಗಡೆ ಹೊಂದುವವರೇ ವಿರಳ. ದೀಕ್ಷೆಯನ್ನೇನು ಯಾರು ಬೇಕಾದರೂ ಪಡೆಯಬಹುದು. ಔಪಚಾರಿಕವಾಗಿ ದೀಕ್ಷೆ ಪಡೆದ ಮಾತ್ರಕ್ಕೆ ಆತ ಸಾಧಕನಾಗುವುದಿಲ್ಲ, ಗುರುತ್ವವನ್ನು ಪಡೆದುಕೊಳ್ಳುವುದಿಲ್ಲ; ದೀಕ್ಷೆ ಪಡೆದಾತನನ್ನು ಜನ ಗುರು ಎಂದು ಗೌರವಿಸುವುದು ಜನರ ದೊಡ್ಡತನ.
ಭಗವಾನ್ ಶ್ರೀಧರ ಸ್ವಾಮಿಗಳಿಗೆ ಧಾರವಾಡ ಪೇಡೆಯೆಂದರೆ ಅತ್ಯಂತ ಪ್ರೀತಿಯಾಗಿತ್ತು. ಸನ್ಯಾಸ ಸ್ವೀಕಾರಕ್ಕೂ ಮುನ್ನ ಸಾಧು ಜೀವನದಲ್ಲಿದ್ದಾಗಲೇ ಅವರೊಮ್ಮೆ ಸ್ವಲ್ಪ ಪೇಡೆ ಖರೀದಿಸಿ ತಂದರು. ಅದಕ್ಕೊಂದಷ್ಟು ದನದ ಸಗಣಿಯನ್ನು ಮಿಶ್ರಣಮಾಡಿ ಸೇವಿಸಿದರು. ಕೆಲವು ನಿಮಿಷಗಳಲ್ಲೆ ತಿಂದದ್ದೆಲ್ಲ ವಾಂತಿಯಾಯಿತು. ಪೇಡೆಯನ್ನು ಕಂಡರೆ ಅವರ ಮನಸ್ಸು ಹೇಸುವಂತಾಯಿತು.
ಸಂಗ ಪರಿತ್ಯಾಗ ಎಂದರೆ ಹೀಗೆಯೇ ಇರುತ್ತದೆ. ಯಾವುದು ಬೇಕು? ಯಾವುದು ಬೇಡ? ಯಾವುದನ್ನು ಆತುಕೊಳ್ಳಬೇಕು? ಯಾವುದನ್ನು ತ್ಯಾಗಮಾಡಬೇಕು? ಇದೆಲ್ಲವನ್ನೂ ವಿರಾಗಿಯಾದವನು ಸಹಜವಾಗಿ ಬಲ್ಲ.
ನಾನು ಯಾರೆಂಬುದನ್ನು ಕೌತುಕಮಯವಾಗಿ ವಿವರಿಸುವ ಆದಿಶಂಕರರು ನಿರ್ವಾಣ ಷಟ್ಕದ ಮೂಲಕ ಅದನ್ನು ಪದಗಳಲ್ಲಿ ಬಂಧಿಸಿದ್ದಾರೆ.
ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ |
ನ ಚ ವ್ಯೋಮ ಭೂಮಿರ್-ನ ತೇಜೋ ನ ವಾಯುಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||
ನಾನು ಮನಸ್ಸಲ್ಲ, ಬುದ್ಧಿಯಲ್ಲ, ಅಹಂಕಾರವಲ್ಲ, ಚಿತ್ತವೂ ಅಲ್ಲ
ಕಿವಿಯಲ್ಲ, ನಾಲಿಗೆಯಲ್ಲ, ಮೂಗಲ್ಲ, ನೇತ್ರದ್ವಯವಲ್ಲ,
ಆಕಾಶವಲ್ಲ, ಭೂಮಿಯಲ್ಲ, ಅಗ್ನಿಯಲ್ಲ, ವಾಯುವೂ ಅಲ್ಲ
ಯಾರು ನಾನು ಹಾಗಾದರೆ? ಚಿದಾನಂದ ರೂಪ ಶಿವನೇ ನಾನು
ಅಹಂ ಪ್ರಾಣ ಸಂಙ್ಞೋ ನ ವೈಪಂಚ ವಾಯುಃ
ನ ವಾ ಸಪ್ತಧಾತುರ್-ನ ವಾ ಪಂಚ ಕೋಶಾಃ |
ನವಾಕ್ಪಾಣಿ ಪಾದೌ ನ ಚೋಪಸ್ಥ ಪಾಯೂ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||
ನಾನು ಪ್ರಾಣವಲ್ಲ, ಪಂಚ ವಾಯುವೂ ಅಲ್ಲ
ದೇಹದ ಸಪ್ತ ಧಾತುವಲ್ಲ, ಪಂಚಕೋಶವಲ್ಲ
ಮಾತಿನ ಸಾಧನವಲ್ಲ, ಪಾದವಲ್ಲ, ಹಸ್ತವಲ್ಲ, ನಿಲುವೂ ಅಲ್ಲ
ಚಿದಾನಂದ ರೂಪವಾದ ಶಿವನೇ ನಾನು ಶಿವನೇ ನಾನು
ನ ಮೇ ದ್ವೇಷರಾಗೌ ನ ಮೇ ಲೋಭಮೋಹೋ
ಮದೋ ನೈವ ಮೇ ನೈವ ಮಾತ್ಸರ್ಯಭಾವಃ |
ನ ಧರ್ಮೋ ನ ಚಾರ್ಧೋ ನ ಕಾಮೋ ನ ಮೋಕ್ಷಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||
ನನಗೆ ರಾಗದ್ವೇಷವಿಲ್ಲ, ಲೋಭವೂ ಮೋಹವೂ ಇಲ್ಲ
ಸೊಕ್ಕೂ ಇಲ್ಲ ಮತ್ಸರವೂ ಇಲ್ಲ
ಧರ್ಮವಲ್ಲ, ಅರ್ಥವಲ್ಲ, ಕಾಮವಲ್ಲ, ಮೋಕ್ಷವಲ್ಲ
ಚಿದಾನಂದ ರೂಪವಾದ ಶಿವನೇ ನಾನು ಶಿವನೇ ನಾನು
ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಧಂ ನ ವೇದಾ ನ ಯಙ್ಞಃ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||
ನನಗೆ ಪುಣ್ಯವಿಲ್ಲ, ಪಾಪವಲ್ಲ, ಸುಖವಲ್ಲ, ದುಃಖವಲ್ಲ,
ಮಂತ್ರವಲ್ಲ, ತೀರ್ಥವಲ್ಲ, ವೇದವಲ್ಲ, ಯಜ್ಞವಲ್ಲ
ಭೋಗವಲ್ಲ, ಭೋಗದ ವಸ್ತುವಲ್ಲ, ಭೋಗಿಸುವವನೂ ಅಲ್ಲ
ಚಿದಾನಂದ ರೂಪವಾದ ಶಿವನೇ ನಾನು ಶಿವನೇ ನಾನು
ನ ಮೃತ್ಯುರ್-ನ ಶಂಕಾ ನ ಮೇ ಜಾತಿ ಭೇದಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್-ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||
ನನಗೆ ಮೃತ್ಯುವಿಲ್ಲ, ಶಂಕೆಯಲ್ಲ, ಜಾತಿ ಭೇದವಿಲ್ಲ
ಹುಟ್ಟಿಸಿದ ತಂದೆ-ತಾಯಿಗಳೆಂಬವರಿಲ್ಲ
ಬಂಧುಗಳಿಲ್ಲ, ಮಿತ್ರರಿಲ್ಲ, ಗುರುವಿಲ್ಲ, ಶಿಷ್ಯನೂ ಇಲ್ಲ,
ಚಿದಾನಂದ ರೂಪವಾದ ಶಿವನೇ ನಾನು ಶಿವನೇ ನಾನು
ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭೂತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ |
ನ ವಾ ಬಂಧನಂ ನೈವ ಮುಕ್ತಿ ನ ಬಂಧಃ |
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||
ನಾನು ನಿರ್ವಿಕಲ್ಪ ನಿರಾಕಾರ,
ಎಲ್ಲದರೊಳಗೂ ಇದ್ದೇಬೆ ನಾನು.
ನಾನು ಯಾವುದರಿಂದಲೂ ಬಂಧಿಯಲ್ಲ, ಯಾವುದನ್ನೂ ಬಿಟ್ಟಿರುವುದೂ ಇಲ್ಲ,
ಚಿದಾನಂದ ರೂಪವಾದ ಶಿವನೇ ನಾನು ಶಿವನೇ ನಾನು
ನಾನು ಯಾರು? ಎಂಬ ಪ್ರಶ್ನೆಗೆ ಶಂಕರರು ಉತ್ತರಿಸಿದ ಬಗೆ ತಿಳಿದಿದ್ದೀರಿ..
ನಾನೇ ಶಿವನಾದಮೇಲೆ ನಾನೇ ದೇವರೆಂದಾಯ್ತಲ್ಲ, ಅಂದರೆ ನಾವೇ ಸೀತೆಯಗಂಡ ಎಂದು ಹೇಳಿದರೆ ತಪ್ಪೇನೆಂದು ನೀವು ಕೇಳಬಹುದು. ಇಲ್ಲಿ ಪ್ರತಿಯೊಂದು ಪದದ ಧ್ವನ್ಯರ್ಥ ಬೇರೆ ಇದೆ ಎಂಬುದನ್ನು ಗಮನಿಸಿ ತಿಳಿದುಕೊಳ್ಳಬೇಕು.
ವ್ಯವಹಾರ ಜ್ಞಾನದ ಸರಿಯಾದ ಸಂಪಾದನೆಗೆಂದು ನಮ್ಮ ಬಾಲ್ಯದ ಪೂರ್ಣಭಾಗವನ್ನೂ, ಪ್ರೌಢಾವಸ್ಥೆಯ ಬಹುಭಾಗವನ್ನೂ ಮೀಸಲಿಡುತ್ತೇವೆ. ಹೀಗೆ ಮಾಡಿದರೂ, ಜೀವನದಲ್ಲಿ ಚಿಂತೆ ಎಂಬುದು ಬಿಡದೇ ಬೆನ್ನಟ್ಟಿರುತ್ತದೆ, ನಾಳೆಗಳ ಚಿಂತೆಯಲ್ಲಿ ಮನಸ್ಸು ಅಯೋಮಯವಾಗಿರುತ್ತದೆ.
ನಾವೊಮ್ಮೆ ಹಿಂತಿರುಗಿ ನೋಡಿದರೆ, ನಮ್ಮ ಜೀವನವನ್ನು ಸುಂದರವಾಗಿಸುವ, ಹಸನಾಗಿಸುವ, ಸೌಖ್ಯವಾಗಿಸುವ, ಶಾಂತಿ,ನೆಮ್ಮದಿಯನ್ನು ನೀಡುವ ಪರಿಪೂರ್ಣವಿದ್ಯೆ ಇದಲ್ಲ ಎಂಬ ಅರಿವು ಕೆಲವರಿಗಾದರೂ ಆಗುವುದುಂಟು. ಪ್ರತಿಯೊಬ್ಬರ ಆಶಯವೂ ಜೀವನದಲ್ಲಿ ಶಾಂತಿ,ನೆಮ್ಮದಿಗಳನ್ನು ಹೊಂದುವುದೇ ಆಗಿದ್ದು, ಅದಕ್ಕಾಗಿ ಹಲವುವಿಧದಲ್ಲಿ ಪ್ರಯತ್ನಗಳನ್ನು ಮಾಡುತ್ತಾ, ಅಂತರಂಗದಲ್ಲಿಯೇ ಅವಿತಿರುವ ಶಾಂತಿಯನ್ನು ಹೊರಗಿನ ವಿಷಯಗಳಲ್ಲಿ ಹುಡುಕುತ್ತಾ, ಅದು ದೊರಕಲಿಲ್ಲವಲ್ಲ ಎಂದುಕೊಳ್ಳುತ್ತಿರುತ್ತೇವೆ.
ಓಡಾಟಕ್ಕೆ ಹೊಸದಾದ ಕಾರು ಇರಲಿಲ್ಲವೆಂದುಕೊಂಡವರು ಸ್ಕೋಡಾ ಕಾರು ಖರೀದಿಸಿದ ನಾಲ್ಕೇ ತಿಂಗಳಲ್ಲಿ, ಪಕ್ಕದ ಮನೆಯಾತ ಖರೀದಿಸಿದ ಹೊಸಾ ಮಾಡೆಲ್ ಬಿಎಂಡಬ್ಲ್ಯೂ ಕಾರನ್ನು ನೋಡಿ ಅದು ನಮ್ಮಲ್ಲಿಲ್ಲ ಎಂದುಕೊಳ್ಳುತ್ತೇವೆ. ೪೩ ಇಂಚುಗಳ ಟಿವಿ ಕೊಂಡ ಆರು ತಿಂಗಳಲ್ಲೇ ಮಾರುಕಟ್ಟೆಗೆ ತ್ರೀಡಿ ಟೆಕ್ನಾಲಜಿಯ ಟಿವಿ ಲಗ್ಗೆ ಇಟ್ಟಾಗ, ಆರು ತಿಂಗಳು ತಡೆದಿದ್ದರೆ ಅದೇ ಬೆಲೆಗೆ ತ್ರೀಡಿ ಟೆಕ್ನಾಲಜಿಯ ಟಿವಿ ಖರೀದಿಸಬಹುದಿತ್ತಲ್ಲ ಎಂದು ಮರುಗುತ್ತೇವೆ.
ಇಂತಹ ಹಲವು ಸುಖೋಪಭೋಗ ವಿಷಯಗಳಲ್ಲಿ ಒಟ್ಟಾರೆಯಾಗಿ ನಾವು ಅರಸುವುದು ಶಾಂತಿ ಮತು ನೆಮ್ಮದಿಯನ್ನೇ ವಿನಃ ನಿಜವಾದ ಅರ್ಥದಲ್ಲಿ ಅವುಗಳನ್ನಲ್ಲ. ಉರಿವ ಎಣ್ಣೆಯ ದೀಪ ಸುಂದರವೆಂದು ಬಗೆದ ಪತಂಗ ಅದಕ್ಕೆ ಮುತ್ತಿಕ್ಕಹೋಗಿ ಸುಟ್ಟು ಸತ್ತುಹೋಗುವಂತೆ, ವಿಷಯಸುಖದಲ್ಲಿ ನಿಜವಾದ ನೆಮ್ಮದಿಗಿಂತ ಶಾಂತಿಭಂಗವೇ ಅಡಗಿದೆ ಎಂಬುದನ್ನು ನಾವು ಅರಿತುಕೊಳ್ಳುವುದಿಲ್ಲ.
ಶಾಂತಿ,ನೆಮ್ಮದಿಗಾಗಿ ಹವಣಿಸುವ ನಮ್ಮ ಸಾಹಸಯಾನದಲ್ಲಿ, ನಡುವಯಸ್ಸಿನಲ್ಲಿ ಒಂದಾನೊಂದು ದಿನ ಯೋಚಿಸುತ್ತಿದ್ದಾಗ, ಇಲ್ಲಿಯವರೆಗೆ ಮಾಡಿದ ಎಲ್ಲ ಪ್ರಯತ್ನಗಳೂ ವ್ಯರ್ಥವಾದವೆಂದೂ, ಇನ್ನು ಹೊಸದಾಗಿ ಪ್ರಯತ್ನಿಸಲು ಸಾಧ್ಯವಾಗದಂತೆ ಮುಪ್ಪು ಮತ್ತು ಮೃತ್ಯು ನಮ್ಮನ್ನು ಸಮೀಪಿಸಿಬಿಡುತ್ತದೆಂದೂ ಭಯವಿಹ್ವಲರಾಗಿ ಚಿಂತಾಕ್ರಾಂತರಾಗಿರುತ್ತೇವೆ.
ಹೀಗೆ ದಾರಿಕಾಣದೆ ಕಂಗೆಟ್ಟಿರುವ ಜೀವರುಗಳಿಗೆ [ಜೀವಾತ್ಮಗಳಿಗೆ]ಈ ಪ್ರಪಂಚದ ಬಗೆಗಿನ ತಪ್ಪುತಿಳಿವಳಿಕೆಯೇ ಇದಕ್ಕೆ ಕಾರಣ ವೆಂದೂ, ಅದನ್ನು ಹೋಗಲಾಡಿಸಲು ವೇದಾಂತವಿದ್ಯೆ ಅಥವಾ ಆತ್ಮವಿದ್ಯೆಯೆಂಬ ಪರಮಾರ್ಥವಿಚಾರವನ್ನು ತಿಳಿದುಕೊಳ್ಳಬೇಕೆಂದೂ, ಅದರಿಂದಲೇ ಶಾಂತಿ,ನೆಮ್ಮದಿ,ಸೌಖ್ಯ ಎಲ್ಲವೂ ನೆಲೆಗೊಳ್ಳುವವೆಂದೂ ಉಪನಿಷತ್ತುಗಳಲ್ಲಿ ಹೇಳಿದೆ.
ಪರಮಾರ್ಥವಿಚಾರವನ್ನು ಅರಿಯುವುದರಿಂದ ನಮ್ಮ ನಿಜವಾದ ಸ್ವರೂಪವೂ, ಜೊತೆಗೆ, ಬ್ರಹ್ಮಾಂಡದ ಸ್ವರೂಪವೂ ಅರಿವಿಗೆ ನಿಲುಕಿ, ಇಹಲೋಕದ ಶೋಕಮೋಹಗಳು ಅಳಿಸಿಹೋಗಿ, ನಿತ್ಯಶಾಂತಿಯು ನಮ್ಮಲ್ಲಿ ನೆಲಸುವುದೆಂದು ಶ್ರುತಿಗಳು ಅಭಯವನ್ನು ನೀಡಿವೆ. ಹೀಗಾಗಿಯೇ “ಏತಜ್ಜ್ಞೇಯಂ ನಿತ್ಯಮೇವಾತ್ಮಸಂಸ್ಥಂ ನಾತಃಪರಂ ವೇದಿತವ್ಯಂ ಹಿ ಕಿಂಚಿತ್’-ಅಂದರೆ, ನಿತ್ಯವೂ ನಮ್ಮ ಹೃದಯದಲ್ಲಿಯೇ ಇರುವ ಆತ್ಮನನ್ನೇ ತಿಳಿದುಕೊಳ್ಳಬೇಕು. ಇದನ್ನು ತಿಳಿದನಂತರ ಮತ್ತೇನನ್ನೂ ತಿಳಿಯಬೇಕಾದದ್ದು ಉಳಿದಿರುವುದಿಲ್ಲ” ಎಂದು ಉಪನಿಷತ್ತು ಸಾರುತ್ತದೆ.
ನಮ್ಮ ಹೃದಯದಲ್ಲಿರುವ ಆತ್ಮನನ್ನು ತಿಳಿದುಕೊಂಡರೆ ಮತ್ತೇನನ್ನೂ ತಿಳಿಯಬೇಕಾದದ್ದು ಇಲ್ಲವೆಂಬುದಕ್ಕೆ ಸಾಕ್ಷಿಯುಂಟೇ? ಎಂಬ ಪ್ರಶ್ನೆಗೆ ಛಾಂದೋಗ್ಯ ಉಪನಿಷತ್ತು ಉತ್ತರವನ್ನು ನೀಡುತ್ತದೆ-
ಗುರುಕುಲ ಪದ್ಧತಿಯ ವಿಶ್ವವಿದ್ಯಾನಿಲಯವೊಂದರಲ್ಲಿ ಒಂದು ಹಂತದ ಅಧ್ಯಯನವನ್ನು ಪೂರೈಸಿಕೊಂಡು ತಂದೆಯ ಬಳಿಗೆ ಹೆಮ್ಮೆಯಿಂದ ಮರಳಿದ ಶ್ವೇತಕೇತುವಿನಲ್ಲಿ ಅಪ್ಪ ಪ್ರಶ್ನಿಸಿದ- “ನೋಡಪ್ಪಾ ಮಗೂ, ಯಾವುದನ್ನು ತಿಳಿದುಕೊಂಡರೆ ಎಲ್ಲವನ್ನೂ ತಿಳಿದುಕೊಂಡಂತೆ ಆಗುವುದೋ ಅದನ್ನು ನೀನು ಅರಿತಿರುವೆಯೇನು?” ಅನಿರೀಕ್ಷಿತವಾಗಿ ಬಂದ ಅಪ್ಪನ ಪ್ರಶ್ನೆಯಿಂದ ಆಶ್ಚರ್ಯಚಕಿತನಾದ ಶ್ವೇತಕೇತುವು ತನೆಗೆಲ್ಲವೂ ತಿಳಿದಿದೆ ಎಂಬ ಅಹಂಕಾರವನ್ನು ಬಿಟ್ಟು, ಅಂತಹ ಯಾವ ವಿದ್ಯೆಯೂ ತನಗೆ ತಿಳಿಯದೆಂದೂ, ಕೃಪೆಯಿಟ್ಟು ತನಗೆ ತಿಳಿಸಬೇಕೆಂದೂ ಕೇಳಿಕೊಳ್ಳುತ್ತಾನೆ.
ಆ ಸನ್ನಿವೇಶದಲ್ಲಿ ಅವನ ತಂದೆ ಹೀಗೆ ಉತ್ತರಿಸುತ್ತಾರೆ-“ಯಥಾ ಸೋಮ್ಯ ಏಕೇನ ಮೃತ್ಪಿಂಡೇನ ಸರ್ವಂ ಮೃನ್ಮಯಂ ವಿಜ್ಞಾತಂ ಸ್ಯಾತ್ ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಮ್.” ಇದರರ್ಥವಿಷ್ಟೇ: ಮಣ್ಣಿನಿಂದ ಮಾಡಿದ ಮಡಕೆ, ಕುಡಿಕೆಗಳೆಲ್ಲವೂ ಹೆಸರು, ಆಕಾರಗಳಿಂದ ಭಿನ್ನಭಿನ್ನವಾಗಿವೆಯೇ ಹೊರತು ಅವುಗಳ ಮೂಲದಲ್ಲಿರುವುದು ಮಣ್ಣೇ ಎಂದು ಹೇಗೆ ನಮಗೆ ಗೊತ್ತಿದೆಯೋ ಹಾಗೆಯೇ, ಆತ್ಮನಿಂದ ಉಂಟಾಗಿರುವ ಈ ಪ್ರಪಂಚವು ಹೆಸರು, ರೂಪಗಳೆಂಬ ಉಪಾಧಿಯಿಂದ [ಅಡ್ಡಿಯಿಂದ] ವಿಧವಿಧವಾಗಿ ಕಾಣುತ್ತಿದ್ದರೂ ಇದರ ನಿಜವಾದ ಸ್ವರೂಪವು ಆತ್ಮವೇ ಆಗಿದೆ. ಆದ್ದರಿಂದ ಆತ್ಮನನ್ನು ತಿಳಿದುಕೊಂಡರೆ ಅದರಿಂದ ಉಂಟಾದ ಪ್ರಪಂಚದ ತಿರುಳಿನ ಅರಿವೂ ಆಗುವುದು.”
ಇದಕ್ಕೊಂದು ಉದಾಹರಣೆಯನ್ನು ನೀಡುವುದಾದರೆ ಪಂಚಭೂತಾತ್ಮಕವಾದ ಮರದ ಉಪಕರಣವೊಂದನ್ನು ತೆಗೆದುಕೊಳ್ಳಿ, ಅಥವಾ ಮರದಿಂದ ತಯಾರಿಸಿದ ಕುರ್ಚಿ ಎಂದುಕೊಳ್ಳಿ. ಪೃಥ್ವಿ ತತ್ವದಿಂದ ಅದು ಘನರೂಪದಲ್ಲಿ ನಮಗೆ ಕಾಣಿಸುತ್ತದೆ, ಗಟ್ಟಿಯಾಗಿರುತ್ತದೆ. ಅದರ ಅಂಗಾಂಗಗಳ ಜೋಡಣೆ ಗಮನಿಸಿ, ಅದರಲ್ಲಿ ನೀರಿನ ತತ್ವ ಇರುವುದರಿಂದಲೇ ಅವೆಲ್ಲ ಹಾಗೆ ಹೊಂದಿಕೊಂಡಿವೆ. ಮೊಳೆಯೊಂದನ್ನು ಹೊಡೆದರೆ ಒಳಗೆ ಸೇರುತ್ತದೆ ಎಂಬುದರಿಂದ ಅವಕಾಶ ಅಂದರೆ ಆಕಾಶ ತತ್ವವಿದೆ,
ಮೊಳೆ ಒಳಗೆ ಹೋದಾಗ ಅಲ್ಲಿದ್ದ ವಾಯು ಹೊರಗೆ ಬರುತ್ತದಾದ್ದರಿಂದ ವಾಯುವೂ ಆಲ್ಲಿದೆ. ಕುರ್ಚಿಯ ಅಂಗಾಂಗಗಳನ್ನು ಕತ್ತರಿಸಿ ಉಜ್ಜಿದರೆ ಬೆಂಕಿ ಹತ್ತಿಕೊಳ್ಳುತ್ತದೆಯಾದ್ದರಿಂದ ಅಗ್ನಿಯೂ ಅಲ್ಲಿದೆ. ಆದರೆ ಹೊರನೋಟಕ್ಕೆ ಅದೊಂದು ಮರದ ಕುರ್ಚಿ. ಪಂಚ ಭೂತಗಳಲ್ಲಿ ಪರಸ್ಪರ ಒಂದರೊಳಗೊಂದು ಅಡಗಿದೆಯೆಂದಾಗ ಈ ಪ್ರಪಂಚದ ಎಲ್ಲವೂ ಒಂದೇ ಮೂಲದ್ದೇ ಎಂಬ ಅನಿಸಿಕೆ ಬರುತ್ತದೆ; ಆದರೆ ಮೇಲುನೋಟಕ್ಕೆ ಎಲ್ಲವೂ ಬೇರೆ ಬೇರೆಯಾಗಿ ತೋರುತ್ತದೆ. ಹೀಗಾಗಿ ಆತ್ಮದಿಂದಲೇ ಎಲ್ಲದರ ಉತ್ಪತ್ತಿಯಾಗುತ್ತದೆ ಎನ್ನಬಹುದು.
ಈ ಪ್ರಪಂಚವು ನಾವೀಗ ಭಾವಿಸಿರುವಂತೆ ಅಗಾಧವಾಗಿಲ್ಲ; ಬದಲಿಗೆ, ನಮ್ಮ ಇಂದ್ರಿಯಗಳಿಗೆ ವಿಷಯವಾಗಿರುವಷ್ಟು ಚಿಕ್ಕದಾಗಿದೆ. ದೇಶ-ಕಾಲಗಳೆಂಬ ಅಳತೆಗೋಲುಗಳಿಂದ ಈ ಪ್ರಪಂಚವು ನಿರ್ಮಾಣವಾಗಿರುತ್ತದೆ. ಈ ದೇಶ-ಕಾಲಗಳು ನಮಗೆ ಉಂಟಾಗುವ ಜಾಗೃತ್, ಸುಷುಪ್ತಿ, ಸ್ವಪ್ನ[ಎಚ್ಚೆತ್ತ ಸ್ಥಿತಿ, ಗಾಢ ನಿದ್ರೆ ಮತ್ತು ಕನಸು]ಗಳಿಗೆ ಕಟ್ಟುಬಿದ್ದಿರುತ್ತವೆ. ಹೀಗಾಗಿಯೇ ಕನಸಿನ ಪ್ರಪಂಚವು ಎಚ್ಚರದ ಪ್ರಪಂಚಕ್ಕಿಂತಲೂ ದೇಶ-ಕಾಲಗಳಲ್ಲಿ ಅತ್ಯಂತ ಭಿನ್ನವಾಗಿರುತ್ತದೆ” ಎಂಬುದು ಅವಸ್ಥಾತ್ರಯವೆಂಬ ಪ್ರಕ್ರಿಯೆಗೆ ಮಾಂಡೂಕ್ಯೋಪನಿಷತ್ತಿನ ಹೇಳಿಕೆ.
ಈ ಭ್ರಮೆಯಿಂದಾಗಿಯೇ, ಎಚ್ಚರ ಸ್ಥಿತಿಯಲ್ಲಿ ಸಾವಿರಾರು ಮೈಲು ದೂರವಿರುವ ಸ್ಥಳಗಳನ್ನು ಕನಸಿನಲ್ಲಿ ಕ್ಷಣಾರ್ಧದಲ್ಲಿ ತಲುಪಿಬಿಡುತ್ತೇವೆ! ಮುಪ್ಪಿನಲೂ ಬಾಲ್ಯದಲ್ಲಿದ್ದಂತೆ, ತಾರುಣ್ಯದಲ್ಲಿದ್ದಂತೆ, ವೃದ್ಧಾಪ್ಯಗಳು ಆವರಿಸಿಕೊಂಡು ಸತ್ತುಹೋದಂತೆ ಹೀಗೆಲ್ಲ ಭಾಸವಾಗುತ್ತದೆ. ಸುಷುಪ್ತಿ ಅಥವಾ ನಿದ್ರೆಯಲ್ಲಿ ಈ ಪ್ರಪಂಚದ ಅಥವಾ ಇನ್ನಾವುದೇ ಪ್ರಪಂಚದ, ವ್ಯವಹಾರದ, ಚರಾಚರವಸ್ತುಗಳ ದರ್ಶನ, ಸ್ಪರ್ಶಗಳು ನಡೆಯುವ ಅನುಭವವಿಲ್ಲದೆ ತಾನೊಬ್ಬನೇ ನಿದ್ರಿಸಿದೆ ಎಂಬಂತಹ ಅನುಭವವಾಗುತ್ತದೆ.
ಇಂತಹ ಮಾಹಿತಿಗಳನ್ನೆಲ್ಲ ಗಮನಿಸಿದಾಗ, ಸರಿಯಾದ ಅಧ್ಯಾತ್ಮಿಕ ಗುರು, ಸರಿಯಾದ ಶಾಸ್ತ್ರಗಳ ಸಹಾಯದಿಂದ ಇವುಗಳನ್ನೆಲ್ಲ ತುಲನೆಮಾಡಿ ನೋಡಿಕೊಂಡರೆ, ಅವಸ್ಥೆಗಳ ಅಡಿಯಾಳಾಗಿರುವ ಈ ಪ್ರಪಂಚದ ಸೂತ್ರ ಮತ್ತು ಇಂತಹ ಅವಸ್ಥೆಗಳೆಲ್ಲ ನಮಗೇ ಉಂಟಾದಂತೆ ಅನುಭವವನ್ನು ನೀಡುತ್ತ ಸಾಕ್ಷಿಸ್ವರೂಪಿಯಾಗಿ ನಮ್ಮೊಳಗೇ ಅವಿತಿರುವ ಆತ್ಮನ ಜ್ಞಾನವೂ ಸರಿಯಾಗಿ ಆಗುತ್ತದೆ ಎಂದು ವೇದಾಂತ ಹೇಳಿದೆ.
ಆದ್ದರಿಂದಲೇ, “ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿದಿಧ್ಯಾಸಿತವ್ಯಃ ಚ” ಎಂದಿದ್ದಾರೆ. ಅಂದರೆ, ಆತ್ಮನೊಬ್ಬನನ್ನೇ ನೋಡಬೇಕು, ಕೇಳಬೇಕು, ಚಿಂತಿಸಬೇಕು, ತಿಳಿದುಕೊಳ್ಳಬೇಕೆಂಬ ಅರ್ಥ; ಜಗತ್ತಿನ ತಿರುಳಾಗಿರುವ ಆತ್ಮನನ್ನು ತಿಳಿದುಕೊಂಡರೆ ಮತ್ತೆ ತಿಳಿಯಬೇಕಾದದ್ದು ಏನೂ ಉಳಿದಿರುವುದಿಲ್ಲ. ಈ ಕಾರಣದಿಂದಲೇ, ಎಲ್ಲರೂ “ಆತ್ಮವೊಂದನ್ನೇ ತಿಳಿಯಬೇಕು” ಎಂದು ಉಪನಿಷತ್ತುಗಳಲ್ಲಿ ಜಿಜ್ಞಾಸುಗಳಿಗೆ ಮನವರಿಕೆಯಾಗುವಂತೆ ಹೇಳಿರುವುದು ಕಾಣುತ್ತದೆ.
ಅದಿರಲಿ. ಈಗ ಈ ಸುದೀರ್ಘ ಕಥೆಯ ಮುಕ್ತಾಯಕ್ಕೆ ಬರೋಣ. ನಾವು ಪರಂಪರೆಗಳ ಹೆಸರನ್ನು ಬಳಸಿಕೊಳ್ಳುವುದರಲ್ಲಿ ಚಾಣಾಕ್ಷರು. ಇಂತಹ ಗಹನ ವಿಷಯಗಳನ್ನು ನಾವೆಂದೂ ತಿಳಿದುಕೊಳ್ಳಲು ಪ್ರಯತ್ನಿಸಲಿಲ್ಲ. ಯೋಗವೇಕೆ? ಕೆಲವು ಆಹಾರಗಳು ನಮಗೆ ನಿಷಿದ್ಧವೇಕೆ? ಗೃಹಸ್ಥ ಮತ್ತು ವಾನಪ್ರಸ್ಥಾಶ್ರಮವನ್ನು ವರ್ಜಿಸಿ ನೇರವಾಗಿ ಯಾಕೆ ಸನ್ಯಾಸಿಯಾಗಲು ಹೇಳಿದ್ದಾರೆ? ಇದೆಲ್ಲ ನಮಗೆ ಬೇಡ. ಈ ವಿದ್ಯೆಯನ್ನು ಹೇಳುವ ಶಾಲೆಗೆ ನಾವು ಚಕ್ಕರ್ ಹೊಡೆದೆವು.
ನಮಗೆ ಹಣಬೇಕು, ಹೆಣ್ಣುಬೇಕು, ಆಸ್ತಿಬೇಕು, ಐಶಾರಾಮಿ ಕಾರು ಬೇಕು, ಈರುಳ್ಳಿ ಉಪ್ಪಿಟ್ಟು ಬೇಕು, ವಡಾ ಸಾಂಬಾರ್ ನೈವೇದ್ಯವಾಗುತ್ತಿರಬೇಕು. ಹೀಗಾಗಿ ಊಟಕ್ಕೆ/ಭೋಗಕ್ಕೆ ಮಾತ್ರ ನಾವು ಹಾಜರು.
ಧಾರ್ಮಿಕ ಮುಖಂಡರೆನಿಸಿದ ನಾವೇ ತಪ್ಪುದಾರಿಯಲ್ಲಿ ನಡೆಯುತ್ತಿರುವಾಗ ಸಮಾಜದಮೇಲೆ ಯಾವ ದುಷ್ಪರಿಣಾಮವಾಗುತ್ತದೆ? ಯಾರು ಏನೇನು ಮಾಡಬೇಕು? ಏನಿ ಮಾಡಬಾರದು? ನಾವು ಈಗ ಏನಾಗಿದ್ದೇವೆ? ಸರಿಯಿದ್ದರೆ ಏನಾಗುತ್ತಿದ್ದೆವು? ಎಂಬ ಯಾವ ಲೆಕ್ಕಾಚಾರವೂ ನಮಗೆ ಊಹುಂ .....ಶೂನ್ಯ. ಇನ್ನು ಪರಾತತ್ವದ ಗಹನ ವಿಚಾರ ಬಹಳ ದೂರವೇ ಉಳಿಯಿತು ಬಿಡಿ. "

June 12
https://www.facebook.com/groups/1499395003680065/permalink/1626939734258924/
ನರಕ ಕರೆದ ಬಾ.....ಬಸಂತಿ
[ನಾಟಕದ ಮುಂದಿನ ಸೀನು....]
"ದ್ವಾಪರದ ಶ್ರೀಕೃಷ್ಣನ ಕಾಲಕ್ಕೆ ನರಕಾಸುರ ಎಂಬೊಬ್ಬನಿದ್ದನಂತೆ. ಆಗಿದ್ದು ಒಂದೋ ಎರಡೋ ರಾಕ್ಷಸ ವಿವಾಹ ....ಅಸುರೀ ಮದುವೆ. ಸೆರೆಯಲ್ಲಿಟ್ಟಿದ್ದು ಮಾತ್ರ ಬರೋಬ್ಬರಿ ಹದಿನಾರು ಸಾವಿರ ಕನ್ಯೆಯರನ್ನು. ನರಕನ ನಿತ್ಯ ನಾರಕೀ ಜೇವನಕ್ಕೆ ಬೇಸತ್ತ ಭುವಿಯಂಗಳದ ಅನೇಕ ಜನರೆಲ್ಲ ಅವನೊಡನೆ ಹೋರಾಡಿ ಸೋತರು.
ನರಕ ಸೋಲಲಿಲ್ಲ; ಕನ್ಯೆಯರ ಶೀಲಕ್ಕೆ ಉಳಿಗಾಲವಿರಲಿಲ್ಲ. ಹದಿನಾರು ಸಾವಿರ ಕನ್ಯೆಯರಿಗೆ ಊಟಕ್ಕೆ ತಿಂಡಿಗೆ ಎಲ್ಲ ಯಾವ ವ್ಯವಸ್ಥೆ ಮಾಡಿರಬಹುದು ಎಂದು ಯೋಚಿಸುತ್ತಿದ್ದೇವೆ ನಾವು. ಯಾಕೆಂದ್ರೆ......ಯಾಕೆಂದ್ರೆ......ಯಾಕೆಂದ್ರೆ ಅವರಲ್ಲಿ ಯಾರೂ ಈರುಳ್ಳಿ ಉಪ್ಪಿಟ್ಟು ಕೇಳೋ ಹಾಗಿಲ್ಲ. ಹೊರಗಡೆಯಿಂದ ಆಹಾರ ತಂದು ಕೋಡೋರಿಲ್ಲ. ನಂದಿನಿ ಡೀಲಕ್ಸ್ ಮೊದಲೇ ಇಲ್ಲ.
ನಾಳೆ ಪರಪ್ಪವನಕ್ಕೆ ಹೋದಮೇಲೆ ನಮಗೆ ಈರುಳ್ಳಿ ದೋಸೆ, ಬೆಳ್ಳುಳ್ಳಿ ಗೊಜ್ಜು, ಈರುಳ್ಳಿ ಉಪ್ಪಿಟ್ಟು, ಅಲೂ ಬೋಂಡ ಇದನ್ನೆಲ್ಲ ಮಾಡಿ ಸಪ್ಲೈ ಮಾಡುವವರಾರು? ದುಡ್ಡು ಕೊಟ್ಟರೆ ಏನನ್ನೇ ಬೇಕಾದ್ರೂ ಕೊಡ್ತಾರಂತೆ ಅಂತ ಸುದ್ದಿ ಕೇಳಿದ್ದೇವೆ ನಾವು; ಆದರೆ ಕೊಡುವುದಕ್ಕೆ ನಮ್ಮಲ್ಲಿ ಇರಬೇಕಲ್ಲ?
ಒಂದು ಕಾಲಕ್ಕೆ ಕಪ್ಪುಹಣವನ್ನು ಕೈಯೆತ್ತಿ ಹಂಚಿದ ಹಸ್ತ, ಈಗ ಕೈ ನೀಡಿ ಯಾಚಿಸುವ ಹಂತದಲ್ಲಿದೆ. ನಮ್ಮಿಂದ ಉಪಕಾರ ಪಡೆದವರೆಲ್ಲ ನಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಅಲ್ನೋಡಿ ಅಲ್ಲೊಬ್ಬ ಇದಾನೆ.
ಬ್ಯಾಂಕುಗಳಲ್ಲಿ ಕೋಟಿಗಟ್ಟಲೆ ಸಾಲ ಮಾಡ್ಕೊಂಡು ಭಿಕಾರಿಯಾಗಿದ್ದ. ಅವನ ಮಠ ಹರಾಜಿಗೆ ಬಂದಿತ್ತು. ದುಂಡಗಾಶಿ ನಮಗೆ ಸುದ್ದಿ ತಂದ. ನಮ್ಮಲ್ಲಿ ಹೇಗೂ ಹಣದ ಹೊಳೆಯೇ ಹರಿಯುತ್ತಿತ್ತಲ್ಲ. ಅವನನ್ನು ಕರೆಸಿದೆವು. ಗೋಪ್ಯವಾಗಿ ಮಾತುಕತೆ ನಡೆಸಿದೆವು. ಬೇರೆ ಯಾವ ಮಠಕ್ಕೂ ಕೊಡಬೇಡ, ನಮಗೇ ಕೊಡು ಎಂದೆವು.
ಆತ ಒಪ್ಪಿಕೊಂಡ. ನಾನು ಸತ್ತಮೇಲೆ ನಿನಗೇ ಈ ಮಠ ಎಂದು ಬರೆದು ಸಹಿಹಾಕುತ್ತೇನೆ ಅಂದ. ಆ ಮಠಕ್ಕೆ ಅವನೊಬ್ಬನೇ ವಿಶ್ವಸ್ಥ. ಅದರಲ್ಲಿ ಬೇರಾರೂ ಹಸ್ತಕ್ಷೇಪ ಮಾಡುವಂತಿಲ್ಲ. ಅದು ಅವನ ಖಾಸಗಿ ಆಸ್ತಿ. ಅದನ್ನೆಲ್ಲ ನೋಡಿಕೊಂಡೇ ನಾವು ಅವನನ್ನು ಕರೆಸಿ ಮಾತಾಡಿದ್ದು. ತಾನು ಸತ್ತ ಮೇಲೆ ತನ್ನ ಮಠಕ್ಕೆ ನಾವೇ ಅಂದರೆ ಹಾವಾಡಿಗ ಮಹಾಸಂಸ್ಥಾನಾಧೀಶ್ವರ ಶೋಭರಾಜಾಚಾರ್ಯನೇ ಉತ್ತರಾಧಿಕಾರಿಯೆಂದು ಬರೆದ.
ಈಗ ನಮ್ಮ ವಿರುದ್ಧದ ಹುಲುಮಾನವರಿದ್ದಾರಲ್ಲ ಅವರೆಲ್ಲ ಒಟ್ಟಾಗಿದ್ದಾರೆ. ಎಲ್ಲಿ ಅವನಿಗೆ ಹೇಳಿಕೊಟ್ಟು ನಮ್ಮ ಉತ್ತರಾಧಿಕಾರಿ ವೀಲುನಾಮೆಯನ್ನು ಬದಲಿಸಬಹುದೋ ಎಂಬ ಸಂದೇಹ ನಮಗೆ. ಯಾಕೆಂದರೆ ಒಬ್ಬವ್ಯಕ್ತಿ ಅವನ ಖಾಸಗಿ ಆಸ್ತಿಗೆ ಅವನು ಸಾಯುವುದಕ್ಕೂ ಮೊದಲು ಎಷ್ಟು ಸಲ ಬೇಕಾದರೂ ವಿಲ್ ಬದಲಾಯಿಸಬಹುದು.
ಉತ್ತರದ ಕಡೆಗೆ ಹೋಗಿದ್ದ ಬಿಕನಾಸಿ ಮತ್ತೆ ಆಗಾಗ ತನ್ನ ಮಠಕ್ಕೆ ಬರುತ್ತಲೇ ಇದ್ದ. ನಮಗೋ ಆ ವ್ಯವಹಾರ ಮುಗಿಸಿ ಮಠವನ್ನು ಸಂಪೂರ್ಣ ನಮ್ಮ ಅಧಿಕಾರಕ್ಕೆ ತೆಗೆದುಕೊಳ್ಳುವ ತವಕ. ಮೊನ್ನೆ ಮೊನ್ನೆ ಅವನು ನಮ್ಮ ವಿರುದ್ಧ ದೂರು ಕೊಟ್ಟ. ಮಠದ ವ್ಯವಹಾರ ಸರಿಯಿಲ್ಲ, ತನಗೇ ಕೊಡಲಿ ಅಥವಾ ಆಳುವವರು ವಹಿಸಿಕೊಳ್ಳಲಿ ಎಂದ.
ಈ ವಿಷಯ ತಿಳಿದಿದ್ದೆ, ಕಾಗೆ ಹಾರಿಸಿ ಅಡ್ಡಗೇಟನ್ನು ಬಳಸಿಕೊಂಡು ನಾವು ನೋಟೀಸು ಕೊಟ್ಟಿದ್ದೇವೆ. ಇಲ್ಲಿಯೇ ಇದ್ದ ಅವನನ್ನು ನಮ್ಮ ತಾಲಿಬಾನಿನ ಸದಸ್ಯರು ಎತ್ತುಕೊಂಡು ಮಹಾಬಲನಿದ್ದೆಡೆಗೆ ಹೋದರು. ಅಲ್ಲಿ ಅವನನ್ನು ಇರಿಸಿಕೊಂಡು ಹವಾ ತೆಗೆದಿದ್ದಾಯ್ತು. ಪಾಪಿ, ನಮ್ಮಿಂದ ಸಹಾಯ ಪಡೆದು ನಮಗೇ ತೊಂದರೆ ಕೊಡ್ತಾನೆ. ಪೂರ್ಣಾಧಿಕಾರಕ್ಕೆ ಸಹಿಹಾಕುವಂತೆ ಅವನಿಗೆ ಧಮ್ಕಿ ಹಾಕಿದ್ದೇವೆ.
"ಈಗಲೇ ಅವನ ಮಠದ ಪೂರ್ಣಾಧಿಕಾರ ನಮಗೆ ಬೇಕು. ಸಹಿಹಾಕಲಿಲ್ಲ ಅಂದರೆ ಅವನ ಚ್ಯಾಪ್ಟರ್ ಕ್ಲೋಸ್ ಮಾಡಿ ಅಥವಾ ಯಾವಳನ್ನೋ ಹಿಡಿದು ಅವನ ಮೇಲೆ ಅತ್ಯಾಚಾರದ ಕೇಸ್ ಹಾಕಿಸಿ ಒಳಗೆ ಕೂರುವಂತೆ ಮಾಡಿ" ಎಂದು ನಮ್ಮ ಹಳದೀ ಗಣಗಳಿಗೆ ನಾವು ಅಪ್ಪಣೆಮಾಡಿದೆವು. ನಮ್ಮವರು ಹಾಕಿದ ಧಮ್ಕಿಗೆ ಆತ ಹೆದರಿದ ಬೆಕ್ಕಾಗಿ ಈಗ ಶುಶ್ರೂಷೆ ತೆಗೆದುಕೊಳ್ಳುತ್ತಿದ್ದಾನೆ. ನಾವು ಏನೇ ಮಾಡಿದರೂ ಅಷ್ಟೇ ವೀರ್ಯ ಸನ್ಯಾಸ; ಏಕ್ ಮಾರ್ ದೋ ಟುಕಡಾ. ಅವನೇನಾದರೂ ಪೂರ್ಣಾಧಿಕಾರಕ್ಕೆ ಸಹಿ ಹಾಕದಿದ್ದರೆ ಬೆಳ್ಳುಳ್ಳಿ ಗೊಜ್ಜು ಗ್ಯಾರಂಟಿ.
ನಮಗೆ ಎಂತೆಂತಹ ಶಿಷ್ಯೆಯರಿದ್ದಾರೆ ಗೊತ್ತೇ? ನೀತಾ ಗುಂಜಾಲಪ್ಪ ನಮ್ಮ ಪರಮ ಭಕ್ತೆ. ನಮಗೆ ಬಹಳ ಬಹಳ ಆಪ್ತಳು. ನಮ್ಮ ಸಲುವಾಗಿ ಅವಳ ಭಕ್ತಿಯ ಹೋರಾಟ ಎಂಬುದು ಚಿಕ್ಕಮಕ್ಕಳ ಹೇಲಾಟಕ್ಕಿಂತ ಜೋರಾಗಿದೆ. ನಮ್ಮ ವಿರುದ್ಧ ನೀವು ಬರೆದರೆ ಅಲ್ಲಿ ಬಂದು ಅವಳು ಹೇಸಿಗೆ ಮಾಡದಿದ್ದರೆ ಹೇಳಿ.
ನಮ್ಮ ಕೋಟಿಗಟ್ಟಲೆ ಖಾಸಗೀ ಹಣವನ್ನು ದೂರದಲ್ಲಿ ನಿಭಾಯಿಸಿ ಸುರಕ್ಷಿತವಾಗಿರಿಸುವ ಕೆಲಸವನ್ನು ಆಕೆಗೆ ಒಪ್ಪಿಸಿದ್ದೇವೆ ನಾವು. ಹಾಗಾಗಿ ಆಕೆಗೆ ನಮ್ಮ ಮೇಲೆ ಎಲ್ಲಿಲ್ಲದ ಪ್ರೀತಿ ವಿಶ್ವಾಸ. ಮುಂದಿನ ಸಲ ಬಂದಾಗ ಮತ್ತೆ ಏಕಾಂತ ದರ್ಶನಕ್ಕೆ ಬರುತ್ತೇನೆ ಸಂಸ್ಥಾನ ಎಂದಳು. "ನೀನು ಏಕಾಂತಕ್ಕೆ ಬರೋದಕ್ಕಿಂತ ಅಲ್ಲೇ ನಮ್ಮ ಗಂಟನ್ನು ಕಾಯ್ದುಕೊಂಡಿರು"ಎಂದಿದ್ದೇವೆ.
ನಮ್ಮ ಯಾವುದೇ ಚಿತ್ರವನ್ನೂ ತೆಗೆದುನೋಡಿ, ಅದರಲ್ಲಿ ನಮ್ಮ ಕಣ್ಣು ಸದಾ ಪರಮಾತ್ಮನ ’ಮೋಹಿನಿ ಅವತಾರ’ದಮೇಲೆ ನಾಟಿರುತ್ತದೆ. ಅದು ಬಸ್ಸಿನಲ್ಲಿರಲಿ, ಬಾರ್ಜ್ ನಲ್ಲಿರಲಿ, ನಾವೆಯಲ್ಲಿರಲಿ, ವಿಮಾನದಲ್ಲಿರಲಿ, ಎಲ್ಲಿದ್ದರೂ ನಮಗೆ ಮೋಹಿನಿ ಅವತಾರದ ದರ್ಶನ ಸಿಕ್ಕೇ ಸಿಗುತ್ತದೆ. ಕಣ್ಣಲ್ಲಿ ’ದರ್ಶನ’ ಪಡೆದುಕೊಳ್ಳುವುದಕ್ಕೆ ಯಾವ ಮೋಹಿನಿಯಾದೇನು? ಅವಳು ಬೇರೆಡೆಗೆ ನೋಡುವಾಗ ಅವಳ ಅಂಗಾಂಗಗಳನ್ನೆಲ್ಲ ನೋಡುವುದು, ಅವಳು ನಮ್ಮನ್ನೇ ನೋಡುವಾಗ ಕಣ್ಣಲ್ಲೇ ಕರೆಯುವುದು.
ಕರೆದರೂ ಕೇಳದೇ.....ಸುಂದರಿಯೆ
ಏಕೆ ಈ ಮೌನ ನಾ ಕರೆದರೂ ಕೇಳದೇ......
ಜಯಪ್ರದ ’ಕರೆದರೂ ಕೇಳದೇ’ ಎಂದು ನಮ್ಮಲ್ಲಿ ಹೇಳಿದ್ದರೆ, ಕೇಳಿದೆ ಬಾ ಎಂದು ಸೀದಾ ಏಕಾಂತ ದರ್ಶನ ಕೊಟ್ಟುಬಿಡುತ್ತಿದ್ದೆವು. ಸುಂದರಿಯರಿಗೆ ಏಕಾಂತ ಬೇಕಾದರೆ ಅರೆನಿಮಿಷದಲ್ಲೇ ಅನುಮತಿ ಸಿಗುತ್ತದೆ.
ಯಾರೋ ಬುಡ್ಡಾಗಳು ಬುದ್ಧಿಮಾಂದ್ಯ ಭಕ್ತರು ಖಾಸಗಿಯಾಗಿ ಮಾತನಾಡಬೇಕು ಎಂದು ಬೆಳಗಿನಜಾವದಿಂದ ಮಧ್ಯರಾತ್ರಿಯ ವರೆಗೆ ಕುಳಿತರೂ ಕೊನೆಗೆ ನಾವು ಕೈ ತಿರುಗಿಸುವುದೇ ಹೆಚ್ಚು. ಯಾಕೆಂದ್ರೆ.....ಯಾಕೆಂದ್ರೆ....ಯಾಕೆಂದ್ರೆ ಹಾರಾಟದ ನಡುವೆ ನಮಗೆ ಪುರ್ಸೊತ್ತು ಸಿಗಬೇಕಲ್ಲ. ಅದೂ ಮಧ್ಯೆ ಮಧ್ಯೆ ಕಾವಿವೇಷದಲ್ಲಿ ಹೊರಗೆ ಕಾಣಿಸಿಕೊಳ್ಳಬೇಕು; ಬಟ್ಟೆ ಉಟ್ಟು ಬಿಚ್ಚಿ ಹಾಕಲಾದರೂ ಸಮಯಬೇಕಲ್ಲವೇ?
ಯಾವ ದೇವಸ್ಥಾನವಿರಲಿ, ಕ್ಷೇತ್ರವಿರಲಿ ಅಲ್ಲಿಂದ ಏನಾದರೂ ನಮಗೆ ಲಾಭವಿದೆ ಎಂದರೆ ಬಿಡುವವರಲ್ಲ ನಾವು. ಭಗಂದೂರು ತೋಷಗಿರಿಯೂ ನಮಗೆ ತಿಂಗಳು ತಿಂಗಳು ಒಂದಷ್ಟು ಕೊಡುವುದೆಂತ ರಾಜಿ ಪಂಚಾಯ್ತಿ ಆಗಿದೆ. ಅದಿಲ್ಲದಿದ್ದರೆ ಅವನಿಗೆ ಅಲ್ಲಿ ಉಳಿಗಾಲವಿಲ್ಲ. ನಾಮಪ್ಪಂಗೆ ಹೇಳಿ ಅವನನ್ನು ಒಕ್ಕಲೆಬ್ಬಿಸಿಬಿಡ್ತೇವೆ ನಾವು. ಹೀಗಾಗಿ ಅಂವ ಮುಚ್ಕೊಂಡು ಕಳಿಸ್ತಾನೆ ಈಗ.
ಈಗೀಗ ಕೆಲವು ಕಡೆ ನಮ್ಮನ್ನು ಓಡಿಸಿದ್ದಾರೆ, ಅದು ಬಿಡಿ, ಬೇರೆ ಪ್ರಶ್ನೆ. ನವಗುಂದ ದೇವಸ್ಥಾನಕ್ಕೆ ನಾವೇ ಪ್ರಮುಖರು ಎಂದು ಅದರ ವ್ಯವಸ್ಥಾಪಕರು ಹೇಳಿದ್ದರು. ಆದರೆ ಆಮೇಲೆ ಪ್ಲೇಟ್ ಚೇಂಜ್ ಮಾಡಿಬಿಟ್ಟರು. ಅದಕ್ಕೆ ಇನ್ನೊಂದು ಮಠ ಕಾರಣ ಎನ್ನುತ್ತೇವೆ ನಾವು.
ಆ ಮಠದವರಿಗೆ ನಮ್ಮ ಏಳ್ಗೆಯನ್ನು ಕಂಡರೆ ಆಗೋದಿಲ್ಲ. ನಾವು ಎಲ್ಲೇ ಹೋದರೂ ಅವರ ಹದ್ದಿನ ಕಣ್ಣು ನಮ್ಮ ಮೇಲೇ ಇರುತ್ತದೆ. ನಮ್ಮ ವಿರುದ್ಧ ನಡೆಯುತ್ತಿರುವ ಎಲ್ಲ ಷಡ್ಯಂತ್ರಗಳಲ್ಲೂ ಅವರ ಕೈವಾಡವಿದೆ ಎಂದು ನಾವು ಕಳೆದ ಚಾತುರ್ಮಾಸದಲ್ಲೇ ಹೇಳಿದ್ದೇವೆ. "ಅವರಿಗೇನಾದರೂ ಬೇಕಾದರೆ ನೇರವಾಗಿ ನಮ್ಮಲ್ಲಿ ಬೇಡ ಬಹುದಿತ್ತು, ನಾವೇ ಕೊಡುತ್ತಿದ್ದೆವು,ಅದನ್ನು ಬಿಟ್ಟು ವಿನಾಕಾರಣ ಈ ರೀತಿ ಷಡ್ಯಂತ್ರ ಮಾಡೋದು ಸರಿಯಲ್ಲ’ ಎಂದಿದ್ದೆವು ನಾವು,
ಈಗ ನಮ್ಮ ಹಳದೀ ತಾಲಿಬಾನ್‍ಗಳ ಸರದಿ. ಅವರಿಗೆ ಆ ಮಠದ ಆಡಳಿತಾಧಿಕಾರಿಯ ಮೇಲೆ ಅನುಮಾನವಿದೆ. ನಮಗೂ ಅಷ್ಟೆ. ಆ ಮನುಷ್ಯನೂ ನಮ್ಮ ಕುಲಪತಿ ಬಾವಯ್ಯ ಇದ್ದಹಾಗೆ ಅಂದುಕೊಂಡುಬುಟ್ಟಿದ್ದೇವೆ ನಾವು. ಇನ್ಹೇಗಿರ್ತಾನೆ ನಮ್ಮಲ್ಲಿ ಥೇಟ್ ನಮ್ಮ ಬಾವಯ್ಯ ಇದ್ದಂಗೆ ಇರ್ತಾನೆ ಎಂಬುದು ನಮ್ಮ ತೀರ್ಮಾನ.
ನಮ್ಮ ವಿರುದ್ಧ ದಾಖಲಾದ ಎಲ್ಲಾ ದೂರುಗಳ ಹಿಂದೆಯೂ ಅವನ ಕೈವಾಡ ಇದ್ದೇ ಇದೆ ಎಂಬುದರಲ್ಲಿ ನಮಗೆ ಅನುಮಾನವಿಲ್ಲ. ಹಾಗಾಗಿಯೇ ನಮ್ಮ ತಾಲೀಬಾನಿಗಳಿಗೆ ನಾವು ಇದನ್ನೇ ಹೇಳಿದ್ದೇವೆ. "ಏ ಹೋಗ್ರೊ, ಕಂಡಲ್ಲೆಲ್ಲ ಈ ಸುದ್ದಿ ಹಬ್ಬಿಸಿ" ಅಂತ ಹೇಳಿದ್ದೇವೆ. ನಾಳೆ ಕಾಲಬುಡಕ್ಕೆ ಬಂದಾಗ "ನಮ್ಮ ಸಂಸ್ಥಾನಕ್ಕೂ ಅದಕ್ಕೂ ಸಂಬಂಧವಿಲ್ಲ, ನಮ್ಮ ಭಕ್ತರು ಏನು ಹೇಳುತ್ತಾರೋ ಅದಕ್ಕೆಲ್ಲ ಸಂಸ್ಥಾನ ಜವಾಬ್ದಾರಿಯಲ್ಲ" ಎಂದು ನುಣುಚಿಕೊಳ್ಳುತ್ತೇವೆ ನಾವು.
ಇದೆಲ್ಲದರ ಜೊತೆಗೆ, ಯಾವುದೋ ಅಡ್ಡಗೇಟು ಹೇಳಿದ್ದೆನ್ನುತ್ತ ಕತೆ ಕಟ್ಟಿ, "ದೊಡ್ಡವರ ಸಣ್ಣತನ ಇದು. ಅವರ ಷಡ್ಯಂತ್ರ ಅಲ್ಲದಿದ್ದರೆ ಶಿವ ನಮಗೇ ಒಲಿಯುತ್ತುದ್ದ. ನೀವು ಹೋಗುವ ಮುನ್ನ ಇಮೊಂದನ್ನು ಮುಗಿಸಿ ಹೋಗಿ ಎಂದು ಅವರು ಹೇಳಿದರಂತೆ. ಹಾಗಾಗಿ ಅಂವ ಇನ್ನೂ ಕಾರ್ಯ ನಿರ್ವಹಿಸುತ್ತಲೇ ಇದ್ದಾನೆ." ಎಂದು ಕತೆ ಹಬ್ಬಿಸಿದ್ದೇವೆ.
ಆ ಮಠದವರು ಗಾಳಿ ಊದಿದರೆ ನಾವು ಹಾರಿ ಹೋಗುತ್ತೇವೆ, ಅದು ಬೇರೆ ಪ್ರಶ್ನೆ. ಆದರೂ ಶ್ರೀಮಹಾಸಂಸ್ಥಾನದವರಾದ ನಾವು ಹೊರಗೆ ಹಾಗೆ ಹೇಳುವುದುಂಟೇ? ಸಾನಾತನ ಧರ್ಮಕ್ಕೆಷ್ಟು ಸಹನೆ ಇದೆಯೋ ಅಷ್ಟೇ ಸಹನೆ ಆ ಮಠಕ್ಕೆ ಇದೆ ಎಂದು ನಮ್ಮ ಅಂತರಂಗಕ್ಕೆ ಗೊತ್ತು. ನಾವು ಅವರ ವಿರುದ್ಧ ಏನೇ ಹೇಳಿದರೂ ಇಲ್ಲಿಯವರೆಗೆ ಏನೊಂದೂ ಮಾತನಾಡಲಿಲ್ಲ. ಹೀಗಾಗಿ ’ಕೋತಿ ಬೆಣ್ಣೆ ತಿಂದು ಮೇಕೆ ಮೂತಿಗೆ ಕೈ ಒರೆಸಿತ್ತು" ಅನ್ನೋ ಹಾಗೆ ನಾವು ಮಾಡಿದ, ಮಾಡುತ್ತಿರುವ ಮತ್ತು ಮಾಡಬೇಕೆಂದಿರುವ ಸಮಸ್ತ ಉಡಾಫೆ, ಉಪದ್ವ್ಯಾಪ, ಕಾಮಕೇಳಿ, ದ್ರೋಹ, ಆಸ್ತಿ ಕಬಳಿಕೆ ಎಲ್ಲದಕ್ಕೂ ಅವರೇ ಮೂಲ ಕಾರಣ ಎಂದು ಹೇಳಿಬಿಡುತ್ತೇವೆ ನಾವು.
ನಮ್ಮ ಕಾಮಕತೆಯ ಕವಿಗೆ ಯಾರೋ ಮೇಲ್ ಮಾಡಿದ್ದಾರಂತೆ ಈ ಹಾಡನ್ನು-
ನರಕ ಕರೆದ.... ಬಾ ವಸಂತಿ
ಹಾಗೆ ಹೊರಗೆ ಯಾಕೆ ಕುಂತಿ?
ಏಕಾಂತದ ಸವಿಯೂಟವ ಸವಿಯೋಣ ಬಾ
’ಭಾರತ ರತ್ನ’ವನೀಗ ಸೃಜಿಸೋಣ ಬಾ
ವಿಶ್ವರೂಪ ನೋಡಿ ದಿವ್ಯ ಭವ್ಯಳಾಗು ನೀ
ಪೇಶ್ವೆಯಂತ ಯೆನಗೆ ರಾಣಿ ಧನ್ಯಳಾಗು ನೀ
ಭಕ್ತಿಯಿಂದ ಎಲ್ಲ ಬಿಚ್ಚಿ ಭಗವದರ್ಪಣೆ
ಯುಕ್ತಿಯಿಂದ ಧನಕನಕವು ನಿನಗೆ ’ಅಪ್ಪಣೆ’
ಮಂಚವೇರು ಕೆಳಗೆ ಜಾರು ಕೊಸರಬೇಡ ನೀ
ಕೊಂಚ ಅಡ್ಜಸ್ಟ್ ಮೆಂಟು ಅಂಟು ಪರಮನೆಂಟಿದು
ಕಾಮಕತೆಯ ಕವಿಗೆ ಇದು ಅರ್ಥವಾಗಲಿಲ್ಲವಂತೆ. ಅವರು ಪ್ರಿಂಟ್ ಕೊಟ್ಟು ಹೋದರು. ಪರವಾಗಿಲ್ಲ, ಯಾರೋ ಸರಿಯಾಗೇ ಬರೆದಿದ್ದಾನೆ. ನಾಳೆ ಇವನೂ ಕತೆಗೆ ಸಾಹಿತ್ಯ ಒದಗಿಸಬಹುದು. ಅಲ್ಲೆಲ್ಲೋ ಯಾವುದೋ ಹಾಡು ಕೇಳಿಸ್ತಿದೆಯಲ್ಲಾ.......ಎಲ್ಲೋ ಕೇಳಿದ ಹಾಗಿದೆಯಲ್ಲಾ???????
.
.
.
ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ.....
ಈ ನೀರಿಗೆ ಹಾತೊರೆದರೆ ವಿಷಪಾನವೆ ನಿನ್ನ ಗತಿ .....
.....
....
...
..
,"
June 13

https://www.facebook.com/groups/1499395003680065/permalink/1627478917538339/

ನಿಂಗಿ..ನಿಂಗಿ...ನಿಂಗಿ,,ನಿಂಗಿ..........ನಿದ್ದಿ ...ಕದ್ದೀಯಲ್ಲೆ ..ನಿಂಗಿ
"ಒಂದು ಬಲಿಷ್ಠ ವ್ಯವಸ್ಥೆಯಲ್ಲಿ ಬೇರು ಬಿಟ್ಟು ಕುಳಿತುಬಿಟ್ಟರೆ ಆಮೇಲೆ ಬೇರು ಕೀಳುವುದು ಸುಲಭವಲ್ಲ. ಕಂಪ್ಯೂಟರಿಗೆ ರ್‌ಯಾನ್ ಸಮ್ ವೇರ್ [Ransom ware] ಎಂಬ ರೀತಿಯ ವೈರಸ್ ಬಂದ ಹಾಗೆ; ಬಂದಿದ್ದು ಗೋತ್ತಾಗಲ್ಲ, ಹಾಳಾಗೋದನ್ನು ತಪ್ಪಿಸೋದು ಅತಿ ಕಷ್ಟ. ಇರುವ ಫೈಲ್ ಫಾರ್ಮ್ಯಾಟ್ ಗಳನ್ನೆಲ್ಲ ಬದಲಾಯಿಸಿ ಎಸೆದುಬಿಟ್ಟರೆ ವ್ಯವಸ್ಥೆ ಹೀಗೇಯೇ ಎಂಬ ಭಾವನೆ ಹೊಸದಾಗಿ ಬಳಸುವವರಲ್ಲಿ ಬರಬೇಕು.
ಸ್ವಾತಂತ್ರ್ಯಾ ನಂತರವೂ ಸುಭಾಶ್ಚಂದ್ರ ಬೋಸ್ ಬದುಕಿದ್ದರು; ಆದರೆ ಅದು ಅಧಿಕಾರದಲ್ಲಿರುವ ಮತ್ತು ರಾಜಕೀಯದಲ್ಲಿರುವ ಸೀಮಿತ ಜನರಿಗೆ ಮಾತ್ರ ಗೊತ್ತಿತ್ತು. ಗಾಂಧೀಜಿಯನ್ನು ದೇಶದ ಪಿತಾಮಹ ಎಂದು ಕರೆದು ಸ್ವಾತಂತ್ರ್ಯ ಬರೋದಕ್ಕೆ ಅವರ ಸಾತ್ವಿಕ ಚಳುವಳಿಯೇ ಕಾರಣ ಎಂದು ಬಿಂಬಿಸಲಾಗಿತ್ತು.
ಜೀವಂತವಿದ್ದ ಬೋಸ್ ಗಾಂಧೀಜಿಗೆ ಸಲ್ಲುತ್ತಿದ ಗೌರವ, ಮರ್ಯಾದೆಗಳನ್ನು ಕಿತ್ತುಕೊಳ್ಳಲು ಇಷ್ಟಪಡಲಿಲ್ಲ. ತಾನು "ಗುಮ್ನಾಮಿ ಬಾಬಾ" ಎಂಬ ಹೆಸರಿನಲ್ಲಿ ಫೈಜಾಬಾದ್‍ನಲ್ಲಿ ಸಂತನಂತೆ ವಾಸವಿದ್ದು ತನ್ನ ಉಳಿದ ಜೀವಿತವನ್ನು ಕಳೆದರು.
ಬ್ರಿಟಿಷರು ದೇಶ ಬಿಟ್ಟು ಹೋಗಿದ್ದು ಬೋಸ್ ಅವರ ಸಿಂಹಘರ್ಜನೆಗೆ. ವಿದೇಶೀ ನೆಲದಲ್ಲಿ ಭಾರತೀಯ ಸೈನ್ಯವನ್ನು ಕಟ್ಟಿದ ಬೋಸ್ ಹಿಟ್ಲರ್ ಮತ್ತು ನೆಪೋಲಿಯನ್ ಮೊದಲಾದ ಸರ್ವಾಧಿಕಾರಿಗಳನ್ನು ಭೇಟಿಮಾಡಿದರು. ಭೇಟಿಮಾಡಿದ್ದು ಅವರೆಲ್ಲರ ಅನುಯಾಯಿಯಾಗಲಿಕ್ಕಲ್ಲ; ನಮ್ಮ ದೇಶದಿಂದ ಬ್ರಿಟಿಷರನ್ನು ಓಡಿಸಲಿಕ್ಕೆ ಸಹಾಯ ಮಾಡಿ ಎಂಬ ಕೋರಿಕೆಯನ್ನು ಮಂಡಿಸಲಿಕ್ಕಾಗಿ.
ಬೋಸ್ ಅವರ ಮಿಂಚಿನ ವೇಗದ ಕಾರ್ಯಕ್ಷಮತೆ ಮತ್ತು ಕಾರ್ಯದಕ್ಷತೆಗೆ ಹೆದರಿ ಬ್ರಿಟಿಷರು ಜಾಗ ಖಾಲಿ ಮಾಡಿದರು. ಹೀಗಂತ ಅನೇಕ ಸಂಶೋಧಕರು ನೂರಾರು ಪುಸ್ತಕಗಳನ್ನೇ ಬರೆದಿದ್ದಾರೆ. ಯುವ ಬರಹಗಾರ ಅನುಜ್ ಧರ್ ತಮ್ಮ ಪುಸ್ತಕದಲ್ಲಿ ಇಂತಹ ರಾಜಕೀಯದ ಮೇಲಾಟಗಳೆಲ್ಲವನ್ನೂ ನೇರವಾಗಿ ಹೇಳಿದ್ದಾರೆ.
ಇಂದು ಈ ವ್ಯವಸ್ಥೆಯಲ್ಲಿ ಬೋಸ್ ಮತ್ತು ಸರ್ದಾರ್ ಪಟೇಲರಿಗಿಂತ ಹೆಚ್ಚಾಗಿ ಗಾಂಧಿ ಮತ್ತು ನೆಹರೂ ನಮಗೆ ಮಹಾತ್ಮರೆಂದು ಹೇಳುತ್ತಾರೆ. ಬೋಸ್ ಮತ್ತು ಪಟೇಲರ ಸುದ್ದಿ ಬರುವುದೇ ಅಪರೂಪ. ಅರ್ಧ ಶತಮಾನದಿಂದ ನಾವು ಒಪ್ಪಿದ್ದು, ನಂಬಿಕೊಂಡು ಬಂದಿದ್ದು, ಪಠ್ಯದಲ್ಲಿ ಓದಿದ್ದು, ಕೇಳಿದ್ದು, ನಮ್ಮ ಮಕ್ಕಳಿಗೆ ಬೋಧಿಸಿದ್ದು, ರಾಷ್ಟ್ರೀಯ ಹಬ್ಬಗಳಲ್ಲಿ ಫೋಟೋ ಇಟ್ಟು ಪೂಜಿಸಿದ್ದು, ಹಾರ ಹಾಕಿ ನಮಿಸಿದ್ದು ಗಾಂಧಿ ಮತ್ತು ನೆಹರೂ ಈರ್ವರಿಗೇ ಎಂದರೆ ತಪ್ಪಲ್ಲ.
ಇಂದು ನಮ್ಮ ಸಮಾಜದಲ್ಲಿಯೂ ಸಹ ಹಾಗೇ ಆಗಿಬಿಟ್ಟಿದೆ. ನಾವು ಅಧಿಕಾರಕ್ಕೆ ಬಂದಾಗಿನಿಂದ ಸಮಾಜದಲ್ಲಿ ಬೇರೆ ಬೇರೆ ರೀತಿಯಲ್ಲಿ ಜನರಿಗೆ ದುರ್ಬೋಧನೆಗಳನ್ನೇ ನಡೆಸಿದೆವು. ಜನರಿಗೆ ಕಣ್ಣಿಗೆ ಕಾಣುವಂತೆ ನಾವು ಬಹಳ ಚೆನ್ನಾಗಿ ಪೋಸು ಕೊಟ್ಟೆವು, ಯಾವಾಗಲೂ ಏನಾದರೊಂದು ಸಮಾರಂಭ ನಡೆಸುತ್ತ ಜನರ ಮನಸ್ಸಿನಲ್ಲಿ ಅದ್ವಿತೀಯ ಸನ್ಯಾಸಿಯಾಗಲು ಪ್ರಯತ್ನಿಸಿದೆವು.
ವಾಹನ, ವಿದ್ಯುತ್ತು ತಲುಪದ ಕುಗ್ರಾಮದ ಮೂಲೆಯ ಮನೆಯಲ್ಲೂ ಸಹ, ಪರಂಪರೆಯ ಮೂಲಪುರುಷನ ಭಾವಚಿತ್ರ ಇಡುವ ಬದಲು, ನಮ್ಮ ಭಾವಚಿತ್ರ ಇರುವಂತೆ ನೋಡಿಕೊಂಡೆವು. ಯಾರೋ ಪುಣ್ಯಾತ್ಮ ಇದನ್ನು ನೆನಪಿಸಿದರೂ ಮೊದಮೊದಲು ನಾವದನ್ನು ಒಪ್ಪಲೇ ಇಲ್ಲ. ಯಾಕೆಂದರೆ ಎಲ್ಲೆಲ್ಲೂ ಜನರಿಗೆ ನಮ್ಮ ಮುಖವೇ ಕಾಣಬೇಕು. ಉಂಗುರದಿಂದ ಅಂಬರದೆತ್ತರದ ಕಟೌಟಿನ ವರೆಗೆ ಎಲ್ಲದರಲ್ಲೂ ನಮ್ಮದೇ ಭಾವಚಿತ್ರ.
ಆರಂಭಿಕ ಹಂತದಲ್ಲಿ ನಮ್ಮ ಹೊಸ ಹೊಸ ಡೊಂಬರಾಟಗಳ ಅಂತಃಸತ್ವ ಏನೆಂಬುದು ಭಕ್ತರಿಗೆ ಅರ್ಥವಾಗಲಿಲ್ಲ. ನಾವು ಮಾಡಿದ್ದಕ್ಕೆಲ್ಲ ಜೈ ಎನ್ನ ಹತ್ತಿದರು. ಸಮಾಜದ ಉದ್ಧಾರಕ್ಕಾಗಿ ಇಪ್ಪತ್ತೈದು ಮೂವತ್ತು ಬೃಹತ್ ಯೋಜನೆಗಳನ್ನು ಹಾಕಿದ್ದೇವೆ ನೋಡಿ ಎಂದು ಆಗಲೇ ಭೋಂಗು ಬಿಟ್ಟೆವು. ಸಮಾಜದ ಸದ್ಗುಣಿಗಳು ವೇದಿಕೆಯಲ್ಲಿ, "ನೋಡಿ ನಮ್ಮ ಹಾವಾಡಿಗ ಸಂಸ್ಥಾನದ ಹಿರಿಮೆಯನ್ನು, ಇಂತಹ ಬುದ್ಧಿ, ದಕ್ಷತೆ, ಕಾರ್ಯದಕ್ಷತೆ, ಚಾಣಾಕ್ಷತನ ಇದನ್ನೆಲ್ಲ ಸಂಸ್ಥಾನ ಎಲ್ಲಿ ಕಲಿತರು? ಯಾವ ಎಂಬಿಎ ಆದವನಿಗೂ ಈ ಮಟ್ಟದ ವ್ಯಾವಹಾರಿಕ ಜ್ಞಾನ ಇರುವುದು ಕಷ್ಟ" ಎಂದು ನಮ್ಮನ್ನು ಹೊಗಳಿದ್ದೇ ಹೊಗಳಿದ್ದು.
ಅಲ್ಲಿಂದೀಚೆಗೆ ಬೋಳೆ ಭಕ್ತರು ನಮ್ಮನ್ನು ನೋಡುವ ರೀತಿಯೇ ಬದಲಾಗಿಬಿಟ್ಟಿತು. ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ತರಾವರಿ ಮೀಟಿಂಗುಗಳನ್ನು ಹಗಲೂ ರಾತ್ರಿ ಹಮ್ಮಿಕೊಳ್ಳುತ್ತೇವೆ ಎಂದಾಗ ಜನ ಖುಷಿ ಪಟ್ಟರು; ಪಾರಮಾರ್ಥಿಕ ವಿಷಯ ಎಕ್ಕುಟ್ಟೋಗಿ ಲೌಕಿಕ ವಿಷಯದಲ್ಲೇ ಭಕ್ತರೂ ಮೈಮರೆತರು.
ವಾಸ್ತವ ಏನೆಂದರೆ ಹಿಂದಿನವರು ಸ್ವಲ್ಪ ಬಿಗಿ ಇದ್ದರು, ಅವರಿಗೆ ಜನರ ಬಳಕೆ ಕಮ್ಮಿ ಇತ್ತು. ಅದೇ ವೀಕ್ ಪಾಯಿಂಟನ್ನು ನಾವು ಎನ್ ಕ್ಯಾಶ್ ಮಾಡಿಕೊಂಡೆವು. "ಗುರುಗಳ ಮುಖ ನೋಡೋ", "ಸದಾ ಎಂತಾ ಮಂದಹಾಸ", "ದಿವ್ಯ ತೇಜಸ್ಸು", "ಮಹಾನ್ ತಪಸ್ವಿ", ,"......ಅವತಾರ" ಎಂಬೆಲ್ಲ ಉದ್ಗಾರಗಳು ಜನರಲ್ಲಿ ಬಾಯಿಂದ ಬಾಯಿಗೆ ಹಬ್ಬಿದವು. ಭಕ್ತರ ಸಂಖ್ಯೆ ಹೆಚ್ಚಿತು.
ಮೊದಲು ಬರುತ್ತಿದ್ದ ಮಠದ ಹಳೆಯ ಭಕ್ತರಿಗೆ ನಮ್ಮ ಡೊಂಬರಾಟಗಳಲ್ಲಿ ಅನುಮಾನವಿತ್ತು; ಅವರಲ್ಲಿ ಎಷ್ಟೋ ಜನ ಬರುವುದನ್ನೇ ನಿಲ್ಲಿಸಿದರು; ಮುಪ್ಪಿನಲ್ಲಿದ್ದ ಕೆಲವರು ಟಿಕೆಟ್ ತೆಗೆದುಕೊಂಡಿದ್ದರಿಂದ ಹಿಂದಿನ ಸಂಪೂರ್ಣ ಕೊಂಡಿ ಕಳಚಿತು. ಬಂದ ಭಕ್ತರಲ್ಲಿ ಮಠದಲ್ಲೇನು ನಡೆಯಬೇಕೆಂಬುದು ಗೊತ್ತಿಲ್ಲದವರೇ ಜಾಸ್ತಿ. ಕಾಲ ನಮಗೆ ಬೇಕಾದಂತಿತ್ತು; ನಾಯಿ ಹಸಿದಿತ್ತು-ಅನ್ನ ಹಳಸಿತ್ತು.
ನಮ್ಮ ವಿವಿಧೋದ್ದೇಶ ಯೋಜನೆಗಳೆಲ್ಲದರ ಹಿಂದಿನ ದುರುದ್ದೇಶವೇ ಬೇರೆ ಇತ್ತು. ನಮಗೆ ಹೆಣ್ಣು, ಹಣದ ಚಟ ಆಗಲೇ ಮನದಲ್ಲಿತ್ತು. ಅದರೆ ಅದನ್ನು ಗೋಪ್ಯವಾಗಿ ಹಾಗೇ ಇರಿಸಿಕೊಂಡು ಮುಂದುವರಿದೆವು. ’ಸಮಾಜೋದ್ಧಾರಕ್ಕಾಗಿ ಭೂಮಿಗೆ ಬಂದ ಭಗವಂತ’ ಎಂದೇ ಜನ ಭಾವಿಸಿದರು; ನಾವು ಹೇಳಿದ್ದಕ್ಕೆ "ಇಲ್ಲ", ’ಅಲ್ಲ" ಅಥವಾ "ಆಗುವುದಿಲ್ಲ" ಎಂಬ ನಕಾರಾತ್ಮಕ ಮಾತುಗಳೇ ಇರಲಿಲ್ಲ. ಏನೇ ಹೇಳಿದರೂ ಜೈ ಜೈ ಜೈ ಜೈ.
ಸಮಾಜದಲ್ಲಿ ರಾಜಕಾರಣಿಗಳಿಗೆ ನಮ್ಮ ಜನಬಲ ತೋರಿಸಲು ಒಂದೆರಡು ದೊಡ್ಡ ಸಮಾರಂಭ ಮಾಡಿದೆವು. ಕಂಡಲ್ಲಿಂದಲೆಲ್ಲಾ ಯಾವ್ಯಾವುದೋ ಕಾವಿಗಳು, ಖಾದಿಗಳು ಓಡೋಡಿ ಬಂದು ಹಾರಹಾಕಿ ಶುಭ ಕೋರಿದರು. ನಮ್ಮ ಪ್ರತಿಷ್ಠೆ ನೂರ್ಮಡಿಯಾಯಿತು. ಮಠಕ್ಕೆ ಕೋಟಿಗಟ್ಟಲೆ ಆದಾಯ ಬರತೊಡಗಿತು.
ಯಾವಾಗ ಹಣದ ಒಳಹರಿವು ನಿರೀಕ್ಷೆ ಮೀರಿ ಹೆಚ್ಚಿ ಅಣೆಕಟ್ಟು ತುಂಬಿ ಹರಿಯತೊಡಗಿತೋ, ಆ ಸಮಯದಲ್ಲಿ ನಾವು ಸುಂದರಿಯರಿಗೆಲ್ಲ ’ಬಾಗಿನ’ ಅರ್ಪಿಸಲು ಆರಂಭಿಸಿಬಿಟ್ಟೆವು. ಅಯ್ಯೋ ದೊಡ್ಡ ಪ್ರತಿಷ್ಠಿತ ವ್ಯಕ್ತಿ, ಅದರಲ್ಲೂ ಸಮಾಜದ ಗುರು ಎಂದುಕೊಳ್ಳುತ್ತ ನಮ್ಮ ಅಕ್ಕಪಕ್ಕ ನಿಂತು ಫೋಟೋ ತೆಗೆಸಿಕೊಳ್ಳತೊಡಗಿದರು.
ನಮ್ಮೊಂದಿಗೆ ಖಾಸಗಿಯಾಗಿ ಮಾತನಾಡುತ್ತೇವೆ, ದೂರವಾಣಿಯಲ್ಲಿ ಮಾತನಾಡುತ್ತೇವೆ, ಪಕ್ಕದಲ್ಲೇ ಇರುತ್ತೇವೆ ಎಂದು ಸಮಾಜದ ಇತರರಿಗೆ ತೋರಿಸುವುದು ಕೆಲವು ಸುಂದರಿಯರ ಜಾಯಮಾನವಾಗಿಬಿಟ್ಟಿತು; ಅದು ಅವರಿಗೆ ಆ ಕ್ಷಣದಲ್ಲಿ ಅವರ ಪ್ರತಿಷ್ಠೆಯನ್ನು ಹೆಚ್ಚಿಸುವಂತೆ ಭಾಸವಾಗುತ್ತಿತ್ತು.
ಸುಂದರಿಯರಲ್ಲಿ ಒಬ್ಬರನ್ನು ನೋಡಿ ಇನ್ನೊಬ್ಬರು, ಇನ್ನೊಬ್ಬರನ್ನು ನೋಡಿ ಮತ್ತೊಬ್ಬರು, ಮತ್ತೊಬ್ಬರನ್ನು ನೋಡಿ ಮಗದೊಬ್ಬರು ಬರತೊಡಗಿದರು. ಆಗಲೇ ನಾವು ಕೆಲವರಿಗೆ ಬಿಸ್ಕೆಟ್ ಹಾಕಲು ಆರಂಭಿಸಿದೆವು. ಕಚ್ಚುವ ನಾಯಿಯೂ ಸಹ ಬಿಸ್ಕೆಟ್ ರುಚಿಗೆ ಬಾಯಿ ಮುಚ್ಚಿಕೊಂಡು ಸುಮ್ಮನೆ ಬಿದ್ದಿರುತ್ತದಲ್ಲ? ಅದರಂತೆ ಯಾರ್ಯಾರಿಗೆ ಏನೇನು ಕೊಟ್ಟರೆ ನಮಗೆ ಬೇಕಾದಂತೆ ಇರುತ್ತಾರೆ ಎಂಬುದನ್ನು ನಾವು ಕಲಿತದ್ದೇ ಆವಾಗ.
ಹಿಂದೆ ಭಕ್ತರ ಸಂಕಷ್ಟಗಳನ್ನು ಖಾಸಗಿಯಾಗಿ ಗೋಪ್ಯವಾಗಿ ತೋಡಿಕೊಳ್ಳಲು ಇದ್ದ ಖಾಸಗೀ ಭೇಟಿ ’ಏಕಾಂತ ದರ್ಶನ’ವಾಗಿ ರೂಪಾಂತರಗೊಂಡಿತು. ಕೈ ತೊಳೆದುಕೊಂಡು ಮುಟ್ಟಬೇಕು ಅಂತಾರಲ್ಲ ಅಂತಹ ಬೆಳ್ಳನೆಯ ಸುಂದರಿಯರು ಎದುರಿಗೆ ಅಷ್ಟು ಸನಿಹಕ್ಕೆ ಬಂದಾಗ ನಮಗೆ ಬೇಕಾದ್ದನ್ನೇ ನಾವು ನೋಡಿದೆವು, ಅದನ್ನೇ ಪರೋಕ್ಷವಾಗಿ ಪ್ರಸ್ತಾಪಿಸಿದೆವು.
ಆರಂಭಿಕ ಹಂತದ ’ಏಕಾಂತ ದರ್ಶನ’ಗಳು ಅಷ್ಟು ಬೇಗ ಎಲ್ಲೂ ಸುದ್ದಿ ಮಾಡಲಿಲ್ಲ ಯಾಕೆಂದರೆ ಸುಂದರಿಯರಿಗೂ ಹೆದರಿಕೆ ಇತ್ತು, ಪರಂಪರೆಯ ನಿಯಮಗಳನ್ನು ಅತಿಯಾಗಿ ಉಲ್ಲಂಘಿಸಿದ ನಮ್ಮಲ್ಲೂ ಸ್ವಲ್ಪ "ಯಾರಿಗಾದರೂ ತಿಳಿದುಬಿಡಬಹುದೇ?" ಎಂಬ ಭಯವಿತ್ತು. ಬರುಬರುತ್ತ ಕುಲಪತಿ ಬಾವಯ್ಯ ಕೂಡ ನಮ್ಮ ಭಾಗೀದಾರನಾದಾಗ ನಮ್ಮ ಗೋಪ್ಯದ ವ್ಯವಹಾರ ಅವನಿಗೂ ಗೊತ್ತಾಯಿತು.
ಕುಲಪತಿ ಬಾವಯ್ಯ ಅವನ ಲೆವೆಲ್ಲಿಗೆ ಸಿಗುವುದನ್ನು ಬಳಸಿಕೊಳ್ಳತೊಡಗಿದ, ನಮ್ಮ ಹೈ ಲೆವೆಲ್ಲಿಗೆ ಸಿಗುವುದನ್ನು ನಾವು ಬಳಸಿಕೊಳ್ಳತೊಡಗಿದೆವು. ಕುಲಪತಿ ಬಾವಯ್ಯನ ವಿರುದ್ಧ ಬಹಳ ದೊಡ್ಡ ಮಟ್ಟದಲ್ಲಿ ದೂರುಗಳು ಬಂದಾಗ ಅದನ್ನು ನಾವೇ ನಿವಾರಿಸಿದ್ದನ್ನು ಹಿಂದೆ ನಿಮಗೆ ಹೇಳಿದ್ದೇವಲ್ಲ? ಮಠದಿಂದ ಹೊರಗಟ್ಟಿದರೆ ನಮಗೆ ಉಳಿಗಾಲವಿರಲಿಲ್ಲ. ಯಾಕೆಂದರೆ ಆ ಖದೀಮನಲ್ಲಿ ಅಗಲೇ ಕೆಲವು ವೀಡಿಯೋ ತುಣುಕುಗಳಿದ್ದವು. ಹೀಗಾಗಿ ನಾವು ಗಪ್ ಚುಪ್ ಸುಮ್ಮನಾಗಿಬಿಟ್ಟೆವು.
ಹೊರಮುಖದಲ್ಲಿ ಮಾತ್ರ ಭಜನೆ, ಸತ್ಸಂಗ, ಸಹಸ್ರನಾಮಗಳು, ಜಪ, ಹೋಮ, ಹವನ, ಪಾದಪೂಜೆ, ಭಿಕ್ಷ ಎಲ್ಲವೂ ಅತಿಯಾಗಿ ನಡೆಯುತ್ತಿದ್ದವು. ನಮ್ಮ ಯೋಜನೆಗಳು ಎತ್ತುವಳಿಗಳೆಂದು ಯಾರಿಗೂ ಭಾಸವಾಗದಂತೆ ನುಣ್ಣಗೆ ಹೆರೆದು, ಎಣ್ಣೆ ಸವರಿದೆವು. ತೋರಿಕೆಗೆ ಒಂದಷ್ಟು ಕೆಲಸಗಳನ್ನು ಮಾಡಿ "ಬಹಳ ಬದಲಾವಣೆ ಮಾಡ್ತಿದ್ದಾರೆ" ಎಂಬ ಭಾವನೆ ಮೂಡಿಸಿದೆವು.
ನಮ್ಮ ಕಚೇರಿಗಳಲ್ಲಿ ಹುಡುಗಿಯರನ್ನೇ ಹೆಚ್ಚೆಚ್ಚು ಇರಿಸಿಕೊಂಡೆವು; ಕಾರಣ ಏನಂತ ನಿಮಗೆ ಗೊತ್ತು. ಆಗಾಗ ಕೆಲವು ಹುಡುಗರನ್ನೂ ಸೇರಿಸಿಕೊಂಡೆವು. ನಾವು ಬಳಸಿದ ಹುಡುಗಿಯರನ್ನು ’ಪ್ರಸಾದ ರೂಪ’ದಲ್ಲಿ ಅಂತಹ ಹುಡುಗರಿಗೇ ಕಟ್ಟಿದೆವು. ಬ್ರಹ್ಮಚಾರಿಯಾಗಿದ್ದ ಗಣೇಶನಿಗೂ ಮದುವೆಯ ಯೋಗ ಬಂತು. ಇಂದು ನಮ್ಮ ಪರಿವಾರದಲ್ಲಿ ಇರುವವರೆಲ್ಲರೂ ನಮ್ಮ ’ಪ್ರಸಾದ’ಕ್ಕೆ ಭಾಜನರಾದವರೇ.
ಎಲೈಟ್ ಕ್ಲಾಸಿನ ಮಹಿಳೆಯರನ್ನು ಗುರುತಿಸಿ ಗಾಳಹಾಕುವುದು ನಮಗೆ ಬಹಳ ಸುಲಭದ ಕೆಲಸವಾಯ್ತು. ನೀನು ದಿವ್ಯಳು ಭವ್ಯಳು ಮತ್ತಿನ್ನೇನೇನೋ ಅಂದು, ಆಣೆ ಪ್ರಮಾಣಗಳನ್ನು ಮಾಡಿಸಿ ಒಂದು ಹಂತಕ್ಕೆ ತಂದುಕೊಂಡು, ತಿನ್ನಲಿಕ್ಕೆ ವಿದೇಶೀ ಮಾದಕದ್ರವ್ಯ ಮಿಶ್ರಿತ ’ದಿವ್ಯ ಪ್ರಸಾದ’ವನ್ನು ಕೊಡುತ್ತಿದ್ದೆವು. ಎಲೈಟ್ ಕ್ಲಾಸಿನ ಸುಂದರಿ ಬುದ್ದುಗಳಲ್ಲಿ ಪ್ರತಿಷ್ಠೆ ಮತ್ತು ಭಕ್ತಿ ಎರಡೂ ಇರುತ್ತದೆ. ಇದನ್ನೇ ದಾಳವಾಗಿಸಿ ಅಂತವರನ್ನೆಲ್ಲ ಬಳಸಿಕೊಂಡು ವಿಶ್ವರೂಪ ದರ್ಶನ ನೀಡುತ್ತಿದ್ದೆವು.
ಹೊರಗೆಲ್ಲೂ ಇದು ಯಾರಿಗೂ ತಿಳುಯದಂತೆ ಯಾವ್ಯಾವ ನಾಯಿಗೆ ಯಾವ ಬಿಸ್ಕಿಟ್ ಎಸೆಯಬೇಕೋ ಅದನ್ನು ಕಾಲಕಾಲಕ್ಕೆ ಮಾಡಿಬಿಟ್ಟಿದ್ದೆವು. ಅವರಿಗಾಗಿ ನಾವು-ನಮಗಾಗಿ ಅವರು ಎಂದಾದಾಗ, ಗಂಡು ಭಕ್ತರಿಗೆ ಖಾಸಗೀ ಭೇಟಿ ಹಾರಿಹೋಗಿ ಕೇವಲ ರಾಣಿಯರಿಗೆ ಏಕಾಂತ ದರ್ಶನ ನಡೆಯುತ್ತಲೇ ಇತ್ತು.
ಆರ್ಥಿಕ ವ್ಯವಹಾರದಲ್ಲಂತೂ ಬಿಡಿ, ನಾವು ಸರ್ವತಂತ್ರ ಸ್ವತಂತ್ರರು; ಯಾರೂ ಹೇಳುವುದಕ್ಕೆ ಕೇಳುವುದಕ್ಕೆ ಅಧಿಕಾರವೇ ಇಲ್ಲ. ನಮ್ಮ ವಿರುದ್ಧ ಸೊಲ್ಲೆತ್ತಿದವರನ್ನು "ಮಾತುಕತೆಗೆ ಮಠಕ್ಕೆ ಬನ್ನಿ" ಎಂದು ಕರೆದು ನಮ್ಮ ನಾಯಿಗಳನ್ನು ಬಿಟ್ಟು ಮಗ್ಗುಲು ಮುರಿಸಿದೆವು. ಹೀಗಾಗಿ ನಮ್ಮ ವಿರುದ್ಧ ಸಾರ್ವಜನಿಕ ಸ್ಥಳಗಳಲ್ಲಿ ವಿಷಯ ಗೊತ್ತಿದ್ದರೂ ಯಾರೂ ಬಾಯ್ ಬಿಡುತ್ತಿರಲಿಲ್ಲ.
ನಡೆಯುತ್ತಿರುವ ಅಧರ್ಮ, ಅವ್ಯವಹಾರ, ಅನೈತಿಕ ವ್ಯವಹಾರ, ವ್ಯಭಿಚಾರ, ಬೂಟಾಟಿಕೆ, ಡೊಂಬರಾಟಗಳನ್ನು ಕಂಡ ಸಮಾಜದ ಕೆಲವು ಹಿರಿಯ ತಲೆಗಳು ಹಿಂದೆ ನಮ್ಮನ್ನು ಸೀಟಿಗೆ ತಂದದ್ದಕ್ಕೆ ಪಶ್ಚಾತ್ತಾಪ ಪಡುತ್ತ ತಮ್ಮ ಕೆನ್ನೆಗೆ ತಾವೇ ಹೊಡೆದುಕೊಂಡರು.
ತಲೆಯಿದ್ದವರು ಎನಿಸಿಕೊಂಡ ಕೆಲವು ಪ್ರಮುಖರು ವೇದಿಕೆ-ಮೈಕು ಬೇಕಾಗಿ ನಮ್ಮಲ್ಲಿಗೆ ಬಂದಾಗ, ಯೋಜನೆಗಳನ್ನು ಕಾರ್ಯಗತಗೊಳಿಸಲು ಅವರನ್ನು ಹಚ್ಚಿದೆವು. ಅವರೆಲ್ಲರ ಪರಿಶ್ರಮದ ಫಲವಾಗಿ ಹಣ ಉಕ್ಕಿಹರಿದು ಕಟ್ಟಡಗಳು ಮೇಲೆದ್ದವು, ಮೆರವಣಿಗೆಗಳು ನಡೆದವು, ಇನ್ನೂ ಏನೇನೋ ಎಲ್ಲಾ ನಿಗುರಿ ನಿಂತವು. ನಾವು ಮಾತ್ರ ಸದಾ ತಲೆ ಹಗುರವಿಟ್ಟುಕೊಂಡು ಏಕಾಂತ ದರ್ಶನ ನೀಡುವುದರಲ್ಲಿ ನಿರತರಾಗಿದ್ದೆವು.
ಹೊಸ ಸುಂದರಿಯ ಮುಖ ಕಂಡಾಗ ನಮಗೆ ಆ ಕ್ಷಣವೇ ಮಂಚಕ್ಕೆ ಕರೆಯುವ ಅಪೇಕ್ಷೆಯಾಗುತ್ತಿತ್ತು. ಸ್ಕೆಚ್ ಹಾಕಲು ತೊಡಗುವ ನಾವು ವಾರ, ತಿಂಗಳು, ವರ್ಷ, ವರ್ಷಗಳವರೆಗೂ ಕಾದು ತಂದು ಮಲಗಿಸಿದ್ದೇ ಗ್ಯಾರಂಟಿ. ನಮ್ಮ ನಿದ್ದೆಯನ್ನು ಕದ್ದ ಅಂತಹ ಹಲವು ನೂರು ನಿಂಗಿಗಳು ನಮ್ಮ ಸುತ್ತಲೇ ನಿಂತಿದ್ದರೂ ಒಬ್ಬರಿಗೊಬ್ಬರು ವಿಷಯ ಹೇಳಿಕೊಳ್ಳುತ್ತಿರಲಿಲ್ಲ. ಪ್ರತಿಯೊಬ್ಬರೂ ನಮ್ಮ ಕೆಳಗೆ ಮಲಗಿದ್ದು ತಮ್ಮ ಹೆಚ್ಚುಗಾರಿಕೆ ಮತ್ತು ’ಭಗವದರ್ಪಣೆ’ಎಂದೇ ಭಾವಿಸಿದ್ದರು.
ಮೊಂಡು ಭಕ್ತರ ಜೊಂಡು ತುಂಬಿದ ಭಕ್ತಸರೋವರದಲ್ಲಿ ನಮ್ಮ ಬೇರು ಆಳವಾಗಿ ಇಳಿದಿದ್ದರಿಂದ ಇಂದು ಯಾರೇ ಏನೇ ಮಾಡಿದರೂ ಅದನ್ನೆಲ್ಲ ಕೀಳುವುದು ಇತರರಿಗೆ ಕಷ್ಟ ಎಂಬುದು ನಮಗೆ ಗೊತ್ತಿದೆ. ನಾವೇ ಖುದ್ದಾಗಿ "ಹೌದಪ್ಪಾ ನಾವು ಕಳ್ಳ ಖದೀಮರು, ನಾವು ಲಂಪಟರು, ನಾವು ಕಚ್ಚೆಹರುಕರು" ಎಂದರೆ, "ಹಾಗೆಲ್ಲ ಹೇಳ್ಬಾರ್ದು ಸಂಸ್ಥಾನ, ನಮಗೆ ನೀವೇ ದೇವರು" ಎಂದು ನಮಗೇ ತಿಳಿಹೇಳುವ ಪ್ರಯತ್ನ ಮಾಡುವ ಬುದ್ಧಿಮಾಂದ್ಯರು ಅಲ್ಲಿದ್ದಾರೆ.
ಹೀಗಿರುವುದರಿಂದಲೇ ಸಮಾಜ ನಿರ್ದಾಕ್ಷಿಣ್ಯವಾಗಿ ನಿರ್ಧಾರವನ್ನು ಕೈಗೊಳ್ಳುವುದನ್ನು ಬಿಟ್ಟು ನ್ಯಾಯದ ಮೊರೆಹೊಕ್ಕಿದೆ. ಇಲ್ಲದಿದ್ದರೆ ಜನ ನಮ್ಮನ್ನು ಇಷ್ಟೊತ್ತಿಗಾಗಲೇ ದೇಶಭ್ರಷ್ಟನನ್ನಾಗಿಸುತ್ತಿದ್ದರು ಎಂಬುದರಲ್ಲಿ ನಮಗಂತೂ ಅನುಮಾನವೇ ಇಲ್ಲ. ಪರಂಪರೆ ಮತ್ತು ಸೀಟಿನ ರಕ್ಷಣೆ ಎಂಬ ಅಜ್ಜ ನೆಟ್ಟ ಆಲದಮರದ ಬೀಳಲುಗಳು ಮೇಲಿನಿಂದ ಭದ್ರವಾಗಿದ್ದರೆ, ಕೆಳಗೆ ನಾವು ಆಕ್ಟೋಪಸ್ ರೀತಿಯಲ್ಲಿ ಸಂದಿಗೊಂದಿಯಲ್ಲೆಲ್ಲಾ ಇಳಿಸಿದ್ದ ಬೇರುಗಳನ್ನು ಕಿತ್ತೆಗೆಯಲು ಜ್ಞಾತರು ಪ್ರಯತ್ನಿಸುತ್ತಿದ್ದಾರೆ.
ತುಮರಿ ರಾಮಚಂದ್ರ ಯಾರು ಎಂದು ಜಲಾನಯನ ಪ್ರದೇಶದ ಭಕ್ತರಲ್ಲಿ ನಾವು ಬಹಳ ಡೀಪ್ ಆಗಿ ವಿಚಾರಿಸಿದೆವು; ನಮ್ಮಲ್ಲಿಗೆ ಬರುವ ಯಾವ ಭಕ್ತರಿಗೂ ಅವನ ಪರಿಚಯ ಇರದ್ದರಿಂದ ಅವನನ್ನು "ಬೇನಾಮಿ" ಎಂದುಬಿಡಿ ಎಂದು ನಮ್ಮ ದೊಣ್ಣೆನಾಯಕನಿಗೆ ಅಪ್ಪಣೆ ಮಾಡಿದ್ದೇವೆ. ಆದರೂ ಒಂದಿಲ್ಲೊಂದು ದಿನ ಆ ಹೆಸರಿನ ವ್ಯಕ್ತಿ ನಮಗೆದುರಾಗಿ ಛೀಮಾರಿ ಹಾಕಿದರೆ ಆಗೇನು ಮಾಡುವುದು ಎಂಬ ಸಂದೇಹವೂ ನಮಗಿದೆ."

June -14
https://www.facebook.com/groups/1499395003680065/permalink/1628062217480009/

ಮನ್ಮಥ ಚಾತುರ್ಮಾಸ
"ಚಾತುರ್ಮಾಸದ ಬಗ್ಗೆ ಈಗಲೇ ಸಾಕಷ್ಟು ಹೇಳಿದ್ದೇವಲ್ಲ ಬಿಡಿ. ಹೆಸರೇ ಹೇಳುವಂತೆ ಇದು ಮನ್ಮಥ ಸಂವತ್ಸರ. ಮನ್ಮಥ ಸಂವತ್ಸರದಲ್ಲಿಯೂ ನಮ್ಮ ಮನ್ಮಥ ಲೀಲೆಗಳಿಗೆ ಇಲ್ಲಿಯವರೆಗೇನೂ ಕೊರತೆಯಿರಲಿಲ್ಲ. ಹೊಸ ಹೊಸ ’ಸೂರ್ಯ-ಚಂದ್ರ’ರನ್ನು ಹಿಡಿಯಲಾಗದಿದ್ದರೂ..ಓ..ಸಾರಿ..ಸಾರಿ ದರ್ಶನ ಮಾಡಲಾಗದಿದ್ದರೂ, ಇರುವ ಮದ್ದಲೆಗಳನ್ನೇ ಚೆನ್ನಾಗಿ ನುಡಿಸಿದ್ದೇವೆ ನಾವು.
ಮನ್ಮಥ ಎಂಬವನ ಕೆಲಸ ಹೆಣ್ಣು-ಗಂಡುಗಳಲ್ಲಿ ಮೋಹವನ್ನು ಕೆರಳಿಸುವುದಂತೆ. ಅಶೋಕ, ಚೂತ, ಅರವಿಂದ, ನಮಮಲ್ಲಿಕಾ, ನೀಲೋತ್ಫಲ ಎಂಬ ಪಂಚಬಾಣಗಳು [ಸಮ್ಮೋಹನ, ಸಂತಾಪನ, ಸಂದೀಪನ, ಸಂಶೋಷಣ, ದ್ರಾವಣ ಎಂದೂ ಅಥವಾ ಮನೋಮಥನ, ಮದನ, ಮೋಹನ, ಸಂತಾಪನ, ವಶೀಕರಣ ಎಂದೂ ಅವುಗಳ ಕ್ರಿಯಾ ರೂಪದ ಅರ್ಥವನ್ನು ವಿಶ್ಲೇಷಿಸುತ್ತಾರೆ]
ಮನ್ಮಥನ ಬಾಣ ಪ್ರಯೋಗದಿಂದ ಈ ಹಿಂದೆ ಏನೇನೆಲ್ಲ ನಡೆದಿದೆ ಎಂಬುದು ನಿಮಗೆಲ್ಲ ತಿಳಿದಿರಬಹುದು. ಶಿವ-ಪಾರ್ವತಿಯರ ನಡುವೆ ಮೋಹ ಕುದುರಿಸಿದ್ದು, ವಿಶ್ವಾಮಿತ್ರ-ಮೇನಕೆಯರ ನಡುವೆ ಮೋಹ ಕುದುರಿಸಿದ್ದು ಮೊದಲಾದ ಹಲವು ಮೋಹದ ಕಥೆಗಳ ಹಿಂದೆ ಮನ್ಮಥನ ಕೈವಾಡವಿದೆ ಎಂದು ಕೇಳಿದ್ದೇವಷ್ಟೇ? ಅಂತದ್ದೇ ಇನ್ನೊಂದು ಕತೆ ಪರಾಶರರದ್ದು.
ಪರಾಶರ ಮುನಿಗಳು ತೀರ್ಥಯಾತ್ರೆಗೆ ಹೊರಟವರು ಯಮುನಾ ನದಿಯನ್ನು ದಾಟುವವರಿದ್ದರು. ಯಮುನೆಯ ಆ ಭಾಗದಲ್ಲಿ ಬೆಸ್ತರ ನಾಯಕ ದಾಶರಾಜ ದೋಣಿ ನಡೆಸಬೇಕಾಗಿದ್ದವನು ಊಟ ಮಾಡುತ್ತಿದ್ದ. ತಡ ಮಾಡಿದರೆ ಮುನಿಗಳು ಮುನಿದು ಶಾಪ ಕೊಟ್ಟುಬಿಡುದೇನೋ ಎಂಬ ಅಂಜಿಕೆಯಿಂದ ಆಗತಾನೇ ಯೌವ್ವನಕ್ಕೆ ಕಾಲಿಟ್ಟಿದ್ದ ಮಗಳು ಮತ್ಸ್ಯಗಂಧಿಯನ್ನು ದೋಣಿ ನಡೆಸಲು ಕಳಿಸಿಕೊಟ್ಟ.
ಕೃಷ್ಣ ಸುಂದರಿಯಾದ ಮತ್ಸ್ಯಗಂಧಿಯ ಸುಪುಷ್ಟ ಅಂಗಸೌಸ್ಟವಗಳನ್ನು ಪರಾಶರರು ನೋಡುವಂತೆ ಮಾಡಿದ್ದು ಮರೆಯಲ್ಲಿನ ಮನ್ಮಥ. ಮನ್ಮಥನ ಬಾಣ ಅವರಲ್ಲಿ ಬಯಕೆಯನ್ನು ಕೆರಳಿಸಿತು. ಆಕೆ ಯೋಜನಗಂಧಿ ಬೇರೆ, ಆ ಗಂಧ ಯೋಜನಗಳಷ್ಟು ದೂರ ಹೋಗುವ ಗಂಧ ಎಂದರ್ಥ. ಸಾಮಾನ್ಯವಾಗಿ ಮಹಿಳೆಯರ ಗಂಧವನ್ನು ಹೀರುವ ’ವಾಸು’ಗಳಿಗೆ ಮಾತ್ರ ಅಂತಹ ಗಂಧದ ಪರಿಣಾಮ ಗೊತ್ತಿರುತ್ತದೆ. ಪರಾಶರರಿಗೆ ಮಾತ್ರ ಇಲ್ಲಿ ’ವಾಸು’ ಎಂಬುದು ಅಪ್ಲೈ ಆಗುವುದಿಲ್ಲ.
ಪರಾಶರ ಮುನಿಗಳಿಗೆ ಮತ್ಸ್ಯಗಂಧಿಯಲ್ಲಿ ಮೋಹ ಹುಟ್ಟಿತು. ಮತ್ಸ್ಯಗಂಧಿಗೆ ಪರಾಶರರ ಕಣ್ಣೋಟದಲ್ಲಿ ಹೊಸಜಗತ್ತೇ ಕಂಡಿತು. ಮುಂದಿನ ಪರಿಣಾಮದ ಬಗೆಗೆ ಯೋಚಿಸುವ ಬುದ್ಧಿಮಟ್ಟ ಮತ್ಸ್ಯಗಂಧಿಯದಲ್ಲ; ಅವಳಿಗೆ ಆ ಕ್ಷಣಕ್ಕೆ ಜಗತ್ತೇ ಸುಂದರ. ಪರಾಶರರ ದೇಹ ಸಮೀಪಿಸಿದಷ್ಟೂ ಆಕೆಗೆ ಹಿತವೆನ್ನಿಸಿತು. ಎಳೆಯ ಯೋಜನಗಂಧಿಗೆ ನಡುವಯದ ಕಟ್ಟುಮಸ್ತಾದ ಮುನಿ ಪರಾಶರರ ಬಿಸಿಯಪ್ಪುಗೆ ಬಹಳ ಖುಷಿಕೊಟ್ಟಿತು.
ಪರಾಶರರು ಮುಂದಿನ ಪಾಠವನ್ನು ಪ್ರಾಕ್ಟಿಕಲ್ಸ್ ಮೂಲಕ ಹೇಳಿಕೊಟ್ಟರು; ಪರಿಣಾಮವಾಗಿ ಹುಟ್ಟಿದ ಕಪ್ಪು ಮಗುವೇ ಕೃಷ್ಣ ದ್ವೈಪಾಯನ. ೨ ಮಿನಿಟ್ಸ್ ಮ್ಯಾಗಿಯ ಹಾಗೆ ಅದೆಷ್ಟು ಬೇಗ ಮಗುಹುಟ್ಟಿತು ಎಂಬುದು ಇಲ್ಲಿ ಪ್ರಶ್ನಾತೀತ; ಅದೊಂದು ಬೃಹತ್ ಸಂಕಲ್ಪ. ತಡವಾಗಿ ಎಚ್ಚರಗೊಂಡ ಮತ್ಸ್ಯಗಂಧಿ ತನ್ನ ಕನ್ಯತ್ವ ಲುಪ್ತವಾಗದಂತೆ ವರವನ್ನು ಬೇಡಿದಳು. ದೀರ್ಘಕಾಲದ ಯೌವ್ವನವನ್ನೂ, ಕನ್ಯತ್ವವನ್ನೂ, ದೇಹದ ನಾತದ ಬದಲಿಗೆ ಯೋಜನಗಳವರೆಗೆ ದಿವ್ಯ ಪರಿಮಳ ಸೂಸುವ ವರವನ್ನೂ ಕರುಣಿಸಿ, ಉಡುಗೆ ತೊಡುಗೆ, ದಿವ್ಯಾಭರಣಗಳನ್ನೂ ತನ್ನ ತಪೋಮಹಿಮೆಯಿಂದ ಒದಗಿಸಿಕೊಟ್ಟರು ಋಷಿ ಪರಾಶರ.
ಅಂದಿನಿಂದ "ಮತ್ಸ್ಯಗಂಧಿ" "ಯೋಜನಗಂಧಿ" ಎಂದು ಕರೆಯಲ್ಪಟ್ಟಳು. ಹುಟ್ಟಿದ ಮಗು ಅವಳಿಗೆ ಬೇಕಾಗಿರಲಿಲ್ಲ. ಏನು ಮಾಡಬೇಕು? ಹಾದಿಯಲ್ಲೇ ಎಸೆದು ಮುಂದೆ ಸಾಗಬೇಕೇ? ಛೆ, ಪರಾಶರರು ಅಂತವರಾಗಿರಲಿಲ್ಲ. ತನ್ನ ತಪಃಶಕ್ತಿಯನ್ನು ವ್ಯಯಿಸಿ ಮಗುವನ್ನು ದೊಡ್ಡವನನ್ನಾಗಿ ಮಾಡಿ, "ಕೃಷ್ಣದ್ವೈಪಾಯನ" ಎಂಬುದಾಗಿ ಹೆಸರಿಸಿ, ತನ್ನ ಜೊತೆಗೇ ಕರೆದುಕೊಂಡು ಹೊರಟು ಹೋದರು. ಯೋಜನಗಂಧಿಗೆ "ಯಾವುದೇ ಕಷ್ಟ ಬಂದಾಗ ನೆನದ ಮಾತ್ರಕ್ಕೆ ಬಂದೊದಗುವೆ" ಎಂಬ ಭರವಸೆಯೊಂದಿಗೆ ಕೃಷ್ಣದ್ವೈಪಾಯನ ಅಪ್ಪನೊಂದಿಗೆ ಹೊರಟು ಹೋದ. ಮುಂದೆ ಆ ಮಗುವೇ ಪ್ರಕೃತದ ವೇದವ್ಯಾಸನೆನಿಸಿದ.
ಕಷ್ಟ ಬಂದಾಗ ಕರೆಮಾಡಲು ಅಂದು ಮೊಬೈಲ್ ಇರಲಿಲ್ಲ. ವಾಟ್ಸಾಪ್, ಐಪ್ಯಾಡ್, ಐಫೋನ್ ಇರಲಿಲ್ಲ. ಅಂದು ಅವರಲ್ಲೆಲ್ಲ ವಿಶಿಷ್ಟ ಶಕ್ತಿಯಿರುತ್ತಿತ್ತು; ಅದರಿಂದ ಅವರೆಲ್ಲ ದೂರದಲ್ಲಿರುವವರೊಡನೆ ತಮ್ಮ ಸ್ಥಿತಿಗತಿಯನ್ನು ಹೇಳಿಕೊಳ್ಳಬಹುದಾಗಿತ್ತು.
ನಾವೂ ವೀರ್ಯ ಸನ್ಯಾಸಿಯೇ ಆಗಿರುವುದರಿಂದ ಮತ್ಸ್ಯಗಂಧಿಯರನ್ನು ಹುಡುಕಿ ಅವರನ್ನೆಲ್ಲ ಯೋಜನಗಂಧಿಯರನ್ನಾಗಿ ಮಾಡಲು ಇಚ್ಛಿಸಿದೆವು. ಹರೆಯದ ಕೆಲವು ಕನ್ಯೆಯರಿಗೆ ಅಂತಹ ಅವಕಾಶ ಮಾಡಿಕೊಟ್ಟು ಪರಿವಾರದ ಗಿಂಡಿಗಳಿಗೆ ಮದುವೆ ಮಾಡಿಸಿದೆವು. "ದೇವರಾದ ನಮ್ಮ ದಿವ್ಯ ಸಂಕಲ್ಪ ನಿನಗೆ ದೈವತ್ವವನ್ನು ಕೊಡುತ್ತದೆ" ಎಂದು ಭೋಂಗು ಬಿಟ್ಟೆವು. ನಮ್ಮ ಸಮ್ಮಿಲನದ ಸವಿನೆನನಪಿಗಾಗಿ ನಮಗಿಂದು ಹಲವು ಮಕ್ಕಳಿದ್ದಾವೆ.
ಮುಖ್ಯ ವಿಷಯ ಅದಲ್ಲ. ವಿಚಾರಣೆ ನಡೆಸುವವರು ಅವುಗಳ ಡಿ.ಎನ್.ಎ ಟೆಸ್ಟ್ ಮಾಡಿಸಬೇಕು ಎಂದು ಹಠಮಾಡಿಬಿಟ್ಟರೆ ಎಂಬ ಸಂದೇಹ ನಮ್ಮ ಮನದಲ್ಲಿ ಸದಾ ಕಾಡುತ್ತಿದೆ. ಕೂದಲು ಸಿಗುವುದಕ್ಕೆ ಕತೆ ಕಟ್ಟಿದ್ದೇವೆ ಬಿಡಿ, ಆದರೆ ಇದಕ್ಕೆ ಯಾವ ಕತೆ ಹೊಸೆಯುವುದು ಎಂದು ನಮ್ಮ ಸುರಕ್ಷಾ ಸಮಿತಿಯವರು ತಲೆಕೆಳಗಾಗಿ ತಪಸ್ಸಿಗೆ ನಿಂತಿದ್ದಾರೆ.
ಅದಿರಲಿ, ಮುಂದೆ ಹಸ್ತಿನಾವತಿಯ ಅರಸ ಶಂತನು ಸತ್ಯವತಿಯನ್ನು ಬಯಸಿ ಬಂದ. ಸುಂದರಿ ಸೆಕೆಂಡ್ ಹ್ಯಾಂಡ್ ಆದರೇನು ಫಸ್ಟ್ ಹ್ಯಾಂಡ್ ಆದರೇನು? ನಮ್ಮಲೆಕ್ಕದಲ್ಲಿ ಸುಂದರಿಯರು ಎಷ್ಟನೇ ಹ್ಯಾಂಡ್ ಆದರೂ ತೊಂದರೆಯಿಲ್ಲ, ನಮ್ಮ ಕೆಲಸಕ್ಕೆ ಅನುಕೂಲ ಇದ್ದರೆ ಸಾಕು. [ಅದಕ್ಕೇ ನಾವು ನಮ್ಮ ಕನ್ಯೆಯರಲ್ಲಿ "ಸನ್ಯಾಸಿಯಾದ ನಮ್ಮ ಆಸೆಯನ್ನು ಪೂರೈಸಿದ ನೀವೇನೂ ಚಿಂತಿಸುವ ಅಗತ್ಯವಿಲ್ಲ, ನಾಮಕೇ ವಾಸ್ಥೆಗೆ ನಿಮಗೆ ಗಂಡನೊಬ್ಬ ಬರಲಿದ್ದಾನೆ, ಮಿಕ್ಕಿದ್ದನ್ನೆಲ್ಲ ನಾವೇ ನೋಡಿಕೊಳ್ಳುತ್ತೇವೆ."ಎಂದು ಹೇಳುತ್ತೇವೆ]
ಹೋಗಿಸೇರುವ ಮನೆಯಲ್ಲಿ ಮಗಳ ಸ್ಥಾನ-ಮಾನ ಎಂಥದ್ದು ಎಂಬುದರ ಬಗ್ಗೆ ಚಿಂತಿಸಿದ ದಾಶರಾಜ, "ನನ್ನ ಮಗಳಲ್ಲಿ ಹುಟ್ಟುವ ಸಂತಾನಕ್ಕೆ ರಾಜಪಟ್ಟ ನೀಡುವುದಾದರೆ ಮಾತ್ರ ನನ್ನ ಮಗಳನ್ನು ನಿನಗೆ ಕೊಡಬಲ್ಲೆ" ಎಂದು ಶಂತನುವಿಗೆ ಸವಾಲು ಎಸೆದುಬಿಟ್ಟ. ಮಗ ಗಾಂಗೇಯನಿರುವಾಗ ಮುಂದೆ ಹುಟ್ಟುವ ಮಗುವಿಗೆ ಹೇಗೆ ಪಟ್ಟಾಧಿಕಾರವನ್ನು ನೀಡಲಿ ಎಂದು ಶಂತನು ಯೋಚಿಸಿದ.
ಒಂದೆಡೆ ಮಗ, ಇನ್ನೊಂದೆಡೆ ಮನವನ್ನು ಮೋಹಿಸಿದ ಯೋಜನಗಂಧಿ. ಮನದ ತಿಕ್ಕಾಟದಲ್ಲಿ ಬಳಲಿದ ಶಂತನು ಜ್ವರಕ್ಕೆ ಬಿದ್ದ. ಊಟ ಬೇಡ, ತಿಂಡಿ ಬೇಡ. ನಾವೂ ಕೆಲವು ಸಲ ಹೀಗೇ ಅದೇ ಸ್ಥಿತಿಯನ್ನು ಅನುಭವಿಸಿದ್ದುಂಟು. ಕಾರಿನ ಬಾಗಿಲವರೆಗೂ ಬಂದು ನಗುಮೊಗದಲ್ಲಿ ಬೀಳ್ಕೊಟ್ಟ ಸ್ನಿಗ್ಧ ಸುಂದರಿಯರ ನೆನಪಿನಲ್ಲಿ ನಮಗೆ ಸ್ನಾನ ಬೇಡ, ಪೂಜೆ ಬೇಡ, ಭಿಕ್ಷವೂ ಬೇಡ, ಸದಾ ಅವರದ್ದೇ ಧ್ಯಾನ. ಅವರಲ್ಲಿನ ’ಸೂರ್ಯ-ಚಂದ್ರ’ರನ್ನು ಕಾಣುವ ತವಕ.
ಶಂತನು ಪುತ್ರ ದೇವವ್ರತ, ಹಸ್ತಿನಾವತಿಯ ರಾಜಸಿಂಹಾಸನವನ್ನು ತಾನು ಏರಲಾರೆನೆಂದೂ, ಅದು ನಿಮ್ಮ ಮಗಳ ಸಂತಾನಕ್ಕೇ ಮೀಸಲೆಂದೂ, ಮುಂದೆ ತನ್ನ ಮಡದಿಯಾಗುವವಳು ಪರಿಸ್ಥಿತಿ ಬದಲಾಯಿಸಿಯಾಳು ಎಂಬ ನಿಮ್ಮ ಆತಂಕ ನಿವಾರಣೆಗಾಗಿ ತಾನು ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿವೆನೆಂದೂ, ಪ್ರಪಂಚದ ಎಲ್ಲ ಸ್ತ್ರೀಯರು ತನಗೆ ತಾಯಿಯ ಸಮಾನವೆಂದೂ ವಾಗ್ದಾನ ಮಾಡಿದ; ಅದೇ ಭೀಷ್ಮಪ್ರತಿಜ್ಞೆ ಎನಿಸಿತು.
ತಂದೆಯ ಚಾಪಲ್ಯಕ್ಕೆ ತನ್ನ ಸಾಂಸಾರಿಕ ಜೀವನವನ್ನೇ ತ್ಯಜಿಸಿದ ಆ ಮಗ ಅದೆಷ್ಟು ಉದಾರಿಯಾಗಿರಬೇಡ? ಅಪ್ಪನ ವಿರಹ ವೇದನೆಯನ್ನು ಅರಿತು ಸಹಕರಿಸುವ ಮಕ್ಕಳೂ ಈ ಲೋಕದಲ್ಲಿ ಇದ್ದರೆಂಬುದಕ್ಕೆ ಭೀಷ್ಮನೇ ಸಾಕ್ಷಿ. ಅಷ್ಟೇ ಅಲ್ಲ ಗುರುವಿನ ವಿರಹ ವೇದನೆಯನ್ನು ತೆರವು ಮಾಡುವುದಕ್ಕೆ ತರತರವಾದ ರೀತಿಯಲ್ಲಿ ನಮಗೆ ಬೇಕಾದಂತೆಯೇ ನಡೆದುಕೊಳ್ಳುವ ನಮ್ಮ ಗಿಂಡಿಗಳಂತವರೂ ಈ ಲೋಕದಲ್ಲಿದ್ದಾರೆ.
ಬರಬಿದ್ದು ಎಲ್ಲೆಲ್ಲೂ ಎಂತೆಂತಹ ಸೂಪರ್ ಕ್ವಾಲಿಫೈಡ್ ಹುಡುಗರಿಗೆ ಹೆಣ್ಣು ಸಿಗದ ಈ ಕಾಲದಲ್ಲಿ ಏಳನೇ ಕ್ಲಾಸನ್ನೂ ಮುಗಿಸದ ಗಿಂಡಿಗಳಿಗೆ ಸುಂದರ ಹುಡುಗಿಯೊಂದಿಗೆ ಮದುವೆಯಾಗುತ್ತದೆ ಎಂದರೆ ಅದು ’ಗುರುಕೃಪೆ’ಯಲ್ಲವೇ? ಅದಕ್ಕೇ ಹೇಳೋದು-’ಹರಮುನಿದರೂ ಗುರು ಕಾಯುತ್ತಾನೆ’ಎಂದು. [ಯಾರೂ ಎತ್ತಿಕೊಂಡು ಹೋಗದಂತೆ ಈಗ ನಮ್ಮನ್ನೇ ಅವರು ಪಾಳಿಯಲ್ಲಿ ಕಾಯುತ್ತಿದ್ದಾರೆ ಎಂಬುದು ನಗಣ್ಯ]
ಮಹಾಸಮರ್ಥನಾಗಿದ್ದ ಭೀಷ್ಮನೇ ಹಸ್ತಿನಾವತಿಯನ್ನು ಆಳಿದ್ದರೆ ಮಹಾಭಾರತದ ಕಥೆಯ ದಿಕ್ಕೇ ಬದಲಾಗಿಬಿಡುತ್ತಿತ್ತು. ಸೃಷ್ಟಿಯ ನಿರ್ಧಾರ ಬೇರೆ ಇರುತ್ತದಲ್ಲ? ಶಂತನು-ಸತ್ಯವತಿ ಉರುಫ್ ಯೋಜನಗಂಧಿ ಸಂಧಿಸಿ ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ ಎಂಬ ಇಬ್ಬರು ಮಕ್ಕಳು ಜನಿಸಿದರು. ಇಬ್ಬರ ಹೆಸರಲ್ಲೂ ವೀರ್ಯವಿತ್ತಾದರೂ ಅವರ ವೀರ್ಯ ಸಂತಾನಾನುಗ್ರಹ ನೀಡುವಷ್ಟು ಸಬಲವಾಗಿರಲಿಲ್ಲ. ಅಂದು ನಾವು ಅಲ್ಲಿರಲಿಲ್ಲ. ಹೀಗಾಗಿ ವೇದವ್ಯಾಸರನ್ನು ಕರೆದರು. ನಾವು ಅಲ್ಲಿದ್ದರೆ ’ನಿಯೋಗ’ ಮುಗಿದಮೇಲೆ ಇಡೀ ಹಸ್ತಿನಾವತಿಯನ್ನೇ ಡೀನೋಟಿಫೈ ಮಾಡಿಸಿಬಿಡುತ್ತಿದ್ದೆವು.
ಚಾತುರ್ಮಾಸದ ಪರ್ವಕಾಲದಲ್ಲಿ ಇಂತಹ ಪುಣ್ಯ ಕತೆಗಳನ್ನು ನೀವೆಲ್ಲ ಕೇಳುತ್ತಿರಬೇಕು. ಅದೇ ವೀರ್ಯಸನ್ಯಾಸದ ನಿರೀಕ್ಷೆ. ಹಾವಾಡಿಗ ಮಹಾಸಂಸ್ಥಾನದಲ್ಲಿ ಹಾವಾಡಿಗರ ಸಂಖ್ಯೆ ಹೆಚ್ಚಿದಷ್ಟೂ ನಮಗೆ ಖುಷಿ; ಹಂಚಿತಿನ್ನುವ ಸುಖ ಇನ್ನೇತರಲ್ಲಿ ಸಿಗಲು ಸಾಧ್ಯ, ಅಲ್ಲವೇ?
June 15,
https://www.facebook.com/groups/1499395003680065/permalink/1628503940769170/
ನೀನೂ ಬಾ ನಿನ್ನ ಹೆಮ್ಮಕ್ಕಳನ್ನೂ ಕರೆದುಕೊಂಡು ಬಾ....!!!
" "ನನ್ನವು ಎರಡು, ಅವರವು ಎರಡು ಮತ್ತು ನಮ್ಮವು ಎರಡು" ಎಂಬುದು ಬರಹಗಾರ್ತಿ ಶೋಭಾ ಡೇ ಮಕ್ಕಳೆಷ್ಟೆಂಬ ಪ್ರಶ್ನೆಗೆ ಉತ್ತರವಾಗಿ ಹೇಳಿದ್ದು. ಅದನ್ನು ಓದಿದವರು ಏನಿದು ವಿಚಿತ್ರ ಅಂದುಕೊಂಡರು. ಸಾಮಾನ್ಯವಾಗಿ ಗಂಡ-ಹೆಂಡತಿಗೆ ಒಟ್ಟು ಮಕ್ಕಳು ಇಂತಿಷ್ಟು ಎಂದು ಹೇಳುತ್ತಾರಲ್ಲ; ಇಲ್ಲಿ ಹಾಗಲ್ಲ.
ಅವಳ ಹೇಳಿಕೆಯ ಅರ್ಥ-ಅವಳಿಗೆ ಮೊದಲ ಮದುವೆಯಿಂದ ಎರಡು, ಅವಳ ಈಗಿನ ಪತಿಗೆ ಅವನ ಮೊದಲ ಮದುವೆಯಿಂದ ಎರಡು, ಈ ವಿಚ್ಛೇದಿತರೀರ್ವರೂ ಜೊತೆಗೂಡಿದಮೇಲೆ ಇವರಿಗೆ ಎರಡು. ಇದು ಅಧುನಿಕ ಭಾರತ ಯಾವ ಕಡೆ ವಾಲುತ್ತಿದೆ ಎಂಬುದರ ದ್ಯೋತಕವೇ?
’ಅರವತ್ತರ ವಯಸ್ಸು ಬಲು ಗಮ್ಮತ್ತು’ ಎಂದು ತನ್ನ ಅಂಕಣದಲ್ಲಿ ಆಕೆ ಬರೆದುಕೊಂಡಿದ್ದಳು. ಇದು ಹಲವರ ಅಭಿಪ್ರಾಯವೂ ಆಗಿರಬಹುದು. ವಯಸ್ಸು ಉರುಳಿದಂತೆಲ್ಲ ಜೀವನದಲ್ಲಿ ಒಂದು ರೀತಿಯ ಸ್ಥಿರತೆ, ಸಂತೃಪ್ತಿ ಅರಳಿ, ಉತ್ಸಾಹ ಮತ್ತೆ ಮರಳಿ ಬಂದಿರುತ್ತದಂತೆ. ಲೈಂಗಿಕ ಸಂತೃಪ್ತಿಗೆ ಸಂಬಂಧಿಸಿದಂತೆ ಇದು ನೂರಕ್ಕೆ ನೂರು ಸತ್ಯ ಎಂಬುದು ಒಂದು ಸರ್ವೇಯಿಂದ ತಿಳಿದುಬಂದಿದೆ ಎಂದು ಪತ್ರಿಕೆಯೊಂದು ಹೇಳಿದೆ; ಪ್ರಾಯಶಃ ಅದು ನಮ್ಮಂತದೇ ಕಚ್ಚೆಹರುಕ ಸಂಪಾದಕನಾಗಿರುವ ಪತ್ರಿಕೆ.
ಜೀವನದ ಯಾವುದೇ ಹಂತಕ್ಕಿಂತ ನಲವತ್ತರ ಹರೆಯದಲ್ಲಿ ಹೆಚ್ಚಿನ ಸಂತಸ ಅನುಭವಿಸುತ್ತಿದ್ದೇವೆ ಎಂದು ಸಮೀಕ್ಷೆಯೊಂದರಲ್ಲಿ ಮಹಿಳಾಮಣಿಗಳು ತಮ್ಮ ಹಾಸಿಗೆಯ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರಂತೆ. ಇವರಲ್ಲಿ ಕೆಲವರು, ಗಂಡನ ಮೇಲಿನ ಆಸಕ್ತಿ ಕುಗ್ಗಿ, ಪರಪುರುಷರ ಕಡೆಗಿನ ಆಸಕ್ತಿ ಹಿಗ್ಗುವುದು ಈ ಹಂತದಲ್ಲಿಯೇ ಎಂದು ಮನಬಿಚ್ಚಿ ಹೇಳಿದ್ದಾರೆ ಎಂದಾಯ್ತು.
ಹಾಗಾದರೆ, ಇದಕ್ಕೆ ಕಾರಣವೇನು? ಅದಕ್ಕೊಬ್ಬ ಹೀಗೆ ಬರೆಯುತ್ತಾನೆ-"ನಲವತ್ತು ದಾಟುತ್ತಿದ್ದಂತೆ ಮಕ್ಕಳು ಸ್ವತಂತ್ರ ಹಕ್ಕಿಗಳಾಗಿರುತ್ತಾರೆ, ಗೂಡಿನಿಂದ ಹೊರಹಾರಿರುತ್ತಾರೆ, ಗಂಡನ ವೃತ್ತಿ ಒಂದು ಹಂತ ತಲುಪಿರುತ್ತದೆ, ಸಂಸಾರ ರಥ ಎಳೆಯುವ ಜವಾಬ್ದಾರಿ ಹೆಗಲಿನಿಂದ ಇಳಿದಿರುತ್ತದೆ, ಒಂದು ರೀತಿಯ ನಿರಾಳಭಾವ ತಾನೇ ತಾನಾಗಿರುತ್ತದೆ. ತಮ್ಮ ದೇಹದ ಮೇಲಿನ ರತಿ, ವ್ಯಾಮೋಹ ಕಡಿಮೆಯಾಗುತ್ತ, ಮನ್ಮಥ ಸಮ್ಮೋಹನಾಸ್ತ್ರ ಬೀಸಿರುತ್ತಾನೆ. ಈ ಹಂತದಲ್ಲಿ ಲೈಂಗಿಕ ಕ್ರಿಯೆಯ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡಲು ಆರಂಭವಾಗಿರುತ್ತದೆ."
"೨೦ರ ಹದಿ,ಕುದಿವಯಸ್ಸಿನಲ್ಲಿದ್ದಕ್ಕಿಂತ 40ರ ಮಧ್ಯ‌ವಯಸ್ಸಿನಲ್ಲಿ ಮಿಲನ ಮಹೋತ್ಸವದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಯೋಗಕ್ಕಳಿಯುತ್ತಿದ್ದೇವೆ ಎಂದು ಶೇ.80ರಷ್ಟು ಪ್ರಮೀಳೆಯರು ತಿಳಿಸಿದ್ದಾರಂತೆ. ಇತ್ತೀಚೆಗೆ ಮ್ಯಾಟ್ರಿಮೋನಿಯಲ್ ವೆಬ್ ಸೈಟೊಂದು ತಮ್ಮ ತಾಣದಲ್ಲಿ ನಲವತ್ತೇಕೆ ಐವತ್ತರ ಮಹಿಳೆಯರು ಹೆಚ್ಚೆಚ್ಚಾಗಿ ನೊಂದಾಯಿಸಿಕೊಳ್ಳುತ್ತಿದ್ದಾರೆ, ಸಂಗಾತಿಗಾಗಿ ಹುಡುಕುತ್ತಿದ್ದಾರೆ, ಹೊಸ ಜೀವನಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ಹೇಳಿತ್ತು" ಎಂದೂ ಆ ಲೇಖಕ ಹೇಳುತ್ತಾನೆ. ಇವರಲ್ಲಿ ಬೆಂಗಳೂರಿನ ಆಂಟಿಯರು ಹೆಚ್ಚಾಗಿದ್ದುದು ಕಂಡುಬಂದಿತ್ತು.
ಲೈಂಗಿಕ ತಜ್ಞರು ಹೀಗೆ ಹೇಳುತ್ತಾರಂತೆ-"ಸುರತ ಕ್ರೀಡೆಗೆ ಸಂಬಂಧಿಸಿದಂತೆ 40ರ ಮಹಿಳೆಯರು ಹೆಚ್ಚಿನ ವಿಶ್ವಾಸ ಹೊಂದಿರುತ್ತಾರೆ. ಗಂಡ ಹಳಬನಾಗಿದ್ದರೂ ಹೊಸಬಯಕೆಗಳು ಕೆರಳಿರುತ್ತವೆ. ತಮಗೇನು ಬೇಕೆಂದು ಸ್ಪಷ್ಟವಾಗಿ ಗೊತ್ತಿರುತ್ತದೆ. ಗಂಡನಿಗೆ ಹೇಳಿಕೊಳ್ಳಲು ಕೂಡ ಯಾವುದೇ ಹಿಂಜರಿಕೆಯಿರುವುದಿಲ್ಲ. ಸಾಂಪ್ರದಾಯಿಕ ಮನೆತನದ ಮಹಿಳೆಯರು ಇದನ್ನು ಒಪ್ಪಲಿಕ್ಕಿಲ್ಲ.
ಅದೇ ಲೇಖಕ ಮುಂದೆ ತನ್ನ ಲೇಖನದ ಏಕಮುಖೀ ನಿರ್ಣಾಯಕ ಹಂತಕ್ಕೆ ಬರುತ್ತಾರೆ. ಆತ ಹೇಳುತ್ತಾನೆ-"ಆದರೆ, ಜಗತ್ತು ಬದಲಾಗುತ್ತಿದೆ. ಕಾಲ ಹಿಂದಿನಂತಿಲ್ಲ. 20ರ ಹರೆಯದಲ್ಲಿ ಮದುವೆಯಾದ ಮಹಿಳೆಯರು ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ತೃಪ್ತಿಯಾದಂತೆ ನಾಟಕವಾಡುವುದು ಜಾಸ್ತಿ.ಆದರೆ, ವಯಸ್ಸು ಜೀವನದ ಮುಕ್ಕಾಲು ಭಾಗ ಸವೆಸಿದಾಗ ಈ ನಾಟಕೀಯತೆ ಬೇಕಾಗಿರುವುದಿಲ್ಲ. ಆದ್ದರಿಂದ, ಹಾಸಿಗೆಯಲ್ಲಿ ಸುಖ ತಾನಾಗಿಯೇ ಲಭಿಸುತ್ತದೆ. ಎಂಥ ಭಂಗಿಗಳು ಹೆಚ್ಚಿನ ಸುಖ ನೀಡುತ್ತವೆ ಎಂಬುದು ತಿಳಿದಿರುತ್ತದೆ. ಈ ಕುರಿತಂತೆ ನಾಚಿಕೆಯೂ ಮಾಯವಾಗಿರುತ್ತದೆ. ಶೇ.5ರಷ್ಟು ಮಹಿಳೆಯರು ಗಂಡನ ನಂಬಿಕೆಗೆ ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದರೂ ಅತ್ಯುತ್ತಮ ಸುರತಕ್ರಿಯೆ ನಡೆಸಿದ್ದು ಬಾಳಸಂಗಾತಿಯ ಜೊತೆಯೇ ಎಂದು ಮನದಾಳದಿಂದ ಒಪ್ಪಿಕೊಳ್ಳುತ್ತಾರೆ."
ತಜ್ಞರು ಮತ್ತು ಮಹಿಳೆಯರು ಮತ್ತು ಲೇಖಕರು ಏನನ್ನೇ ಹೇಳಿಕೊಳ್ಳಲಿ, ನಮ್ಮ ಸಾಮರ್ಥ್ಯದಲ್ಲಿ ಅಪಾರವಾದ ಆತ್ಮವಿಶ್ವಾಸವಿದೆ. ನಮಗಂತೂ ನಲ್ವತ್ತಾದ ನಂತರ ಮನ್ಮಥ ಕ್ರೀಡೆಯಲ್ಲಿ ಮನೋಲ್ಲಾಸ ಹೆಚ್ಚುತ್ತಿದೆ. ಅದೊಂದು ಯುದ್ಧವೆಂದೇ ಭಾವಿಸಿದ್ದೇವೆ ನಾವು. ಆ ಯುದ್ಧದಲ್ಲಿ ಎಷ್ಟು ಹೆಣ್ಣನ್ನು ಸೋಲಿಸಿ ಮಲಗಿಸಿದೆವು ಎಂಬುದನ್ನು ಲೆಕ್ಕ ಹಾಕಿ ಅದನ್ನು ಹೆಚ್ಚಿಸುತ್ತ ಹೋದರೇ ನಮಗೆ ಸಮಾಧಾನ; ಮತ್ತು ಅದೇ ನಮ್ಮ ಲೆಕ್ಕದ ’ಮಹಿಳಾ ಸಬಲೀಕರಣ’.
ಸುರತಕ್ರೀಡೆಯೆಂಬ ಯುದ್ಧದಲ್ಲಿ ಪಕ್ಷ- ಪ್ರತಿಪಕ್ಷ, ಆಯುಧ, ಪ್ರಹಾರ, ನಖಕ್ಷತ, ದಂತಕ್ಷತ, ಚೀತ್ಕಾರ, ಬಳಲಿಕೆಗಳು ಉಂಟಂತೆ. ಇದನ್ನು ಯುದ್ಧಕ್ಕೆ ಹೋಲಿಸಿದ ಕವಿಯೊಬ್ಬ ಈ ಯುದ್ಧದ ವರ್ಣನೆ ಮಾಡುತ್ತ ರೂಪಕವನ್ನು ಮಂಚಕ್ಕೆ ಕೊಂಚ ಹತ್ತಿರವಾಗುವ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಾನೆ.
ಪ್ರಿಯಕೃತಪಟಸ್ತೇಯಕ್ರೀಡಾವಿಲಂಬನವಿಹ್ವಲಾಂ
ಕಿಮಪಿ ಕರುಣಾಲಾಪಂ ತನ್ವೀಮುದೀಕ್ಷ್ಯ ಸಸಂಭ್ರಮಮ್
ಅಪಿ ವಿಗಲಿತೇ ಸ್ಕಂಧಾವಾರೇ ಗತೇ ಸುರತಾವಹೇ
ತ್ರಿಭುವನಮಹಾಧನ್ವೀ ಸ್ಥಾನೇ ನ್ಯವರ್ತತಃ ಮನ್ಮಥಃ
ಏಕಾಂತದಲ್ಲಿ ಮದನ ಕದನ ಮುಗಿದು, ಹೂಡಿದ್ದ ಗುಡಾರದ ಬಿಡಾರಗಳೆಲ್ಲ ನಾಶವಾಗಿವೆ. ಕ್ರೀಡಾಯುದ್ಧ ಮುಗಿಸಿ ಏಳುತ್ತಿದ್ದ ನಲ್ಲೆಯ ಬಟ್ಟೆಯನ್ನು ನಲ್ಲನು ಅಪಹರಿಸಿ, ಕೊಡದೆ ಸತಾಯಿಸತೊಡಗಿದನಂತೆ. ಬಟ್ಟೆಯನ್ನು ಕೊಡೆಂದು ಪರಿಪರಿಯಾಗಿ ನಲ್ಲನಲ್ಲಿ ಬೇಡಿಕೊಳ್ಳುತ್ತ, ತನ್ನ ಅಂಗಾಂಗಗಳನ್ನು ಹುಸಿನಾಚಿಕೆಯಿಂದ ಮುಚ್ಚಿಕೊಳ್ಳುತ್ತ, ಲಲನೆ ಗೋಗರೆಯುತ್ತಾಳಂತೆ.
ನಿನ್ನೆ ನಾವು ಹೇಳಿದ ಹೂಗೋಳ ಅಂದರೆ ಕುಸುಮಶರಧರನಾದ ಮನ್ಮಥ ಯುದ್ಧ ಮುಗಿಯಿತೆಂಬ ಭಾವನೆಯಿಂದ ಕಾಮಭೂಮಿಯಿಂದ ಹೊರಟುಹೋಗಿದ್ದ. ಕೇಳೀಯ ಕೋಲಾಹಲದ ನಡುವೆ ಕೇಳಿಬಂದ ತರುಣಿಯ ಆರ್ತನಾದಕ್ಕೆ ಕಿವಿಗೊಟ್ಟು ತರುಣಿಯನ್ನು ರಕ್ಷಿಸಲು ಮತ್ತೆ ಮರಳಿ ಬಂದ.
ಮತ್ತೆ ಯುದ್ಧವು ಆರಂಭವಾಯಿತೆಂದು ಪುನಃ ವಿವರಿಸಬೇಕೆ? ಇಂತಹ ಅದೆಷ್ಟು ಯುದ್ಧಗಳನ್ನು ನಾವು ಕಂಡಿಲ್ಲ? ಜಯಿಸಿಲ್ಲ? ಇಂತಹ ಯುದ್ಧ ನಮಗೆ ಪರಮಪ್ರೀತಿಯ ಯುದ್ಧ. ಇಲ್ಲಿ ನಾವು ಅಂದರೆ ಹವಾಡಿಗ ಮಹಾಸಂಸ್ಥಾನಧೀಶ್ವರರು ಕೇವಲ ಒಬ್ಬ ಲಲನೆಯಲ್ಲ ಹಲವು ಲಲನೆಯರೊಡನೆ ಏಕಾಂಗಿಯಾಗಿ ಯುದ್ಧಮಾಡಿದ್ದೇವೆ. ಮನ್ಮಥ ನಮ್ಮ ಆಸ್ಥಾನದಲ್ಲಿಯೇ ಠಿಕಾಣಿ ಹೂಡಿಬಿಟ್ಟಿದ್ದಾನೆ.
ಅಮ್ಮನಿಗೆ ನಲ್ವತ್ತಾದರೆ ನಮಗೆ ಇನ್ನೊಂದು ಬೋನಸ್ ಸಿಗುತ್ತದೆ. ಅವಳಿಗೆ ಹೆಣ್ಣುಮಕ್ಕಳಿದ್ದರೆ, "ನಿನ್ನ ಮಗಳು ನನ್ನ ಮಗಳಂತೆಯೇ, ಕರೆದುಕೊಂಡುಬಾ" ಎನ್ನುತ್ತೇವೆ ನಾವು. ಒತ್ತಾಯಕ್ಕೆ ಕಟ್ಟುಬೀಳುವ ಅಮ್ಮಂದಿರು ಕೆಲವರು ತಮ್ಮ ಹೆಮ್ಮಕ್ಕಳನ್ನೂ ಕರೆತರುತ್ತಾರೆ. ಅಮ್ಮ ದೂರ ಇರುವ ಸಮಯದಲ್ಲಿ ನಮ್ಮಲ್ಲಿಗೆ ವಿಶ್ವಾಸದಿಂದ ಬರುವ ಹದಿನೆಂಟು-ಇಪ್ಪತ್ತರ ಕಂದಮ್ಮಗಳನ್ನು ಕಾಲಮೇಲೆ ಕೂರಿಸಿಕೊಂಡು ತಲೆ ನೇವರಿಸಿ, "ನೀನೇನೂ ಹೆದರಬೇಕಾಗಿಲ್ಲ, ನಾವಿದ್ದೇವೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ" ಎಂಬ ಅಭಯಪ್ರದಾನ ಮಾಡಿ ’ದಿವ್ಯಪ್ರಸಾದ’ವನ್ನು ಪ್ರಾಶನ ಮಾಡಿಸುತ್ತೇವೆ.
ನಂತರ ಆಕೆ ನಮ್ಮೊಟ್ಟಿಗೆ ಯುದ್ಧಕ್ಕೆ ಸಿದ್ಧವಾಗಿ ನಿಂತುಬಿಡುತ್ತಾಳೆ! ಮತ್ತೆ ಮನ್ಮಥ ನಮಗೆ ಸಹಾಯ ಮಾಡುತ್ತಾನೆ. ನಡೆಯುವ ಘನಘೋರ ಯುದ್ಧದಲ್ಲಿ ಹೆಂಗರುವಿನ ಮೇಲೆ ಹೋರಿ ಹಾರಿ ಹೋರಾಡುತ್ತದೆ. ಹೋರೀಶನ ಹಾರಾಟಕ್ಕೆ ಸೋತು ಬಸವಳಿದ ಕನ್ಯೆ ಬಸವ ಇಳಿಯುವುದನ್ನೇ ದೀನಳಾಗಿ ನೋಡುತ್ತಾಳೆ.
"ನಮ್ಮ ಪರಿವಾರದ .......ಇಂವ ಇದ್ದಾನಲ್ಲ, ಅವನಿಗೆ ನೀನೆಂದರೆ ಇಷ್ಟವಂತೆ. ನಾವು ಹೇಳುತ್ತೇವೆ. ನೀನು ಅವನನ್ನು ಮದುವೆಯಾಗಿಬಿಡು, ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ. ನೀನು ಹಾಯಾಗಿ ರಾಣಿಯಂತೆ ಬದುಕಬಹುದು" ಎನ್ನುತ್ತೇವೆ. ಒತ್ತಡದಿಂದ ಆಣೆ-ಪ್ರಮಾಣಗಳನ್ನು ನಡೆಸಿ ಒಂದು ಹಂತಕ್ಕೆ ತರುತ್ತೇವೆ.
ನಮ್ಮ ಅಡ್ಡಗೇಟನ್ನು ಕರೆದು ಯಾವುದೂ ತೊಡಕಾಗದಂತೆ ವಿವಾಹ ನಮೂದನೆ ಮಾಡಿಸುತ್ತೇವೆ. ಗಿಂಡಿಯೊಬ್ಬನಿಗೆ ಮದುವೆ ನಡೆಯುತ್ತದೆ; ಬಯಸಿದಾಗ ನಮ್ಮ ಮನ್ಮಥಕೇಳಿಗೆ ಎಳೆಯ ಆಕಳೊಂದು ದೊರೆಯುವಂತಾಗುತ್ತದೆ.
ನಮ್ಮ ಸ್ನೇಹಿತ ಅಸರಾಂ ಸುತರಾಂ ನಂತೆ ದೇಶಕ್ಕೆ ನಮ್ಮಿಂದಾದಷ್ಟು ಕೊಡುಗೆಗಳನ್ನು ನಾವು ಕೊಟ್ಟಿದ್ದೇವೆ, ಇನ್ನೂ ಕೊಡುತ್ತಲೇ ಇದ್ದೇವೆ. ಈ ಮನ್ಮಥ ಚಾತುರ್ಮಾಸದಲ್ಲಿ ನಮಗೆ ಒಟ್ಟೂ ಮಕ್ಕಳೆಷ್ಟೆಂದು ಲೆಕ್ಕ ಹಾಕುವವರಿದ್ದೇವೆ. ನಮ್ಮ ಮಕ್ಕಳಿಗೆ ನಾವು ಪ್ರತ್ಯೇಕ ಪ್ರತ್ಯೇಕವಾಗಿ ಬರ್ತ್ ಡೇ ಆಚರಿಸಲಾಗಲಿಲ್ಲ. ಒಂದು ದಿನವೂ ನಾವು ಅವರನ್ನು ಎತ್ತಿ ಆಡಿಸಲಿಕ್ಕೆ ಸಮಯವಾಗಲಿಲ್ಲ. ಇಲ್ಲಿಯವರೆಗೆ ಕೇವಲ ಸಂತಾನಾನುಗ್ರಹವಷ್ಟೇ ನಮ್ಮ ಕೆಲಸವಾಗಿತ್ತು. ಈಗ ’ಸಂತಾನ ಸಂತೋಷಾನುಗ್ರಹ’ ಎಂಬ ಹೊಸ ಯೋಜನೆ ಹಾಕಿಕೊಂಡಿದ್ದೇವೆ.
ಹೊಸಬರಿಗೆ ಸಂತಾನವನ್ನು ಅನುಗ್ರಹಿಸುವುದರ ಜೊತೆಗೆ ಹಳಬರಿಗೆ ನಮ್ಮಿಂದ ಜನಿಸಿದ ಮಕ್ಕಳಿಗೆ ಸಂತೋಷವನ್ನು ಸಗಟು ರೂಪದಲ್ಲಿ ನೀಡುವ ಇಚ್ಛೆ ನಮಗಿದೆ. ಇದರ ಹಿಂದೆ ನಮ್ಮ ಸುರಕ್ಷೆಯ ಹಿಕಮತ್ತೂ ಅಡಗಿದೆ."

June 16
https://www.facebook.com/groups/1499395003680065/permalink/1629393794013518/
ರಾಂಗಾನುಗ್ರಹ
[ಹಳದೀ ತಾಲಿಬಾನ್ ಬರೆದ ತಾಜಾ ತಾಜಾ ಪವಾಡ ಕತೆಗಳು]
ಪವಾಡ-೧
ಮೊನ್ನೆ ತಡರಾತ್ರಿ ಸುಮಾರು 1 ಗಂಟೆಯ ಹೊತ್ತು. ಮಲೆನಾಡಲ್ಲಿ ಮುಂಗಾರು ಮಳೆ ಧೋ ಎಂದು ಸುರಿದಿತ್ತು. ಮಳೆಯಿಂದಾಗಿ ಗುಡ್ಡ ಕುಸಿದಿತ್ತು. ಬಂಡೆ ಹಳಿಗೆ ಉರುಳಿತ್ತು. ಕತ್ತಲು ಸೀಳಿ, ಏದುಸಿರು ಬಿಡುತ್ತಾ ಘಾಟಿ ಏರುತ್ತಿದ್ದ ರೈಲಿನ ಮುಂಭಾಗದ ಎಂಜಿನ್‌ ಬಂಡೆಗೆ ಡಿಕ್ಕಿ ಹೊಡೆದು ಅದನ್ನು ತಳ್ಳುತ್ತಾ ಮುಂದೆ ಸಾಗಿತ್ತು. ಚಾಲಕನಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ನಮ್ಮ ’ಹಾವಾಡಿಗ’ ಗುರುಗಳನ್ನಿ ನೆನೆಸಿದವನೇ ಕರ್ತವ್ಯಪ್ರಜ್ಞೆ ಮೆರೆದು ತಕ್ಷಣ ಎಂಜಿನ್‌ ಬ್ರೇಕ್‌ ಹಾಕಿಬಿಟ್ಟ. ರೈಲಿನಲ್ಲಿದ್ದ ಸುಮಾರು 1500 ಪ್ರಯಾಣಿಕರು ಸುದೈವವಶಾತ್‌ ಸಂಭಾವ್ಯ ಅನಾಹುತದಿಂದ ಪಾರಾದರು...
ಇದು ಕಾದಂಬರಿ ಕಥೆಯಲ್ಲ. ಸಿನಿಮಾ ದೃಶ್ಯ ವೂ ಅಲ್ಲ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್‌ ರೈಲುಮಾರ್ಗದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ನೈಜ ಘಟನೆ.
ಆದದ್ದಿಷ್ಟು: ಮಂಗಳೂರು ರೈಲು ನಿಲ್ದಾಣ ದಿಂದ ಕಾರವಾರ- ಮಂಗಳೂರು ರೈಲು ಭಾನುವಾರ ರಾತ್ರಿ 9.30ಕ್ಕೆ ಪ್ರಯಾಣ ಬೆಳೆಸಿತ್ತು. ಸಕಲೇಶಪುರ ರೈಲು ನಿಲ್ದಾಣದಿಂದ ಸುಮಾರು 30 ಕಿ.ಮೀ.ದೂರದಲ್ಲಿರುವ ಅರೆಬೆಟ್ಟ ಎಂಬ ಪ್ರದೇಶದಲ್ಲಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿ, ದೊಡ್ಡ ದೊಡ್ಡ ಗಾತ್ರದ ಬಂಡೆಗಳು ರೈಲು ಹಳಿಗಳ ಮೇಲೆಯೇ ಬಿದ್ದಿದ್ದವು. ತಡರಾತ್ರಿ 1ರ ಸುಮಾರಿಗೆ ಈ ಪ್ರದೇಶಕ್ಕೆ ಬಂದ ರೈಲು ಬಂಡೆಗೆ ಡಿಕ್ಕಿ ಹೊಡೆಯಿತು. ಬಂಡೆಯನ್ನು ತಳ್ಳುತ್ತಾ ಚಲಿಸುತ್ತಿದ್ದಂತೆ, ಸಮಯಪ್ರಜ್ಞೆ ಮೆರೆದ ಚಾಲಕ ಬ್ರೇಕ್‌ ಹಾಕಿ, ರೈಲನ್ನು ನಿಲ್ಲಿಸಿದ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಸಂಭಾವ್ಯ ಅಪಾಯದಿಂದ ಪಾರಾದರು.
ಇದೀಗ ಹಳಿ ಮೇಲೆ ಬಿದ್ದಿದ್ದ ಬಂಡೆಗಳನ್ನು ತೆರವುಗೊಳಿಸಲಾಗಿದ್ದು, ಸೋಮವಾರ ರಾತ್ರಿ ಯಿಂದ ಈ ಮಾರ್ಗದಲ್ಲಿ ರೈಲು ಸಂಚಾರ ಪುನಾ ರಂಭಗೊಂಡಿದೆ.
ಪವಾಡ-೨
ರೈಲು ಸುಬ್ರಹ್ಮಣ್ಯಕ್ಕೆ: ಇದಕ್ಕೂ ಮುನ್ನ, ರೈಲ್ವೇ ಅಧಿಕಾರಿಗಳು ನಮ್ಮ ಗುರುಗಳನ್ನು ಸ್ಮರಿಸಿ, ದುರಂತದಿಂದ ಪಾರಾದ ರೈಲನ್ನು ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದಲ್ಲಿರುವ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ರೈಲಿನಲ್ಲಿದ್ದ ಪ್ರಯಾಣಿಕರನ್ನು ಬಸ್‌ಗಳ ಮೂಲಕ ಅವರು ತಲುಪಬೇಕಾದ ಸ್ಥಳಗಳಿಗೆ ಕಳುಹಿಸಲಾಯಿತು.
ಪವಾಡ-೩
ಇದೇ ವೇಳೆಗೆ, ಅತ್ತ ಬೆಂಗಳೂರಿನಿಂದ ಕಣ್ಣೂರು, ಕಾರವಾರಕ್ಕೆ ಹೋಗುವ ರೈಲು ಹೊರಟು ಬಂದುಬಿಟ್ಟಿತ್ತು. ನಮ್ಮ ಸಂಸ್ಥಾನದವರ ಬುಸ್ಸಪ್ಪನನ್ನು ಸ್ಮರಿಸಿದ ಅಧಿಕಾರಿಗಳು, ಇನ್ನೇನು ಬಂಡೆ ಉರುಳಿದ್ದ ಅದೇ ಹಳಿಯ ಅದೇ ಜಾಗದಲ್ಲಿ ಪಾಸಾಗುತ್ತಿದ್ದ ಅದನ್ನು ಘಾಟಿಯ ಮೇಲ್ಭಾಗದಲ್ಲಿರುವ ಸಕಲೇಶಪುರ ರೈಲು ನಿಲ್ದಾಣದಲ್ಲಿಯೇ ನಿಲ್ಲಿಸಿಬಿಟ್ಟರು!
ಪವಾಡ-೪
ನಮ್ಮ ಸ್ವಾಮಿಗಳ ದಯದಿಂದ ಬೆಂಗಳೂರು ರೈಲಿನಲ್ಲಿದ್ದವರ ಕೂದಲೂ ಸಹ ಕೊಂಕಲಿಲ್ಲ ಮೇಲಾಗಿ ರೈಲಿನಲ್ಲಿ ಬಂದ ಬಹುತೇಕ ಪ್ರಯಾಣಿಕರಿಗೆ ಸಕಲೇಶಪುರ ರೈಲು ನಿಲ್ದಾಣದಲ್ಲಿಯೇ ನಿಂತುಕೊಂಡಿದ್ದು ಬೆಳಗಾಗುವ ವರೆಗೂ ಗೊತ್ತಾಗಿರಲಿಲ್ಲ. ಘಟನೆಯ ವಿವರ ತಿಳಿದ ನಂತರ ತಮ್ಮೂರಿಗೆ ಹೋಗುವುದು ಹೇಗೆ ಎಂದು ಪರದಾಡಿದರು. ನಮ್ಮ ಸಂಸ್ಥಾನದ ಪ್ರೇರಣೆಯಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಪ್ರಯಾಣಿಕರಿಗೆ ಸಮಾಧಾನ ಹೇಳಿ ಬಸ್‌ ವ್ಯವಸ್ಥೆ ಮಾಡಿ ಕಳುಹಿಸಿದರು. ಒಟ್ಟು 40 ಬಸ್‌ ವ್ಯವಸ್ಥೆ ಮಾಡಿ ಮಂಗಳೂರು ಸೇರಿದಂತೆ ಪ್ರಯಾಣಿಕರು ಹೋಗಬೇಕಾದ ಸ್ಥಳಗಳಿಗೆ ಕಳುಹಿಸಲಾಯಿತು. ಬಸ್‌ ವ್ಯವಸ್ಥೆ ಮಾಡಿದ ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.
ಪವಾಡ-೫
ರೈಲು ಸಂಚಾರ: ಶ್ರೀ ಸಂಸ್ಥಾನದ ದಯೆಯಿಂದ, ಗುಡ್ಡ ಕುಸಿದು ಹಳಿ ಮೇಲೆ ಬಿದ್ದಿದ್ದ ಬಂಡೆಗೆ ರೈಲು ಡಿಕ್ಕಿ ಹೊಡೆದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ರೈಲ್ವೆ ಸಿಬ್ಬಂದಿ, ಹಳಿಗಳ ಮೇಲೆ ಬಿದ್ದಿದ್ದ ಬಂಡೆ ಹಾಗೂ ಮಣ್ಣನ್ನು ತೆರವುಗೊಳಿಸಿದರು. ಸೋಮವಾರ ಹಗಲು ಸಂಚರಿಸಬೇಕಿದ್ದ ರೈಲುಗಳನ್ನು ರದ್ದುಗೊಳಿಸಲಾಯಿತು. ರಾತ್ರಿಯಿಂದ ರೈಲು ಸಂಚಾರ ಎಂದಿನಂತೆ ಆರಂಭಗೊಂಡಿತು.
ಪವಾಡ-೬
ಕೇರಳ ಮೂಲಕ ಬೆಂಗಳೂರಿಗೆ ಸಂಚರಿಸಿದ ರೈಲು: ಪ್ರಯಾಣಿಕರು ಇರಲಿ ಇಲ್ಲದಿರಲಿ ರೈಲು ಗಮ್ಯ ಸ್ಥಾನಕ್ಕೆ ತಲುಪಲೇ ಬೇಕಲ್ಲ? ನಮ್ಮ ಶ್ರೀಸಂಸ್ಥಾನದ ಅಪೇಕ್ಷೆಯಂತೆ, ಬಂಡೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಎಂಜಿನ್‌ನ್ನು ಬಿಟ್ಟು ಮರಳಿ ಮಂಗಳೂರಿಗೆ ಬಂದ ರೈಲು ಬೆಳಗ್ಗೆ 9ಗಂಟೆಗೆ ಕೇರಳ- ತಮಿಳುನಾಡು ಮೂಲಕ ಬೆಂಗಳೂರಿಗೆ ತೆರಳಿತು.
ಈ ಎಲ್ಲಾ ಸಂದರ್ಭದಲ್ಲಿ ನಮ್ಮ ಸಂಸ್ಥಾನದ ಮಂತ್ರಾಕ್ಷತೆ ಸಹ ಜೊತೆಗೆ ಇರಲಿಲ್ಲ; ಮಂತ್ರಾಕ್ಷತೆ ಇರದಿದ್ದರೂ ಸಂಸ್ಥಾನದವರ ಬುಸ್ಸಪ್ಪನನ್ನು ನೆನೆಸಿದ್ದಕ್ಕೆ ಇಷ್ಟೆಲ್ಲ ಪವಾಡಗಳು ಸಂಭವಿಸಿವೆ. ಹಾಗಾಗಿ ಪವಾಡಶಕ್ತಿಯುಳ್ಳ ಬುಸ್ಸಪ್ಪನನ್ನು ’ಮಹಿಳಾ ಸಬಲೀಕರಣ’ಕ್ಕೆ ಬಳಸುವುದು ಬಹಳ ಉಚಿತವಾಗಿದೆ ಎಂದು ನಮ್ಮ ಮಠದ ಏಕಮುಖ ಸರ್ವಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

June 17
https://www.facebook.com/groups/1499395003680065/permalink/1629886883964209/
ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ...
“ ನಾರೀ ಸ್ತನಭರ ನಾಭೀದೇಶಂ
ದೃಷ್ಟ್ವಾ ಮಾಗಾ ಮೋಹಾವೇಶಮ್ |
ಏತನ್ಮಾಂಸ ವಸಾದಿ ವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||
ಎಂದು ಆದಿಶಂಕರರು ಹೇಳಿರುವರಂತೆ. ಹೇಳಿದ್ದೇವಲ್ಲ-ಸುಂದರಿಯರಲ್ಲಿರುವ ‘ಸೂರ್ಯ-ಚಂದ್ರ’ರನ್ನು ನೋಡಿದ ತಕ್ಷಣವೇ ನಾವು ರನ್ನೌಟ್ ಆಗಿಬಿಡ್ತೇವೆ. ಸುಪುಷ್ಟವಾದ ಅವುಗಳ ಗುಂಡಗಿನ ಆಕಾರಗಳನ್ನು ಕಂಡಾಗ, ದಖನ್ ಪ್ರಸ್ಥಭೂಮಿಯಂತಿರುವ ಸಪಾಟಾದ ನಾಭೀ ಭಾಗವನ್ನು ಕಂಡಾದ ನಮಗೆ ಪ್ರಸ್ತದ ರಾತ್ರಿ ಹೇಗಿರಬಹುದೆಂಬ ಆಲೋಚನೆ ಬರುತ್ತದೆ. ಅಂತಹ ಅದೆಷ್ಟು ಸುಂದರಿಯರೊಂದಿಗೆ ಅನೌಪಚಾರಿಕವಾಗಿ ನಾವು ಪ್ರಸ್ಥ ಆಚರಿಸಿಕೊಂಡಿಲ್ಲ ಹೇಳಿ? ಅದನ್ನೆಲ್ಲ ನೆನೆದು ಕೆಲವೊಮ್ಮೆ ನಮ್ಮ ಜನ್ಮಸಾರ್ಥಕ ಎಂದುಕೊಳ್ಳುತ್ತೇವೆ ನಾವು.
ಯೋಗಿಗಳ ಅಭಿಮತದಂತೆ ನಮ್ಮ ಶರೀರದೊಳಗೂ ಸಹ ಗಂಗಾ, ಯಮುನಾ, ಸರಸ್ವತಿ ನದಿಗಳಿವೆ. ಇವುಗಳಿಗೆ ಇಡಾ, ಪಿಂಗಳಾ, ಸುಷುಮ್ನಾ ಎನ್ನುತ್ತಾರೆ.
ಸುಷುಮ್ನಾ ನಾಡಿಯು ಬೆನ್ನುಹುರಿಯ ಮಧ್ಯಭಾಗದಲ್ಲಿ ನೆಲೆಸಿರುವ ಅಧ್ಯಾತ್ಮ ನದಿಯಾಗಿದೆ. ಇದು ಪೆರಿನಿಯಂನಲ್ಲಿರುವ ಮೂಲಾಧಾರ ಚಕ್ರದಿಂದ ಆಗಮಿಸಿ ತಲೆಯ ನೆತ್ತಿಯಲ್ಲಿರುವ ಸಹಸ್ರಾರ (ಬ್ರಹ್ಮರಂಧ್ರ)ದಲ್ಲಿ ಕೊನೆಗೊಳ್ಳುತ್ತದೆ.
ಇಡಾನಾಡಿಯು ಮೂಲಾಧಾರದ ಎಡಭಾಗದಿಂದ ಹೊರಟು ಬೆನ್ನುಹುರಿಯನ್ನು ಸುರುಳಿಯಾಗಿ ಸುತ್ತಿಕೊಳ್ಳುತ್ತಾ ಪ್ರತಿಯೊಂದು ಚಕ್ರವನ್ನು ಅಂಕುಡೊಂಕಾಗಿ ಬಳಸಿಕೊಂಡು ಆಜ್ಞಾಚಕ್ರದ (ಭೂಮಧ್ಯ) ಎಡಭಾಗದಲ್ಲಿ ಕೊನೆಗೊಳ್ಳುತ್ತದೆ.
ಪಿಂಗಳಾನಾಡಿ ಮೂಲಾಧಾರದ ಬಲಭಾಗದಿಂದ ಹೊರಟು ಇಡಾನಾಡಿಗೆ ಅಭಿಮುಖವಾಗಿ ಹಾಯ್ದು, ಆಜ್ಞಾ ಚಕ್ರದ ಬಲಭಾಗದಲ್ಲಿ ಕೊನೆಗೊಳ್ಳುತ್ತದೆ.
ಇಡಾ ಪಿಂಗಳಾ ನಾಡಿಗಳು ನಮ್ಮೊಳಗೆ ಹರಿಯುತ್ತಿರುವ ಎರಡು ವಿರುದ್ಧ ಬಲಗಳನ್ನು ಪ್ರತಿನಿಧಿಸುತ್ತವೆ. ಇಡಾ ನಾಡಿಯು ನಿಷ್ಕ್ರಿಯ, ಅಂತರ್ಮುಖಿ ಹಾಗೂ ಸ್ತ್ರೀ ಗುಣಗಳನ್ನು ಹೊಂದಿದೆ. ಇದನ್ನು ಚಂದ್ರನಾಡಿ ಎಂದೂ ಕರೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಪಿಂಗಳ ಸಕ್ರಿಯ, ಬಹಿರ್ಮುಖಿ ಹಾಗೂ ಪುರುಷ ಗುಣದ್ದಾಗಿದ್ದು, ಇದನ್ನು ಸೂರ್ಯನಾಡಿ ಎಂದೂ ಕರೆಯುತ್ತಾರೆ.
ಒಂದು ಕೂದಲನ್ನು ಸಾವಿರಭಾಗವಾಗಿ ಸೀಳಿದರೆ ಎಷ್ಟು ಸಣ್ಣದಾಗಿರಬಹುದೋ ಅಂತಹ ಸ್ವರೂಪದಲ್ಲಿ ವೃಷಣದ ಮೂಲಸ್ಥಾನದಿಂದ ಶಿರಸ್ಸಿನ ತುದಿಯ ಬ್ರಹ್ಮರಂಧ್ರದವರೆಗೆ ಸುಷುಮ್ನನಾಡಿ ಇರುತ್ತದೆ. ಈ ನಾಡಿ 5 ಪ್ರಭೇದಗಳಿಂದ ಕೂಡಿದೆ.
ಮಧ್ಯದಲ್ಲಿ ಸಷುಮ್ನಾ ಅದರ ಪಶ್ಚಿಮಕ್ಕೆ ಅಂದ್ರೆ ಹಿಂಭಾಗಕ್ಕೆ ವಜ್ರಕಾ, ಪೂರ್ವಕ್ಕೆ ಪ್ರಕಾಶಿನಿ, ದಕ್ಷಿಣಕ್ಕೆ ಅಂದ್ರೆ ಬಲಕ್ಕೆ ವೈದ್ಯುತ, ಎಡಭಾಗಕ್ಕೆ ಆರ್ಯಾ, ಮಧ್ಯಭಾಗ ಬ್ರಹ್ಮನಾಡಿ ಎಂಬ ಪ್ರಭೇದಗಳು ಈ ಒಂದೇ ಸುಷುಮ್ನನಾಡಿಯೇ 5 ಭಾಗದಲ್ಲಿ 5 ಹಸರಿನಿಂದ ಕೂಡಿದೆ.
ನಮ್ಮ ಎಡಮೂಗಿನಲ್ಲಿ ಇಡಾನಾಡಿಯ 50, ಬಲಮೂಗಲ್ಲಿ ಪಿಂಗಳಾನಾಡಿಯ 50 ಶಾಖೆಗಳಿವೆ. ಕಿರುನಾಲಿಗೆಯಿಂದ ಎಡಭಾಗದ ದವಡೆಯವರೆಗೂ ವಜ್ರಿಕಾನಾಡಿ ಇದೆ ಮತ್ತು ಬಲದವಡರೆಗೂ ನಂದಿನಿನಾಡಿ [‘ನಂದಿನಿ ಡೀಲಕ್’ ಅಲ್ಲ ಮತ್ತೆ] ಇದೆ. ಸಷುಮ್ನನಾಡಿ ನಮ್ಮ ತೋಳಿನಲ್ಲಿ 10, ತೊಡೆಯಲ್ಲಿ 10, ಕಣ್ಣಲ್ಲಿ2, ಕಿವಿಯಲ್ಲಿ2, ನಾಲಿಗಯಲ್ಲಿ 1, ಲಿಂಗದಲ್ಲಿ 1, ಗುದದಲ್ಲಿ 1, ಹೃದಯದಲ್ಲಿ 32, ಸಿರಸ್ಸಿನಲ್ಲಿ 39, ಬೆನ್ನಲ್ಲಿ 2, ಮುಖ್ಯನಾಡಿಯನ್ನು ಸೇರಿಸಿ ಒಟ್ಟ 101 ನಾಡಿಗಳು.
101 ನಾಡಿಗಳಿಂದ 100 ಶಾಖೆಗಳು.
101×100=10100 ಆಗುತ್ತವೆ.ಇವು ಮೂಲನಾಡಿಗಳು.
ಇದರಲ್ಲಿ
100 ನಾಡಿಗಳು 10 ಶಾಖೆಯನ್ನು ಹೊಂದಿದ ನಾಡಿಗಳು 100×10 =1000.
100 ನಾಡಿಗಳು 9 ಶಾಖೆಗಳಿಂದ ಕೂಡಿರುತ್ತದೆ 100×9 =900.
300 ನಾಡಿಗಳು 8 ಶಾಖೆಗಳಿಂದ ಕೂಡಿದೆ ಅಂದರೆ 300×8 =2400.
9600 ನಾಡಿಗಳು 6 ಶಾಖೆಗಳನ್ನು ಹೊಂದಿವೆ ಅಂದರೆ 9600×6 =57600.
ಮೂಲನಾಡಿಗಳು 10100
ಶಾಖೆಗಳು. 61900
ಒಟ್ಟು. 72000 ನಾಡಿಗಳು
ಪರಮಮೂಲನಾಡಿಗಳು 101 ಸೇರಿದರೆ
-------------------
ಒಟ್ಟೂ - 72101 ನಾಡಿಗಳು
ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಸೇರಿ ಹತ್ತಾಯ್ತು. ಹತ್ತು ಇಂದ್ರಿಯಗಳನ್ನು ರಥದ ಗಾಲಿಗಳಂತೆ ಬಳಸಿಕೊಳ್ಳುವ ಹನ್ನೊಂದನೆಯ ಇಂದ್ರಿಯವಾದ ಮನಸ್ಸು ಎಂಬುದು ಎಪ್ಪತ್ತೆರಡು ನಾಡಿಗಳ ಮಿಡಿತವನ್ನು ಹಿಡಿತದಲ್ಲಿಡುತ್ತದೆ.
ಅಂತಹ ಮನಸ್ಸಿಗೆ ಸಾಮಾನ್ಯ ಮನುಷ್ಯ ಯಾವ ಆಹಾರ ಕೊಡಬೇಕು, ಯೋಗಿ ಯಾವ ಆಹಾರ ಕೊಡಬೇಕು ಎಂಬುದಕ್ಕೆಲ್ಲ ನಿಯಮಗಳಿವೆ. ನಾವು ತಿಂದ ಆಹಾರದ ಆರನೆಯ ಒಂದು ಭಾಗ ಮೆದುಳಾಗಿ ಅಂದರೆ ಮನಸ್ಸಾಗಿ ಪರಿವರ್ತಿತವಾಗುತ್ತದೆ.
ಈರುಳ್ಳಿ ಉಪ್ಪಿಟ್ಟು, ತರಾವರಿ ಮಸಾಲೆ ಖಾದ್ಯಗಳನ್ನು ನಾವು ತಿನ್ನುತ್ತೇವೆ ಯಾಕೆಂದರೆ ನಮಗೆ ಮೇಲೆ ಹೇಳಿದ ನಿಯಮಗಳು ಅನ್ವಯವಾಗುವುದಿಲ್ಲ; ನಾವು ನಿಯಮಾತೀತರು. ನಾವು ಸ್ವೀಕರಿಸುವ ಆಹಾರಗಳು ಮತ್ತು ಅಷ್ಟಾಂಗಯೋಗ ರಹಿತ ದಿನಚರಿ ನಮ್ಮ ಮೆದುಳಿನ ಚಂಚಲತೆಯನ್ನು ನಿಗ್ರಹಿಸುವಲ್ಲಿ ಸೋತಿವೆ.
ಹೀಗಾಗಿ ನಮಗೆ ಹುಲುಮಾನವ ಲೋಕದ ‘ಅಪ್ಸರೆಯರ’ನ್ನು ಕಂಡರೆ ಬಹಳ ಪ್ರೀತಿ. ಆಚಾರ್ಯರು ಹೇಳಿದ್ದಾರೆ ಅಥವಾ ಇನ್ನಾರೋ ಯೋಗಿ ಹೇಳಿದ್ದಾರೆಂದು ಇಂತಹ ಸುಂದರಿಯರನ್ನೆಲ್ಲ ಕಳೆದುಕೊಳ್ಳಲಿಕ್ಕೆ ಬರುತ್ತದೆಯೇ? ಅವರು ಹೇಳೋದನ್ನ ಹೇಳಿದ್ದಾರೆ; ಕೇಳಬೇಕದವರು ಕೇಳಿದರಾಯ್ತಪ್ಪ; ಅದು ನಮ್ಮನ್ನುದ್ದೇಶಿಸಿ ಹೇಳಿದ್ದೆಂದು ಅವರೇನೂ ಹೇಳಿಲ್ಲವಲ್ಲ?”
June 19
https://www.facebook.com/groups/1499395003680065/permalink/1630528680566696/
ನಾನಾರೊ ನಾನರಿಯೆನು.....ನಿಮಗಿನ್ನೇನು ಪ್ರವಚನ ಹೇಳಿಯೇನು?
ವೈದ್ಯಕೀಯ ವಿಜ್ಞಾನವು ಅಂಗಾಂಗಗಳನ್ನು ಬದಲಿಸುವಷ್ಟು ಮುಂದುವರೆದು, ಮನುಷ್ಯ ಚಂದ್ರ ಮತ್ತು ಮಂಗಳಲೋಕಕ್ಕೆ ತಿರುಗಾಡುವಷ್ಟು ಬೆಳೆದಿದ್ದರೂ ಸತ್ತ ಇರುವೆಯನ್ನು ಬದುಕಿಸಿದ ಪ್ರಸಂಗ ನಮ್ಮೆದುರು ಇದುವರೆಗೂ ನಡೆದಿಲ್ಲ. ಹೃದಯವನ್ನೋ ಕಿಡ್ನಿಯನ್ನೋ ತೆಗೆದು ಹೊಸದನ್ನು ಹಾಕಬಹುದು,ಆದರೆ ಹೋದ ಪ್ರಾಣವನ್ನು ತರಲು ಸಾಧ್ಯವಿಲ್ಲ. ಪ್ರಾಣವೆಂದರೇನು? ಅದು ಎಲ್ಲಿರುತ್ತದೆ? ಕೊಲೆ ಮಾಡಿದರೆ, ಅತ್ಯಾಚಾರ ಮಾಡಿದರೆ ತಾನು ಜೈಲಿಗೆ ಹೋಗುತ್ತಾನೆ, ಶಿಕ್ಷೆ ಅನುಭವಿಸುತ್ತಾನೆ, ಮಾನ ಮರ್ಯಾದೆ ಹೋಗುತ್ತದೆ ಎಂದು ಗೊತ್ತಿದ್ದರೂ ಮನುಷ್ಯ ಮತ್ತೆ ಅಂತಹ ಕೆಲಸಗಳಲ್ಲೇ ತೊಡಗಿಕೊಳ್ಳುವುದೇಕೆ?
ಮನುಷ್ಯ ದೇಹದ ರಚನೆಯನ್ನು ಗಮನಿಸಿದರೆ, ಅದರ ಕಾರ್ಯ ವಿಧಾನವನ್ನು ಅವಲೋಕಿಸಿದರೆ ಆಶ್ಚರ್ಯವಾಗುತ್ತದೆ,ಇಂಥ ಅದ್ಭುತ ದೇಹ ತನ್ನಿಂದ ತಾನೇ ಉಂಟಾಯಿತೇ? ಇದಕ್ಕೆ ಯಾರು ಕತೃ? ಇಷ್ಟೊಂದು ಸಂಕೀರ್ಣವಾಗಿರುವ ದೇಹದ ಉಗಮ ಕೇವಲ ಕಾಮದಿಂದ ಅಥವಾ ಹೆಣ್ಣು-ಗಂಡಿನ ಸಂಯೋಜನೆಯಿಂದ ಮಾತ್ರ ಆಗುತ್ತದೆಯೇ? ಅಥವಾ ಇದಕ್ಕೆಲ್ಲ ಬೇರಾವುದೋ ಪ್ರಚೋದನಾ ಶಕ್ತಿ ಇದೆಯೇ? ಅಷ್ಟಕ್ಕೂ ಜೀವನವನ್ನು ಬಾಲ್ಯಾವಸ್ಥೆ, ಯೌವನಾವಸ್ಥೆ, ವೃದ್ಧಾವಸ್ಥೆ ಎಂದು ವಿಂಗಡಿಸಿದವರಾರು? 18 ನೇ ವಯಸ್ಸಿಗೆ ಬೇಡವೆಂದರೂ ವಯಸ್ಕರಾಗುತ್ತೇವೆ, 50ನೇ ವಯಸ್ಸಿಗೆ ಬೇಡವೆಂದರೂ ಮುದುಕರಾಗುತ್ತೇವೆ, ಹೇಗೆ? ನಾವು ಕಾಣುತ್ತಿರುವ ಬ್ರಹ್ಮಾಂಡದ ತಳವೆಲ್ಲಿ? ಉಗಮವಾಗಿದ್ದು ಯಾವಾಗ? ಮತ್ತು ಇದರ ಗಮ್ಯವೆಲ್ಲಿ? ಇದರ ನಿಗಮಾಗಮದ ಉದ್ದಿಶ್ಯವೇನು? ನೀಲಾಕಾಶದ ಆಚೆ ಏನಿದೆ?
ಮನುಷ್ಯನಿಗೆ ಭವಿಷ್ಯವನ್ನು ಗ್ರಹಿಸುವ ಶಕ್ತಿ ನಿಜಕ್ಕೂ ಇದೆಯೇ? ದೂರದಲ್ಲೆಲ್ಲೊ ಇರುವ ಗ್ರಹಗಳು ಮನುಷ್ಯನ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಅವು ಕೇವಲ ಭೂಮಿಯಂಥದೇ ಆಕಾಶಕಾಯಗಳೆಂದು ಮತ್ತು ಪರಿಭ್ರಮಿಸುವಂಥವುಗಳೆಂದು ವಿಜ್ಞಾನವು ಹೇಳಿದ್ದರೂ ಅವು ನಮ್ಮ ಜೀವನದ ಮೇಲೆ ಪರಿಣಾಮ ಬೀರುವವೆಂದು ನಿತ್ಯವೂ ಜ್ಯೋತಿಷಿಗಳು ಹೇಳುವುದೇಕೆ? ಜ್ಯೋತಿಷ್ಯಕ್ಕೆ ಅರ್ಥವಿಲ್ಲವೇ? ಸುಳ್ಳಾದರೆ ಅವರೇಕೆ ಸುಳ್ಳನ್ನು ಹೇಳುತ್ತಾರೆ? ಸತ್ಯವಾದರೆ ಅವರೇಕೆ ಸತ್ಯವನ್ನು ನೂರಕ್ಕೆ ನೂರು ನಿಖರವಾಗಿ ನಿರೂಪಿಸಿ ತೋರಿಸುವುದಿಲ್ಲ?
ಹೋಗಲಿ ವಿಜ್ಞಾನವೇ ಸರಿಯೆನ್ನೋಣವೇ? ಆಕಾಶದ ಬುಡ ತುದಿಗಳನ್ನೋ ಆಳ ಅಗಲಗಳ ಅಳತೆಯನ್ನೋ ಹೇಳುವುದು ವಿಜ್ಞಾನಕ್ಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಗುರುತ್ವ ಪೊಳ್ಳುಗಳ ಅಚೆ ಏನಿದೆಯೆಂದು ವಿಜ್ಞಾನಕ್ಕೆ ತಿಳಿದಿಲ್ಲ. ಅಲ್ಲಿಂದಾಚೆಗೆ ಹೋದ ವಸ್ತು ಅಥವಾ ವ್ಯಕ್ತಿಗಳು ಎಲ್ಲಿಗೆ ಹೋಗುತ್ತಾರೆ? ಯಾವುದರಲ್ಲಿ ಸಿಲುಕಿಕೊಳ್ಳುತ್ತಾರೆ? ಎಂಬುದನ್ನು ವಿಜ್ಞಾನ ಹೇಳೋದಿಲ್ಲ. ಬ್ರಹ್ಮಾಂಡಕ್ಕೆ ನಿಜಾರ್ಥದಲ್ಲಿ ಜೀವನಾಧಾರವಾದ ಸೂರ್ಯನನ್ನು ನಕ್ಷತ್ರವೆಂದ ವಿಜ್ಞನಾಕ್ಕೆ ಸೂರ್ಯನೊಳಗೆ ಏನಿದೆಯೆಂಬ ಪರಿಪೂರ್ಣ ಮಾಹಿತಿ ಸಿಕ್ಕಿಲ್ಲ. ಅವನ ಸುತ್ತ ತಮ್ಮ ತಮ್ಮ ಕಕ್ಷೆಗಳಲ್ಲಿ ನಿಯಮಬದ್ಧವಾಗಿ ಕೆಲಸ ನಿರ್ವಹಿಸುವ ಆಕಾಶ ಕಾಯಗಳ ನಿಯಂತ್ರಣ ಎಲ್ಲಿದೆ ಎಂಬುದು ವಿಜ್ಞಾನದ ಹಲ್ಲಲ್ಲಿ ಹಿಟ್ಟಾಗುವ ಕಡಲೆಯಲ್ಲ. ಹಾಗಾದರೆ ವಿಜ್ಞಾನವನ್ನು ನಂಬಬಾರದೆ? ಈಗ ಬಳಸುತ್ತಿರುವ ಎಲ್ಲಾ ಆವಿಷ್ಕಾರಗಳು ವಿಜ್ಞಾನದ ಕೊಡುಗೆಗಳೇ ಎಂದಮೇಲೆ ವಿಜ್ಞಾನವನ್ನು ನಂಬಬೇಕೋ? ಬಿಡಬೇಕೋ? ನಂಬಬೇಕೆಂದರೆ ಕಾರಣವೇನು? ನಂಬಬಾರದು ಎಂಬುದಕ್ಕೆ ಸಮಜಾಯಿಷಿಯೇನು?
ಈ ಬ್ರಹ್ಮಾಂಡದಲ್ಲಿ ಇದ್ದಾವೆಂದು ಹೇಳಲಾದ 80 ಕೋಟಿ ಜೀವ ಪ್ರಭೇದಗಳಲ್ಲಿ ಗಂಡು, ಮತ್ತು ಹೆಣ್ಣನ್ನು ವಿಭಾಗಿಸಿದವರಾರು? ಗಂಡು ಮತ್ತು ಹೆಣ್ಣುಗಳಲ್ಲಿ ದೇಹರಚನೆಗಳಲ್ಲಿ ವ್ಯತ್ಯಾಸ ಇರುವುದೇಕೆ? ಹೆಣ್ಣು-ಗಂಡುಗಳ ಸಮ್ಮಿಲನದಿಂದ ಮಾತ್ರ ಸಂತಾನೋತ್ಪತ್ತಿ ನಡೆಯಬೇಕೆಂದು ನಿರ್ಣಯಿಸಿದ ಮಹನೀಯ ರಸಾಯನ ಶಾಸ್ತ್ರಜ್ಞನಾರು? ಹೆಣ್ಣು-ಗಂಡುಗಳ ಮಧ್ಯೆ ಆಕರ್ಷಣೆಯನ್ನು ಇಟ್ಟು ಅಟ್ಟದಮೇಲೆಲ್ಲೋ ಅವಿತು ಕುಳಿತು ನೋಡುತ್ತ ಮಜಾ ತೆಗೆದುಕೊಳ್ಳುವವನಾರು?
ಪ್ರತಿ ಹೆಣ್ಣಿಗೂ ಇರುವ ಅದೇ ಅಂಗಗಳನ್ನು ಪುರುಷನು ಎಷ್ಟು ಬಾರಿ ನೋಡಿದರೂ ಮತ್ತೆ ಪದೇ ಪದೇ ಅದನ್ನೇ ನೋಡುವದೇಕೆ? ಅದನ್ನೇ ಅಥವಾ ಅಂಥದನೇ ನೋಡಲು ಬಯಸುವುದೇಕೆ? ಅಯಸ್ಕಾಂತೀಯ ಆಕರ್ಷಣ ಶಕ್ತಿ ಆ ಅಂಗಗಳಿಗೆ ಎಲ್ಲಿಂದ ಬಂತು? ಇದರಿಂದ ಬಿಡುಗಡೆ ಹೊಂದುವದು ಸಾಧ್ಯವಿಲ್ಲವೇ? ಇದು ಪ್ರಕೃತಿಯ ಧರ್ಮವೇ? ಅಥವಾ ನಮ್ಮ ನ್ಯೂನತೆಯೇ? ಹೀಗೇ ಆಗಬೇಕೆಂದು ನಿರ್ಣಯಿಸಿದವರಾರು? ಮನೆಯಲ್ಲಿ ತಮಗಿಂತ ಕೇವಲ ಎರಡು ವರ್ಷ ಸಣ್ಣ ವಯಸ್ಸಿನ ತಂಗಿಯಿದ್ದರೂ ಸಹ ಅವಳನ್ನು ತಂಗಿಯನ್ನಾಗಿಯೇ ನೋಡುವ ಹುಡುಗರು ಕಾಲೇಜಿನಲ್ಲಿ ಅಷ್ಟೇ ವಯಸ್ಸಿನ, ಅಷ್ಟೆ ಎತ್ತರದ, ಅಷ್ಟೇ ದಪ್ಪದ ಹುಡುಗಿಯನ್ನು ನೋಡಿದಾಗ ಜೂನಿಯರ್ ಎನ್ನುವುದೇಕೆ? ಆಕೆಯಲ್ಲೇಕೆ ತಂಗಿಯ ಭಾವನೆ ಸಹಜವಾಗಿ ಬರುವುದಿಲ್ಲ?
ಈ ಬ್ರಹ್ಮಾಂಡದ ಉಗಮವಾಗಿ 460 ಕೋಟಿ ವರ್ಷಗಳು ಕಳೆದುಹೋದವೆಂದು ಹೇಳುತ್ತಾರೆ, 400 ಕೋಟಿ ಹಾಗಿರಲಿ, ಕಳೆದ 400 ವರ್ಷಗಳಲ್ಲಿ ಎಷ್ಟೊಂದು ಬದಲಾವಣೆಯನ್ನು ಸಾಧಿಸಿತಲ್ಲ ಇದು ಯಾವುದರ ಸೂಚನೆ? ಕಳೆದರ್ಧ ಶತಕದಲ್ಲಿ ಜಗತ್ತು ಬಹಳಷ್ಟು ವೇಗವಾಗಿ ದಾಪುಗಾಲು ಹಾಕುತ್ತಿರುವುದು ಯಾವ ಗುರಿಯತ್ತ? ಇವೆಲ್ಲವುಗಳ ಕುರಿತು ಧರ್ಮಗಳು ಹೇಳುವುದು ಒಂದು ರೀತಿ, ವಿಜ್ಞಾನ ಹೇಳುವುದು ಇನ್ನೊಂದು ರೀತಿ, ಯಾವುದು ಪರಮೋಚ್ಚ ಸತ್ಯ? ಯಾವುದನ್ನು ನಂಬಬೇಕು ಮತ್ತು ಯಾವುದನ್ನು ಬಿಡಬೇಕು? ನಂಬ ಬೇಕಾದುದಕ್ಕೆ ಕಾರಣವೇನು? ಬಿಡಬೇಕೆಂಬುದಾದರೆ ಅದಕ್ಕೆ ಕಾರಣವೇನು?
ಅಸಾಧ್ಯ ಪರಿಶ್ರಮಕ್ಕೆ ಪ್ರತಿಫಲವನ್ನು ನೋಡಲಸಧ್ಯವಾದರೆ ಅದಕ್ಕೇನೆನ್ನಬೇಕು? ಐಸಾಕ್ ನ್ಯೂಟನ್,ಐನ್ ಸ್ಟೈನ್ ಮುಂತಾದ ಮಹಾನ್ ವ್ಯಕ್ತಿಗಳು ಶ್ರಮಪಟ್ಟು ಹೊಸ ಹೊಸ ಸಂಗತಿಗಳನ್ನು ಬಯಲುಪಡಿಸಿzರಂತೆ. [ಅದಕ್ಕೂ ಮೊದಲು ಭಾರತೀಯ ಋಷಿಗಳು, ತತ್ವಜ್ಞಾನಿಗಳು ಅವರು ಹೇಳಿದ್ದನ್ನೇ ಇನ್ನೂ ಚೆನ್ನಾಗಿ ಹೇಳಿದ್ದರು-ನಮಗೆ ಅರ್ಥವಾಗಿಲ್ಲ ಎಂಬುದು ಬೇರೆ ಪ್ರಶ್ನೆ. ಅಂತಹ ಸಾಧಕರನ್ನು ನಾವಿಂದು ಹೊಗಳುವುದನ್ನು ಕೇಳಲಾಗಲೀ ಅವರಿಗಾಗುತ್ತಿರುವ ಸನ್ಮಾನವನ್ನು ನೋಡಲಾಗಲೀ ಅವರೇ ಇಲ್ಲವೆಂಬುದು ವಿಚಿತ್ರವಲ್ಲವೇ?
ಈ ಲೋಕದಲ್ಲಿ ಕೆಟ್ಟ ಕೆಲಸ ಮಾಡಿದವನು ಸ್ವಲ್ಪ ದಿನಗಳ ನಂತರ ಮರೆತು ಹೋಗುತ್ತಾನೆ, ಅವನ ಕೆಟ್ಟತನಕ್ಕೆ ನಾವೆಲ್ಲು ಅವನನ್ನು ಬೈದರೂ ಅವನಲ್ಲಿ ಬದಲಾವಣೆಗಳಿಲ್ಲ್ಲ, ಉಗುಳಿದರೂ ಅವನಿಗೆ ತಾಗುವುದಿಲ್ಲ. ಒಳ್ಳೆಯ ಕೆಲಸ ಮಾಡಿದ ಸಜ್ಜನನೂ ಕಾಲಾನಂತರದಲ್ಲಿ ಮರೆತುಹೋಗುತ್ತಾನೆ. ಸಜ್ಜನನೂ ಸಾಯುತ್ತಾನೆ, ದುರ್ಜನನೂ ಸಾಯುತ್ತಾನೆ, ಹಾಗಾದರೆ ಹುಟ್ಟಿದವರೆಲ್ಲ ಯಾತಕ್ಕಿಷ್ಟು ಪ್ರಯಾಸಪಡಬೇಕು?
ಆತ್ಮ ವೆಂದರೇನು? ಅದೆಲ್ಲಿರುತ್ತದೆ? ಅದಕ್ಕಿರುವ ಬಣ್ಣ, ರೂಪ, ಆಕಾರಗಳೇನು? ಅದರ ಕಾರ್ಯವಿಧಾನವೇನು? ಅದು ಒಳಗಿನಿಂದಲೇ ಬರುತ್ತದೆಯೇ? ಅಥವಾ ಹೊರಗಿನಿಂದ ಮತ್ತೊಬ್ಬರು ಅದನ್ನು ಶರೀರದೊಳಕ್ಕೆ ಕಳುಹಿಸುವರೋ? ಅವರವರ ಕೃತ್ಯಗಳ ಫಲವನ್ನು ಅವರವರು ಅನುಭವಿಸುತ್ತಾರೆ ಎಂಬುದು ಅನೇಕ ಬಾರಿ ಹಲವರಿಗೆ [ಅವರು ಹೇಳಿಕೊಳ್ಳದಿದ್ದರೂ]ಹಾಗೂ ನನಗೂ ಅನುಭವವಾಗಿದೆ; ಆದರೆ ಕೃತ್ಯಕ್ಕೆ ತಕ್ಕ ಫಲವನ್ನು ಅನುಭವಿಸುವಂತೆ ಮಾಡುವ ಚಿತ್ರಗುಪ್ತನಾರು? ಪ್ರತಿಯೊಂದು ಜೀವಿಯ ಸಕಲ ಕೃತ್ಯಗಳನ್ನೂ ನಮೂದಿಸಿಕೊಳ್ಳುವ ಅವನ ಗಣಕಯಂತ್ರ ಯಾವುದು? ಎಲ್ಲಕ್ಕೂ ಉತ್ತರ ದೇವರು ಎಂದಾದರೆ, ದೇವನಾರು?
ಒಂದು ಜೀವಿಯ ಪುನರುತ್ಪತ್ತಿಗೆ ಅಥವಾ ಒಬ್ಬ ಮನುಷ್ಯ ಹುಟ್ಟಬೇಕಾದರೆ ಕೇವಲ ಒಬ್ಬ ತಂದೆಯ ಶಕ್ತಿ ಸಾಕು, ಇಬ್ಬರು ತಂದೆಗಳ ಅಗತ್ಯ ಬೀಳುವುದಿಲ್ಲ್ಲ ಸರಿಯಷ್ಟೇ? ಹಾಗಾದರೆ ಈ ಬ್ರಹ್ಮಾಂಡದ ಉಗಮಕ್ಕೂ ಒಬ್ಬನಿರಲೇಬೇಕಲ್ಲವೇ? ಇದ್ದರೆ ಅವನಾರು? ಇಲ್ಲದಿದ್ದರೆ ಇದಕ್ಕೆ ಕಾರಣೀಭೂತವಾದ ಶಕ್ತಿ ಯಾವುದು? ಪ್ರಪಂಚದ ವಿವಿಧ ಮತಧರ್ಮಗಳು ನಾನಾ ರೀತಿಯಲ್ಲಿ ಹೇಳುವ ಪರಮಾತ್ಮನಾದರೂ ಯಾರು? ಆದಿ-ಅಂತ್ಯಗಳ ಕುರಿತಾದ ಪ್ರಶ್ನೆಗಳಿಗೆ ಇದಮಿತ್ಥಂ ಎಂಬ ಕರಾರುವಾಕ್ಕಾದ ಉತ್ತರ ನೀಡುವರಾರು?
ಹೆಚ್ಚುಕಡಿಮೆ 36,500 ದಿನಗಳು ಅಥವಾ 8,76,000 ಗಂಟೆಗಳು ತುಂಬಾ ಚಲನಶೀಲವಾಗಿರುವ ದೇಹ, ಅದರ ಅಂಗಗಳು ಸತ್ತಮೇಲೆ ಒಮ್ಮೆಲೇ ಸುಮ್ಮನಾಗಿ ಬಿಡುವುದರ ರಹಸ್ಯವೇನು? ನಮ್ಮ ಕಣ್ಣಿಗೆ ಕಾಣುವದು ಮಾತ್ರ ಪ್ರಪಂಚವೇ? ಕಣ್ಣಿಗೂ ಕಾಣದ ನಿಗೂಢ ಶಕ್ತಿಗಳು ಇವೆಯೇ? ಮನುಷ್ಯನಿಗೆ ಶಿಶುವಾಗಿರುವಾಗ ಮೊದಲು ಕೇಳುವ ಗುಡುಗಿನ ಸದ್ದಿನಿಂದ ಭಯ ಎಂಬ ಅನುಭೂತಿ ಆಗುತ್ತದೆ ಎಂದಾಯ್ತು. ಹಾಗಾದರೆ, ದೆವ್ವ-ಭೂತಗಳ ಪರಿಕಲ್ಪನೆಗಳು ಬಂದಿದ್ದಾದರೂ ಎಲ್ಲಿಂದ? ಅದೇ ಭಯದಿಂದಲೇ? ಅಥವಾ ಅವುಗಳ ಇರುವಿಕೆ ನಿಜವೇ?
ಹುಟ್ಟುವಾಗ ಆಗುವ ಅನುಭವವನ್ನು ತಿಳಿದುಕೊಳ್ಳಲು ನನಗಾಗಲೀ ನಿಮಗಾಗಲೀ ಆ ಪರಿಜ್ಞಾನ ಇರಲಿಲ್ಲ. ಸಾಯುವಾಗ ಏನಾಗುವದೆಂದು ತಿಳಿದುಕೊಳ್ಳುವಷ್ಟರಲ್ಲಿ ಪ್ರಾಯಶಃ ಈ ದೇಹ ಒಗೆದು ಹೋಗಿರುತ್ತೇವೆ. ಹಾಗಾದರೆ ನಾವೇನಾಗುತ್ತೇವೆ? ಪಂZಭೂತಗಳಲ್ಲಿ ವಿಲೀನವೇ? ಪರಕಾಯ ಪ್ರವೇಶವೇ? ಸ್ವರ್ಗವಾಸವೇ? ನರಕಯಾತನೆಯೇ? ಅಥವಾ ದೇವ್ವವೇ? ಭೂತವೇ? ಗಾಳಿಯಲ್ಲಿ ಸಂಚರಿಸುವ ಇನ್ನವುದೋ ಪಾರದರ್ಶಕ ರೂಪವೇ? ಅಥವಾ ಬ್ರಹ್ಮರಾಕ್ಷಸವೇ? ಈ ಪ್ರಶ್ನೆಗಳಿಂದ ಮನಸ್ಸು ದಣಿದಿದೆ,ತಲೆ ಗುಂಯ್ ಎನ್ನುತ್ತಿದೆ.ನಿಮ್ಮಲ್ಲಿ ಉತ್ತರವಿದ್ದರೆ ನನಗೆ ತಿಳಿಸಿ.
ಇಂತಹ ಅಸಂಖ್ಯ ಮೂಲಭೂತ ಪ್ರಶ್ನೆಗಳಿಗೆ ಸಮರ್ಪಕ ಮತ್ತು ನಿರ್ಣಾಯಕ ಉತ್ತರಗಳನ್ನು ಕಂಡುಕೊಳ್ಳಬಲ್ಲ ಚೇತನವೇ ಸನ್ಯಾಸಿಯೆನಿಸುತ್ತಾನೆ. ಇದನ್ನೆಲ್ಲ ಒಟ್ಟಾರೆ ಗಂಟು ಹಾಕಿ ’ಬ್ರಹ್ಮರಹಸ್ಯ’ ಎನ್ನಬಹುದು. ಬ್ರಹ್ಮರಸ್ಯವನ್ನು ಅರಿತಿದ್ದೇನೆಂದು ಭೋಂಗು ಬಿಡುವ ಸನ್ಯಾಸಿಗಳು ಇಂದು ಎಲ್ಲೆಲ್ಲೂ ಸಿಗುತ್ತಾರೆ.
ಇಂದಿನ ಹಲವು ಕಾವಿ ವೇಷಗಳಿಗೆ ಇಂತಹ ಪ್ರಶ್ನೆಗಳಿರಲಿ, ಆಧ್ಯಾತ್ಮದ ಗಂಧಗಾಳಿಯೇ ಇಲ್ಲ. ಹಿಂದೆ ಯಾರೋ ಹೇಳಿದ್ದನ್ನು ಇವರೂ ಬಡಬಡಿಸುತ್ತಿರುತ್ತಾರೆ; ಆಳವಾಗಿ ಪ್ರಶ್ನಿಸಲು ತೊಡಗಿದರೆ ಇಪ್ಪತ್ನಾಲ್ಕು ಗಂಟೆಯೊಳಗೆ ಉತ್ತರಿಸುತ್ತೇವೆ ಎನ್ನುತ್ತಾರೆ. ಇಪ್ಪತ್ನಾಲ್ಕು ಗಂಟೆಗಳಲ್ಲಿ ಸಖಿಯರೊಟ್ಟಿಗೆ ಇರಲು ಹದಿನೆಂಟು ಗಂಟೆಗಳಾದರೂ ಬೇಡವೇ? ಹಾಗಾದರೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ಹೇಳುತ್ತೇವೆ ಎನ್ನುವುದು ’ಬೀಸುವ ದೊಣ್ಣೆಯನ್ನು ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ’ ಅಂತಾರಲ್ಲ? ಹಾಗೆಯೇ.

June 21
https://www.facebook.com/groups/1499395003680065/permalink/1631166770502887/
ಶೃಂಗೇರಿ ಎಂಬ ಹೆಸರೇ ನಮಗೆ ಅಲರ್ಜಿ-’ಹಾವಾಡಿಗ’ ಮಹಾಸಂಸ್ಥಾನಾಧೀಶ್ವರರು
"ನಿನ್ನೆ ಮೊನ್ನೆಯತನಕ ನಮ್ಮ ವಿರುದ್ಧವೇ ಉಳಿದಿದ್ದ ’ಹರಿ’,’ಹರ’, ’ರಾಘವಾಂಕ’ರಂತ ಅಂಡೆಪಿರ್ಕಿಗಳನ್ನೆಲ್ಲ ಇಂದು ನಾವು ನಮ್ಮ ತೆಕ್ಕೆಗೆ ಎಳೆದುಕೊಂಡಿದ್ದೇವೆ. ಅಗ್ನಿ ಮಂಜುವಿನ ಭಾಷಣವನ್ನು ಅವರೆಲ್ಲ ಕೇಳಿದ್ದರೂ "ಅದರಲ್ಲಿ ಹೇಳಿದ್ದೆಲ್ಲ ಸುಳ್ಳು" ಎಂದು ನಾವು ಹೇಳಿದ್ದೇವೆ. ತನ್ಮೂಲಕ "ನಮ್ಮ ಸ್ವಾಮೀಜಿ ಬಹಳ ಸಾಚಾ, ಬಹಳ ಘನತೆವೆತ್ತವರು, ಸಮಾಜಕ್ಕೆ ಬಹಳಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ" ಎಂದು ಹೇಳಿಸಲು ಆರಂಭಿಸಿದ್ದೇವೆ. ಆದರೂ ಇಮ್ಮಡಿ ವಿಶ್ವೇಶ್ವರಯ್ಯನ ಜಾಗ ತುಂಬುವುದು ಅವರಿಂದ ಸಾಧ್ಯವಿಲ್ಲ ಬಿಡಿ.
ತುಮರಿ ರಾಮಚಂದ್ರ ಅನ್ನೋನು ನಿನ್ನೆ ನಮ್ಮ ವಿರೋಧಿಗಳಾದ ಶೃಂಗೇರಿಯವರ ಗುರುವಂದನಾ ಕಾರ್ಯಕ್ರಮ ನೋಡುತ್ತಿದ್ದನಂತೆ. ನಾವೂ ಅಲ್ಪಸ್ವಲ್ಪ ಕದ್ದು ನೋಡಿದ್ದೇವೆ; ಅ ಪ್ರಶ್ನೆ ಬೇರೆ. ಮುಂದಿನಸಲ ನಮ್ಮ ಕಾರ್ಯಕ್ರಮ ಇದಕ್ಕೂ ಗ್ರಾಂಡ್ ಆಗಿರಬೇಕು, ನಮಗೆ ಸಿಂಗಲ್ ವೇದಿಕೆಯಲ್ಲ, ಅಂತಸ್ತುಳ್ಳ ಡಬ್ಬಲ್ ವೇದಿಕೆಯಲ್ಲಿ ಅಷ್ಟಕೋನದ ದೊಡ್ಡ ಮಂಟಪಮಾಡಿ ಅದರಲ್ಲಿ ಬಹಳ ಎತ್ತರದ ಸಿಂಹಾಸನ ಹೂಡಿ, ಪ್ರವೇಶಿಸುತಿರುವಂತೆಯೇ ನೂರಾರು ಮಹಿಳೆಯರು ಆರತಿ ಎತ್ತುವಂತೆ ಮಾಡಬೇಕೆಂದು ಸಂಕಲ್ಪಿಸಿದ್ದೇವೆ. ಇದೊಂದರಲ್ಲಿ ಸಿಕ್ಕಿಹಾಕಿಕೊಳ್ಳದಿದ್ದರೆ ನಾವಿಷ್ಟೊತ್ತಿಗೆ ಇನ್ನಷ್ಟ್ ಸಾವಿರ ಬೋಳುಗಳಿಗೆ ಎಣ್ಣೆ ಹಚ್ಚುತ್ತಿದ್ದೆವು; ಆದರೇನು ಮಾಡೋಣ? ನಮ್ಮ ಸ್ಥಿತಿ ಇಂದು ಹೀಗಾಗಿದೆ.
ಅದಿರಲಿ, ಸಜ್ಜನರಾಗಬಯಸುವವರು ಸಜ್ಜನರ ಸಂಗವನ್ನೇ ಮಾಡಬೇಕು ಮತ್ತು ಸಜ್ಜನರ ಲಕ್ಷಣಗಳೇನು ಎಂಬುದನ್ನು ತಿಳಿಸಿದ ಶೃಂಗೇರಿಯವರು, ಪರಸ್ತ್ರೀಯರನ್ನು ಅಮ್ಮನಂತೆ ಕಾಣಬೇಕು ಎಂದು ಹೇಳಿದರು. ಹಾಗಾದರೆ ಎಲ್ಲರೂ ಹಾಗೇ ಮಾಡುತ್ತಾರೇನು? ರಾವಣ ಬಹಳ ನಿಷ್ಠಾವಂತನಾಗಿದ್ದ ಎಂದು ಹೇಳಿದಾಗ ನಮಗೆ ಬಹಳ ಸಮಾಧಾನವಾಯಿತು; ಯಾಕೆಂದರೆ ರಾವಣನಂತೆಯೇ ನಾವೂ ಹೊರಗೆ ಬಹಳ ನಿಷ್ಠಾವಂತರು.
ಆದರೆ, ರಾವಣ ಪರಸ್ತ್ರೀ ವ್ಯಾಮೋಹದಿಂದಲೇ ಪತನಗೊಂಡ ಎಂದಾಗ, ವೇಗದಲ್ಲಿ ಓಡುತ್ತಿರುವ ಕಾರಿನ ನಾಲ್ಕೂ ಟೈರ್ ಟ್ಯೂಬ್‍ಗಳು ಒಮ್ಮೆಲೇ ಠುಸ್ ಎಂದು ಬರ್ಸ್ಟ್ ಆದಂತೆನಿಸಿ ಎಲ್ಲಿಲ್ಲದ ಕೋಪ ಬಂತು ನಮಗೆ. ಸೀತೆಯ ಗಂಡ ಎಂದು ಹೇಳಿಕೊಂಡು ಅಲೆಯುತ್ತಿರುವ ನಮ್ಮನ್ನು ಮಂಡೋದರಿಯ ಪತಿಗೆ ಹೋಲಿಸುತ್ತಾರಲ್ಲ ಎಂಬುದು ಅರ್ಥವಾಯಿತು.
"ವ್ಯಕ್ತಿ ಜೀವನದಲ್ಲಿ ಅನ್ಯರಿಗೆ ಉಪಕಾರ ಮಾಡುವ ಸ್ಥಿತಿಯಲ್ಲಿಲ್ಲದಾಗ ಉಪಕಾರ ಮಾಡಬೇಕಾದ ಅಗತ್ಯವಿಲ್ಲ; ಆದರೆ ಅಪಕಾರ ಮಾಡಬಾರದು. ವಿನಾಕಾರಣ ಇನ್ನೊಬ್ಬನನ್ನು ಹಿಂಸಿಸಬಾರದು; ಹಾಗೆ ಹಿಂಸಿಸಿದರೆ, ತೊಂದರೆಕೊಟ್ಟರೆ ಅದರಿಂದಾಗುವ ದುಷ್ಪರಿಣಾಮ ವಿಪರೀತವಾಗಿರುತ್ತದೆ" ಎಂದು ಹೇಳಿದ್ದು ನಮ್ಮ ಕೀಳು ವ್ಯವಹಾರದ ಮಧ್ಯೆ ನಾವು ಅವರನ್ನು ಎಳೆಯಲು ಪ್ರಯತ್ನಿಸಿದ್ದಕ್ಕೆ ಎಂದರೆ ತಪ್ಪಾಗಲಾರದಷ್ಟೇ?
ಅಂದಹಾಗೆ ಐದು ತಿಂಗಳ ಹಿಂದೆ ಶಿಷ್ಯ ಸ್ವೀಕಾರದ ಸಮಯದಲ್ಲೂ ಅವರು "ಕೇವಲ ಜಾತಕ ನೋಡಿ ಆಯ್ಕೆ ಮಾಡಿದ್ದಲ್ಲ" ಎಂದಾಗ ನಮಗೆ ದಂಗಾಗಿತ್ತು; ಯಾಕೆಂದರೆ ನಾವು ಅಲ್ಲಿಂದಿಲ್ಲಿಗೂ ಮಾಡಿದ ಅಷ್ಟೂ ಲಫಡಾಗಳನ್ನೂ ಪರೋಕ್ಷವಾಗಿ ಅವರು ಬಲ್ಲರು. ಕಾನೂನಿನ ಕುಣಿಕೆಯಿಂದ ನಾವು ತಪ್ಪಿಸಿಕೊಂಡರೂ ಇನ್ನೆಂದೂ ನಮ್ಮನ್ನವರು ಕ್ಷಮಿಸಲಾರರು. ಮನಸ್ಸು ಮಾಡಿದರೆ ನಮ್ಮನ್ನು ಶಿಕ್ಷಿಸಬಲ್ಲವರು ಸದ್ಯಕ್ಕೆ ಅವರೊಬ್ಬರೇ ಎಂಬುದು ನಮಗೆ ಗೊತ್ತಿದೆ.
ನಮ್ಮ ವಿರೋಧಿ ಬಣದ ಮುಖಂಡನನ್ನು ಸನ್ಮಾನ ಮಾಡಿದಾಗಲಂತೂ ನಮ್ಮ ಎದೆಗೆ ಚಾಕು ಹಾಕಿದಷ್ಟು ನೋವಾಯ್ತು. ಶೃಂಗೇರಿಗಿಂತ ನಮ್ಮ ಸಂಸ್ಥಾನವೇ ದೊಡ್ಡದು ಎಂದು ಬಿಂಬಿಸಲು ಹೊರಟಿದ್ದ ನಾವು ಇದನ್ನೆಲ್ಲ ಕಣ್ಣಾರೆ ಕಂಡು ಸಹಿಸುವುದಾದರೂ ಹೇಗೆ?
ಅಂದಹಾಗೆ ಅವರ ಶಿಷ್ಯರಲ್ಲಿ ಅವರಿಗೆ ವಿರೋಧಿಗಳೇ ಇಲ್ಲವಲ್ಲ ಎಂಬುದು ನಮಗೆ ಆಶ್ಚರ್ಯ ತಂದಿದೆ. ನಾವು ನಮ್ಮ ಮಟ್ಟಕ್ಕೆ, "ಅವರದ್ದೂ ನಮ್ಮಂತೆಯೇ, ಇನ್ನೇನು ಮಹಾ" ಅಂದುಕೊಂಡಿದ್ದೆವು, ಆದರೆ ಅಲ್ಲಿನ ಶಿಸ್ತು, ಸ್ವಚ್ಛತೆ, ತ್ಯಾಗ, ತಪಸ್ಸು, ಆಡ್ಯತೆ, ಪಾಂಡಿತ್ಯ, ಧರ್ಮಾಚರಣೆ, ನೀತಿ-ನಿಯತ್ತು, ಅನುಷ್ಠಾನ, ಸಮಾಜ ಸೇವೆ, ಮಾರ್ಗದರ್ಶನ ಎಲ್ಲವನ್ನೂ ಕಂಡು ನಾವು, ಜ್ವರ ತಲೆಗೆ ಹತ್ತಿದವರು ಹಲುಬುವಂತೆ ಹಲುಬುತ್ತಿರುವುದು ನಿಜ.
ಕೆಲವೊಮ್ಮೆ, ನಮ್ಮ ಎಡವಟ್ಟಿಗೆಲ್ಲ ನಮ್ಮ ಕುಲಪತಿ ಬಾವಯ್ಯನೇ ಮೂಲ ಕಾರಣ ಅಂತ ನಾವೂ ಅಂದುಕೊಳ್ಳುತ್ತೇವೆ. ಅವನು ಹೇಳಿದಂತೆ ಡಾನ್ಸ್ ಮಾಡದಿದ್ದರೆ ನಮಗೆ ಇಷ್ಟೊಂದು ಅನಾಹುತ ಆಗುತ್ತಿರಲಿಲ್ಲ. ಈಗ ಒಳಹರಿವೇ ನಿಂತುಹೋಗಿ, ಹೊರಹರಿವು ಅಸಾಧ್ಯವಾಗಿ, ಕೈಕಾಲು ನಿತ್ರಾಣವಾಗಿ, ಇರುವಲ್ಲೇ ತರಗುಟ್ಟಲು ಸುರುವಾಗಿದೆ.
ಇನ್ನೊಂದು ಕಡೆ ಬೇರೆ ಮುಖದಲ್ಲಿ ಸಭೆ ಕರೆಯುವ ನಮ್ಮ ಸಮಾಜದ[ತಾವು ತಟಸ್ಥ ಎಂದು ಭೋಂಗು ಬಿಡುವ] ಪಟಾಲಂ ಬಳಗ ಅಲ್ಲಿಗೆ ಬಂದವರಿಗೆಲ್ಲ ಮತ್ತೆ ನಮ್ಮ ಸಂಸ್ಥಾನದ ಪರವಾಗಿ ವಕಾಲತ್ತು ಹಾಕುವಂತೆ ಎಣ್ಣೆ ಸವರಿ ಕಳಿಸುತ್ತದೆ. ಮತ್ತು ಮುಖವಾಣಿ ಎಂದು ಅವರೇ ಹೇಳಿಕೊಳ್ಳುವ ಪತ್ರಿಕೆಯಲ್ಲಿ ನಮ್ಮನ್ನೇ ಹೊಗಳಿ ಬರೆಯಿಸುತ್ತದೆ. ಹಾಗಾಗಿಯೇ ಇದ್ದಕ್ಕಿದ್ದಂತೆ ನಿನ್ನೆಯಿಂದ ಕೆಲವರು ಬದಲಾಗಿ ನಮ್ಮನ್ನು ಬೆಂಬಲಿಸತೊಡಗಿದ್ದು.
ಆದರೂ, ಈ ನಡುವೆ ನಮ್ಮಲ್ಲಿಂದ್ದ ಅನೇಕ ಜನ ನಮ್ಮನ್ನು ಬಿಟ್ಟುಹೋದದ್ದು ನಿಜ. ಏನೋ ಒತ್ತಾಯಕ್ಕೆ, ಮುಖ ಭಿಡೆಯಕ್ಕೆ ಇಲ್ಲೀವರೆಗೆ ಅವರು ಎಳೆದಿದ್ದಾರೆ; ಇನ್ನು ತಮ್ಮಿಂದಾಗದು ಎಂದು ಕೈಚೆಲ್ಲಿದ್ದಾರೆ. ಅಷ್ಟೇ ಅಲ್ಲ; ನಾವು ಸರಿಯಿಲ್ಲ ಎಂಬುದು ಅವರೆಲ್ಲರ ಮನಸ್ಸಿಗೆ ಸಾಬೀತಾಗಿದೆ. ಹೀಗಾದ್ದರಿಂದ ಪಟಾಲಮ್ಮಿಂದ ಬೇರ್ಪಟ್ಟವರು ಸೀದಾ ಹೋಗಿ ನಮ್ಮ ವಿರೋಧಿಗಳನ್ನು ಸೇರಿಕೊಂಡಿದ್ದಾರೆ.
ವರ್ಷಗಳ ಹಿಂದೆ ನಾವೂ ಒಂದು ಚಾನೆಲ್ ಮಾಡಬೇಕೆಂದುಕೊಂಡಿದ್ದೆವು; ಹಾಗೇನಾದರೂ ಮಾಡಿಕೊಂಡಿದ್ದರೆ, ಚುನಾವಣೆಗಳ ಸಮಯದಲ್ಲಿ, ರಾಜಕಾರಣಿಗಳ ಒಡೆತನದ ಚಾನೆಲ್‍ಗಳಲ್ಲಿ ಅವರಿಗೆ ಬೇಕಾದ್ದನ್ನಷ್ಟೇ ಇಡೀದಿನ ಹೇಗೆ ತುರುಕುತ್ತಿರುತ್ತಾರೋ ಹಾಗೆ ನಾವೂ ಕೂಡ ಸದಾ ನಮಗೆ ಬೇಕಾದ್ದನ್ನೇ ಹಾಕಿಸಬಹುದಿತ್ತು. ಎಲ್ಲವೂ ರೆಡಿಯಾಗಿ ಒಂದಷ್ಟು ಲಕ್ಷ ಹಣವನ್ನೂ ಹೂಡಿದ್ದಾಗಿತ್ತು; ಆದರೆ, ಇಮ್ಮಡಿಯ ಸ್ಕೆಚ್ ವರ್ಕ್ ಔಟ್ ಆಗದೆ, ನಮ್ಮ ಪವಾಡವೂ ನಡೆಯದೆ, ಆ ಪ್ರಾಜೆಕ್ಟು ಗೋತಾ ಹೊಡೆಯಿತು. ಎಷ್ಟೆಂದರೂ ಭಕ್ತಕುರಿಗಳು ಕೊಟ್ಟ ಹಣವಷ್ಟೇ? ಹೋದರೆ ಹೋಗಲಿ ಅಂತಹ ಹತ್ತುಪಟ್ಟು ತರಿಸಿಕೊಳ್ಳುವ ತಾಕತ್ತಿದೆ ಎಂದುಕೊಂಡು ಸುಮ್ಮನಾದೆವು.
ವರ್ಷಗಳ ಹಿಂದೆ, ಇಮ್ಮಡಿ ವಿಶ್ವೇಶ್ವರಯ್ಯನ ಸುಪರ್ದಿಯಲ್ಲಿ ನಾವು ಬೆಳಿಗ್ಗೆ ಲೋಕ ಸಂದೇಶ ಕೊಡುತ್ತಿದ್ದೆವು; ಹಾಗೆ ಮಾತನಾಡುವಾಗ ನಮ್ಮ ಹಾವ, ಭಾವ, ಭಂಗಿಗಳನ್ನು ಮತ್ತು ಕಣ್ಣುಗಳನ್ನು ಕಂಡ ಜನ "ಓಹೊಹೋ ಮಹಾಸ್ವಾಮಿಗಳಪ್ಪಾ" ಎಂದುಕೊಂಡಿರಬೇಕು. ಆದರೆ ವಾಹಿನಿಯಲ್ಲಿ ಕೆಲಸಮಾಡುವ ಹೆಣ್ಣುಬೆಕ್ಕುಗಳಿಗೆ ನಮ್ಮ ಅಡ್ಡಕಸುಬಿ ಅನಾಚಾರದ ಸುಳಿವು ಸಿಕ್ಕಿಬಿಟ್ಟಿತ್ತು; ನಮ್ಮ ಸಂದೇಶದ ನಂತರ ಅವು ಪರಸ್ಪರ ಮುಖ ಮುಖ ನೋಡಿಕೊಂಡು ಮುಸಿಮುಸಿ ನಗುತ್ತಿದ್ದವು.
ಶೃಂಗೇರಿ ಇಲ್ಲಿಯವರೆಗೆ ಯಾವುದೇ ವಿವಾದದಲ್ಲಿ ಸಿಲುಕಿಕೊಂಡಿಲ್ಲ, ಸಕ್ರಿಯ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ, ರಾಜಕಾರಣಿಗಳಿಗೆ ಮಣೆಹಾಕುವುದೂ ಇಲ್ಲ, ಆಸೇತು ಹಿಮಾಚಲ ಹಬ್ಬಿರುವ ಹಿಂದೂ ಸಮಾಜಕ್ಕೆ ಅದು ನಿಜಕ್ಕೂ ಶೃಂಗಪ್ರಾಯವಾಗಿದೆ, ಕಿರೀಟಪ್ರಾಯವಾಗಿದೆ. ದಗಾಕೋರರು, ವಂಚಕರು, ಲಂಪಟರು, ಮತಿಹೀನ ’ಪಂಡಿತರು’, ಸಮಾಜ ಘಾತುಕರು ಆ ಸ್ವಾಮಿಗಳ ಎದುರು ನಿಂತು ಮಾತನಾಡಲು ಹೆದರುತ್ತಾರೆ. ಅಷ್ಟೇ ಅಲ್ಲ ಈಗ ನಮಗೂ ಸಹ ಅವರೆದುರು ನಿಲ್ಲುವ ಎದೆಗಾರಿಕೆ ಇಲ್ಲ.
"ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಪದವಾಕ್ಯ ಪ್ರಮಾಣ ಪಾರವಾರಾಪಾರೀಣ ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಠಾನನಿಷ್ಠ ಷಡ್ದರ್ಶನಸ್ಥಾಪನಾಚಾರ್ಯ ತಪಶ್ಚಕ್ರವರ್ತ್ಯಾದ್ಯನೇಕ ವಿಶೇಷಣವಿಶಿಷ್ಟ" ಎಂಬುದು ಸಾಮಾನ್ಯವಾಗಿ ಶಂಕರ ಪರಂಪರೆಯ ಯತಿಗಳು ಬಳಸುವ ಬಿರುದುಗಳು. ಇವುಗಳಲ್ಲಿ ಷಡ್ದರ್ಶನಗಳೆಂದರೆ ನ್ಯಾಯ ದರ್ಶನ, ವೈಶೇಷಿಕ ದರ್ಶನ, ಸಾಂಖ್ಯ ದರ್ಶನ, ಯೋಗ ದರ್ಶನ, ಮೀಮಾಂಸ ದರ್ಶನ ಮತ್ತು ವೇದಾಂತ ದರ್ಶನ, ಇವುಗಳೆಲ್ಲವನ್ನೂ ಅರಿತಿರುವ ಕೆಲವೇ ವಿದ್ವಾಂಸರುಗಳಲ್ಲಿ ಶೃಂಗೇರಿಯವರೂ ಒಬ್ಬರು; ನಮಗೆ ಮಾತ್ರ ಇದೆಲ್ಲದರ ಗಂಧಗಾಳಿಯೂ ಇಲ್ಲ.
ವಿಶೇಷವೆಂದರೆ ಈ ಷದ್ದರ್ಶನಗಳ ಸಂಪೂರ್ಣ ದರ್ಶನ ಪಡೆದ ವ್ಯಕ್ತಿಯನ್ನು ದಾರ್ಶನಿಕ ಎಂಬುದು ಸರಿ. ಯಾಕೆಂದರೆ ಇವೆಲ್ಲ ಅನುಭೂತಿಗೆ ನಿಲುಕುವ ವಿಷಯಗಳೇ ಹೊರತು ಕೇವಲ ಪಠ್ಯಗಳನ್ನು ಓದಿದ ಮಾತ್ರಕ್ಕೆ ಅರಿವಿಗೆ ಬರುವ ವಿಷಯಗಳಲ್ಲ.
ಇದಲ್ಲದೆ,
ಧೃತಿಃ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹಃ |
ಧೀರ್ವಿದ್ಯಾ ಸತ್ಯಮಕ್ರೋಧಃ ದಶಕಂ ಧರ್ಮ ಲಕ್ಷಣಮ್||
[ಇದನ್ನೇ, ಸಂಸಾರಿಯಾದವನಿಗೆ ಅನ್ವಯಿಸುವ ರೀತಿಯಲ್ಲಿ, ನಾರಾಯಣ ಪಂಡಿತನ ಹಿತೋಪದೇಶದ ಮಿತ್ರಲಾಭದ ಏಳನೇ ಶ್ಲೋಕ ಹೀಗೆ ಹೇಳುತ್ತದೆ-
ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಧೃತಿ ಕ್ಷಮಾ |
ಅಲೋಭ ಇತಿ ಮಾರ್ಗೋsಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ||
ಯಾಗ ಮಾಡುವುದು, ಅಧ್ಯಯಯನ ನಿರತರಾಗಿರುವುದು, ದಾನ, ತಪಸ್ಸು, ಸತ್ಯವನ್ನೇ ನುಡಿಯುವುದು, ಧೈರ್ಯವನ್ನು ಹೊಂದಿರುವುದು, ಕ್ಷಮಾಗುಣ, ಲೋಭವಿಲ್ಲದಿರುವುದು ಇವು ಎಂಟು ಧರ್ಮಕ್ಕೆ ಇರುವಂತಹ ಮಾರ್ಗಗಳು.]
ಮಹರ್ಷಿ ಪತಂಜಲಿಯ ಯೋಗಸೂತ್ರದಲ್ಲಿ ಅರ್ಹತೆಯನ್ನು ಹೇಳುವಾಗಲೇ ಇವೆಲ್ಲವೂ ಹೇಳಲ್ಪಟ್ಟಿವೆ. ನಿಜವಾದ ಸನ್ಯಾಸಿಗಳಲ್ಲಿ ಮಾತ್ರ ಕಾಣುವ ಧರ್ಮದ ಈ ಹತ್ತು ಲಕ್ಷಣಗಳನ್ನು ಶೃಂಗೇರಿಯವರಲ್ಲಿ ಕಾಣಬಹುದು. ಆದರೆ, ನಮಗೂ ಈ ಶ್ಲೋಕದಲ್ಲಿ ಹೇಳಿದ ಹತ್ತು ನಿಯಮಗಳಿಗೂ ಯಾವುದೇ ಸಂಬಂಧವೂ ಇಲ್ಲ.
ಮೂಕನನ್ನು ಮಾತನಾಡಿಸಬಲ್ಲ, ಹೆಳವನಿಗೆ ಹಿಮಾಲಯವೇರುವ ತಾಕತ್ತನ್ನು ಕೊಡಬಲ್ಲ ತಪೋನಿರತ ಸಿದ್ಧ ಸಾಧ್ಯರ, ವಿಭಾಂಡಕ-ಋಷ್ಯಶೃಂಗರ ನೆಲೆವೀಡು ಶೃಂಗೇರಿ ಎಂಬುದು ಸುಳ್ಳಲ್ಲ. ಬ್ರಹ್ಮಾಂಡವನ್ನು ರಚಿಸಿದ ಶಕ್ತಿ ಶಾರದೆಯಾಗಿ ನೆಲೆಸಿದ ದಿವ್ಯ ಕ್ಷೇತ್ರ ಅದೆಂಬುದರಲ್ಲಿ ನಮಗೆ ಅನುಮಾನವೇನೂ ಇಲ್ಲ. ಒಟ್ಟಂದದಲ್ಲಿ ಹೇಳಬೇಕಾದರೆ ಶೃಂಗೇರಿಯವರ ನೂರರ ಒಂದಂಶವೂ ನಾವಾಗಲು ಸಾಧ್ಯವಿಲ್ಲ; ಆದರೂ ನಾವು ಅವರನ್ನು ಮೀರಿಸುವ ಅರ್ಹತೆಯುಳ್ಳವರೆಂದು ಭೋಂಗು ಬಿಟ್ಟಿದ್ದೇವೆ.
ಹೋಗಲಿ ಬಿಡಿ, ಅದೆಲ್ಲ ಈಗ ಬೇಡ, ಈಗ ನಮಗೆ ಬೇಕಾದುದೇನು ಗೊತ್ತೇ? ಹೇಗಾದರೂ ಮಾಡಿ, ನಮ್ಮ ಸಮಾಜ ನಮ್ಮ ವಿರುದ್ಧ ತಿರುಗಿಬಿದ್ದಿದ್ದಕ್ಕೆ ಶೃಂಗೇರಿಯವರ ಮಸಲತ್ತೇ ಕಾರಣ ಎಂದು ರೂಪಿಸುವುದು. ಈಗೀಗ ಶೃಂಗೇರಿ ಎಂಬ ಹೆಸರೇ ನಮಗೆ ಅಲರ್ಜಿ ಮಾರಾಯ್ರೆ."

June 22
https://www.facebook.com/groups/1499395003680065/permalink/1631641603788737/
ಯೋಗದ ಸಾಧ್ಯತೆಗಳ ಬಗ್ಗೆ ನಾವು ಅನ್ಯರಿಗೆ ಮಾತ್ರ ಉಪದೇಶ ಕೊಡುತ್ತೇವೆ.
"ಯೋಗದ ಬಗೆಗೆ ತಿಳಿಯದಿರುವವರು ಬಹಳ ಕಡಿಮೆ ಎಂದುಕೊಡಿದ್ದೇವೆ. ಹೀಗಾಗಿ ಅದರ ಬಗ್ಗೆ ಜಾಸ್ತಿ ಕೊರೆಯದೆ ನೇರವಾಗಿ ಷಡ್ದರ್ಶನಗಳನ್ನು ಎತ್ತಿಕೊಂಡು, ಅಲ್ಲಿಂದ ಯೋಗಸಿದ್ಧಿಯ ಕಡೆಗೆ ಹೋಗುತ್ತೇವೆ.
ಭಾರತೀಯ ತತ್ವಶಾಸ್ತ್ರ ಪದ್ಧತಿ ಬಹಳ ಪುರಾತನವಾದದ್ದು; ಕನಿಷ್ಠ ಐದುಸಾವಿರ ವರ್ಷಗಳ ಇತಿಹಾಸವುಳ್ಳದ್ದು ಎನ್ನಬಹುದು. ಇಲ್ಲಿನ ತತ್ವಶಾಸ್ತ್ರಗಳನ್ನು ದರ್ಶನಗಳೆಂದು ಕರೆದಿದ್ದಾರೆ. ಪಾಶ್ಚಿಮಾತ್ಯರಲ್ಲಿ ತತ್ವ ಸಿದ್ಧಾಂತಗಳೆಂದರೆ ಸಂಪೂರ್ಣವಾಗಿ ತರ್ಕ ಮತ್ತು ಕಾರಣಗಳ ಮೇಲೆ ಅವಲಂಬಿಸಿರುವ ವಿಷಯವಾಗಿರುತ್ತದೆ.
ಭಾರತೀಯ ತತ್ವಶಾಸ್ತ್ರವು ಅಥವಾ ಸಿದ್ಧಾಂತವು ಸತ್ಯದ ’ದರ್ಶನ’ ಅಥವಾ ’ನೋಟ’ ಅಥವಾ ’ಅನುಭವ’ವನ್ನು ಅತೀಂದ್ರಿಯ ಸ್ಥಿತಿಯಲ್ಲಿ ಕಂಡುಕೊಳ್ಳುವುದರ ಮೇಲೆ ನಿಂತಿದೆ. ಆದ್ದರಿಂದಲೇ ಇಲ್ಲಿನ ಪ್ರಾಚೀನ ತತ್ವಶಾಸ್ತ್ರಗಳಿಗೆ ’ದರ್ಶನ’ ಎಂಬ ಪದವು ಹೆಚ್ಚು ಸೂಕ್ತವೆನಿಸುತ್ತದೆ.
ನಮ್ಮಲ್ಲಿನ ದರ್ಶನಗಳನ್ನು ಆಸ್ತಿಕ ಮತ್ತು ನಾಸ್ತಿಕ ಎಂದು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ. ವೇದಗಳ ಪ್ರಮಾಣಗಳ ಮೇಲೆ ಆಧಾರಿತವಾಗಿರುವ ದರ್ಶನಗಳೆಲ್ಲ ಆಸ್ತಿಕ ದರ್ಶನಗಳು ಇದಕ್ಕೆ ಹೊರತಾದವುಗಳು ನಾಸ್ತಿಕ ದರ್ಶನಗಳು. ಚಾರ್ವಾಕ (ಪ್ರಾಪಂಚಿಕ ಭೋಗವನ್ನು ಪ್ರತಿಪಾದಿಸುವ ದರ್ಶನ), ಜೈನ ಮತ್ತು ಬೌದ್ಧ ಸಿದ್ಧಾಂತಗಳು ನಾಸ್ತಿಕ ದರ್ಶನಗಳ ವರ್ಗಕ್ಕೆ ಸೇರಿದರೆ; ಷಡ್ದರ್ಶನಗಳು ಅಥವಾ ಆರು ಹಿಂದೂ ಸಾಂಪ್ರದಾಯಿಕ ಸಿದ್ಧಾಂತಗಳು ಆಸ್ತಿಕ ದರ್ಶನಗಳ ವರ್ಗಕ್ಕೆ ಸೇರುತ್ತವೆ.
ಈಗ ಯಾವ ಯಾವ ದರ್ಶನ ಏನೇನು ವಿಷಯಗಳನ್ನು ಒಳಗೊಂಡಿದೆ ಎಂಬುದನ್ನು ಸ್ಥೂಲವಾಗಿ ನೋಡೋಣ.
ನ್ಯಾಯದರ್ಶನ: ವಿಷಯವು ಎದುರು ಬಂದಾಗ, ಹಲವು ವಿಧದ ಪ್ರಮಾಣಗಳಿಂದ ವಸ್ತುವನ್ನು ಪರೀಕ್ಷಿಸಿ, ಬುದ್ಧಿಪೂರ್ವಕವಾಗಿ, ವಿವೇಕಯುತವಾಗಿ, ಕಾರಣ ಸಹಿತವಾಗಿ, ವ್ಯವಸ್ಥಿತವಾಗಿ ಅದನ್ನು ಮಂಡಿಸುವ ವಿಧಾನವೇ ನ್ಯಾಯ ಮತ್ತು ಇದನ್ನು ತರ್ಕ ಎಂದೂ ಕರೆದಿದ್ದಾರೆ. ಸತ್ಯವನ್ನು ಕಂಡುಕೊಳ್ಳುವುದು ಈ ದರ್ಶನದ ಪ್ರಧಾನ ನಿಲುವು. ಗೌತಮಮುನಿ ಈ ದರ್ಶನದ ಮೂಲಪುರುಷ ಎಂದು ತಿಳಿಯಲಾಗಿದೆ.
ವೈಶೇಷಿಕದರ್ಶನ: ಎಷ್ಟೋ ಸಲ ನ್ಯಾಯದರ್ಶನ ಮತ್ತು ವೈಶೇಷಿಕದರ್ಶನಗಳನ್ನು ಒಟ್ಟಾಗಿಯೇ ಪರಿಗಣಿಸುವ ವಿಧಾನವೂ ಉಂಟು; ಆದರೆ ಅಸ್ಥಿತ್ವದಲ್ಲಿ ಅವೆರಡೂ ಬೇರೆ ಬೇರೆ. ಋಷಿ ಕಣಾದ ಈ ದರ್ಶನದ ಪ್ರವರ್ತಕ. ನ್ಯಾಯದರ್ಶನವು ಪ್ರಧಾನವಾಗಿ ಪ್ರಮಾಣಗಳನ್ನು ಕುರಿತು ವಿಶ್ಲೇಷಿಸಿದರೆ, ವೈಶೇಷಿಕದರ್ಶನವು ಪ್ರಮೇಯಗಳನ್ನು ಕುರಿತು ಮೀಮಾಂಸೆ ನಡೆಸುತ್ತದೆ. ಉದಾಹರಣೆಗೆ-ಜಗತ್ತಿನ ವಸ್ತುಗಳಿಗೆ ಕಾರಣವಾದುದು ಪರಮಾಣುಗಳು, ಅವುಗಳ ವೈಶಿಷ್ಟ್ಯ. ವಿಶೇಷತೆಗಳನ್ನು ವಿವರಿಸುವುದೇ ಈ ದರ್ಶನದ ಗುರಿ.
ಸಾಂಖ್ಯದರ್ಶನ: ಭಾರತೀಯ ದರ್ಶನಗಳಲ್ಲಿ ಸಾಂಖ್ಯದರ್ಶನವೇ ಅತ್ಯಂತ ಪ್ರಾಚೀನವಾದುದು ಎಂಬ ಎಣಿಕೆಯಿದೆ. ಕಪಿಲಮುನಿ ಈ ದರ್ಶನದ ಪ್ರವರ್ತಕ. ‘ಸಾಂಖ್ಯ’ ಎಂದರೆ ಜ್ಞಾನ ಮತ್ತು ಪರಿಗಣನೆ ಎಂಬ ಎರಡು ಪ್ರಧಾನ ಅರ್ಥಗಳನ್ನು ವಿದ್ವಾಂಸರು ಮಾಡಿದ್ದಾರೆ. ಸೃಷ್ಟಿಗೆ ಮೂಲವಾಗಿರುವ ವಿವರಗಳನ್ನು ಎಣಿಸುವುದು ಮತ್ತು ಅರಿವನ್ನು ಕುರಿತ ಮೀಮಾಂಸೆ ಈ ದರ್ಶನದ ಮೂಲ ನೆಲೆ. ಸಾಂಖ್ಯ ದರ್ಶನ ಬಹಳ ಜನಪ್ರಿಯತೆಯನ್ನು ಪಡೆದಿದೆಯಾದರೂ ಮೂಲದಲ್ಲಿ ಇದರಲ್ಲಿ ಒಂದು ಲೋಪವಿದೆ; ಈಶ್ವರನನ್ನು[ಹರಿ ಅಥವಾ ಹರ-ಪರಮಾತ್ಮ ಎಂದರ್ಥ] ಕುರಿತು ಸಾಂಖ್ಯ ಏನನ್ನೂ ಹೇಳದ್ದರಿಂದ ಇದನ್ನು ನಿರೀಶ್ವರ ಸಾಂಖ್ಯ ಎನ್ನಲಾಯ್ತು. ನೋಡಿ ಹೀಗಿದೆ-
ಜಡ ಮತ್ತು ಚೇತನದ ವಿಶ್ಲೇಷಣೆ
ಸಾಂಖ್ಯ ಎಂದರೆ ಚೈತನ್ಯ ಮತ್ತು ಜಡವನ್ನು ಅರ್ಥಮಾಡಿಕೊಳ್ಳುವುದು. ಈ ಲೌಕಿಕ ಪ್ರಪಂಚವು ಇಪ್ಪತ್ತನಾಲ್ಕು ಅಂಶಗಳಿಂದ ಆದದ್ದೆಂದು ಸಾಂಖ್ಯ ತತ್ತ್ವಶಾಸ್ತ್ರಜ್ಞನು ವಿಶ್ಲೇಷಣೆ ಮಾಡುತ್ತಾನೆ : ಪಂಚಭೂತಗಳು, ಮೂರು ಸೂಕ್ಷ್ಮ ಧಾತುಗಳು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಜ್ಞಾ ವಸ್ತುಗಳು ಮತ್ತು ಪ್ರಧಾನ -ಅಪ್ರಕಟಿತ ಪ್ರಕೃತಿ ಗುಣಗಳು ಎಂಬುದು ಸಾಂಖ್ಯಯೋಗದ ಹೇಳಿಕೆ.
· ಭೂಮಿ, ಆಕಾಶ, ವಾಯು, ಬೆಂಕಿ ಮತ್ತು ನೀರು ಇವೇ ಪಂಚಭೂತಗಳು.
· ಮೂರು ಸೂಕ್ಷ್ಮಧಾತುಗಳು: ಆಕಾಶಕ್ಕಿಂತ ಸೂಕ್ಷ್ಮವಾದದ್ದು ಮನಸ್ಸು, ಮನಸ್ಸಿಗಿಂತಲೂ ಸೂಕ್ಷ್ಮವಾದದ್ದು ಬುದ್ಧಿ, ಬುದ್ಧಿಗಿಂತಲೂ ಸೂಕ್ಷ್ಮವಾದದ್ದು ಮಿಥ್ಯಾ ಅಹಂಕಾರ. [ನಾನೇ ಜಡವಸ್ತುವೆಂಬ ಮಿಥ್ಯಾಗ್ರಹಿಕೆ]
· ಐದು ಜ್ಞಾನೇಂದ್ರಿಯಗಳೆಂದರೆ-ಕಣ್ಣು, ಮೂಗು, ಕಿವಿ, ನಾಲಗೆ ಮತ್ತು ಚರ್ಮ.
· ಐದು ಕರ್ಮೇಂದ್ರಿಯಗಳೆಂದರೆ ಧ್ವನಿ, ಕಾಲುಗಳು, ಕೈಗಳು, ಗುದ ಮತ್ತು ಜನನೇಂದ್ರಿಯ. ಇವುಗಳ ಮೂಲಕ ನಾವು ಸುಖ ದುಃಖಗಳನ್ನು ಪರಿಭಾವಿಸುತ್ತೇವೆ.
· ಐದು ಪ್ರಜ್ಞಾವಸ್ತುಗಳೆಂದರೆ-ವಾಸನೆ, ರುಚಿ, ಆಕಾರ, ಸ್ಪರ್ಶ ಮತ್ತು ಶಬ್ದ. [ಶಬ್ಧ-ರೂಪ-ರಸ-ಗಂಧ-ಸ್ಪರ್ಶ]
ಇಪ್ಪತ್ತನಾಲ್ಕು ಅಂಶಗಳಲ್ಲಿ ಲೌಕಿಕ ಪ್ರಪಂಚವನ್ನು ವಿಶ್ಲೇಷಿಸುವುದಕ್ಕೆ ಸಾಂಖ್ಯ ಎನ್ನುತ್ತಾರೆ. ಇದು ನಮ್ಮ ಅನುಭವದ ಅಳವಿಗೆ ಬರುವ ಪ್ರತಿಯೊಂದರ ಸಂಪೂರ್ಣ ವಿಶ್ಲೇಷಣೆ. ಈ ಇಪ್ಪತ್ತನಾಲ್ಕು ಅಂಶಗಳ ಮೇಲೆ ಚೇತನಾತ್ಮನು ಇದ್ದಾನೆ. ಈ ಚೇತನಾತ್ಮಕ್ಕೆ ಮೇಲಿರುವವನೇ ದೇವರು.
ಸಾಂಖ್ಯರು ಆತ್ಮವನ್ನು ಅವಲೋಕಿಸುವುದಿಲ್ಲ. ಈ ಭೂಭೌತಶಾಸ್ತ್ರದ ಜಡವಸ್ತುಗಳ ವಿಜ್ಞಾನಿಗಳ ಹಾಗಿದ್ದರು ಅವರು. ಜಡವಸ್ತುಗಳನ್ನು ಕುರಿತು ಕೇವಲ ಅಧ್ಯಯನ ಮಾಡುತ್ತಾರಷ್ಟೆ. ಅದಕ್ಕೆ ಮೇಲ್ಪಟ್ಟ ಮಾಹಿತಿ ಅವರ ಬಳಿ ಇಲ್ಲ. ವ್ಯಕ್ತಿ-ವ್ಯಕ್ತಿಗಳ ನಡುವೆ ನಡೆಯುವ ಸಂಭಾಷಣೆಗೆ ಯಾವುದು ಕಾರಣ ಎಂಬುದಕ್ಕೆ ಸಾಂಖ್ಯ ತತ್ತ್ವಶಾಸ್ತ್ರಜ್ಞ ಉತ್ತರಿಸಲಾರ.
ಅದೇ ರೀತಿಯಲ್ಲಿ, ಆಧುನಿಕ ವೈದ್ಯರು ದೇಹವನ್ನು ವಿಚ್ಛೇದಿಸಿದ ಮೇಲೆ ಅಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಶಕ್ತಿ ಯಾವುದು ಎಂದು ಕಂಡುಹಿಡಿಯಲಾರರು; ಅವರಿಗೂ ಆತ್ಮವೆಂಬ ಚೇತನದ ಕಲ್ಪನೆ ಮೂಡಲಾರದು. “ಇಷ್ಟು ಹೊತ್ತು ಜೀವ ಇತ್ತು, ಈಗ ಹೋಯ್ತು” ಎಂದಷ್ಟೇ ಹೇಳುತ್ತಾರೆಯೇ ವಿನಃ ಜೀವ ಎಂದರೇನು ಎಂಬುದಕ್ಕೆ ಅರ್ಥವನ್ನು ಅವರು ನೀಡಲಾರರು. ಹೀಗೆ ಲೌಕಿಕವಾದಿಗಳು, ಭಗವಂತನ ಕಣರೂಪದ ಜೀವಿಗಳಾದ ನಮ್ಮನ್ನು ಕೂಡ ಕಂಡುಹಿಡಿಯಲು ಸಾಧ್ಯವಿಲ್ಲ ಎಂದ ಮೇಲೆ, ಕೇವಲ ಯೋಗಿಗಳಾಗಲಿ, ಸಾಂಖ್ಯರಾಗಲಿ ದೇವರನ್ನು ನೇರವಾಗಿ ಕಂಡು ಹಿಡಿಯಲಾರರು. ಹಾಗಾದರೆ ಯೋಗದಿಂದ ಎಲ್ಲವೂ ಸಾಧ್ಯವೆಂದು ಹೇಳಿದಿರಲ್ಲ ಎಂದು ನೀವು ಪ್ರಶ್ನಿಸಿದರೆ, ಯೋಗವೆಂಬುದು ಭಗವಂತನ ಅರಮನೆಗೆ ಇರುವ ಒಂದು ಸೋಪಾನವಷ್ಟೆ; ಅದನ್ನೇರಿ ಮುಂದಕ್ಕೆ ಸಾಗುತ್ತ ಅವರು ಅರಮನೆಯನ್ನು ಪ್ರವೇಶಿಸಬೇಕಾಗುತ್ತದೆ.
ಮುಂದೆ ಇಂದಿನ ರಾಜಯೋಗದಲ್ಲಿ ಈಶ್ವರ ಸಹಿತ ಸಾಂಖ್ಯವನ್ನು ಬಳಸಿದ್ದರಿಂದ ಅದು ಪರ್ಫೆಕ್ಟ್ ಆಯ್ತು; ಅದನ್ನೇ ಸೇಶ್ವರ [ಸ+ಈಶ್ವರ] ಸಾಂಖ್ಯ ಎನ್ನಲಾಗಿದೆ.
ಯೋಗದರ್ಶನ: ಯೋಗದರ್ಶನ ಪ್ರಾಚೀನ ಸಾಧನಪದ್ಧತಿ. ಪತಂಜಲಿ ಮಹರ್ಷಿ ಇದರ ಮೂಲಪುರುಷ. ‘ಯೋಗ’ ಎಂಬ ಪದವು ‘ಯುಜ್’ ಧಾತುವಿನಿಂದ ನಿಷ್ಪನ್ನವಾಗಿದ್ದು, ‘ಸೇರಿಸು’, ‘ಹೊಂದಿಸು’ ಎಂಬ ಅರ್ಥಗಳಿವೆ. ಇದಕ್ಕೆ ಹಲವು ಸ್ತರದ ಅರ್ಥಗಳನ್ನು ಮಾಡಿದ್ದಾರೆ. ಶರೀರ ಮತ್ತು ಮನಸ್ಸುಗಳನ್ನು ಸೇರಿಸುವುದು, ಕರ್ಮ-ಜ್ಞಾನಗಳನ್ನು ಒಂದಾಗಿಸಿ ಬದುಕನ್ನು ರೂಪಿಸಿಕೊಳ್ಳುವುದು, ಅಂತರಂಗ-ಬಹಿರಂಗಗಳ ಸಾಮರಸ್ಯವನ್ನು ಸಾಧಿಸುವುದು - ಹೀಗೆಲ್ಲ ತಾತ್ಪರ್ಯವನ್ನು ಕಲ್ಪಿಸಲು ಸಾಧ್ಯ.
[ಪೂರ್ವ]ಮೀಮಾಂಸಾ ದರ್ಶನ: ‘ಮೀಮಾಂಸಾ’ ಎಂದರೆ ಆಳವಾದ ವಿಶ್ಲೇಷಣೆ, ವಿಮರ್ಶೆ. ಮೀಮಾಂಸಾದರ್ಶನದಲ್ಲಿ ಎರಡು ಕವಲುಗಳು. ವೇದಗಳ ಸಂಹಿತಾ-ಬ್ರಾಹ್ಮಣಭಾಗವನ್ನು ಆಧರಿಸಿ ಯಜ್ಞಯಾಗಾದಿಗಳ ವ್ಯಾಖ್ಯಾನಕ್ಕೆ ನಿಷ್ಠವಾದುದು ‘ಪೂರ್ವಮೀಮಾಂಸಾ’; ಉಪನಿಷತ್ತುಗಳ ಸಂದೇಶವನ್ನು ಸ್ವೀಕರಿಸಿ ಸತ್ಯಸಾಕ್ಷಾತ್ಕಾರವನ್ನು ಕಂಡುಕೊಳ್ಳುವುದು ‘ಉತ್ತರಮೀಮಾಂಸಾ’.ಜೈಮಿನಿಮಹರ್ಷಿಯನ್ನು ಪೂರ್ವ ಮೀಮಾಂಸಾದರ್ಶನದ ಮೂಲ ಪ್ರವರ್ತಕನನ್ನಾಗಿ ಗುರುತಿಸುವುದುಂಟು.
ನಮ್ಮ ಪ್ರಾಚೀನರು ತರ್ಕಿಸದೆ, ವಿಶ್ಲೇಷಿಸದೆ ಯಾವುದನ್ನೂ ಕುರುಡು ನಂಬಿಕೆಯಿಂದ ಒಪ್ಪುತ್ತಿರಲಿಲ್ಲ. ತರ್ಕ-ವಿತರ್ಕಗಳು ಸದಾ ಇರುತ್ತಿದ್ದವು; ಕುತರ್ಕ ಅಥವಾ ದುಸ್ತರ್ಕಗಳು ಇರಲಿಲ್ಲ. ಜಿಜ್ಞಾಸೆಗೊಳಗಾದ ಪೂರ್ವ ಮೀಮಾಂಸಾ ದರ್ಶನವು ಮುಂದೆ ಭಾಟ್ಟಮತ, ಪ್ರಾಭಾಕರಮತ ಮತ್ತು ಮುರಾರಿಮತ ಎಂದು ಮೂರು ಕವಲಾಗಿ ಬೆಳೆಯಿತು. ವೇದವಾಕ್ಯಗಳಿಗೆ ಅರ್ಥವನ್ನು ಕಂಡುಕೊಂಡು ಅವು ಪ್ರತಿಪಾದಿಸುವ ಕರ್ಮಗಳನ್ನು ಶ್ರದ್ಧೆಯಿಂದ ಆಚರಿಸುವಂತೆ ಪ್ರತಿಪಾದಿಸುವುದೇ ಈ ದರ್ಶನದ ನಿಲುವು.
[ಉತ್ತರ]ಮೀಮಾಂಸಾ ಅಥವಾ ವೇದಾಂತ ದರ್ಶನ: ದರ್ಶನ ಎಂದರೆ ವೇದಾಂತದರ್ಶನವೇ ಹೌದು ಎನ್ನುವಷ್ಟರ ಮಟ್ಟಿಗೆ ಈ ದರ್ಶನದ ಹಿರಿಮೆಯಿದೆ. ಉಪನಿಷತ್ತುಗಳು ಪ್ರತಿಪಾದಿಸುವ ಜೀವನರಹಸ್ಯವನ್ನು ವಿಶ್ಲೇಷಿಸಿ, ಅದನ್ನು ಪುನಃ ಅನುಭವದಲ್ಲಿ ಕಂಡುಕೊಳ್ಳುವಂಥ ಅರಿವನ್ನೂ, ಸಾಧನವನ್ನೂ ಒದಗಿಸುವುದು ಈ ದರ್ಶನದ ಪ್ರಧಾನ ನೆಲೆ. ಬಾದರಾಯಣರ‘ಬ್ರಹ್ಮಸೂತ್ರ’ವೇ ಇದಕ್ಕೆ ಆಕರ ಎಂದು ತಿಳಿಯಲ್ಪಟ್ಟಿದೆ. ಮಹಾಭಾರತವನ್ನು ಬರೆದ ವೇದವ್ಯಾಸರೇ ಈ ಬಾದರಾಯಣರು ಎಂಬ ಭಾವನೆಯೂ ಉಂಟು. ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ - ಈ ದರ್ಶನದ ಪ್ರಮಾಣಗ್ರಂಥಗಳು.
ತಪಸ್ಸು ಅಥವಾ ಭಗವದನುಗ್ರಹದಿಂದ ಅತೀಂದ್ರಿಯ ಶಕ್ತಿಗಳನ್ನು ಪಡೆಯಬಹುದೆನ್ನುವ ನಂಬಿಕೆಯು ಬಹು ಪುರಾತನವಾದದ್ದು. ಪತಂಜಲಿಯು ಸತ್ಯಾನ್ವೇಷಣ ಪಥಿಕರ ಮನದಲ್ಲಿ ಸ್ಥಿರ ನಂಬಿಕೆಯನ್ನುಂಟು ಮಾಡಲು ತನ್ನ ಎರಡನೆಯ ಮತ್ತು ಮೂರನೆಯ ಅಧ್ಯಾಯದಲ್ಲಿ ಇಂತಹ ಹಲವಾರು ವಿಶೇಷ ಶಕ್ತಿಗಳ ಬಗ್ಗೆ ಉಲ್ಲೇಖಿಸಿದ್ದಾನೆ.
ಉದಾಹರಣೆಗೆ-ಯೋಗಸಿದ್ಧಿಯನ್ನು ಪಡೆದು ಸಂಪೂರ್ಣವಾಗಿ ಅಹಿಂಸಾ ಗುಣಗಳನ್ನು ಒಂದಾ ಮಹಾಪುರುಷನ ಸನ್ನಿಧಿಯಲ್ಲಿ ಪರಸ್ಪರ ವೈರತ್ವವಿರುವ (ಹುಲಿ ಮತ್ತು ಹಸು) ಪ್ರಾಣಿಗಳೂ ಕೂಡ ಶಾಂತಿ ಮತ್ತು ಸೌಹಾರ್ದತೆಗಳಿಂದ ಜೀವಿಸುತ್ತವೆ. ಸತ್ಯವನ್ನೇ ಆಚರಿಸುವ ವ್ಯಕ್ತಿಯ ಮಾತು ಸುಳ್ಳಾಗುವುದಿಲ್ಲ. ಯಾವ ವ್ಯಕ್ತಿಯು ಕಠಿಣವಾಗಿ ಅಪರಿಗ್ರಹವನ್ನು(ದಾನವನ್ನು ಸ್ವೀಕರಿಸುವುದಿಲ್ಲವೋ) ಪರಿಪಾಲಿಸುತ್ತಾನೆಯೋ ಅವನಿಗೆ ತನ್ನ ಪೂರ್ವ ಜನ್ಮದ ಜ್ಞಾನವುಂಟಾಗುತ್ತದೆ ಮತ್ತು ಅವನು ತನ್ನ ಮುಂದಿನ ಜನ್ಮಗಳ ಬಗ್ಗೆಯೂ ತಿಳಿದುಕೊಳ್ಳಬಲ್ಲ (ನೋಡಿ ಯೋಗಸೂತ್ರ ೨.೩೫,೩೬ ಮತ್ತು ೩೯).
’ಸಂಯಮ’ದಿಂದ ಯೋಗಿಗೆ ಹಲವಾರು ಅತೀಂದ್ರಿಯ ಶಕ್ತಿಗಳು ಪ್ರಾಪ್ತವಾಗುತ್ತವೆ. ಉದಾಹರಣೆಗೆ, ಪಂಚಭೂತಗಳಾದ ಪೃಥ್ವಿ(ಭೂಮಿ) ಮತ್ತು ಅಪ(ನೀರು) ಇವುಗಳ ಮೇಲಿನ ’ಸಂಯಮ’ದಿಂದ ಯೋಗಿಯು ಅಣಿಮಾ-ಗರಿಮಾದಿ ಅಷ್ಟಸಿದ್ಧಿ ಅಥವಾ ಎಂಟು ವಿಧದ ಶಕ್ತಿಯನ್ನು ಪಡೆಯುತ್ತಾನೆ.
ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ.
ಅಣಿಮಾ - ದೇಹವನ್ನು ಅತಿ ಚಿಕ್ಕ (ಪರಮಾಣುವಿನ) ಗಾತ್ರಕ್ಕೆ ಇಳಿಸುವದು
ಲಘಿಮಾ - ಅತಿ ಕಡಿಮೆ (ಭಾರರಹಿತ) ಹಗುರಾಗುವದು
ಮಹಿಮಾ - ದೇಹವನ್ನು ಅತಿ ದೊಡ್ಡ (ಅನಂತವಾದ) ಗಾತ್ರಕ್ಕೆ ಹೆಚ್ಚಿಸುವದು
ಗರಿಮಾ - ಅತಿ (ಅನಂತದಷ್ಟು) ಭಾರವಾಗಿರುವದು
ಪ್ರಾಪ್ತಿ - ಎಲ್ಲ ಸ್ಥಳಗಳಿಗೂ ಅನಿರ್ಬಂಧಿತವಾದ ಪ್ರವೇಶ ದೊರಕಿಸಿಕೊಳ್ಳುವದು
ಪ್ರಾಕಾಮ್ಯ - ಇಷ್ಟಪಟ್ಟಿದ್ದನ್ನು ದೊರಕಿಸಿಕೊಳ್ಳುವದು
ಈಶಿತ್ವ - ಎಲ್ಲದರ ಮೇಲೆ ಸಂಪೂರ್ಣವಾದ ಒಡೆತನ ಹೊಂದುವದು
ವಶಿತ್ವ - ಎಲ್ಲವನ್ನು ಜಯಿಸುವ ಶಕ್ತಿ ಹೊಂದುವದು
ಯೋಗಮಾರ್ಗದಲ್ಲಿ ಹಠಯೋಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆಂದು ನಂಬಿಕೆ. [ಹನುಮಾನ್ ಚಾಲೀಸ ಪಠಿಸುವವರು ಈ ಅಷ್ಟಸಿದ್ಧಿಗಳನ್ನು ಹನುಮಂತ ನೀಡುವನೆಂದು ನಂಬುತ್ತಾರೆ. ಹಾಗಾಗಿಯೇ ನಾವು ಹನುಮಾನ್ ಚಾಲೀಸ್ ಪಠಿಸುವುದಕ್ಕೆ ಹೇಳಿದ್ದೇವೆ.]
’ಅಣಿಮಾ’, ’ಮಹಿಮಾ’ ಮೊದಲಾದವು(ಯೋಗಸೂತ್ರ 3.44,45)ಗಳ ಜೊತೆಗೆ. ಆ ಕೃತಿಯಲ್ಲಿ ಹೆಸರಿಸಿರುವ ಇನ್ನೂ ಕೆಲವು ಸಿದ್ಧಿಗಳೆಂದರೆ: ಆಲೋಚನೆಯನ್ನು ಗ್ರಹಿಸುವುದು, ನೋಟದಿಂದ ಕಣ್ಮರೆಯಾಗುವುದು, ಅಸದಳ ಶಕ್ತಿಯನ್ನು ಹೊಂದುವುದು, ಪಶು-ಪಕ್ಷಾದಿಗಳ ಭಾಷೆಯನ್ನು ಅರಿತುಕೊಳ್ಳುವುದು, ಮೊದಲಾದವು.
ಪ್ರಕಾಂಡ ಮನೋವಿಜ್ಞಾನಿಯಾಗಿದ್ದ ಪತಂಜಲಿಯು ಇವುಗಳನ್ನೆಲ್ಲ ವಿವರಿಸಿದರೂ ಅವುಗಳನ್ನು ಹೊಂದುವುದರಲ್ಲಿ ಆಸಕ್ತಿಯನ್ನು ತಳೆಯಬಾರದೆಂದು ಯೋಗಾಸಕ್ತರಿಗೆ ಎಚ್ಚರಿಸುತ್ತಾನೆ. ಯಾಕೆಂದರೆ ಅವುಗಳ ಪ್ರಲೋಭನೆ ಅಥವಾ ಸೆಳೆತಕ್ಕೆ ಸಿಕ್ಕ ಯೋಗಾಭ್ಯಾಸಿಯು ಅವನ ಗುರಿಯಾದ ’ಕೈವಲ್ಯ’ ಅಥವಾ ’ಮುಕ್ತಿ’ಯನ್ನು ಪಡೆಯುವ ಮಾರ್ಗದಿಂದ ವಿಮುಖನಾಗಿಬಿಡುತ್ತಾನೆ. ಆದರೆ ಒಮ್ಮೆ ’ಕೈವಲ್ಯ’ ಸ್ಥಿತಿಯನ್ನು ಪಡೆದ ವ್ಯಕ್ತಿಯು ತನ್ನ ’ಪ್ರಾರಬ್ಧ ಕರ್ಮ’(ಈ ಜನ್ಮಕ್ಕೆ ಕಾರಣವಾದ ಕರ್ಮ)ಕ್ಕೆ ಅನುಸಾರವಾಗಿ ಇನ್ನೂ ಸ್ವಲ್ಪ ಕಾಲ ಜೀವಿಸಬಹುದು. ಈ ಸ್ಥಿತಿಯಲ್ಲಿ ಅವನು ಯಾವುದೇ ಪ್ರಮಾದವಿಲ್ಲದೆ ಈ ಶಕ್ತಿಗಳನ್ನು ಮಾನವಸಂತತಿಯ ಒಳಿತಿಗಾಗಿ ಬಳಸಬಹುದು.
ಇತ್ತೀಚೆಗಿನ ಸಾಧು-ಸಂತರಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳು ಯೋಗ ಸಾಧನೆಯಿಂದ ಮೇಲೆ ಹೇಳಿದ ಅಷ್ಟಸಿದ್ಧಿಗಳನ್ನು ಪಡೆದುಕೊಂಡಿದ್ದರು ಎಂಬುದು ಹಲವರ ಅನುಭವಕ್ಕೆ ನಿಲುಕಿದ ವಿಷಯ. ಮಕ್ಕಳ ಸಮುದಾಯ ಅವರನ್ನು ಮುತ್ತಿಕೊಂಡು ಬಹಳ ಹೊತ್ತಾದರೆ ಮಕ್ಕಳ ಕುತೂಹಲವನ್ನು ನಿವಾರಿಸಿ ಮೈದಡವಿ, ಅವರೆಲ್ಲ ಅರೆಕ್ಷಣ ಆಚೀಚೆ ನೋಡುವುದರಲ್ಲಿದ್ದಾಗ ಶ್ರೀಧರರು ಅಲ್ಲಿಂದ ಬಹುದೂರ ಸಾಗುತ್ತಿದ್ದರಂತೆ.
ಕರಿಕಾನ್ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ನಂತರ, ಶಿಥಿಲಗೊಂಡ ಮುರುಡೇಶ್ವರ ದೇವಸ್ಥಾನವನ್ನೂ ಜೀರ್ಣೋದ್ಧಾರ ಮಾಡಬೇಕೆಂದು ಅಂದಿನ ಭಕ್ತರು ಭಿನ್ನವಿಸಿದಾಗ, "ಮೂವತ್ತು ವರ್ಷಗಳ ತರುವಾಯ ಮುರುಡೇಶ್ವರ ಅತ್ಯಂತ ವೈಭಯುತ ಕಟ್ಟಡವನ್ನು ಪಡೆಯುತ್ತದೆ" ಎಂದು ಅಂದೇ ಅವರು ಹೇಳಿದ್ದರಂತೆ. ಅವರ ಚರಿತ್ರೆಯಲ್ಲಿ ಹೇಳಿರುವ ಸಾವಿರಾರು ಘಟನೆಗಳು ಅವರೊಬ್ಬ ಸಿದ್ಧ ಪುರುಷರು ಎಂಬುದನ್ನು ಸಾಬೀತುಪಡಿಸುತ್ತವೆ.
ನಾಲ್ಕೈದು ವರ್ಷಗಳ ಹಿಂದೆ ಬ್ರಹ್ಮೈಕ್ಯರಾದ ಸಖರಾಯಪಟ್ಟಣದ ಅವಧೂತರು ವ್ಯಕ್ತಿಯನ್ನು ನೋಡಿದಾಗ ಪೂರ್ವಾಪರಗಳನ್ನು ಹೇಳುತ್ತಿದ್ದರಂತೆ. ಹೀಗೆಯೇ, ಸಿದ್ಧ ಪುರುಷರ ಉದಾಹರಣೆಗಳು ಅನೇಕ. ಆದರೆ ಶಕ್ತಿಯನ್ನು ಸ್ವಾರ್ಥಕ್ಕಾಗಿ ಅವರು ಬಳಸಿಕೊಳ್ಳಲಿಲ್ಲ.
ಯೋಗದ ನಾಲ್ಕನೇ ಹಂತದಿಂದಲೇ ಬಹಳ ಬದಲಾವಣೆಗಳು ಗೋಚರಿಸುತ್ತವೆ. ಸಿದ್ಧಿಯನ್ನು ಕೈವಲ್ಯಕ್ಕಾಗಿ ಬಳಸುವ ಜನ ಅದನ್ನು ನಷ್ಟಮಾಡಿಕೊಳ್ಳುವುದಿಲ್ಲ, ಸಿದ್ಧಿಯನ್ನು ದುರುಪಯೋಗ ಮಾಡಿದ ಜನ ಕೈವಲ್ಯವನ್ನು ಹೊಂದಲು ಸಾಧ್ಯವಿಲ್ಲ.
ಈ ವಿಷಯಗಳು ನಮಗೆ ಗೊತ್ತಿಲ್ಲ. ನಮಗೆ ಈಗ ಅರ್ಹೆಂಟಾಗಿ ಅಣಿಮಾದಿ ಶಕ್ತಿಗಳನ್ನು ಪಡೆದುಕೊಳ್ಳುವ ತಹತಹ ಹುಟ್ಟಿದೆ. ನಾಳೆ ಪರಪ್ಪ ವನಕ್ಕೆ ಹೋದರೂ ಸೂಕ್ಷ್ಮ ಶರೀರಿಯಾಗಿ ಹೊರಗಡೆಗೆ ಬಂದು ಮತ್ತೆ ಮೂಲ ಶರೀರವನ್ನು ಪಡೆದು, ಸಾವಿರಾರು ಸಖಿಯರೊಡನೆ ’ಸುಖ’ವನ್ನು ಪಡೆಯಬಹುದು ಎಂಬುದು ನಮ್ಮ ಇರಾದೆ."

June 23
https://www.facebook.com/groups/1499395003680065/permalink/1633547803598117/
ಕದ್ದು ನೋಡುವ ಹಳದೀ ತಾಲಿಬಾನ್ ಬಳಗದ ಮಾಹಿತಿಗಾಗಿ-
’ಹಮರಿ ಹಕೀಮ್ ಚಂದ್’ ಎಂಬ ಬಿರುದನ್ನು ದಯಪಾಲಿಸಿ, ಅದರಿಂದಲೇ ತೃಪ್ತಿ ಪಟ್ಟುಕೊಂಡ ನಿಮಗೆಲ್ಲ ಬಹಳ ಕೃತಜ್ಞ. ಯಾವುದನ್ನು ಎಲ್ಲರೂ ಹೇಳಲಾಗದೋ, ಯಾವುದನ್ನು ಎಲ್ಲರಿಗೂ ಹೇಳುವುದು ಕಷ್ಟವಾಗುವುದೋ ಅದನ್ನು ಹೇಳಲು, ಆತ್ಮವಂಚನೆಯಿಲ್ಲದ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ.
ಸುರರು ಅಂದರೆ ದೇವತೆಗಳು ಮತ್ತು ಅಸುರರು ಅಂದರೆ ರಕ್ಕಸರು ಹಿಂದೆ ಒಂದೇ ಕುಟುಂಬದವರಂತೆ. ಅಸುರರನ್ನು "ಪೂರ್ವದೇವತಾ" ಎಂದೂ ಕರೆಯುವರಂತೆ. ದೈವ ಸೃಷ್ಟಿಯಲ್ಲಿ ಸೃಷ್ಟಿಕರ್ತನ ಇಚ್ಛೆಯಂತೆ ಪಾಶವೀ ಅಥವಾ ಅದಕ್ಕಿಂತ ಹೀನ ಕೃತ್ಯಕ್ಕಿಳಿದು ಅವರು ಅಸುರರಾದರು. ಪೂರ್ವದಲ್ಲಿ ದೇವತೆಗಳಾಗಿದ್ದುದರಿಂದ ಅವರಲ್ಲಿಯೂ ಕೆಲವು ಮಂತ್ರ ತಂತ್ರಗಳು, ಮಾಯಾವಿದ್ಯೆಗಳು ಉಳಿದುಕೊಂಡವು. ಯಾಕೆ ಅವರು ಅಸುರರಾದರು ಎಂಬುದಕ್ಕೆ ಉತ್ತರವನ್ನುನೀವೇ ಹುಡುಕಿಕೊಳ್ಳಿ.
ಅದೇರೀತಿಯಲ್ಲಿ ಇಂದು ಹಳದೀ ತಾಲಿಬಾನ್ ಎಂಬ ಪಡೆ ತಯಾರಾಗಿದೆ ಎಂದರೆ ತಪ್ಪಾಗಲಾರದೇನೋ. ಪೂರ್ವದಲ್ಲಿ ಒಂದೇ ಸಮಾಜವಾಗಿದ್ದ ತಾವು ಇಂದು ಸಮಾಜದ ಪ್ರತ್ಯೇಕ ಭಾಗವಾಗಿ ಗುರುತಿಸಿಕೊಳ್ಳಲು ಇಷ್ಟಪಟ್ಟು, ಹಾರುವ ಮೊಲದ ಮೂರೇ ಕಾಲುಗಳನ್ನು ಕಂಡು, ಅದನ್ನೇ ಸತ್ಯ ಎಂದಿರಿ. ಮೊಲ ಕುಳಿತಾಗಲೋ ನಿಂತಾಗಲೋ ಉಪಾಯವಾಗಿ ಎಣಿಸಿನೋಡುವ ವಿವೇಚನೆ ನಿಮ್ಮಲಿರಲಿಲ್ಲ; ಹೀಗಾಗಿ ನಾಲ್ಕನೇ ಕಾಲು ಕಾಣಲಿಲ್ಲ.ನಾಲ್ಕನೇ ಕಾಲು ಕಂಡವರು ಹೇಳಿದ್ದನ್ನು ನಂಬುವುದಕ್ಕೂ ನೀವು ಸಿದ್ಧರಿಲ್ಲ ಯಾಕೆಂದರೆ, ನೀವದನ್ನು ಪ್ರತ್ಯಕ್ಷ ಕಾಣಲಿಲ್ಲ.
ಯಾವುದು ಧರ್ಮದ ಹೆಗ್ಗುರುತಾಗಿರಬೇಕಾಗಿತ್ತೋ ಅದು ಕಾಮದ ಕೂಪವಾದಾಗ ಅದನ್ನು ನಿಗ್ರಹಿಸುವ ಯೋಚನೆ ನಿಮಗೆ ಬರಲೇ ಇಲ್ಲ. ಇಂದು ನೀವೆಲ್ಲಿದ್ದೀರಿ ಎಂದು ನಿಮ್ಮ ಎದೆ ತಟ್ಟಿ ಕೇಳಿಕೊಳ್ಳಿ; ಯಾಕೆಂದರೆ ಆ ದಿನ ಸನಿಹ ಬಂದಿದೆ. ಸಮಾಜವನ್ನೇ ಒಂದು ಶಕ್ತಿ ಒಡೆಯುತ್ತದೆ ಎಂದಾದರೆ ಅದನ್ನು ಅಸುರೀಶಕ್ತಿ ಎನ್ನದಿರಲಾದೀತೇ? ನಿಮ್ಮೆಲ್ಲರ ಇಚ್ಛೆಯಂತೆ ನಮ್ಮ ಸಮಾಜ ಮಾನಸಿಕವಾಗಿ ಹೋಳಾಗಿದೆ; ಅಧಿಕೃತವಾಗಿ ಪ್ರತ್ಯೇಕವಾಗುವುದೊಂದು ಬಾಕಿ ಇದೆ.
ಅನ್ಯ ಸಮುದಾಯದ ಜನರಿಗೆ ಈ ವಿಷಯ ನಗೆಪಾಟಲಿಗೆ ಕಾರಣವಾದೀತು; ಆದರೂ ಮಡಿಅಲ್ಲಿಬಿದ್ದ ಬೆಂಕಿಯ ಉಂಡೆಯನ್ನು ಹಾಗೇ ಇರಿಸಿಕೊಳ್ಳಲು ಸಾಧ್ಯವಾಗುವುದೇ? ಅದು ಹೊರಬರಲೇಬೇಕು. ಒತ್ತಾಯಕ್ಕೆ ಬಸಿರಾದ ಹೆಣ್ಣು ಮತ್ತೆಲ್ಲೋ ಹಡೆಯಲೇಬೇಕು; ಹಡೆಯುವ ಮುನ್ನವೇ ಅಬಾರ್ಶನ್ ನಡೆಯಬಹುದು ಆ ಪ್ರಶ್ನೆ ಬೇರೆ. ಚಪ್ಪಲಿಯನ್ನು ಅದರ ಜಾಗದಲ್ಲೇ ಇರಿಸುವ ಬದಲು ’ವಾಸ್ತು ತಜ್ಞ’ರೆನಿಸಿಕೊಂಡ ಕೆಲವರ ಸಲಹೆಯ ಮೇರೆಗೆ ದೇವರ ಪೀಠದಲ್ಲಿಡುವವರೂ ಈ ಕಾಲದಲ್ಲಿದ್ದಾರೆ; ಯಾಕೆಂದರೆ ಕಂಡ ಕಂಡವರ ಸಲಹೆ ಕೇಳುವ ಆ ಜನ ವಿವೇಚನಾ ಶೂನ್ಯರಾಗಿರುತ್ತಾರೆ.
’ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆ ಹಿಂದೆಂದಿಗಿಂತ ಇಂದು ನನಗೆ ಮತ್ತು ನಮ್ಮಂತಹ ಜನರಿಗೆ ಸಮಾಜದ ವಿಷಯದಲ್ಲಿ ಸ್ಪಷ್ಟವಾಗಿ ಅರ್ಥವಾಗಿದೆ. ಹೆಚ್ಚಿಗೆ ಮಾತಮಾಡಿ ಮನಸ್ಸು ಹಾಳುಮಾಡಿಕೊಳ್ಳುವುದಕ್ಕಿಂತ, ವಿವೇಚನೆ ಇರಿಸಿಕೊಂಡು ವ್ಯವಹರಿಸಿ ಎಂದು ನಿಮ್ಮನ್ನು ಎಚ್ಚರಿಸುತ್ತಿದ್ದೇನೆ. ಮುಂದೆಂದೋ ಪಾಶ್ಚಾತ್ತಾಪ ಪಡುವ ಬದಲು ಇಂದೇ ಆ ಕೆಲಸ ಮಾಡಿ ಚಪ್ಪಲಿಯನ್ನು ಚಪ್ಪಲಿಯ ಗೂಡಿನಲ್ಲೇ ಇರಿಸಿ ಎಂಬುದು ನಮ್ಮ ಹೇಳಿಕೆ.
ಮುಂದಿನ ಕೆಲವು ದಿನಗಳ ಕಾಲ, ’ಹಮರಿ ಹಕೀಮ್ ಚಂದ್’ ಬರೆಯುವುದಿಲ್ಲ. ಆತ ಓಡಿಹೋದನೆಂದೋ, ಅವನಿಗೆ ಹಣ ಸಂದಾಯವಾಗಲಿಲ್ಲವೆಂದೋ ನೀವು ಭೇರಿ ಬಾರಿಸಿಕೊಂಡು ತಿರುಗಲಿಕ್ಕೆ ನಮ್ಮ ಅಭ್ಯಂತರವೇನೂ ಇರುವುದಿಲ್ಲ. ಮರಳಿ ಬಂದು ಮತ್ತೆ ವಿಷಯಗಳು ಮುನ್ನಡೆದಾಗ "ಹಣ ಕೊಟ್ಟರು ಮತ್ತೆ ಬಂದ" ಎನ್ನಲು ನೀವು ಮರೆಯುವುದಿಲ್ಲ. ಹಣತೆಗೆದುಕೊಂಡು ಶಂಖ ಹೊಡೆಯಲು ಮಂಚನಬೆಲೆ, ಅತ್ತಿಬೆಲೆ, ಸೂಲಿಬೆಲೆಗಳಿಂದ ಬಂದ ಜನ ನಾವಲ್ಲ.
ಸಮಾಜದ ಕಷ್ಟವನ್ನು ಕಂಡು, ನೊಂದ ಮನಸ್ಸಿನ ಜನಸಂದೋಹದ ದನಿಗಷ್ಟು ದನಿಗೂಡೊಸುವ ಸಲುವಾಗಿ ಜೊತೆಯಾದ ಜನ ನಾವೇ ಹೊರತು ಯಾರೋ ಸರ ಅಡವಿಟ್ಟು ನೀಡಿದ ಹಣಕ್ಕಾಗಿ ಬಾಯ್ದೆರೆದು ಕುಳಿತುಕೊಂಡವರಲ್ಲ. ಸೂಟ್ ಕೇಸ್ ಸಲ್ಲಿಸುವ ಪ್ರಮೇಯವೇ ಇಲ್ಲದ ಕಾರಣ, ಕೆಲವರು ಅಂತಹ ಪಾಪದ ಹಣದ ಅಗತ್ಯವನ್ನು ಅಂಟಿಸಿಕೊಂಡ ಹಾಗೆ ಬೇಡುವ ಬಡತನವೂ ನಮಗಿಲ್ಲ. ನಮ್ಮ ಪಾಡಿಗೆ ಉಂಡುಟ್ಟು ಸುಖವಾಗಿರುವ ನಮಗೆ ಸಮಾಜಕ್ಕಂಟಿದ ಶನಿ ತೊಲಗಿದರೆ ಸಾಕು ಎಂಬುದಷ್ಟೆ ಉದ್ದೇಶ. ’ಕುರಿಗಳನ್ನು ಕೇಳಿ ಮಸಾಲೆ ಅರೆಯುತ್ತಾರೆಯೇ?’ ಎಂಬ ಮಾತಿನಂತೆ ನಿಮ್ಮನ್ನು ಕೇಳಿ ನಡೆಯಬೇಕಾದ ಅನಿವಾರ್ಯತೆ ನಮಗಿಲ್ಲ.
ನಿಮ್ಮ ಹಮ್ಮು ಅಹಂಕಾರಕ್ಕೆ ನಮ್ಮ ಬಳಗದ ಉದಾಸೀನತೆಯೇ ಮದ್ದು ಎಂಬುದನ್ನು ಸ್ಪಷ್ಟವಾಗಿ ನಿವೇದಿಸುತ್ತ, ಕೆಲವು ದಿನ ಮಜಾ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದೇನೆ, ನಾನು ಬರೆಯದಿದ್ದರೂ ಓದುತ್ತಿರುವುದಿಲ್ಲ ಎಂದುಕೊಳ್ಳುವುದೇನೂ ಬೇಡ ಎಂಬ ಸಂದೇಶವನ್ನೂ ನೀಡಲು ಮರೆಯುವುದಿಲ್ಲ. ನಡುನಡುವೆ ಸಮಯವಾದರೆ ಬರೆಯಬಾರದು ಎಂದೇನೂ ಇಲ್ಲ.